Feedback / Suggestions

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ರಮೇಶ (36), ತಂದೆ: ಕೃಷ್ಣ, ವಾಸ: ಮನೆ ನಂಬ್ರ: 7-56ಎ, ನಿಟ್ಟೂರು ವಿಷ್ಣುಮೂರ್ತಿ ನಗರ, ಪುತ್ತೂರು ಗ್ರಾಮ,  ಉಡುಪಿ ತಾಲೂಕು ಇವರ ತಮ್ಮ ಪುರಂದರ (27) ರವರು ಕಳೆದ ಹತ್ತು ವರ್ಷಗಳಿಂದ ಟಿ.ಬಿ ಖಾಯಿಲೆಯಿಂದ ಬಳಲುತ್ತಿದ್ದು, ವಿಪರೀತ ಮದ್ಯವ್ಯಸನಿಯಾಗಿದ್ದವರು ದಿನಾಂಕ 19/01/2022 ರಂದು 17:30 ಗಂಟೆಗೆ ಮನೆಯಲ್ಲಿ ತೀವ್ರ ಅಸ್ವಸ್ಥಗೊಂಡವರನ್ನು ಚಿಕಿತ್ಸೆಯ ಬಗ್ಗೆ ಅಜ್ಜರಕಾಡು  ಜಿಲ್ಲಾಸ್ಪತ್ರೆಗೆ  ಕರೆತಂದಲ್ಲಿ  18:50 ಗಂಟೆಗೆ ಪರೀಕ್ಷಿಸಿದ ವೈದ್ಯರು ಪುರಂದರರವರು ಅದಾಗಲೇ ಮೃತಪಟ್ಟಿರುವುದಾಗಿ  ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 06/2022 ಕಲಂ: 174  CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಖುಷಿ ಮೇಹ್ತಾ (19) ವರ್ಷ, ಸೋನಿಯಾ ಹಾಸ್ಟೇಲ್‌ ಮಣಿಪಾಲ ಇವರು ದಿನಾಂಕ 16/01/2022 ರಂದು ತನ್ನ ಕಿವಿಯೋಲೆ ಮಾರಾಟಕ್ಕಿರುವುದಾಗಿ OLX ನಲ್ಲಿ ಜಾಹೀರಾತು ನೀಡಿರುತ್ತಾರೆ. ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ ಕೊವಿಯೋಲೆಯನ್ನು ಖರೀದಿಸುವದಾಗಿ ತಿಳಿಸಿ, ಹಣವನ್ನು Paytm ಮೂಲಕ ಪಾವತಿಸುವುದಾಗಿ ನಂಬಿಸಿ ರೂಪಾಯಿ 5 ಹಾಗೂ 100 ರೂಪಾಯಿಗಳನ್ನು ಪಿರ್ಯಾದಿದಾರರ ಖಾತೆಗೆ ಜಮಾ ಮಾಡಿರುತ್ತಾನೆ. ನಂತರ ಪಿರ್ಯಾದಿದಾರರ ಖಾತೆಯಿಂದ ಹಂತ ಹಂತವಾಗಿ ಒಟ್ಟು 19,018/- ಹಣ Paytm ಮೂಲಕ ಕಡಿತಗೊಂಡಿರುತ್ತದೆ. ಇದನ್ನು ಗಮನಿಸಿದ ಪಿರ್ಯಾದಿದಾರರು ಅಪರಿಚಿತ ವ್ಯಕ್ತಿಗೆ ತನ್ನ ಖಾತೆಯಿಂದ ಕಡಿತಗೊಂಡ ಹಣದ ಬಗ್ಗೆ ವಿಚಾರಿಸಿದಾಗ ಆತನು ಪಿರ್ಯಾದಿದಾರರಲ್ಲಿ ಹಣ ಮರುಪಾವತಿ ಮಾಡುವುದಾಗಿ ನಂಬಿಸಿ, ಬೇರೆ ಯಾವುದಾದರು ಖಾತೆಯ ವಿವರವನ್ನು ಒದಗಿಸುವಂತೆ ತಿಳಿಸಿರುತ್ತಾನೆ. ಇದನ್ನು ನಂಬಿದ ಪಿರ್ಯಾದಿದಾರರು ತನ್ನ ಸ್ನೇಹಿತೆ ಟಿ ಸಾಯಿ ಚಂದನ ರವರ Paytm ನಂಬ್ರ ವನ್ನು ನೀಡಿರುತ್ತಾರೆ. ತದನಂತರ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರಿಗೆ ಕರೆ ಮಾಡಿ ಪಿರ್ಯಾದಿದಾರ ಸ್ನೇಹಿತೆ ಟಿ ಸಾಯಿ ಚಂದನ ರವರ ಮೊಬೈಲ್‌ಗೆ ಬಂದಿರುವ OTP ನಂಬ್ರವನ್ನು ಪಡೆದು ಪಿರ್ಯಾದಿದಾರರ ಸ್ನೇಹಿತೆ ಟಿ ಸಾಯಿ ಚಂದನ ರವರ ಖಾತೆಯಿಂದ  ಹಂತ ಹಂತವಾಗಿ ಒಟ್ಟು 74,800/- ಹಣ Paytm