ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಕಾರ್ಕಳ:  ಕಾರ್ಕಳ ತಾಲೂಕು ಈದು ಗ್ರಾಮದ ವಾಸಿಯಾಗಿರುವ ಪಿರ್ಯಾದಿ ಚೇತನ್ ಇವರರು ಅವರ ಸ್ನೇಹಿತನಾದ ಯೊಗೀಶನೊಂದಿಗೆ ದಿನಾಂಕ 18-1-2022 ರಂದು ಸಂಜೆ 7-30  ಗಂಟೆಗೆ ಈದು ಗ್ರಾಮದ ಹೊಸ್ಮಾರು ಪೇಟೆಯಲ್ಲಿ ಇರುವಾಗ ಯೋಗೀಶನ ಮೊಬೈಲಿಗೆ ಒಂದು ಸ್ಟೇಟಸ್ ಬಂದಿದ್ದು ಅದರಲ್ಲಿ ಈದುವಿನ ರವೀಂದ್ರ ಎಂಬವನು ಕೊರಗಜ್ಜನ ವೇಷ ಹಾಕಿ ಅಪಹಾಸ್ಯ ಮಾಡಿರುವುದು ಕಂಡು ಬಂದಿದ್ದು, ಎಲ್ಲಾ ಧರ್ಮದವರು ಪೂಜ್ಯನೀಯವಾಗಿ ನಂಬಿಕೊಂಡು ಬಂದಿರುವ ಸ್ವಾಮಿ ಕೊರಗಜ್ಜನಿಗೆ ಇತೀಚಿನ ದಿನಗಳಲ್ಲಿ ಮಂಗಳೂರು ಹಾಗೂ ಇತರ ಕಡೆಗಳಲ್ಲಿ ಅಪಹಾಸ್ಯ ಮಾಡುತ್ತಿದ್ದು,  ರವೀಂದ್ರನು  ಮೊಬೈಲಿನಲ್ಲಿ ಸ್ವಾಮಿ ಕೊರಗಜ್ಜನ ಬಗ್ಗೆ ಅಪಹಾಸ್ಯ ಮಾಡಿ ಸ್ಟೇಟಸ್ ಹಾಕಿಕೊಂಡಿದ್ದರಿಂದ ಪಿರ್ಯಾದಿದಾರರ ಧಾರ್ಮಿಕ ಭಾವನೆಗೆ ನೋವಾಗಿದ್ದು, ಪಿರ್ಯಾದಿದಾರರು ಅವರ ಸ್ನೇಹಿತ ಯೋಗೀಶನ ಮೊಬೈಲ್ ನಿಂದ ರವೀಂದ್ರನ ಮೊಬೈಲ್ ಗೆ ಸಂಜೆ 7-42 ಗಂಟೆಗ ಕರೆ ಮಾಡಿ ವಿಚಾರಿಸಿದಾಗ ರವೀಂದ್ರನು ತಾನು ಕೊರಗಜ್ಜನ ಬಗ್ಗೆ ಸ್ಟೇಟಸ್ ಹಾಕಿದ್ದೇನೆ ಎನಾಯ್ತು ಈಗ ಮುಂದೆಯೂ ಇದಕ್ಕಿಂತ ಹೆಚ್ಚಿನ ರೀತಿಯ ವೇಷ ಹಾಕಿ ಸಂಭ್ರಮಿಸುತ್ತೇನೆ ಎಂದು ಮರು ಉತ್ತರ ನೀಡಿದ್ದು, ಆರೋಪಿ ರವೀಂದ್ರನು ಅತೀವವಾಗಿ ಪೂಜ್ಯನೀಯವಾಗಿ ನಂಬಿಕೊಂಡು ಬರುತ್ತಿರುವ ಸ್ವಾಮಿ ಕೊರಗಜ್ಜನ ವೇಷ ಹಾಕಿ ಅಪಹಾಸ್ಯ ಮಾಡಿ ಧಾರ್ಮಿಕ ಭಾವನೆ ಹಾಗೂ  ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 07/2022 ಕಲಂ 295(ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ : ಫಿರ್ಯಾದಿ ಪ್ರಶಾಂತ್ ಇವರರು ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಹೊಸಮಾರು ಮನೆ ಎಂಬಲ್ಲಿ  ತನ್ನ ತಾಯಿ ಶ್ರೀಮತಿ ಲಕ್ಷ್ಮಿ ಪ್ರಾಯ 65 ವರ್ಷ ಮತ್ತು ಹೆಂಡತಿ ,ಮಕ್ಕಳೊಂದಿಗೆ ವಾಸವಾಗಿದ್ದು ಚಿನ್ನದ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 19-01-2022 ರಂದು ರಾತ್ರಿ 12-00 ಗಂಟೆವರೆಗೆ ಕೆಲಸ ಮಾಡಿಕೊಂಡಿದ್ದು ದಿನಾಂಕ 20-01-2022 ರ 00-05 ಗಂಟೆಗೆ ತಾಯಿಯನ್ನು ಮಾತನಾಡಿಸಿ ಮಲಗಿದ್ದು ಬೆಳಿಗ್ಗೆ 03-15 ಗಂಟೆಗೆ ಪಕ್ಕದ ಮನೆಯ ದೊಡ್ಡಪ್ಪನ ಸೊಸೆಯಾದ ನಮ್ರತಾ ಮೊಬೈಲ್‌ಗೆ ಫೋನ್  ಮಾಡಿ ಮನೆಯ ಹಿಂಬದಿ ಬೆಂಕಿ ಕಾಣಿಸುತ್ತಿದೆ ಎಂದು ಹೇಳಿದ್ದು ಫಿರ್ಯಾದುದಾರರು ಮನೆಯ ಹಿಂಬದಿ ಟಾಯ್ಲೆಟ್ ಹತ್ತಿರ  ಹೋಗಿ ನೋಡಿದಾಗ ತಾಯಿ ಲಕ್ಷ್ಮಿರವರು ಬೆಂಕಿಹಚ್ಚಿಕೊಂಡು ಬಿದ್ದ ಸ್ಥಿತಿಯಲ್ಲಿದ್ದು ಡೀಸೆಲ್ ವಾಸನೆ ಬರುತ್ತಿದ್ದು ಅವರು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 03/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 20-01-2022 05:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080