ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಸುಬ್ರಮಣ್ಯ ಹೊಳ್ಳ (58), ತಂದೆ: ದಿ ಸೂರ್ಯ ನಾರಾಯಣ ಹೊಳ್ಳ, ವಾಸ:  9/73 ಬಸ್ರೂರು ರಸ್ತೆ  ಕಾಶಿಮಠ  ವಡೇರ ಹೋಬಳಿ ಗ್ರಾಮ ಕುಂದಾಪುರ ತಾಲೂಕು ಇವರು  ದಿನಾಂಕ 17/10/2022 ರಂದು ಹೆಂಡತಿ ಸುಮ ಹೊಳ್ಳ ರೊಂದಿಗೆ ತನ್ನ  KA-55-E-6552 ನೇದರಲ್ಲಿ  ತೆಕ್ಕಟ್ಟೆಗೆ ಹೋಗಿ ಕೆಲಸ ಮುಗಿಸಿ ವಾಪಾಸ್ಸು ಮನೆಗೆ ಹೊರಟು ಮಧ್ಯಾಹ್ನ 3.30 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66 ರ ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ಜಂಕ್ಷನ್ ನಿಂದ ಸ್ವಲ್ಪ  ಮುಂದಕ್ಕೆ ಕುವೆಂಪು ಶಾಲೆಯ ಬಳಿಯಲ್ಲಿ ಬರುತ್ತಿರುವಾಗ ಎದುರಿನಿಂದ KA-20-EX-3073 ಸ್ಕೂಟಿ ಸವಾರ ಪ್ರಮೋದ  ತನ್ನ ಸ್ಕೂಟಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟಿಗೆ ಢಿಕ್ಕಿ ಹೊಡೆದ  ಪರಿಣಾಮ ಎರಡೂ ಸ್ಕೂಟಿ ರಸ್ತೆಗೆ  ಬಿದ್ದಿದ್ದು ಸ್ಕೂಟಿಯನ್ನು ಚಲಾಯಿಸುತ್ತಿದ್ದ  ಪಿರ್ಯಾದಿದಾರರಿಗೆ ಎರಡೂ ಕಾಲಿನ ಪಾದಕ್ಕೆ  ಕಾಲಿನ ಗಂಟಿಗೆ  ಎರಡೂ ಕೈಗೆ ತರಚಿದ ಗಾಯವಾಗಿದ್ದು, ಸ್ಕೂಟಿಯ ಸಹ ಸವಾರರಾದ ಸುಮಾ ರವರಿಗೆ ತಲೆಗೆ ತೀವೃ ತರಹದ ರಕ್ತಗಾಯ ಕೈಗೆ ಕಾಲಿಗೆ ತರಚಿದ ಗಾಯವಾಗಿರುತ್ತದೆ. ಹಾಗೂ ಅಪಘಾತ ಪಡಿಸಿದ ಸ್ಕೂಟಿ ಸವಾರ ಪ್ರಮೋದ ರವರಿಗೆ  ಕೈಗೆ ಕಾಲಿಗೆ  ತರಚಿದ ಗಾಯ ಆಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 176/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಖಾಲಾಗಿರುತ್ತದೆ .
  • ಪಡುಬಿದ್ರಿ: ಪಿರ್ಯಾದಿದಾರರಾದ ಸೌಜನ್ (26), ತಂದೆ: ಜಯರಾಮ್ ಕೋಟ್ಯಾನ್, ವಾಸ: ಶ್ರೀ ದುರ್ಗಾ ಕೃಪಾ ಬ್ರಹ್ಮಸ್ಥಾನ ಹೊಸ ರಸ್ತೆ, ಪಡುಬಿದ್ರಿ ಅಂಚೆ, ನಡ್ಸಾಲು ಗ್ರಾಮ, ಕಾಪು ತಾಲೂಕು ಇವರ ತಂದೆ ಜಯರಾಮ್ ಕೋಟ್ಯಾನ್ ರವರು ಪಡುಬಿದ್ರಿಯ ಗ್ರಾಮ ಕರಣಿಕರ ಕಛೇರಿಯಲ್ಲಿ ಗ್ರಾಮ ಸಹಾಯಕನಾಗಿ ಕೆಲಸ ಮಾಡಿಕೊಂಡಿ ದ್ದು,  ದಿನಾಂಕ 18/10/2022 ರಂದು ಮಧ್ಯಾಹ್ನ 12:15 ಗಂಟೆಗೆ ಕಚೇರಿ ಕೆಲಸ ನಿಮಿತ್ತ ಪಡುಬಿದ್ರಿ ಯಿಂದ ಕಾಪು ತಾಲೂಕು ಕಛೇರಿಗೆ  ತನ್ನ KA-20-EX-0894 ಸ್ಕೂಟಿಯನ್ನು ಚಲಾಯಿಸಿಕೊಂಡು ಕಾಪು ತಾಲೂಕು ತೆಂಕ ಗ್ರಾಮದ  ಕಲ್ಸಂಕ ಸೇತುವೆ ಮೇಲೆ ಮಂಗಳೂರು ಉಡುಪಿ ರಾಷ್ಟ್ರೀ ಹೆದ್ದಾರಿ 66 ರಲ್ಲಿ ಹೋಗುತ್ತಿರುವಾಗ  ಹಿಂದಿನಿಂದ ಮೋಟಾರ್ ಸೈಕಲ್ KA-19-HK-5776 ಯಮಹಾ MT ಮೋಟಾರು ಸೈಕಲನ್ನು ಅದರ ಸವಾರ ಅನ್ಸಾರ್‌ ಹೆಂಡತಿ ಸಾಜಿದಾ ಭಾನು