ಮೂಲಕ ಕಡಿತಗೊಂಡಿರುತ್ತದೆ. ಪಿರ್ಯಾದಿದಾರರಿಂದ OLX ನಲ್ಲಿ ಕೊವಿಯೋಲೆಯನ್ನು ಖರೀದಿಸುವುದಾಗಿ ನಂಬಿಸಿ ಪಿರ್ಯಾದಿದಾರರ ಹಾಗೂ ಅವರ ಸ್ನೇಹಿತೆಯ ಖಾತೆಯಿಂದ  ಒಟ್ಟು ರೂಪಾಯಿ 93,818/- ಹಣವನ್ನು  Paytm ಮೂಲಕ ಕಡಿತಗೊಳಿಸಿ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 03/2022 ಕಲಂ: 66(c) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಗಂಗೊಳ್ಳಿ: ದಿನಾಂಕ 19/01/2022 ರಂದು ನಂಜಾ ನಾಯ್ಕ್‌ಎನ್‌, ಪೊಲೀಸ್ ಉಪನಿರೀಕ್ಷಕರು ಗಂಗೊಳ್ಳಿ ಪೊಲೀಸ್‌ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್ ರೋಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ನಡೆಸುತ್ತಿದ್ದ ಬಗ್ಗೆ ಬಂದ ಮಾಹಿತಿ ಮೇರೆಗೆ  ದಾಳಿ ನಡೆಸಿ ಮಟ್ಕಾ ಜುಗಾರಿ ನಡೆಸುತ್ತಿದ್ದ  ರವಿರಾಜ ದೇವಾಡಿಗ (28), ತಂದೆ: ಪ್ರಭಾಕರ ದೇವಾಡಿಗ, ವಾಸ: ಗುಡ್ಡಿಕೇರಿ, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಮಟ್ಕಾ ಜುಗಾರಿಗೆ ಬಳಸಿದ ಮಟ್ಕಾ ಚೀಟಿ-1, ಬಾಲ್ ಪೆನ್ನು-1 ಹಾಗೂ 790/- ರೂಪಾಯಿ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/2022 ಕಲಂ:78(1), 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ 2021 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಶಂಕರನಾರಾಯಣ: ದಿನಾಂಕ 19/01/2022  ರಂದು 16:00 ಗಂಟೆಗೆ ಕುಂದಾಪುರ ತಾಲೂಕಿನ ಸಿದ್ದಾಪುರ  ಗ್ರಾಮದ ಸಿದ್ದಾಪುರ ಪೇಟೆಯ ಚಕ್ರವರ್ತಿ ಬಾರ್‌‌ಗೆ ಪಿರ್ಯಾದಿದಾರರಾದ ಪ್ರಕಾಶ್‌ ಪೂಜಾರಿ (34), ತಂದೆ: ಕೃಷ್ಣ ಪೂಜಾರಿ, ವಾಸ, ವಾಸ: ವಳಾಲು ಉಳ್ಳೂರು  74  ಅಂಚೆ ಮತ್ತು ಗ್ರಾಮ  ಕುಂದಾಪುರ  ತಾಲೂಕು ಇವರು ದೇವರ ಪ್ರಸಾದ್‌ ಕೊಡಲು ಹೋಗಿದ್ದಾಗ  ಆರೋಪಿ 1. ಶ್ರೀಕಾಂತ ಶೆಟ್ಟಿ, 2. ವಿವೇಕ ಶೆಟ್ಟಿ ಇವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಕೈಗಳಿಂದ  ಹೊಡೆದು ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 10/2022  ಕಲಂ:  341, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

         

Last Updated: 20-01-2022 10:06 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080