ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಯಲ್ಲಪ್ಪ (36), ತಂದೆ:ಸಿದ್ಧಪ್ಪ ಚಲವಾದಿ, ವಾಸ:ಬೇವಿನಮಟ್ಟಿ ಗ್ರಾಮ ಮತ್ತು ಅಂಚೆ, ಹುನಗುಂದ ತಾಲೂಕು ಬಾಗಲಕೋಟೆ ಜಿಲ್ಲೆ ಹಾಗೂ ಅವರ ಹೆಂಡತಿ ರಾಜೇಶ್ವರಿ ಮತ್ತು ಮಗಳು ಇಂಚರ ರವರು ಉದ್ಯಾವರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿರುತ್ತಾರೆ. ದಿನಾಂಕ 20/10/2021 ರಂದು ಬೆಳಿಗ್ಗೆ ಪಿರ್ಯಾದಿದಾರರ ಹೆಂಡತಿ ಶ್ರೀಮತಿ ರಾಜೇಶ್ವರಿ ಯವರು ಕೆಲಸದ ಬಗ್ಗೆ ತನ್ನ ಚಿಕ್ಕಪ್ಪ ಬಸವರಾಜ ರವರೊಂದಿಗೆ ತನ್ನ ಮಗಳು ಇಂಚರಳನ್ನು ಕರೆದುಕೊಂಡು ಬಸವರಾಜರವರ  KA-20-EJ-9793 ನೇ ಟಿವಿಎಸ್ ಲೂನಾದಲ್ಲಿ ಸಹ ಸವಾರಳಾಗಿ ಕುಳಿತುಕೊಂಡು ಉಡುಪಿ-ಮಂಗಳೂರು ರಾಹೆ 66 ರಲ್ಲಿ ಕಟಪಾಡಿ ಕಡೆಗೆ ಹೋಗುತ್ತಿರುವಾಗ  ಉದ್ಯಾವರ ಜೈ ಹಿಂದ್ ಕಾಂಪ್ಲೆಕ್ಸ್ ಹತ್ತಿರ ತಲುಪಿದಾಗ ಬೆಳಿಗ್ಗೆ 8:50 ಗಂಟೆಗೆ ಅವರ ಹಿಂದಿನಿಂದ  ಉಡುಪಿ ಕಡೆಯಿಂದ KA-20-P-6102 ನೇ ಕಾರು ಚಾಲಕ ಶ್ರೀನಿವಾಸ ರವರು ತನ್ನ ಕಾರನ್ನು ಅತೀವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಹೆಂಡತಿ ಯವರು ಹೋಗುತ್ತಿದ್ದ   KA-20-EJ-9793 ನೇ ಟಿವಿಎಸ್ ಲೂನಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಲೂನಾದ ಸವಾರ ಮತ್ತು ಸಹಸವಾರಿಣಿ ಮತ್ತು ಮಗಳು ಇಂಚರಾ ರವರು ಲೂನಾ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಹೆಂಡತಿ ರಾಜೇಶ್ವರಿಯವರ  ತಲೆಗೆ, ಮತ್ತು ಮಗಳು ಇಂಚರಳಿಗೆ ತರಚಿದ ಗಾಯ, ಮತ್ತು ರಾಜೇಶ್ವರಿಯವರ ಚಿಕ್ಕಪ್ಪ ಬಸವರಾಜ ರವರಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ರಾಜೇಶ್ವರಿಯವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 161/2021  ಕಲಂ: 279, 337 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ  ಪ್ರಕರಣ

  • ಉಡುಪಿ: ದಿನಾಂಕ: 20/10/2021 ರಂದು ಪ್ರಮೋದ್‌ ಕುಮಾರ್‌.