Feedback / Suggestions

ಹುಡುಗ ಕಾಣೆ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿ ಕರುಣಾಕರ ದೇವಾಡಿಗ  (42) ತಂದೆ:ಗುರುವ ದೇವಾಡಿಗ, ವಾಸ: ಚಂದ್ರಿಕಾ ನಿವಾಸ, ಎಲ್ಲೂರು ಗ್ರಾಮ., ಇವರು ಉಡುಪಿ ಜಿಲ್ಲೆ ಕಾಪು ತಾಲೂಕು ಎಲ್ಲೂರು  ಗ್ರಾಮದ ನಿವಾಸಿಯಾಗಿದ್ದು, ಪಿರ್ಯಾದಿದಾರರ ತಂಗಿಯ ಮಗನಾದ ಧನುಷ (19) ಆತನ ಸ್ನೇಹಿತರಾದ ರಜತ್ ಮತ್ತು ಶ್ರೇಯಸ್ ರವರ ಜೊತೆ ಸಮುದ್ರ ಸ್ನಾನಕ್ಕೆ ಸಂಜೆ ಸುಮಾರು 16.00 ಗಂಟೆಗೆ ಅವರ ಮನೆಯಾದ ನಡ್ಸಾಲು ಗ್ರಾಮದ ಮಹಾಗಣಪತಿ ದೇವಸ್ಥಾನದ ಬಳಿಯಿಂದ ಕಾಡಿಪಟ್ನಕ್ಕೆ ಹೋಗಿ ಸಮುದ್ರದಲ್ಲಿ ಸ್ನಾನ ಮಾಡುತ್ತಿರುವ ಸಮಯ ನೀರಿನ ಸೆಳೆತಕ್ಕೆ ಸಿಲುಕಿಕೊಂಡವರನ್ನು ಅಲ್ಲಿ ಸೇರಿದವರು ರಜತ್ ಮತ್ತು ಶ್ರೇಯಸನನ್ನು ಸಂಜೆ ಸುಮಾರು 17.15 ಗಂಟೆಗೆ ನೀರಿನಿಂದ ಮೇಲಕ್ಕೆತ್ತಿ ರಕ್ಷಿಸಿದ್ದು, ಆ ಸಮಯ ಧನುಷ್ ಸಮುದ್ರದಲ್ಲಿ  ಕಾಣೆಯಾಗಿದ್ದು, ಹುಡುಕಾಡಿದರೂ  ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2022 ಕಲಂ: ಹುಡುಗ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿ ರವಿ ಶೆಟ್ಟಿ ( 43) ಗಂದೆ: ಮಂಜಯ್ಯ ಶೆಟ್ಟಿ, ವಾಸ: ಹುಣ್ಸೇ ಡಿ  ಹೊಸಂಗಡಿ ಗ್ರಾಮ ಕುಂದಾಪುರ ಇವರು ದಿನಾಂಕ:18-02-2022 ರಂದು 20:30  ಗಂಟೆಗೆ ಸಿದ್ದಾಪುರ ಗ್ರಾಮದ ನೀರಾವರಿ ಕಛೇರಿ ಎದುರುಗಡೆ ತಮ್ಮ  KA 20 C 3667 ನೇ  ಮೋಟಾರ್ ಸೈಕಲ್ ನಲ್ಲ ಹೋಗುತ್ತಿರುವ ಸಮಯ ಅರೋಪಿ ದೇವಿ ಪ್ರಸಾದ್ ಶೆಟ್ಟಿಯು ಬಿಳಿ ಬಣ್ಣದ ಸ್ಕಾರ್ಫೀಯೋ  ಕಾರು ನಂಬ್ರ KA 21 N 347 ನೇ  ಕಾರಿನಲ್ಲಿ ಬೆನ್ನಟ್ಟಿ ಬಂದು ಕೊಲ್ಲುವ ಉದ್ದೇಶದಿಂದ ಕಾರನ್ನು ಮೇಲೆ ಹತ್ತಿಸಲು ಮುಂದಾದಾಗ ಪಿರ್ಯಾದಿ ತಪ್ಪಿಸಿಕೊಂಡು ಅಡ್ಡ ದಾರಿಯಲ್ಲಿ ಹೋಗಿ. ಮುಂದೆ ಹೋಗಿ ಸಣ್ಣ ಹೊಳೆ ಎಂಬಲ್ಲಿ ಕೂಡ ಮೇಲೆ ಕಾರನ್ನು ಹತ್ತಿಸಲು ಪ್ರಯತ್ನಿಸಿದಾಗ ತಪ್ಪಿಸಿಕೊಂಡು ಮುಂದೆ ವೇಗವಾಗಿ ಹೋಗಿದ್ದು  ಮತ್ತಿಬೇರು ಎಂಬಲ್ಲಿ ವಾಹನವನ್ನು ಮೇಲೆ ಹತ್ತಿಸುವ ಬಗ್ಗೆ ಅಡ್ಡ ನಿಲ್ಲಿಸಿ ಇಳಿಯಲು ಪ್ರಯತ್ನಿಸಿರುತ್ತಾರೆ. ಭಯದಿಂದ ಪಿರ್ಯಾದಿದಾರರು ತಪ್ಪಿಸಿಕೊಂಡು ಅಡ್ಡದಾರಿಯಲ್ಲಿ ಹೆಂಡತಿ ಮನೆಗೆ ಹೋಗಿರುತ್ತಾರೆ. ಈ ಹಿಂದೆ  ಅಪಾದಿತ ಕೊಳವೆ ಬಾವಿಗೆ ಅಕ್ರಮವಾಗಿ ಎನ್.