ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ನರಸಿಂಹ ಕಾಮತ್ ಬಿ  (29 ), ತಂದೆ:ಬಿ .ವಿಠ್ಠಲ ದಾಸ್ ಕಾಮತ್, ವಾಸ: ಹೊರಿ ಜೋನ್ ಹೋಮ್ಸ್  , 902 ಬಿ , ಬಿಜೈ , ಮಂಗಳೂರು ಇವರು ದಿನಾಂಕ 19/05/2023 ರಂದು ಬೆಳಿಗ್ಗೆ  ಅವರ KA-19-MK-5053 ನೇ SWIFT ಕಾರನ್ನು ಚಲಾಯಿಸಿಕೊಂಡು  ನರೇಂದ್ರ ಪೈ ಹಾಗೂ ಆದಿತ್ಯ ಪೈ ರವರೊಂದಿಗೆ  ಕೆಲಸದ  ನಿಮಿತ್ತ ಮಂಗಳೂರಿನಿಂದ ಪಣಜಿಗೆ  ಹೊರಟಿದ್ದು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶಿರೂರು ಗ್ರಾಮದ ಶಿರೂರು ಟೋಲ್ ಗೇಟ್ ಬಳಿ ಬೆಳಿಗ್ಗೆ  05:15 ಗಂಟೆಗೆ ಸಮೀಪಿಸುತ್ತಿದ್ದಂತೆ ಪಿರ್ಯಾದಿದಾರರ ಮುಂದುಗಡೆಯಿಂದ   KA-19-AA-8966 ನೇ ಟ್ಯಾಂಕರ್ ಚಾಲಕ ಮುಸ್ತಫಾ  ಟ್ಯಾಂಕರ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಹೋಗಿ   ಶಿರೂರು ಟೋಲ್ ಗೇಟ್ ಬಳಿ ಏಕಾ ಏಕಿ ಯಾವುದೇ ಸೂಚನೆ ನೀಡದೇ  ಒಮ್ಮೇಲೆ ಬಲಕ್ಕೆ ಯು ಟರ್ನ ತೆಗೆದುಕೊಳ್ಳುವ ಸಲುವಾಗಿ  ಟ್ಯಾಂಕರನ್ನು  ಬಲಕ್ಕೆ  ತಿರುಗಿಸಿದ ಪರಿಣಾಮ ರಸ್ತೆಯ  ಬಲಬದಿಯಲ್ಲಿ  ಪಣಜಿ ಕಡೆಗೆ ಹೋಗುತ್ತಿದ್ದ ಪಿರ್ಯಾದಿದಾರರ ಕಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರಿನ ಮುಂಭಾಗ ಹಾಗೂ ಎಡಭಾಗ ಜಖಂಗೊಂಡಿದ್ದು ಅಪಘಾತದಿಂದ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ  ನರೇಂದ್ರ  ಪೈ ರವರ  ಬೆನ್ನಿಗೆ ಹಾಗೂ ಕುತ್ತಿಗೆ ಭಾಗಕ್ಕೆ ಒಳ ಜಖಂ ಮತ್ತು ಕಾರಿನ ಹಿಂಬದಿ ಕುಳಿತ ಆದಿತ್ಯ ಪೈ ರವರ ಹಣೆಗೆ  ಹಾಗೂ ಕಣ್ಣಿಗೆ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರು ಸ್ಥಳೀಯರೊಂದಿಗೆ ಸೇರಿ  ಗಾಯಗೊಂಡವರನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಟೋಲ್ ಗೇಟ್ ಅಂಬುಲೆನ್ಸ್  ನಲ್ಲಿ ಭಟ್ಕಳ  ಖಾಸಗಿ ಕ್ಲಿನಿಕ್ ಗೆ ಕರೆದುಕೊಂಡು  ಹೋದಲ್ಲಿ ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ  ಹೆಚ್ಚಿನ ಚಿಕಿತ್ಸೆ ಗೆ ಸೂಚಿಸಿದ  ಮೇರೆಗೆ ಖಾಸಗಿ ಅಂಬುಲೆನ್ಸ್  ನಲ್ಲಿ ಮಂಗಳೂರಿನ ತಾರಾ ಆಸ್ಪತ್ರೆಗೆ ಕರೆದುಕೊಂಡು  ಹೋಗಿದ್ದು  ಅಲ್ಲಿನ ವೈದ್ಯರು  ನರೇಂದ್ರ  ಪೈ ಮತ್ತು ಆದಿತ್ಯ ಪೈ ರವರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 81/2023 ಕಲಂ: 279, 337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಕಳವು ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಸುಕೇಶ್ (20), ತಂದೆ: ಸುರೇಶ್ ದೇವಾಡಿಗ, ವಾಸ: ಬಾಡಿಗೆ ಮನೆ, ಶ್ರೀ ರಾಮ ಕ್ಯಾಂಟಿನ್ ಹತ್ತಿರ,ಕೊಟೇಶ್ವರ  ಗ್ರಾಮ ಕುಂದಾಪುರ ತಾಲುಕು ಉಡುಪಿ ಜಿಲ್ಲೆ ಇವರು SSO KARNATAKA CITIZEN CENTRIC PORTAL APPLICATION ನಲ್ಲಿ ದಾಖಲಿಸಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿದಾರರರು ಬಜಾಜ್‌ಕಂಪನಿಯ KA-20-EH-7815 ನೇ  ಪಲ್ಸರ್‌150  ಮೋಟಾರ್‌ಸೈಕಲ್‌ ವಾಹನದ ನೊಂದಣಿ ಮಾಲೀಕರಾಗಿದ್ದು  ವಾಹನವನ್ನು ದಿನಾಂಕ 17/05/2023 ರಂದು ಎಂದಿನಂತೆ ಉಪಯೋಗಿಸಿ ಕುಂದಾಪುರ ತಾಲೂಕಿನ ಕೊಟೇಶ್ವರ ಗ್ರಾಮದ, ಶೀರಾಮ ಕ್ಯಾಂಟಿನ್‌ಹತ್ತಿರ ಪಿರ್ಯಾದಿದಾರರ ಬಾಡಿಗೆ ಮನೆಯ ಎದುರು ಸಂಜೆ 18:00 ಗಂಟೆಗೆ ನಿಲ್ಲಿಸಿದ್ದು, 23:45 ಗಂಟೆಯ ಸುಮಾರಿಗೆ ಬೈಕನ್ನು ಪಿರ್ಯಾದಿದಾರರು ನೋಡಿದ್ದು, ನಂತರ ಮರುದಿನ ದಿನಾಂಕ 18/05/2023 ರಂದು ಬೆಳಿಗ್ಗೆ 06:00 ಗಂಟೆಗೆ ವಾಹನವನ್ನು ನಿಲ್ಲಿಸಿದ ಜಾಗದಲ್ಲಿ ನೋಡಿದಾಗ ಮೋಟಾರ್‌ಸೈಕಲ್‌ ಇರದೆ ಇದ್ದು ನಂತರದಲ್ಲಿ ಮೋಟಾರು ಸೈಕಲನ್ನು ನಿಲ್ಲಿಸಿದ ಸ್ಥಳದ ಸುತ್ತ ಮುತ್ತಲು ಮತ್ತು ಎಲ್ಲಾಕಡೆಯು ಹುಡುಕಾಡಿದರು ಪತ್ತೆಯಾಗಿರುವುದಿಲ್ಲ. ಮೋಟಾರು ಸೈಕಲನ್ನು ಯಾರೊ ಕಳ್ಳರು ಕಳುವು ಮಾಡಿಕೊಂಡು ಹೋಗಿರುವ ಸಾದ್ಯತೆ ಇದ್ದು ಅದರ ಮೌಲ್ಯ 30,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 52/2023  ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಸರೋಜ ಎನ್ ಮೆಂಡನ್ (44), ಗಂಡ: ನಾರಾಯಣ ಮೆಂಡನ್, ವಾಸ: ಮಣೂರು ಪಡುಕೆರೆ ಗ್ರಾಮ ಬ್ರಹ್ಮಾವರ ತಾಲೂಕು ಇವರ ಗಂಡನ ಚಿಕ್ಕಮ್ಮ ಶಶಿಕಲ ಹಾಗೂ ಅವರ ಮಗ ಆದರ್ಶ ರವರು ದಿನಾಂಕ 17/05/2023 ರಂದು 