ಪಿ, ಪೊಲೀಸ್‌ ನಿರೀಕ್ಷಕರು, ಉಡುಪಿ ನಗರ ಪೊಲೀಸ್‌ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಆದಿ ಉಡುಪಿ ಜಂಕ್ಷನ್  ಹತ್ತಿರ ಇರುವ ಗೂಡಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಸೇರಿ  ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ  ದೊರೆತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟಕ್ಕೆ ನಡೆಸುತ್ತಿದ್ದ 1) ಪ್ರೀತಮ್‌‌ ನಾಯರ್‌ (23), ತಂದೆ: ಪ್ರಶಾಂತ ನಾಯರ್‌, ವಾಸ: ಶಿವದರ್ಶನ ನಿಲಯ, 4ನೇ ಕ್ರಾಸ್, ಗರಡಿ, ಕೊಡವೂರು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ, 2) ಪಂಡರಿ ಪ್ರಸಾದ್ (46),  ತಂದೆ: ವಿಶ್ವನಾಥ, ವಾಸ: ಅನೀಲ್ ಎಂಬವರ ಭಾಡಿಗೆ ಮನೆ, ಮಧ್ವನಗರ ಕೊಡವೂರು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರನ್ನು ವಶಕ್ಕೆ ಪಡೆದು ಆಪಾದಿತರನ್ನು ವಿಚಾರಿಸಿದಾಗ ತಾವು ಕಮೀಷನ್‌ ಹಣಕೋಸ್ಕರ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿದ್ದು, ತಾವು ಸಂಗ್ರಹಿಸುತ್ತಿದ್ದ ಹಣವನ್ನು ಲಿಯೋ ಎಂಬವರಿಗೆ ಕೊಡುತ್ತಿರುವುದಾಗಿ ತಿಳಿಸಿರುತ್ತಾರೆ. ಆಪಾದಿತರಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ರೂಪಾಯಿ 7,050/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ- 1,  ಬಾಲ್‌ಪೆನ್‌-1 ಮತ್ತು ಅವರ ವಶವಿದ್ದ  ಕೆ.ಟಿ.ಎಂ ಮೋಟಾರು ಸೈಕಲ್ ನಂಬ್ರ KA-20-EP-6284 ಮತ್ತು 1 ಒಪ್ಪೊ, 1 ವಿವೋ ಹಾಗೂ 1 ಸ್ಯಾಮಸಂಗ್ ಮೊಬೈಲ್ ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 154/2021 ಕಲಂ: 78 (i) (iii) Karnataka Police (Amendment)  ACT-2021 ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಭಾರತಿ ಪೂಜಾರಿ (45), ಗಂಡ: ಮಂಜುನಾಥ ಪೂಜಾರಿ, ವಾಸ: ಮಹಾ ಗಣಪತಿ ,ಕೊಳಂಬೆ,ರಾಜೀವ ನಗರ, 52ನೇ ಹೇರೂರು   ಗ್ರಾಮ, ಬ್ರಹ್ಮಾವರ ತಾಲೂಕು ಇವರ  ಅಣ್ಣ ಭರತ್‌ ಪೂಜಾರಿ (51)  ರವರು  ವಿಪರೀತ  ಮಧ್ಯಪಾನ  ಮಾಡುತ್ತಿದ್ದು ಇವರ ಹೆಂಡತಿ  2 ತಿಂಗಳ ಹಿಂದೆ ಕೊರೋನಾ ದಿಂದ ಮೃತ ಪಟ್ಟಿದ್ದು ಆ ಬಳಿಕ  ಭರತ್‌‌ ಪೂಜಾರಿ ಒಬ್ಬನೇ ಮನೆಯಲ್ಲಿರುತ್ತಿದ್ದರು  ದಿನಾಲೂ  ಪಿರ್ಯಾದಿದಾರರು  ಚಾ ತಿಂಡಿ ಊಟವನ್ನು ಕೊಡುತ್ತಿದ್ದು  ಅದರಂತೆ ದಿನಾಂಕ 20/10/2021 ರಂದು ಬೆಳಿಗ್ಗೆ 8:00 ಗಂಟೆಗೆ ಚಾ ತಿಂಡಿ  ನೀಡಿ  ಹೋಗಿದ್ದು ಸಂಜೆ 5:45 ಗಂಟೆಗೆ ಪಿರ್ಯಾದಿದಾರರು ಬಂದು ನೋಡಿದಾಗ ಅಣ್ಣ ಭರತ್‌ ಪೂಜಾರಿ  