ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿ ವೈ ಸುಧಾಕರ ರಾವ್ ಇವರು ದಿನಾಂಕ: 15/02/2021 ರಂದು ರಾತ್ರಿ 8:30  ಗಂಟೆಗೆ ತನ್ನ ವಾಸದ ಮನೆಯಾದ 13-1-17 ಬಿ , ಎಲ್‌ಐಸಿ ರೋಡ್, ಅಜ್ಜರಕಾಡು ಉಡುಪಿಯಲ್ಲಿ  ಪಿರ್ಯಾದುದಾರ ತಂಗಿಯ ಮಗಳಿಗೆ ಸೇರಿದ KA-01-EQ-6796 ನೇ ಟಿವಿಎಸ್ ಸ್ಕೂಟಿ ದ್ವಿಚಕ್ರ ವಾಹನವನ್ನು ಮನೆಯ ಕಾರ್‌ಶೆಡ್‌ನಲ್ಲಿ ಇಟ್ಟಿದ್ದು  ದಿನಾಂಕ:16/02/2021 ರಂದು ಬೆಳಿಗ್ಗೆ 7:00 ಗಂಟೆಗೆ  ಹೋಗಿ ನೋಡಿದಾಗ ಇಟ್ಟಿದ್ದ ಸ್ಥಳದಲ್ಲಿ ದ್ವಿಚಕ್ರ ವಾಹನ ಮತ್ತು  ಕೀ ಸಮೇತ  ಇಲ್ಲದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಕಳುವಾದ ದ್ವಿಚಕ್ರ ವಾಹನದ ಅಂದಾಜು ಮೌಲ್ಯ 6000/- ರೂ ಆಗಿರಬಹುದು.  ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಅಪಘಾತ ಪ್ರಕರಣ

  • ಶಂಕರನಾರಾಯಣ : ದಿನಾಂಕ  21.02.2021  ರಂದು 23:30  ಗಂಟೆಗೆ   ಫಿರ್ಯಾದಿ ಶ್ರೀಮತಿ   ಗೀತಾ ಇವರು  ಅವರ  ಗಂಡ ಕೃಷ್ಣ  ಕುಲಾಲ್  ಇವರೊಂದಿಗೆ ಕುಂದಾಪುರ ತಾಲೂಕಿನ  ಸಿದ್ದಾಪುರ  ಗ್ರಾಮದ   ತಾರೇಕೊಡ್ಲು ಕ್ರಾಸ್ ಬಸ್ಸು ನಿಲ್ದಾಣದ ಬಳಿ ರಸ್ತೆ  ಕ್ರಾಸ್ ಮಾಡಲು ಅವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ  ಕೆಎ,20 ಇವಿ. 6549 ನೇ ನಂಬ್ರದ ಮೋಟಾರ್ ಸೈಕಲ್ ನಿಲ್ಲಿಸಿಕೊಂಡಿರುವಾಗ, ಆರೋಪಿಯು ಕೆಎ, 20 ಇಜೆ. 7239 ನೇ  ನಂಬ್ರದ ಮೋಟಾರ್ ಸೈಕಲ್‌‌ನ್ನು ಸಿದ್ದಾಪುರ ಕಡೆಯಿಂದ ಕಮಲಶಿಲೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು  ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ  ಸದ್ರಿ  ಕೆಎ,20 ಇವಿ. 6549 ನೇ  ನಂಬ್ರದ ಮೋಟಾರ್ ಸೈಕಲ್ ಸವಾರ ಕೃಷ್ಣ  ಕುಲಾಲ್  ಹಾಗೂ ಫಿರ್ಯಾದುದಾರರಿಗೆ ರಕ್ತಗಾಯವಾಗಿದ್ದು,  ಚಿಕಿತ್ಸೆಯ ಬಗ್ಗೆ  ಮಣಿಪಾಲದ ಕೆ,ಎಮ್‌,ಸಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು, ಅಲ್ಲಿ ಕೃಷ್ಣ ಕುಲಾಲ್ ಇವರ ಬಲಕಾಲಿಗೆ  ಮೂಳೆ ಮುರಿತದ ಗಾಯವಾಗಿದೆ ಎಂದು ಹೇಳಿ ಎರಡು ಜನರನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿದ್ದು. ಫಿರ್ಯಾದುದಾರರನ್ನು ಈ ದಿನ ಬೆಳಿಗ್ಗೆ ಆಸ್ಪತ್ರೆಯಿಂದ  ಡಿಸ್ ಚಾರ್ಜ ಮಾಡಿರುತ್ತಾರೆ,  ಈ ಅಪಘಾತದಿಂದ ಕೆಎ, 20  ಇಜೆ. 7239 ನೇ ನಂಬ್ರದ ಮೋಟಾರ್ ಸೈಕಲ್‌‌ ಸವಾರ ಮಂಜುನಾಥ ನಾಯ್ಕ ಹಾಗೂ ಹಿಂಬದಿ ಸವಾರ ಕೃಷ್ಣ ಪೂಜಾರಿ ಇವರಿಗೆ ಸಹ  ರಕ್ತಗಾಯವಾಗಿದ್ದು, ಅವರು ಸಹ 108 ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ,ಎಮ್‌.ಸಿ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಒಳರೋಗಿಯಾಗಿ ದಾಖಲಾಗಿ  ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2021  ಕಲಂ: 279,337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತ್ತೀಚಿನ ನವೀಕರಣ​ : 22-02-2021 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080