19:00 ಗಂಟೆಗೆ ಪಿರ್ಯಾದಿದಾರರ ಮನೆಗೆ ಬಂದು ದೇವರ ಕೆಲಸದ ವಿಚಾರವಾಗಿ ಕುಟುಂಬಸ್ಥರು ಚರ್ಚಿಸುವ ಸಲುವಾಗಿ ಬರಲು ಹೇಳಿದ್ದು ಅದರಂತೆ ಪಿರ್ಯಾದಿದಾರರು ಅದೇ ದಿನ 19:30 ಗಂಟೆಗೆ ಮಣೂರು ಪಡುಕೆರೆ ಗ್ರಾಮದ ರಾಮಚಂದ್ರ ಎಂಬುವವರ ಮನೆಯ ಬಳಿ ಹೋದಾಗ ಅಲ್ಲಿ ಆರೋಪಿತರಾದ ಶಶಿಕಲ, ಆದರ್ಶ, ಮತ್ತೊಬ್ಬ ಚಿಕ್ಕಮ್ಮ ಪಾರ್ವತಿ ಹಾಗೂ ಅವರ ಮಗ ನಿಖಿಲ್ ಬಂದಿದ್ದು, ಅವರೆಲ್ಲರೂ ಜಾಗದ ಪಾಲು ವಿಚಾರದ ಬಗ್ಗೆ ಮಾತನಾಡಲು ಪ್ರಾರಂಭಿಸಿದಾಗ ಪಿರ್ಯಾದಿದಾರರು ಅವರಲ್ಲಿ “ನಾನು ದೇವರ ಕೆಲಸದ ಬಗ್ಗೆ ಮಾತನಾಡಲು ಬಂದಿದ್ದು, ಪಾಲಿನ ಬಗ್ಗೆ ನನ್ನ ಗಂಡನಲ್ಲಿ ಮಾತನಾಡಿ” ಎಂದಾಗ ಆರೋಪಿತರೆಲ್ಲರೂ ಪಿರ್ಯಾದಿದಾರರನ್ನು ಸುತ್ತುವರೆದು ಮುಂದೆ ಚಲಿಸದ ಹಾಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರನ್ನು ಎಳೆದಾಡಿ  ಕೈಯಿಂದ ಪಿರ್ಯಾದಿದಾರರ ಕೈಗೆ, ಬೆನ್ನಿಗೆ ಹಲ್ಲೆ ಮಾಡಿ ನೆಲಕ್ಕೆ ದೂಡಿರುತ್ತಾರೆ. ಪಿರ್ಯಾದಿದಾರರು ನೋವಿನಿಂದ ಬೊಬ್ಬೆ ಹಾಕಿದಾಗ ಪಿರ್ಯಾದಿದಾರರ ಗಂಡ ನಾರಾಯಣ ಮೆಂಡನ್ ಹಾಗೂ ಗಂಡನ ಚಿಕ್ಕಪ್ಪ ರಾಮಚಂದ್ರರವರು ಸ್ಥಳಕ್ಕೆ ಬಂದಾಗ  ಆರೋಪಿತರು ಪಿರ್ಯಾದಿದಾರರನ್ನು ಹಾಗೂ ಅವರ ಗಂಡನನ್ನು ಉದ್ದೇಶಿಸಿ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಇದಾದ ನಂತರ ದಿನಾಂಕ 18/05/2023 ರಂದು ಪಿರ್ಯಾದಿದಾರರ ಮೈದುನ ಪ್ರಶಾಂತ ಮೆಂಡನ್ ಹಾಗೂ ಆದರ್ಶ ರವರು ಪಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರಿಗೆ ಗಂಡ ಎಲ್ಲಿ ಎಂದು ಕೆನ್ನೆಗೆ ಹಲ್ಲೆ ನಡೆಸಿ ಪಿರ್ಯಾದಿದಾರರನ್ನುಅವರಿಬ್ಬರೂ ಕೈ ಹಿಡಿದು ಎಳೆದು ಹೊರಗೆ ಕರೆದುಕೊಂಡು ಬಂದು ಕಾರ್ ನಿಂದ ರೀಪ್ ಒಂದನ್ನು ತೆಗೆದು ತೋರಿಸಿ  ಪ್ರಶಾಂತ ಮೆಂಡನ್ ಹಾಗೂ ಆದರ್ಶರವರು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 97/2023  ಕಲಂ: 341, 323, 504, 506(2), 354  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 20-05-2023 09:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080