ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿ ಪ್ರಮೋದ್ (32) ತಂದೆ: ದಿ. ಶ್ರೀಧರ ಪೂಜಾರಿ ವಾಸ: ಕೊಂಬಬೆಟ್ಟು ಮನೆ, ಈದು ಗ್ರಾಮ, ಕಾರ್ಕಳ ಇವರು  ದಿನಾಂಕ 20.07.2022 ರಂದು 11:20 ಗಂಟೆಗೆ ಉಡುಪಿ ತಾಲೂಕು ಉದ್ಯಾವರ ಗ್ರಾಮದ ಉದ್ಯಾವರ ಟೋಯಾಟ ಶೋ ರೂಂ ಬಳಿ ರಾಹೆ 66 ಮಂಗಳೂರು ಉಡುಪಿ ರಸ್ತೆಯಲ್ಲಿ ತನ್ನ  ಕಾರು ನಂಬ್ರ KA20AA1487ನೇ ದನ್ನು ಚಲಾಯಿಸಿಕೊಂಡು ಉಡುಪಿ ಕಡೆಗೆ ಹೋಗುತ್ತಿರುವಾಗ  ಅದೇ ರಸ್ತೆಯಲ್ಲಿ ಉಡುಪಿ ಕಡೆಗೆ ಬರುತ್ತಿದ್ದ KA51AF4561 ನೇ ಲಾರಿ ಚಾಲಕ ನೂರುಲ್ಲಾ ರವರು ತನ್ನ ಲಾರಿಯನ್ನು ಅತೀ ವೇಗ ಹಾಗೂ ಅಜಗಾರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ  ಹಿಂದಿನಿಂದ ಡಿಕ್ಕಿ ಹೊಡೆದಿದ್ದು ಪರಿಣಾಮ ಪಿರ್ಯಾದಿದಾರರ ಕಾರು ಸಂಪೂರ್ಣ ಜಖಂಗೊಂಡಿರುತ್ತದೆ. ಕಾರಿನಲ್ಲಿದ್ದ ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ. ಈ ಅಪಘಾತಕ್ಕೆ KA51AF4561 ನೇ ಲಾರಿ ಚಾಲಕ ನೂರುಲ್ಲಾ ರವರು ತನ್ನ  ಲಾರಿಯನ್ನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದೇ ಕಾರಣವಾಗಿರುತ್ತದೆ . ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ  ಕ್ರಮಾಂಕ . 75/2022 ಕಲಂ 279    ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.

 
ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿ ಸುಪ್ರೀತಾ ಪೂಜಾರಿ ಪ್ರಾಯ: 30 ವರ್ಷ ಗಂಡ: ಕರುಣಾಕರ ಪೂಜಾರಿ ವಾಸ: ಕೊಚ್ಲಗದ್ದೆ ಮನೆ , ಗಂಟಿಹೊಳೆ, ಇವರು ಬಿಜೂರು ಗ್ರಾಮದ  ಗಂಟಿಹೊಳೆ ಕೊಚ್ಲಗದ್ದೆ  ಮನೆ ಎಂಬಲ್ಲಿ ಸಂಸಾರದೊಂದಿಗೆ ವಾಸವಾಗಿದ್ದು , ಅವರ ಮಕ್ಕಳಾದ ಶಮಿತ್ ಹಾಗೂ  ಸಮನ್ವಿ ಉಪ್ಪುಂದ  ವಿವೇಕಾನಂದ ಆಂಗ್ಲ ಮಾದ್ಯಮ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದು ಈ ದಿನ ದಿನಾಂಕ 20-07-2022 ರಂದು ಮಕ್ಕಳನ್ನು ಶಾಲೆಗೆ ಕಳಿಸುವರೇ ಮನೆಯಾದ  ಗಂಟಿಹೊಳೆ ಕೊಚ್ಲಗದ್ದೆ ಮನೆ ಎಂಬಲ್ಲಿ  ಶಾಲಾ  ವಾಹನಕ್ಕಾಗಿ ಕಾಯುತ್ತಿರುವಾಗ ಬೆಳಿಗ್ಗೆ  