ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಶ್ರೇಯಸ್ (17), ತಂದೆ; ರಾಘವೇಂದ್ರ, ವಾಸ; ಚಾರಕೊಡ್ಲು, ಬಿಜೂರು ಗ್ರಾಮ, ಬೈಂದೂರು ತಾಲೂಕು ಇವರ  ತಂದೆ ರಾಘವೇಂದ್ರ ಗಾಣಿಗ ರವರು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಕಳೆದ ಒಂದು ವಾರದಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು, ಕಳೆದೆರಡು ದಿನಗಳಿಂದ ವಿಪರೀತ ಕೆಮ್ಮು  ಹಾಗೂ ವಾಂತಿ ಮಾಡುತ್ತಿದ್ದ ಪಿರ್ಯಾದಿದಾರರ ತಂದೆಯವರನ್ನು ದಿನಾಂಕ 18/08/2022 ರಂದು ನಂಬಿಯಾರ್ ಕ್ಲಿನಿಕ್ ಗೆ  ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ದಿನಾಂಕ 19/08/2022 ರಂದು ಬೆಳಿಗ್ಗೆ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಮದ್ಯಾಹ್ನ 01:00 ಗಂಟೆಗೆ ರಾಘವೇಂದ್ರ ಗಾಣಿಗ ರವರ ಆರೋಗ್ಯದಲ್ಲಿ ಏರುಪೇರಾಗಿ ಚಿಕಿತ್ಸೆ ಬಗ್ಗೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮದ್ಯಾಹ್ನ 01:20 ರ ಸುಮಾರಿಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಆಸ್ಪತ್ರೆಗೆ ಕರೆತರುವ ದಾರಿಯಲ್ಲೆ ಮೃತಪಟ್ಟಿರುವದಾಗಿ ತಿಳಿಸಿರುತ್ತಾರೆ.   ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 44/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಅಮಾಸೆಬೈಲು: ಪಿರ್ಯಾದಿದಾರರಾದ ರಾಮಣ್ಣ ನಾಯ್ಕ (46), ತಂದೆ:ದಿ ಶೀನ ನಾಯ್ಕ, ವಾಸ:ಹಾನಾಡಿ ಬೇಳಂಜೆ ಗ್ರಾಮ  ಹೆಬ್ರಿ  ತಾಲೂಕು ಇವರ ತಂಗಿ ಸುಮತಿ (42) ರವರು ತನ್ನ ಗಂಡನ ಮನೆಯಾದ ಮಡಾಮಕ್ಕಿ ಗ್ರಾಮದ ಹಬ್ಬಿನಾಲೆ ಎಂಬಲ್ಲಿ ವಾಸವಾಗಿದ್ದು ಅವರ ಗಂಡ ಬಳ್ಳಾರಿಯಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿರುತ್ತಾರೆ.  ಮನೆಯಲ್ಲಿ ಕೃಷಿ ಗದ್ದೆ ಜಾನುವಾರು ಇದ್ದು ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ಸುಮತಿ ಯವರೇ ಮಾಡುತ್ತಿದ್ದು ಹಾಗೂ ಜೀವನಕ್ಕಾಗಿ ಗೇರು ಬೀಜ ಕಟ್ಟಿಂಗ್ ಮಾಡುವ ಕೆಲಸವನ್ನು ಸಹ ಮಾಡುತ್ತಿವರು ಕೆಲಸದ ಒತ್ತಡದಲ್ಲಿ ಅನಾರೋಗ್ಯವಿದ್ದು ಹಾಲಾಡಿ ಯಲ್ಲಿ ಔಷಧಿ ತೆಗೆದುಕೊಂಡಿದ್ದು ಹಾಗೂ ಒಂದು ತಿಂಗಳ ಹಿಂದೆ ಅರಸಿನ ಮುಂಡಿಗೆ ಕಾಯಿಲೆಯಿದ್ದು ಅದಕ್ಕೆ ಹಳ್ಳಿ ಔಷದಿಯನ್ನು ತೆಗೆದುಕೊಂಡಿದ್ದು, ದಿನಾಂಕ 19/08/2022 ರಂದು 11:30 ಗಂಟೆಗೆ ಮಡಾಮಕ್ಕಿ ಗ್ರಾಮದ ಕಬ್ಬಿನಾಲೆ ಎಂಬಲ್ಲಿ ಮನೆಯ ಹತ್ತಿರದ ಹಟ್ಟಿಯಲ್ಲಿ ಜಂತಿಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ . ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 12/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕುಂದಾಪುರ: ಪಿರ್ಯಾದಿದಾರರಾದ ಗಣೇಶ ಶೆಟ್ಟಿ (28), ತಂದೆ: ಮೋಹನ ಶೆಟ್ಟಿ, ವಾಸ: ಹಕ್ಲಮನೆ, ಕೆಂಚನೂರು ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 19/08/2022 ರಂದು ಬೆಳಿಗ್ಗೆ ಸಂಸಾರದೊಂದಿಗೆ ಶೃಂಗೇರಿಗೆ ಹೋಗುವಾಗ ಅವರ ತಂದೆ ಮೋಹನ ಶೆಟ್ಟಿ (52) ಯವರನ್ನು ಬರಲು ಹೇಳಿದಾಗ ಅವರು ಬರಲು ಒಪ್ಪದೇ ಇದ್ದುದರಿಂದ ಅವರೊಬ್ಬರನ್ನೆ ಮನೆಯಲ್ಲಿ ಬಿಟ್ಟು ಶೃಂಗೇರಿಗೆ ಹೋಗಿದ್ದು ನಂತರ ಸಂಜೆ 17:00 ಗಂಟೆಗೆ  ಸಮಯಕ್ಕೆ ನೆರಮನೆಯ ಉದಯ ಶೆಟ್ಟಿ ರವರು ಪಿರ್ಯಾದಿದಾರರಿಗೆ ಪೋನ್ ಮಾಡಿ ನಿಮ್ಮ ಅಪ್ಪ ನಿಮ್ಮ ಮನೆಯ ಕಡು ಮಾಡಿನಲ್ಲಿ ಸ್ಕರಟನ್‌ ಬಟ್ಟೆಯಿಂದ ನೇಣು ಹಾಕಿಕೊಂಡಿರುವುದಾಗಿ ತಿಳಿಸಿದ್ದು ನಂತರ ಪಿರ್ಯಾದಿದಾರರು ವಾಪಾಸು ಸಂಜೆ 19:30 ಗಂಟೆಗೆ ಬಂದು ನೋಡಿದಾಗ ಪಿರ್ಯಾದಿದಾರರ ತಂದೆ ಮನೆಯ ಕಡುಮಾಡಿನ ಜಂತಿಗೆ ಸ್ಕರಟನ್‌ ಬಟ್ಟೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು ಅವರು ವಿಪರೀತ ಮದ್ಯಪಾನ ಮಾಡುವ ಚಟದವರಾಗಿದ್ದು ಮದ್ಯಪಾನಕ್ಕೆ ಹಣದ ಅಡಚಣೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 17:00 ಗಂಟೆಯ ನಡುವೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಅರ್‌ ಕ್ರಮಾಂಕ 24/2022 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  

ಇತ್ತೀಚಿನ ನವೀಕರಣ​ : 20-08-2022 09:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080