ಮನೆಯ  ಛಾವಡಿಯ ಜಂತಿಗೆ ಟವಲ್‌‌ಯನ್ನು ಕಟ್ಟಿ ಇನ್ನೊಂದು ತುದಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 64/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಶ್ರೀಮತಿ ನಾಗರತ್ನ (40), ಗಂಡ: ಗಣಪತಿ, ವಾಸ: ಸುಳಗೋಡು  ಮಾಲ್ವೆ ಗ್ರಾಮ  ಸಾಗರ ತಾಲೂಕು ಶಿವಮೊಗ್ಗ ಜಿಲ್ಲೆ ಇವರ ತಮ್ಮ ನಾಗರಾಜ (36) ಇವರು 10 ವರ್ಷದ  ಹಿಂದೆ ಕುಂದಾಪುರ ತಾಲೂಕಿನ  ಅಂಪಾರು ಎಂಬಲ್ಲಿಯ  ಶ್ರೀಮತಿ  ಮಮತಾ  ಇವರನ್ನು ಪ್ರೀತಿಸಿ  ಮದುವೆ  ಆಗಿದ್ದು, ಮದುವೆ  ಆದ  ಬಳಿಕ  ಅವರು ಹೆಂಡತಿ  ಮನೆಯಾದ ಅಂಪಾರು ಎಂಬಲ್ಲಿ ವಾಸವಾಗಿದ್ದು, ದಿನಾಂಕ 19/10/2021ರಂದು ಬೆಳಿಗ್ಗೆ  6:00  ಗಂಟೆಗೆ ಪಿರ್ಯಾದಿದಾರರ  ಗಂಡನಿಗೆ  ಯಾರೋ   ಪೋನ್  ಮಾಡಿ ನಾಗರಾಜ  ಇವನು  ಕುತ್ತಿಗೆಗೆ  ನೇಣು  ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿರುತ್ತಾರೆ. ಅದರಂತೆ ಪಿರ್ಯಾದಿದಾರರು  ಹಾಗೂ ಅವರ  ಸಂಬಂಧಿಕರು ಶಂಕರನಾರಾಯಣ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ  ಇರುವ ನಾಗರಾಜ ರವರ ಮೃತ ದೇಹವನ್ನು ನೋಡಿದ್ದು, ಮೈ ಮೇಲೆ ಹಾಗೂ ಕುತ್ತಿಗೆಯಲ್ಲಿ ಗಾಯ ಇರುವ  ಬಗ್ಗೆ  ಅನುಮಾನಗೊಂಡಿರುತ್ತಾರೆ, ಮೃತ  ನಾಗರಾಜ ಈ ಹಿಂದೆ ಪಿರ್ಯಾದಿದಾರರಲ್ಲಿ ಹಾಗೂ ಮನೆಯವರಲ್ಲಿ ಅವರು ಎಲ್ಲಾ ಸೇರಿ ಅವನಿಗೆ ಹಲ್ಲೆ ಮಾಡಲು ಬರುತ್ತಾರೆ  ಎಂದು  ಹೇಳಿದ್ದು, ಅದರಂತೆ ಶ್ರೀಮತಿ ಮಮತಾ, ಕುಮಾರ್, ದಿನಕರ, ಚೇತನ ಹಾಗೂ ಆಕಾಶ್ ಇವರು ಸೇರಿ ನಾಗರಾಜ ಇವರನ್ನು ಕೊಲೆ ಮಾಡಿ, ನಾಗರಾಜ ಶರಾಬು  ಸೇವನೆಯಿಂದ  ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸುಳ್ಳು ಕಂಪ್ಲೇಟ್ ಕೊಟ್ಟು ಆ ಬಳಿಕ ಊರಿನಲ್ಲಿ ಹಾಗೂ ಪಿರ್ಯಾದಿದಾರರಿಗೆ  ಆತ್ಮಹತ್ಯೆ  ಮಾಡಿಕೊಂಡಿರುತ್ತಾನೆ ಎಂದು  ಸುಳ್ಳು  ಸುದ್ದಿ  ನೀಡಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 95/2021 ಕಲಂ:302, 201, 203, 177  ಜೊತೆಗೆ 149 ಐಪಿಸಿಯಂತೆ ಪ್ರಕರಣ  ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 20/10/2021 ರಂದು  20:45 ಗಂಟೆಗೆ ಆರೋಪಿಗಳು KA-14-C-6789 ಪಿಕಪ್ ವಾಹನದಲ್ಲಿ  ಯಾವುದೇ ಪರವಾನಿಗೆ  ಹೊಂದದೇ  5  ಗಂಡು ದನದ ಕರುಗಳನ್ನು