ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ :

  • ಮಲ್ಪೆ : ಪಿರ್ಯಾಧಿದಾರ ಸುಂದರ ಬಂಗೇರಾ(63) ತಂದೆ: ಅಂತ ಪೂಜಾರಿ ವಾಸ: ಬಂಗೇರಾ ನಿಲಯ, ವಡಾಬಾಂಡೇಶ್ವರ, ಮಲ್ಪೆ ಬೀಚ್ ರಸ್ತೆ, ಕೊಡವೂರು ಗ್ರಾಮ ಇವರ ಮಗಳಾದ ನವಿತ ಸುಮಾರು 10 ವರ್ಷಗಳಿಂದ ಆರೋಪಿ ಸತೀಶ ಅಮೀನ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದು, ಈಗ ಸುಮಾರು 5 ವರ್ಷಗಳಿಂದ ಆರೋಪಿ ಮಧ್ಯಪಾನ ಮಾಡಿಕೊಂಡು ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರು ಹಾಗೂ ಮಗಳಿಗೆ ತೊಂದರೆ ನೀಡುತ್ತಿದ್ದನು. ದಿನಾಂಕ: 20-08-2022 ರಂದು ಮದ್ಯಾಹ್ನ 02:30 ಗಂಟೆಗೆ ಸುಮಾರಿಗೆ ಪಿರ್ಯಾಧಿದಾರರು ಮನೆಯಲ್ಲಿರುವಾಗ ಆರೋಪಿಯು ಪಿರ್ಯಾದಿದಾರರಿಗೆ ಹಲ್ಲೆ ಮಾಡುವ ಉದ್ದೇಶದಿಂದ ಕೈಯಲ್ಲಿ ಮರದ ದೊಣ್ಣೆಯನ್ನು ಹಿಡಿದುಕೊಂಡು ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಮನೆಯ ಬಾಗಿಲನ್ನು ದೂಡಿ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಮನೆಯ ಹೊರಗಡೆ ಎಳೆದುಕೊಂಡು ಬಂದು ಹಲ್ಲೆ ಮಾಡುವ ಉದ್ದೇಶದಿಂದ ಜೊತೆಯಲ್ಲಿ ತಂದಿದ್ದ ಮರದ ದೊಣ್ಣೆಯಿಂದ ಪಿರ್ಯಾದಿದಾರರ ತಲೆಗೆ, ಬೆನ್ನಿಗೆ, ಬಲ ಬುಜಕ್ಕೆ ಬಲವಾಗಿ ಹೋಡೆದಾಗ ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಪಿರ್ಯಾದಿದಾರರ ಹೆಂಡತಿ ಲಲಿತಾ ರವರು ಮನೆಯಿಂದ ಹೊರಗೆ ಬಂದಾಗ ಆರೋಪಿಯು ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 66/2022 ಕಲಂ 447, 452, 324, 504, 506 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತರ ಪ್ರಕರಣ : 

  • ಉಡುಪಿ : ದಿನಾಂಕ 21.05.2022 ರಂದು 10:42 ಗಂಟೆ ಸುಮಾರಿಗೆ ಅನಾಮಧೇಯ ಮೊಬೈಲ್‌ ಸಂಖ್ಯೆಯಿಂದ ಪಿರ್ಯಾಧು ಸುಬ್ರಹ್ಮಣ್ಯ ಕೃಷ್ಣ ನಾಯ್ಕ(34), ತಂದೆ: ಕೃಷ್ಣ ನಾಯ್ಕ, ವಾಸ:7-113 F “ಕಾಂಚಾಕ್ಷಿ ನಿಲಯ” ಸಣ್ಣಕ್ಕಿ ಬೆಟ್ಟು, ಪರ್ಕಳ, ಉಡುಪಿ ದಾರರಿಗೆ ಕೆ.ವೈಸಿ ಅಪ್‌ಡೇಟ್ ಮಾಡುವರೆ ಸಂದೇಶವೊಂದು ಬಂದಿದ್ದು, ಪಿರ್ಯಾದುದಾರರು ಸದ್ರಿ ಸಂದೇಶವನ್ನು ಬ್ಯಾಂಕ್ ನವರೇ ಕಳುಹಿಸಿರಬಹುದೆಂದು ತಿಳಿದು ಲಿಂಕ್ ನ್ನು ಓಪನ್ ಮಾಡಿ ಪಿರ್ಯಾದುದಾರರಿಗೆ ಬಂದ ಓಟಿಪಿ ಯನ್ನು ಅಪಡೇಟ್‌ಮಾಡಿದ ತಕ್ಷಣ ಪಿರ್ಯಾದಿದಾರರ ಎಸ್‌ಬಿಐ ಬ್ಯಾಂಕ್ ಈಶ್ವರ ನಗರ ಬ್ರಾಂಚ್ ಖಾತೆಯಿಂದ ರೂ 81,001.00 ಮತ್ತು ಎಸ್‌ಬಿಐ ಪರ್ಕಳ ಬ್ಯಾಂಚ್ ಖಾತೆಯಿಂದ ರೂ 12.803.00 ಒಟ್ಟು ರೂ 93,804/- ಹಣ ಕಡಿತಗೊಂಡಿರುತ್ತದೆ. ಯಾರೋ ಅಪರಿಚಿತ ವ್ಯೆಕ್ತಿ ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಪಿರ್ಯಾದುದಾರರ ಖಾತೆಯಿಂದ ಹಣ ಆನ್‌ಲೈನ್ ಮುಖೇನ ವರ್ಗಾವಣೆ ಮಾಡಿ ನಷ್ಟ ಉಂಟು ಮಾಡಿರುವುದು. ಈ ಬಗ್ಗೆ ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾದ ಕ್ರಮಾಂಕ : 44/2022 ಕಲಂ: 66 (C), 66(d) ಐ.ಟಿ. ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ :

  • ಕಾರ್ಕಳ : ಫಿರ್ಯಾದುದಾರರಾದ ಶ್ರೀಮತಿ ಯೋಗಿನಿ ಶೆಟ್ಟಿಗಾರ್ (45) ಗಂಡ ಜಯಂತ.ಕೆ., ವಾಸ ವರದಾಯಿನಿ ಕೃಪಾ, ಚೆಕ್‌ಪಾದೆ, ಮುರತಂಗಡಿ, ಸಾಣೂರುಗ್ರಾಮ, ಕಾರ್ಕಳ ರವರ ಗಂಡ ಜಯಂತ ಕೆ (56) ಎಂಬವರೊಂದಿಗೆ ವಾಸವಾಗಿದ್ದು ಗಂಡ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು ಅವರಿಗೆ ಮಂಗಳೂರಿನ ಮನಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಿನಾಂಕ 15-08-2022 ರಂದು ರಾತ್ರಿ 23-30 ಗಂಟೆಗೆ ಮತ್ತು ಮರುದಿನ ವಾಂತಿ ಆಗಿದ್ದು ಅವರನ್ನು ದಿನಾಂಕ 17-08-2022 ರಂದು ಮಂಗಳೂರಿನ ಮನಸ್ವಿನಿ ಆಸ್ಪತ್ರೆಗೆ ದಾಖಲಿಸಿದ್ದು ಅದೇ ದಿನ ಆಸ್ಪತ್ರಯಿಂದ ಮನೆಗೆ ಕಳುಹಿಸಿದ್ದು ನಂತರ ಆರೋಗ್ಯದಿಂದ ಇದ್ದರು. ದಿನಾಂಕ 21-08-2022 ರಂದು ಬೆಳಗ್ಗಿನ ಜಾವ 4 ಗಂಟೆಗೆ ವಾಂತಿಯಾಗುತ್ತಿದ್ದು ಅವರನ್ನು ಕಾರ್ಕಳ ಆಸ್ಪತ್ರೆಗೆ ಬೆಳಿಗ್ಗೆ 06-25 ಗಂಟೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್‌ 38/2022 ಕಲಂ. 174 CRPC ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗಾಂಜಾ ಸೇವನೆ ಪ್ರಕರಣ :

  • ಬೈಂದೂರು : ಫಿರ್ಯದಿ ನಿರಂಜನ್ ಗೌಡ ಬಿ ಎಸ್ ಪೊಲೀಸ್ ಉಪನಿರೀಕ್ಷಕರು, ಬೈಂದೂರು ಪೊಲೀಸ್ ಠಾಣೆ. ಬೈಂದೂರು ಇವರು ದಿನಾಂಕ 20/08/2022 ರಂದು ಸಿಬ್ಬಂದಿಗಳಾದ ಪಿ ಸಿ 2631 ಮತ್ತು ಎಪಿಸಿ 1596 ನೇಯವರೊಂದಿಗೆ ಇಲಾಖಾ ಜೀಪು ನಂಬ್ರ ಕೆಎ 20 ಜಿ 164 ನೇದರಲ್ಲಿ ಸಮಯ ಸುಮಾರು 19:00 ಗಂಟೆಗೆ ಬೈಂದೂರು ಠಾಣಾ ವ್ಯಾಪ್ತಿಯ ಶಿರೂರು ಮಾರ್ಕೇಟ್ ಬಳಿ ರೌಂಡ್ಸ ಕರ್ತವ್ಯದಲ್ಲಿರುವಾಗ ಸಾರ್ವಜನಿಕ ಸ್ಥಳದಲ್ಲಿ ತೂರಾಡಿಕೊಂಡಿದ್ದ ಆರೋಪಿ ಅಬ್ದುಲ್ ನೌಫಿಲ್ ಪ್ರಾಯ 19 ವರ್ಷ ತಂದೆ: ಅಬ್ದುಲ್ ಹಸನ್ ವಾಸ: ಆರ್ಮೆ, ಕರಿಕಟ್ಟೆ, ಶಿರೂರು ಗ್ರಾಮ ಬೈಂದೂರು ತಾಲೂಕು ಇತನನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದು, ಸದ್ರಿ ಆರೋಪಿಯು ನಿಷೇದಿತ ಮಾಧಕ ವಸ್ತುಗಳನ್ನು ಸೇವಿಸಿರುವ ಸಂಶಯವಿದ್ದು ಆರೋಪಿತನನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆಯ ಬಗ್ಗೆ ಠಾಣಾ ಸಿಬ್ಬಂದಿಯವರಾದ ಪಿ ಸಿ 139 ವಿಕ್ರಮ್ ರವರೊಂದಿಗೆ ವೈದ್ಯಾಧಿಕಾರಿಗಳು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ಇವರ ಮುಂದೆ ಹಾಜರು ಪಡಿಸಿದ್ದು ಇವರನ್ನು ಪರೀಕ್ಷಿಸಿದ ವೈದ್ಯಾಧಿಕಾರಿಯವರು ದಿನಾಂಕ 21/08/2022 ರಂದು ಅಬ್ದುಲ್ ನೌಫಿಲ್ ಗಾಂಜಾ ಸೇವಿಸಿರುವುದು ದೃಢ ಪಟ್ಟಿರುವುದಾಗಿ ವರದಿಯನ್ನು ನೀಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾದ ಕ್ರಮಾಂಕ : 164/2022 ಕಲಂ 27 (ಬಿ) ಎನ್.ಡಿ.ಪಿ.ಎಸ್. ಕಾಯ್ದೆ-1985ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 21-08-2022 08:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080