ರವರನ್ನು ಸಹ ಸವಾರಳನ್ನಾಗಿ ಕುಳ್ಳಿರಿಸಿಕೊಂಡು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜಯರಾಮವರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಎರಡೂ ಮೋಟಾರು ಸೈಕಲ್‌  ಸವಾರರು ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದ ಪರಿಣಾಮ ಮೋಟಾರು ಸೈಕಲುಗಳು ಜಖಂಗೊಂಡು ಜಯರಾಮ ಕೋಟ್ಯಾನ್ ರವರಿಗೆ ತಲೆಗೆ ಕೈಗೆ, ಸೊಂಟಕ್ಕೆ ತೀವ್ರ ತರದ ಗಾಯ ವಾಗಿದ್ದು, ಬೈಕ್ ಸವಾರ  ಅನ್ಸಾರ್‌ ಹಾಗೂ  ಸಾಜಿದಾಬಾನು ರವರಿಗೂ ತೀವ್ರ ತರಹದ ಗಾಯಾಗಿತ್ತದೆ.  ಗಾಯಾಳುಗಳು ಉಡುಪಿಯ ಆದರ್ಶ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.  ಈ ಬಗ್ಗೆ  ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 131/2022 ಕಲಂ: 279, 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 18/10/2022 ರಂದು ತಾಲೂಕು ಆಸ್ಪತ್ರೆ ಭಟ್ಕಳ ವೈದ್ಯಾಧಿಕಾರಿಯವರು ಪ್ರತಿಮಾ ರವಿ ನಾಯ್ಕ ಎಂಬ ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆ ಭಟ್ಕಳದ ನಗು ಮಗು ಅಂಬ್ಯುಲೆನ್ಸ್ ವಾಹನ ಸಂಖ್ಯೆ KA-47 G-0037 ನೇದರಲ್ಲಿ ಕರೆದುಕೊಂಡು ಹೋಗುವಂತೆ ಪಿರ್ಯಾದಿದಾರರಾದ ಆನಂದ ಕೊಟ್ರಪ್ಪ ಕತ್ತಿ (31), ತಂದೆ : ಕೊಟ್ರಪ್ಪ, ವಾಸ : ತಾಲೂಕು ಆಸ್ಪತ್ರೆ ಭಟ್ಕಳ , ಅಂಬ್ಯುಲೆನ್ಸ್ ಚಾಲಕ ಇವರಿಗೆ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಬೆಳಿಗ್ಗೆ 10:40 ಗಂಟೆಗೆ ಭಟ್ಕಳದಿಂದ ಕುಂದಾಪುರಕ್ಕೆ ಹೊರಟು 11:30 ಗಂಟೆಗೆ ಉಪ್ಪುಂದ ಗ್ರಾಮದ ಶಾಲೆಬಾಗಿಲು ಹತ್ತಿರ ತಲುಪುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಂಬ್ಯುಲೆನ್ಸ್ ವಾಹನದ ಮುಂದೆ KA-30-M-9290 ನೇ  ಸ್ವಿಪ್ಟ್ ಕಾರು ಚಾಲಕ ಆತನ ಕಾರನ್ನು ಮಧ್ಯ ರಸ್ತೆಯಲ್ಲಿ ಸಡನ್ ಆಗಿ ಬ್ರೇಕ್ ಹಾಕಿ ನಿಲ್ಲಿಸಿ ಬಿಟ್ಟಿದ್ದು, ಪಿರ್ಯಾದಿದಾರರು ಅಂಬ್ಯುಲೆನ್ಸ್ ವಾಹನಕ್ಕೆ ಬ್ರೇಕ್ ಹಾಕಿ ನಿಲ್ಲಿಸಿದರೂ ಕೂಡ ಅಂಬ್ಯುಲೆನ್ಸ್ ಕಾರಿನ ಹಿಂಬದಿಗೆ ಹೋಗಿ ತಾಗಿರುತ್ತದೆ. ಇದರಿಂದ ಅಂಬ್ಯುಲೆನ್ಸ್ ಜಖಂ ಗೊಂಡಿದ್ದು ಯಾರಿಗೂ ಯಾವುದೇ ಗಾಯನೋವು ಉಂಟಾಗಿರುವುದಿಲ್ಲ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 209/2022 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 19-10-2022 09:13 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080