ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಿರ್ವಾ: ದಿನಾಂಕ 19/12/2022 ರಂದು ಸಂಜೆ 06:40 ಗಂಟೆಗೆ  ಪಿರ್ಯಾದಿದಾರರಾದ ಮಹೇಶ್ (33), ತಂದೆ: ಭೋಜ ಮೂಲ್ಯ ವಾಸ: 3-171,ಕುತ್ಯಾರು ಕರ್ಮಾರು ಜಿಡ್ಡು, ಹೊಸ ಮನೆ,ಕುತ್ಯಾರು ಅಂಚೆ ಮತ್ತು ಗ್ರಾಮ,ಕಾಪು ತಾಲೂಕು ಉಡುಪಿ ಜಿಲ್ಲೆ ಇವರು ತನ್ನ ಪಲ್ಸರ್ ಮೋಟಾರು ಸೈಕಲ್ ನಂಬ್ರ KA-20-ES-3791 ನೇಯದರಲ್ಲಿ ದೇವಸ್ಥಾನದಲ್ಲಿ ಹೂವಿನ ಪೂಜೆ ಪ್ರಯುಕ್ತ ಹೋಗಿದ್ದು, ಅಲ್ಲಿಂದ  ಪೂಜೆಗೆ  ಹೂ ತರುವರೇ ಹೊರಟು ಶಿರ್ವ ಪೇಟೆಗೆ ಹೋಗುತ್ತಿರುವ ಸಮಯ 06:50 ಗಂಟೆಗೆ ಕುತ್ಯಾರು ಸಾರ್ವಜನಿಕ ರಸ್ತೆಯ ಬದಿ ಇರುವ ಲೋನಾ ಫರ್ನಿಚರ್ ಅಂಗಡಿ ಬಳಿ ತಲುಪುವಾಗ ಎದುರಿನಿಂದ KA-20-EZ-0954 ನೇ ಮೋಟಾರ್ ಸೈಕಲ್ ಸವಾರನು ಶಿರ್ವ  ಪೇಟೆಯಿಂದ  ಕುತ್ಯಾರು ಕಡೆಗೆ ತಾನು ಸವಾರಿ ಮಾಡುತ್ತಿದ್ದು  ದ್ವಿ-ಚಕ್ರ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು,  ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-ES-3791 ನೇ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರು ಮೋಟಾರು ಸೈಕಲ್‌ ಸಮೇತ ಡಾಮಾರು ರಸ್ತೆಗೆ ಬಿದ್ದಿದ್ದು, ಅಪಘಾತದಿಂದ ಅವರ ಬಲ ಕೈ ಕಿರು ಬೆರಳು ಜಖಂ  ಹಾಗೂ ಬಲ, ಕಾಲಿನ ಕೋಲು ಕಾಲಿಗೆ ತರಚಿದ ಗಾಯ, ಎಡ ಕಾಲಿನ ಹಿಮ್ಮಡಿ ಬಳಿ ರಕ್ತ ಗಾಯ ಮತ್ತು ಬಲ ಕಾಲಿನ ತೊಡೆಯ ಬಳಿ ತರಚಿದ ಗಾಯ ವಾಗಿರುತ್ತದೆ. ಅಪಘಾತ ವೆಸಗಿದ ಮೋಟಾರ್ ಸೈಕಲ್ ಸವಾರ ಜೋಸೆಫ್‌ಡಿ’ಸೋಜ ಹಾಗೂ ಹಿಂಬದಿ ಸವಾರ ಜೋಸೆಫ್‌ಲಾರೆನ್ಸ್‌ ಮಸ್ಕರೆನಸ್‌ ಕೂಡಾ  ರಸ್ತೆಗೆ  ಬಿದಿದ್ದು ಅಲ್ಲಿ ಸೇರಿದ ಸಾರ್ವಜನಿಕರು ಉಪಚರಿಸಿದ್ದು ಮೂರು ಜನರನ್ನು  ಅಂಬ್ಯುಲೆನ್ಸ್ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ  ಉಡುಪಿ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 89/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಪ್ರಖ್ಯಾತ್ (24), ಗಂಡ : ರಾಘು, ವಾಸ : ಅರಸಿಕಟ್ಟೆ ಹೌಸ್, 92 ಹೆರೂರ್, ಬಂಟಕಲ್ ಪೋಸ್ಟ್, ಶಿರ್ವಾ ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ  18/12/2022 ರಂದು ನೆರೆ-ಮನೆಯ ನಿವಾಸಿ ಶ್ರೀಕಾಂತ್ ರವರೊಂದಿಗೆ ಶ್ರೀಕಾಂತ್ ರವರ KA-20-EK-2729 ನೇ ಸ್ಕೂಟರ್ ನಲ್ಲಿ ಕೆಲಸದ ನಿಮಿತ್ತ ಉಡುಗೆ ಹೋಗಿದ್ದು, ಕೆಲಸ ಮುಗಿದ ಬಳಿಕ ಮನೆಗೆ ಹೋಗಲು 20:30 ಗಂಟೆಗೆ ಉಡುಪಿಯಿಂದ ಅದೇ ಸ್ಕೂಟರ್ ನಲ್ಲಿ ಹೊರಟು ರಾಷ್ಟ್ರೀಯ ಹೆದ್ದಾರಿ 66 ಉಡುಪಿ-ಮಂಗಳೂರು ಏಕಮುಖ ರಸ್ತೆಯ ಮೂಲಕ ಕಟಪಾಡಿ ಕಡೆಗೆ ಹೋಗುತ್ತಾ 20:45 ಗಂಟೆಗೆ ಉಡುಪಿ ಜಿಲ್ಲೆ, ಉಡುಪಿ ತಾಲೂಕು ಉದ್ಯಾವರ  ಗ್ರಾಮದ ಫಾರೆಸ್ಟ್ ಗೇಟ್ ನ್ನು ತಲುಪುವ ವೇಳೆಗೆ ಸ್ಕೂಟರ್ ನ್ನು ಚಲಾಯಿಸುತ್ತಿದ್ದ ಶ್ರೀಕಾಂತ್ ರವರು ಸ್ಕೂಟರ್ ನ್ನು ಓಮ್ಮೇಲೆ ಅತೀ ವೇಗ ಅಜಾಗರೂಕತೆಯಿಂದ ಚಲಾಯಿಸಿ ಸ್ಕೂಟರ್ ನ್ನು ರಸ್ತೆಯಲ್ಲಿ ಬೀಳಿಸಿರುತ್ತಾರೆ. ಪರಿಣಾಮ ಪಿರ್ಯಾದಿದಾರರು ಹಾಗೂ ಶ್ರೀಕಾಂತ್ ರವರು ರಸ್ತೆಗೆ ಬಿದ್ದಿದ್ದು,  ಪಿರ್ಯಾದಿದಾರರ ಹೊಟ್ಟೆಯ ಭಾಗಕ್ಕೆ ತರಚಿದ ಗಾಯಗಳಾಗಿದ್ದು, ಎಡಗಾಲಿನ ಮೂಳೆ ಮುರಿತವಾಗಿರುತ್ತದೆ. ಅಲ್ಲದೇ ಶ್ರೀಕಾಂತ್ ರವರಿಗೂ ಕೂಡಾ ಸಣ್ಣ-ಪುಟ್ಟ ತರಚಿದ ಗಾಯಗಳಾಗಿರುತ್ತವೆ. ಆರೋಪಿ ಶ್ರೀಕಾಂತ್ ರವರು ಕೂಡಲೇ ರಿಕ್ಷಾವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಓಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 138/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಮಣಿಪಾಲ: ದಿನಾಂಕ  17/12/2022 ರಂದು ಅಬ್ದುಲ್ ಖಾದರ್, ಪೊಲೀಸ್ ಉಪನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರಿಗೆ ಅಬಿನಂದ್‌ ಎಂಬಾತ ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ  ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರ ಕ್ರಮ್ಸ್‌ ಬೇಕರಿ ಬಳಿ ವಶಕ್ಕೆ ಪಡೆದು  ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು, ಆರೋಪಿ ಅಬಿನಂದ್‌ .ಎ.ಎಸ್‌ ಗಾಂಜಾ ಸೇವಿಸಿರುವ ಬಗ್ಗೆ  ದಿನಾಂಕ 20/12/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 219/2022 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ .
  • ಮಣಿಪಾಲ: ದಿನಾಂಕ  17/12/2022 ರಂದು ಅಬ್ದುಲ್ ಖಾದರ್, ಪೊಲೀಸ್ ಉಪನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರಿಗೆ ಸಿದ್ದಾರ್ಥ. ವಿ. ಎಂಬಾತ ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ  ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರ ಕ್ರಮ್ಸ್‌ ಬೇಕರಿ ಬಳಿ ವಶಕ್ಕೆ ಪಡೆದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು, ಆರೋಪಿ ಸಿದ್ದಾರ್ಥ್‌ .ವಿ ಗಾಂಜಾ ಸೇವಿಸಿರುವ ಬಗ್ಗೆ ದಿನಾಂಕ 20/12/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 220/2022 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ .
  • ಮಣಿಪಾಲ: ದಿನಾಂಕ  19/12/2022 ರಂದು ಸಾರ್ಥಕ್‌ ಸಿಂಗ್‌  ಎಂಬಾತ ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಮಾಂಡವಿ ಎಮ್ರಾಲ್ಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ ವಶಕ್ಕೆ ಪಡೆದುಮಣಿಪಾಲ  ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು,  ಆರೋಪಿ ಸಾರ್ಥಕ್‌ ಸಿಂಗ್‌ ಗಾಂಜಾ ಸೇವಿಸಿರುವ ಬಗ್ಗೆ ವೈದ್ಯಾಧಿಕಾರಿಗಳು ದಿನಾಂಕ 20/12/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 221/2022 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ .

 

ಇತ್ತೀಚಿನ ನವೀಕರಣ​ : 21-12-2022 09:53 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080