ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ಪಿರ್ಯಾದಿ: ನಾಗರಾಜ ಪಿ ಶೇರಿಗಾರ  ಪ್ರಾಯ 49 ವರ್ಷ ತಂದೆ ಪುಟ್ಟಯ್ಯ ಶೇರಿಗಾರ   ವಾಸ ಸುಮುಖ 131/4 ಪಡುಕೇರಿ ಒಂಭತ್ತು ದಂಡಿಗೆ  ಕುಂದಾಪುರ  ಇವರು   ದಿನಾಂಕ 17.12.2022 ರಂದು  ತನ್ನ   ಕೆ.ಎ. 20 ವೈ 5124  ಮೋಟಾರು  ಸೈಕಲನ್ನು  ಕುಂದಾಪುರ  ಪ್ಯಾಶನ್  ಟೌನ್ ಅಂಗಡಿ ಸಮೀಪ  ರಾತ್ರಿ 20.15 ಗಂಟೆಯ ಸಮಯಕ್ಕೆ  ಇಟ್ಟು ಹೋಗಿದ್ದು  ರಾತ್ರಿ  21.20 ಗಂಟೆಯ ಸಮಯಕ್ಕೆ ಬಂದು ನೋಡುವಾಗ ಸದ್ರಿ ಮೋಟಾರು ಸೈಕಲ್ಲು  ಇಲ್ಲದೇ ಇದ್ದು  ಸದ್ರಿ ಮೋಟಾರು  ಸೈಕಲ್ಲಿನ ಅಂದಾಜು  ಮೌಲ್ಯ  40,000/ ಆಗಬಹುದು. ಸದ್ರಿ ಮೋಟಾರು ಸೈಕಲ್ಲನ್ನು ದಿನಾಂಕ 17.12.2022 ರಂದು ರಾತ್ರಿ 20.15  ಗಂಟೆಯಿಂದ  21.20 ಗಂಟೆಯ ನಡುವಿನ ಸಮಯದಲ್ಲಿ ಯಾರೋ ಕಳ್ಳರು  ಕಳವು ಮಾಡಿಕೊಂಡು  ಹೋಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ 135/2022  ಕಲಂ: 379 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.


ಅಸ್ವಾಭಾವಿಕ ಮರಣ ಫ್ರಕರಣಗಳು

  • ಬ್ರಹ್ಮಾವರ: ಪಿರ್ಯಾದಿ: ರಘುರಾಮ ಶೆಟ್ಟಿ  (59),ತಂದೆ:ದಿವಂಗತ ವಿಠಲ ಶೆಟ್ಟಿ ವಾಸ: ಕಾರ್ತಿಬೆಟ್ಟು, ಅಲ್ತಾರು, ಯಡ್ತಾಡಿ ಗ್ರಾಮ, ಇವರರ ಮಗಳು ಕುಮಾರಿ ಪ್ರಿಯಾಂಕ (26 ವರ್ಷ) ಈಕೆಯು ಸುಮಾರು 10-11ವರ್ಷಗಳಿಂದ ಮಾನಸಿಕ ಖಿನ್ನತೆಯ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದವರು ಈ ದಿನ ದಿನಾಂಕ: 19/12/2022 ರಂದು ರಾತ್ರಿ 9-00 ಗಂಟೆಯಿಂದ 9-30 ಘಂಟೆಯ ಮದ್ಯಾವಧಿಯಲ್ಲಿ ತನ್ನ ಸ್ನೇಹಿತೆ ಸುಲತಾ ಎಂಬರೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಾ ಮನೆಯ ಅಂಗಳಕ್ಕೆ ಬಂದವಳು  ಮನೆಯ ಪೂರ್ವ ಬದಿಯಲ್ಲಿರುವ ಅವರ ಮನೆಯ ಬಾವಿಯ ನೀರಿಗೆ ಹಾರಿ ಆತ್ಯಹತ್ಯೆ ಮಾಡಿಕೊಂಡಿರುವುದಾಗಿದೆ. ಮೃತಳು ಅವಳಿಗಿರುವ ಮಾನಸಿಕ ಖಿನ್ನತೆಯ ಕಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನನೊಂದು ಆತ್ಯಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ  ಯುಡಿಆರ್ ನಂ. 65/2022 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ: ಪಿರ್ಯಾದಿ: ಶ್ರೀಮತಿ ಜಯಲಕ್ಷ್ಮೀ (37), ಗಂಡ: ಆನಂದ ಗೌಡ , ವಾಸ: ತಿಲಕನಗರ ಸಚ್ಚರೀಪೇಟೆ ಅಂಚೆ  ದುರ್ಗಾ ಗ್ರಾಮ ಇವರ ಗಂಡ ಆನಂದ ಗೌಡ ( 45) ಇವರು ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 15/12/2022 ರಂದು ಮದ್ಯಾಹ್ನ 3:30 ಗಂಟೆಗೆ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಚ್ಚರೀಪೇಟೆ ವಿದ್ಯಾವರ್ಧಕ ಶಾಲೆಯ ಬಳಿ ಮೂತ್ರ ವಿಸರ್ಜನೆ ಮಾಡುತ್ತಿರುವಾಗ ತಲೆ ಸುತ್ತಿ ಡಾಮಾರು ರಸ್ತೆಗೆ ಬಿದ್ದು ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆಗೆ ಸ್ಪಂದಿಸದೇ  ದಿನಾಂಕ 20/12/2022 ರಂದು ಬೆಳಿಗ್ಗೆ 06:30 ಗಂಟೆಗೆ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ  ಯು,ಡಿ,ಆರ್ ನಂಬ್ರ: 43/2022 ಕಲಂ: 174 ಸಿ,ಆರ್,ಪಿ,ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 20-12-2022 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080