ಎಲ್ಲಿಯೊ ಕಳವು ಮಾಡಿಕೊಂಡು ಅವುಗಳಿಗೆ ಮೇವು  ಬಾಯಾರಿಕೆ ನೀಡದೇ ಹಿಂಸಿಸುವ ರೀತಿಯಲ್ಲಿ ಹಿಂಸಾತ್ಮಕವಾಗಿ ಪಿಕಪ್ ವಾಹನದಲ್ಲಿ ತುಂಬಿಸಿ ವಧೆ ಮಾಡಲು ಕುಂದಾಪುರ  ತಾಲೂಕಿನ  ಶಂಕರನಾರಾಯಣ ಗ್ರಾಮದ ಯಡಮಕ್ಕಿ ಕ್ರಾಸ್  ಬಳಿ ಸಾಗಾಟ ಮಾಡುತ್ತಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 96/2021 ಕಲಂ: 379 ಐಪಿಸಿ. ಮತ್ತು ಕಲಂ:  4,5,7,12 ಕರ್ನಾಟಕ  ಜಾನುವಾರು ಹತ್ಯೆ ಪ್ರತಿಬಂಧಕ  ಮತ್ತು ಸಂರಕ್ಷಣಾ ಆಧ್ಯಾದೇಶ  2020 ರ ಕಲಂ 11 (1) (ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆ 1966  ರಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ದಿನಾಂಕ 19/10/2021 ರಂದು 17:30  ಗಂಟೆಗೆ ಪಿರ್ಯಾದಿದಾರರಾದ ಹಿಲರಿ ಕ್ಯಾಸ್ತಲಿನೋ (78), ತಂದೆ: ಬೆಲ್ಚರ್ ಕ್ಯಾಸ್ತಲಿನೋ, ವಾಸ: ರೂಪಾ ನಿವಾಸ, ಜೋಡುಕಟ್ಟೆ, ಮಿಯ್ಯಾರು ಗ್ರಾಮಮತ್ತು ಅಂಚೆ, ಕಾರ್ಕಳ ತಾಲೂಕು ಇವರು ಮನೆಯ ಎದುರು ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದಾಗ ಒಬ್ಬ ಹುಡುಗ ಪಿರ್ಯಾದಿದಾರರ ಹತ್ತಿರ ಬಂದು ಪಿರ್ಯಾದಿದಾರರ ತೆಂಗಿನ ಮರದ ಒಂದು ಕಾಯಿ ಬಿದ್ದಿದ್ದು ಅದನ್ನು ಯಾರೋ ತೆಗೆದುಕೊಂಡು ಹೋಗಿರುತ್ತಾರೆ ಎಂದು ಹೇಳಿದ್ದು, ಆಗ ಪಿರ್ಯಾದಿದಾರರು ಆತನಲ್ಲಿ ಅದನ್ನು ಇಲ್ಲಿ ಯಾರೋ ಆಟ ಆಡುತ್ತಿದ್ದವರು ತೆಗೆದುಕೊಂಡು ಹೋಗಿರಬೇಕು ಎಂದು ಹೇಳಿದಾಗ ಅಲ್ಲಿ ಆಟ ಆಡುತ್ತಿದ್ದ ಮಕ್ಕಳಲ್ಲಿ ಒಬ್ಬನಾದ ಪ್ರಸಾದ ಎಂಬಾತನು ಪಿರ್ಯಾದಿದಾರರನ್ನು ಅಡ್ಡಗಟ್ಟಿ ಕುತ್ತಿಗೆಗೆ ಕೈಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮುಖಕ್ಕೆ ಕೈಯಿಂದ ಹೊಡೆದು ಹಲ್ಲೆಮಾಡಿ ಜೀವ ಬೆದರಿಕೆ  ಹಾಕಿದ್ದು ಪರಿಣಾಮ ಪಿರ್ಯಾದಿದಾರರ ಗಡ್ಡದ ಹತ್ತಿರ ಮತ್ತು ಕುತ್ತಿಗೆ ಬಳಿ ಆತನ ಉಂಗುರ ಹಾಗೂ ಉಗುರಿನಿಂದ ಗೀರಿದ ಗಾಯವಾಗಿರುತ್ತದೆ. ಆರೋಗ್ಯದಲ್ಲಿ ವ್ಯತ್ಯಾಸವಾದ ಕಾರಣ  ಕಾರ್ಕಳ ಸರಕಾರಿ  ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 130/2021 ಕಲಂ: 323, 341, 504, 506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 21-10-2021 10:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080