ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 20/05/2023 ರಂದು ಪಿರ್ಯಾದಿದಾರರಾದ ರಮೇಶ್‌ (50), ತಂದೆ: ಪಾಂಡುರಂಗ ಆಚಾರ್ಯ, ವಾಸ: ಪ್ರಸಾದ, ನರ್ನಾಡು, ಕೊಳಲಗಿರಿ ಅಂಚೆ, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ತನ್ನ KA-20-EQ-7808 ನೇ Suzuki Access 125 ನೇ ಸ್ಕೂಟರ್‌ ನಲ್ಲಿ ತನ್ನ ಮಗಳು ನವ್ಯಳನ್ನು ಸಹಸವಾರಿಣಿಯಳನ್ನಾಗಿ ಕುಳ್ಳಿರಿಸಿಕೊಂಡು ಚಾಂತಾರುವಿನಿಂದ ತನ್ನ ಮನೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಚಾಂತಾರು ಗ್ರಾಮದ ನಂದಿ ಗುಡ್ಡೆ ಬಬ್ಬು ಸ್ವಾಮಿ ದೇವಸ್ಥಾನದ ಎದುರು ಮಟಪಾಡಿ – ಬ್ರಹ್ಮಾವರ ರಸ್ತೆಯಲ್ಲಿ ಸಂಜೆ 6:00 ಗಂಟೆಗೆ ತಲುಪುವಾಗ ನಂದಿಗುಡ್ಡೆ ದೇವಸ್ಥಾನದ ಕಡೆಯಿಂದ ಆರೋಪಿಯು ಅವರ KA-20-B-5216 ನೇ ಪಿಕ್‌ ಅಪ್‌ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಟಪಾಡಿ – ಬ್ರಹ್ಮಾವರ ರಸ್ತೆಗೆ ಒಮ್ಮೇಲೆ ಚಲಾಯಿಸಿ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರ್‌ ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು ಹಾಗೂ ನವ್ಯ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು, ನವ್ಯಳ ಎಡಕಾಲಿನ ಕೊಲು ಕಾಲಿಗೆ ಮೂಳೆ ಮುರಿತದ ಜಖಂ ಹಾಗೂ ಮೇಲ್ಭಾಗದ 3 ಮೇಲ್ಬಾಗದ ಹಲ್ಲುಗಳು ತುಂಡಾಗಿರುತ್ತದೆ. ಅಲ್ಲದೇ ಪಿರ್ಯಾದಿದಾರರ ಎಡಸೊಂಟದ ಹಿಂಭಾಗ ಗುದ್ದಿದ ಒಳನೋವು ಉಂಟಾಗಿರುತ್ತದೆ. ಗಾಯಾಗೊಂಡ ನವ್ಯಳನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಫಿರ್ಯಾದಿದಾರರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 104/2023 : ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಶ್ರೀಕಾಂತ್‌ (24), ತಂದೆ: ಶೇಖರ್‌ ಪೂಜಾರಿ ವಾಸ: ಚಂದುಮನೆ, ಹಳೆ ಅಳಿವೆ, ಕೊಟೇಶ್ವರ ಗ್ರಾಮ, ಹಂಗಳೂರು ಅಂಚೆ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರ ದೊಡ್ಡಮ್ಮನ ಮಗನಾದ ನಾಗರಾಜ ಪ್ರಾಯ:30 ವರ್ಷ ಕುಂದಾಪುರ ತಾಲೂಕಿನ ಕೊಟೇಶ್ವರ ಗ್ರಾಮದ ಹಳೆ ಅಳಿವೆ ಎಂಬಲ್ಲಿವಾಸ ಮಾಡಿಕೊಂಡಿದ್ದು, ಮೀನುಗಾರಿಕೆ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ 21/05/2023 ರಂದು ನಾಗರಾಜ ರವರು ರಾಜು ಪೂಜಾರಿಯವರ ಮಾಲೀಕತ್ವದ ಕೊಟೀಲಿಂಗೇಶ್ವರ ನಾಡ ದೋಣಿಯಲ್ಲಿ ಬೆಳಿಗ್ಗೆ 06:30 ಗಂಟೆಯ ಸುಮಾರಿಗೆ ಮೀನುಗಾರಿಕೆ ಮಾಡುವಾಗ ಪಿರ್ಯಾದಿದಾರರ ಅಣ್ಣ ನಾಗರಾಜನು ಆಕಸ್ಮಿಕವಾಗಿ ಆಯತಪ್ಪಿ ನೀರಿಗೆ ಬಿದ್ದವರನ್ನು ರಾಜು ಪೂಜಾರಿ ಮತ್ತಿತರರು ಸೇರಿ ನೀರಿನಿಂದ ಮೇಲಕ್ಕೆ ಎತ್ತಿ ನೋಡುವಾಗ ಮೃತಪಟ್ಟಿರುವುದಾಗಿದೆ ತಿಳಿದು ಬಂದಂತೆ ಪಿರ್ಯಾದಿದಾರರು ಕೂಡಲೇ ಹಳೆ ಅಳಿವೆ ಸಮುದ್ರದ ದಂಡೆಗೆ ಬಂದು ನೋಡುವಾಗ ಪಿರ್ಯಾದಿದಾರರ ಅಣ್ಣ ಮೃತ ಶರೀರವನ್ನು ದೋಣಿಯಲ್ಲಿ ತಂದು ಮಲಗಿಸಿರುತ್ತಾರೆ.ಪಿರ್ಯಾದಿದಾರರ ಅಣ್ಣ ನಾಗರಾಜ ದಿನಾಂಕ 21/05/2023 ರಂದು ಬೆಳಿಗ್ಗೆ ಸುಮಾರು 06:30 ಗಂಟೆಗೆ ಕೊಟೇಶ್ವರ ಗ್ರಾಮದ ಹಳೆ ಅಳಿವೆ ಸಮುದ್ರದಲ್ಲಿ ನಾಡ ದೋಣಿಯಲ್ಲಿ ಇತರರೊಂದಿಗೆ ಕೈರಂಪಣಿ ಬಲೆ ಬೀಸಿ ಮೀನುಗಾರಿಕೆ ಮಾಡುವಾಗ ಒಮ್ಮೆಲೆ ಸಮುದ್ರದ ನೀರಿನ ರಭಸಕ್ಕೆ ದೋಣಿ ತೇಲಾಡಿ ಮೀನುಗಾರಿಕೆ ಮಾಡಿಕೊಂಡಿದ್ದ ನಾಗರಾಜನು ಆಕಸ್ಮಿಕವಾಗಿ ಆಯತಪ್ಪಿ ಸಮುದ್ರದ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 26/2023 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 21-05-2023 07:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080