ಅಭಿಪ್ರಾಯ / ಸಲಹೆಗಳು

ಗಂಡಸು ಕಾಣೆ ಪ್ರಕರಣ

  • ಅಜೆಕಾರು: ಪಿರ್ಯಾದಿದಾರರಾದ ಸತೀಶ ಪ್ರಭು, ತಂದೆ: ಕೆ. ಗೋಪಾಲ ಪ್ರಭು, ಕೆರ್ವಾಶೆ ಗ್ರಾಮ, ಕಾರ್ಕಳ ತಾಲೂಕು ಇವರ ತೋಟದಲ್ಲಿ  ಜನವರಿ ತಿಂಗಳಿನಿಂದ ತೋಟದ ಕೆಲಸ ಮಾಡಿಕೊಂಡು  ಅಲ್ಲಿಯೆ ವಾಸವಾಗಿದ್ದ ಒಡಿಶಾ ಮೂಲದ  ದೇಬಿಡ್‌ ‌ಮಾಜ್ಹಿ (27)  ದಿನಾಂಕ 17/11/2022 ರಂದು ಬೆಳಿಗ್ಗೆ 09:30 ಗಂಟೆಗೆ ಆತನ ಸೊತ್ತುಗಳನ್ನೆಲ್ಲ ಬಿಡಾರದಲ್ಲಿ ಬಿಟ್ಟು ಕಾಣೆಯಾಗಿವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2022 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಗೋವಿಂದ ನಾಯ್ಕ (42), ತಂದೆ: ತಾಮ್ಡಿ ನಾಯ್ಕ, ಕಮ್ಮಿ ಜೆಡ್ಡು ನಡೂರು  ಹೆಗ್ಗುಂಜೆ ಗ್ರಾಮ  ಇವರ ತಮ್ಮ ಪುಟ್ಟಯ್ಯ ನಾಯ್ಕ (38) ಇವರು ಮಾನಸಿಕ ಅಸ್ವಸ್ಥರಾಗಿದ್ದು ಮತ್ತು ಮದ್ಯಸೇವನೆ ಮಾಡುತ್ತಿದ್ದರು, ಅವರು ಆಗಾಗ ಹೆಂಡತಿಯ ಮನೆಗೆ ಹೋಗಿ ಬರುತ್ತಿದ್ದು, ಅವರು ದಿನಾಂಕ 12/11/2022 ರಂದು ಸಂಜೆ 6:00 ಗಂಟೆಯಿಂದ ಮನೆಯಿಂದ ಹೋಗಿದ್ದು, ಅವರು ಹೆಂಡತಿಯ ಮನೆಗೆ ಹೋಗಿರಬಹುದೆಂದು ಪಿರ್ಯಾದಿದಾರರು ತಿಳಿದುಕೊಂಡಿರುತ್ತಾರೆ. ಆದರೆ ದಿನಾಂಕ 17/11/2022 ರಂದು ಸಂಜೆ 6:00 ಗಂಟೆಗೆ  ಪಿರ್ಯಾದಿದಾರರ  ಮನೆಯ ಸಮೀಪದಲ್ಲಿರುವ ಮಹೇಶ್ ಶೆಟ್ಟಿಯವರ ಕಲ್ಲುಕೋರೆಯ ಪಶ್ಚಿಮ ಭಾಗದಲ್ಲಿ ಇರುವ  ಅರಣ್ಯ ಇಲಾಖೆಗೆ ಸಂಬಂಧಿಸಿದ ಖಾಲಿ ಜಾಗದಲ್ಲಿ  ಪುಟ್ಟಯ್ಯ ನಾಯ್ಕ ರವರ ಕೊಳೆತ ಮೃತ ಶರೀರ ಕಂಡು ಬಂದಿರುತ್ತದೆ.  ಪುಟ್ಟಯ್ಯ ನಾಯ್ಕರವರು ಕೆಲವೊಮ್ಮೆ ಸ್ನಾನಕ್ಕೆಂದು ಕಲ್ಲು ಕೋರೆಯ ಹತ್ತಿರ ಹೋಗುತ್ತಿದ್ದು, ಅಲ್ಲದೇ  ಅವರಿಗೆ ಇದ್ದ ಮಾನಸಿಕ ಖಾಯಿಲೆಯಿಂದಲೋ ಅಥವಾ ಬೇರೆಯಾವುದೋ ಕಾರಣದಿಂದಲೋ ಸ್ನಾನ ಮಾಡಲು ಹೋದವರು ಕಲ್ಲುಕೋರೆಯ ಪಶ್ಚಿಮಕ್ಕೆ ಇರುವ ಜಾಗದಲ್ಲಿ ಕುಸಿದುಬಿದ್ದು ಅಥವಾ ಕುಳಿತಲ್ಲೆ ಮೇಲೆಳಲಾಗದೇ ಮೃತ ಪಟ್ಟಿರಬಹುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 56/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ  ಕುಮಾರಸ್ವಾಮಿ (40),  ತಂದೆ: ನೂರುದಯ್ಯ ಮದರಿಮಠ, ವಾಸ: ನಂ 363, ವಾಜಪೇಯಿ ನಗರ, ತಾರಿಹಾಳ ಇಂಡಸ್ಟ್ರಿಯಲ್ ಏರಿಯಾ, ಹುಬ್ಬಳ್ಳಿ, ಧಾರವಾಡ ಜಿಲ್ಲೆ ಇವರ ತಂದೆ ನೂರುದಯ್ಯ ಮದರಿಮಠ (75) ಇವರು ಅವರ ಹೆಂಡತಿಗೆ ಲಕ್ವ ಹೊಡೆದಿರುವ ಬಗ್ಗೆ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು, ಈ ಹಿಂದೆ ಕೆಲಸ ಮಾಡುತ್ತಿದ್ದ ಉಡುಪಿ ತಾಲೂಕು ಕೊರಂಗ್ರಪಾಡಿ ಗ್ರಾಮದ ಮಾರ್ಪಳ್ಳಿ ಎಂಬಲ್ಲಿರುವ ಡಾ. ಆದರ್ಶ ಎಂಬುವವರ ಮನೆಗೆ ಬಂದು ಅವರ ಬಾಡಿಗೆ ಮನೆಯಲ್ಲಿದ್ದು, ದಿನಾಂಕ 16/11/2022 ರಂದು 21:30 ಗಂಟೆಯಿಂದ ದಿನಾಂಕ 17/11/2022 ರಂದು ಬೆಳಿಗ್ಗೆ 07:30 ಗಂಟೆ ನಡುವಿನ ಸಮಯದಲ್ಲಿ ಡಾ. ಆದರ್ಶ ರವರ ಮನೆಯ ಬಾವಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 45/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

     

ಇತ್ತೀಚಿನ ನವೀಕರಣ​ : 19-11-2022 09:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080