8:30 ಗಂಟೆಗೆ ಶಾಲಾ ವಾಹನ ಬಂದಿದ್ದು  ಮಗ ಶಮಿತ್ ಶಾಲಾ ವಾಹನವನ್ನು ಹತ್ತಿದ್ದು , ಮಗಳಾದ ಸಮನ್ವಿ (7 ವರ್ಷ)ಯನ್ನು  ಪಿರ್ಯಾದುದಾರರು ಶಾಲಾವಾಹನವನ್ನು ಹತ್ತಿಸುವರೇ ಕೈ ಹಿಡಿದು ಕರೆದುಕೊಂಡು ಹೋಗುತ್ತಿರುವಾಗ ಸಮನ್ವಿ ಕೈಯಿಂದ ಜಾರಿ ಬಿದ್ದು  ಅಮ್ಮಾ ಎಂದು ಕೂಗಿ ಪ್ರಜ್ಞೆ ತಪ್ಪಿದ್ದು ಪಿರ್ಯಾದುದಾರರು ಹಾಗೂ ಇತರರು  ಮಗುವನ್ನು ಎತ್ತಿ ಉಪಚರಿಸಿ ಚಿಕಿತ್ಸೆ ಬಗ್ಗೆ ಆಟೋ ರಿಕ್ಷಾದಲ್ಲಿ  ಬೈಂದೂರು ಅಂಜಲಿ ಆಸ್ಪತ್ರೆಗೆ ಕರೆ ತಂದಲ್ಲಿ  ಅಲ್ಲಿ ಪರೀಕ್ಷಿಸಿದ ವೈದ್ಯಾಧಿಕಾರಿಯವರು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ  ಹೋಗುವಂತೆ ತಿಳಿಸಿದ ಮೇರೆಗೆ ಮಗಳು ಸಮನ್ವಿಯನ್ನು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ  ಕರೆತಂದಲ್ಲಿ ಪರೀಕ್ಷಿಸಿದ ವೈದ್ಯಾಧಿಕಾರಿಯವರು ಸಮಯ ಸುಮಾರು 9:30 ಗಂಟೆಗೆ ಸಮನ್ವಿ ಮೃತಪಟ್ಟಿರುವುದಾಗಿ ದೃಡೀಕರಿಸಿರುತ್ತಾರೆ ಈ ಬಗ್ಗೆ ಬೈಂದೂರು ಪೊಲೀಸ್‌ಠಾಣಾ ಯುಡಿಅರ್‌ ನಂಬ್ರ 34/2022  ಕಲಂ 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೊಲ್ಲೂರು: ಪಿರ್ಯಾಧಿ ಉದಯ ದೇವಾಡಿಗ (36) ತಂದೆ:ನಾರಾಯಣ ದೇವಾಡಿಗ (65) ವಾಸ: ಬ್ರಹ್ಮಶ್ರೀ ನಿಲಯ ಮಾರಣಕಟ್ಟೆ  ಚಿತ್ತೂರು ಇವರ ತಂದೆ ನಾರಾಯಣ ದೇವಾಡಿಗ (65) ವರ್ಷ  ರವರು ಹಲವು ವರ್ಷಗಳಿಂದ ಬಿಪಿ , ಶುಗರ್ ಮತ್ತು ಉಬ್ಬಸ ಖಾಯಿಲೆಗಳಿಂದ ಬಳಲುತಿದ್ದು ಚಿಕಿತ್ಸೆ ಮಾಡಿಯೂ ಗುಣವಾಗದ ಚಿಂತೆಯಿಂದ ಜೀವನದಲ್ಲಿ  ಜಿಗುಪ್ಸೆಗೊಂಡು ದಿನಾಂಕ 19-07-2022 ರಂದು ರಾತ್ರಿ  8-00 ಗಂಟೆಯಿಂದ ದಿನಾಂಕ 20-07-2022 ರಂದು ಬೆಳಿಗ್ಗೆ 07-30 ಗಂಟೆಯ ಮಧ್ಯದ ಅವಧಿಯಲ್ಲಿ ಚಿತ್ತೂರು  ಗ್ರಾಮದ ಮಾರಣಕಟ್ಟೆ ಎಂಬಲ್ಲಿ  ತಾನು ವಾಸವಾಗಿರುವ  ವಾಸದ ಮನೆಯ ಸಮೀಪದ ಶೆಡ್ ನ ಹಿಂಬದಿ ಇರುವ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗಕಟ್ಟಿ ಕುತ್ತಿಗೆಗೆ ಉರುಳು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ  ಕೊಲ್ಲೂರು ಪೊಲೀಸ್‌ ಠಾಣೆ  ಯುಡಿಅರ್‌ ನಂಬ್ರ 09/2022 U/S: 174 ಸಿಆರ್‌ಪಿಸಿ   ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಶಂಕರನಾರಾಯಣ:  ಪಿರ್ಯಾದಿ ಸಂತೋಷ  ಪ್ರಾಯ: 32, ವಾಸ:  ದೇವಿ ನಿಲಯ, ಐರ ಬೈಲು ಸಿದ್ದಾಪುರ  ಇವರ ಮಾವ ಅನಂದ ಮರಕಾಲ ಪ್ರಾಯ 62 ವರ್ಷ ಇವರು ಕುಡಿತದ ಆಬ್ಯಾಸವನ್ನು ರೂಢಿಸಿಕೊಂಡಿದ್ದು ಅಸೌಖ್ಯದಲ್ಲಿದ್ದು  ಲಿವರ್ ಖಾಯಿಲೆಯಿಂದ  ಬಳಲುತ್ತಿದ್ದು ಮಲ ವಿಸರ್ಜಸುವಾಗ ರಕ್ತಸ್ರಾವ ಆಗುತ್ತಿದ್ದು  ಕುಡಿಯುವುದನ್ನು ಬಿಡುವಂತೆ ಬುದ್ದಿವಾದ ಹೇಳುತ್ತಿದ್ದು ಕೇಳದೆ ಲಿವರ್ ಕಾಯಿಲೆಯಿಂದ ಹಾಗೂ ಕುಡಿತದ ಚಟದಿಂದ ಗುದದ್ವಾರದಿಂದ ರಕ್ತ ಸ್ರಾವ ಉಂಟಾಗಿ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ, ಸಿದ್ದಾಪುರ ಪಶು ಆಸ್ಪತ್ರೆಯ ಜಗಲಿಯ ಮೇಲೆ ದಿ: 19-07-2022 ರಂದು ಸಂಜೆ ಮಲಗಿದವರು ದಿನಾಂಕ: 20-07-2022 ರಂದು ಬೆಳಿಗ್ಗೆ 08:30 ಗಂಟೆಯ ಮಧ್ಯಾವಧಿಯಲ್ಲಿ ಮೃತ ಪಟ್ಟಿರುತ್ತಾರೆ. ಮೃತರ ಮರಣದಲ್ಲಿ ಬೇರಾವುದೇ ಸಂಶಯ ಇರುವುದಿಲ್ಲ ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್‌ನಂಬ್ರ 21/2022  ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ಪಿರ್ಯಾದಿ ಶ್ರೀಮತಿ ಗುಲಾಬಿ ಶೆಡ್ತಿ ಗಂಡ: ಪ್ರಶಾಂತ ಶೆಟ್ಟಿ ವಾಸ:  ಹೇರಿಕುದ್ರು ಮನೆ, ತಲ್ಲೂರು ರವರ ಗಂಡ ಪ್ರಶಾಂತ ಶೆಟ್ಟಿ ಪ್ರಾಯ: 45 ವರ್ಷ ಇವರಿಗೆ ವಿಪರೀತ ಶರಾಬು ಕುಡಿಯುವ ಚಟವಿದ್ದು  ದಿನಾಂಕ: 20/07/2022 ರಂದು ಬೆಳಿಗ್ಗೆ 06:00 ಗಂಟೆಯಿಂದ 07:00 ಗಂಟೆಯ ಮಧ್ಯಾವಧಿಯಲ್ಲಿ ತಲ್ಲೂರಿನ ಪ್ರವಾಸಿ ಬಾರ್‌ನ ಸಮೀಪ ಯಾವುದೋ ವಿಷ ಪದಾರ್ಥವನ್ನು ಸೇವನೆ ಮಾಡಿ ಅಸ್ವಸ್ಥಗೊಂಡು ಮಲಗಿದವರನ್ನು ಅಲ್ಲಿ ಸೇರಿದವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈಧ್ಯರು ಪರೀಕ್ಷಿಸಿ ಪ್ರಶಾಂತ ಶೆಟ್ಟಿಯವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ಠಾಣೆ  ಯುಡಿಅರ್‌ ನಂಬ್ರ 22-2022 ಕಲಂ: 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 20-07-2022 06:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080