ಒ.ಸಿ. ಪಡೆದು ವಿದ್ಯುತ್ ಸಂಪರ್ಕ  ಮಾಡುವ ಬಗ್ಗೆ ಹೊಸಂಗಡಿ ಪಂಚಾಯತ್ ಗೆ ಅರ್ಜಿ ನೀಡಿದನ್ನು  ನೀರಾಕರಿಸಿದ್ದು, ಕೂಡ ಅಕ್ರಮವಾಗಿ ವಿದ್ಯುತ್ ಸಂಪರ್ಕ ಮಾಡಿದ್ದು ಇದನ್ನು ಮೇಸ್ಕಾಂ ಇಲಾಖೆ ತೆರವು ಮಾಡಿದ್ದು ಇದನ್ನು ಪಿರ್ಯಾದಿದಾರೇ ಮಾಡಿಸಿರುವುದಾಗಿ ಗ್ರಹಿಸಿ ಪಿರ್ಯಾದಿದಾರರ ಮೇಲೆ  ಕಾರನ್ನು ಹಾರಿಸಿ ಕೊಲ್ಲುವ ಉದ್ದೇಶದಿಂದ ಮಾಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2022  ಕಲಂ:307,341  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ಪಿರ್ಯಾದಿ ಬಸಲಿಂಗಯ್ಯ ಸದರಗಟ್ಟಿ ಪ್ರಾಯ:44 ವರ್ಷ, ತಂದೆ: ದಿ. ಪ್ರಯ್ಯ ಸದರಗಟ್ಟಿ, ವಾಸ: ಶಾಂತಿ ನಗರ 1 ನೇ ಹಂತ, 80 ಬಡಗುಬೆಟ್ಟು ಗ್ರಾಮ,ಇವರ ಹೆಂಡತಿ ಬಸಮ್ಮ ಸದರಗಟ್ಟಿ ಪ್ರಾಯ:33 ವರ್ಷ ಎಂಬುವವರು ಸುಮಾರು 3 ವರ್ಷಗಳಿಂದ ಮಾನಸಿಕ ಖಿನ್ನತೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ,ಇತ್ತೀಚೆಗೆ ಮನೆ ಸಾಲದ ವಿಚಾರದಲ್ಲಿ ಪಿರ್ಯಾದಿದಾರರಿಗೆ ಕಿರಿ ಕಿರಿ ಮಾಡಿ ಜಗಳ ಮಾಡುತ್ತಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಪಿರ್ಯಾದಿದಾರರ ಹೆಂಡತಿ ಸಾಲದ ಚಿಂತೆಯಿಂದ  ಅಥವಾ ಇನ್ಯಾವುದೋ ಹೇಳಿಕೊಳ್ಳಲಾಗದ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆ ಗೊಂಡು ದಿನಾಂಕ: 19.02.2022 ರಂದು 10:30 ಗಂಟೆಯಿಂದ 11:45 ಗಂಟೆಯ ಮಧ್ಯಾವಧಿಯಲ್ಲಿ ತಾನು ವಾಸವಿದ್ದ ಮನೆಯ ಮಲಗುವ ಕೋಣೆಯಲ್ಲಿನ ಫ್ಯಾನ್‌ಗೆ ಕಾಟನ್‌ ಹಗ್ಗದ ಒಂದು ತುದಿಯನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್‌‌ನಂಬ್ರ 03/2022 ಕಲಂ: 174 ಸಿ ಆರ್ ಪಿಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 20-02-2022 10:23 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080