ಅಭಿಪ್ರಾಯ / ಸಲಹೆಗಳು

 

ಹಲ್ಲೆ ಪ್ರಕರಣ

ಕುಂದಾಪುರ: ದಿನಾಂಕ 18-06-2021 ರಂದು  ಮದ್ಯಾಹ್ನ  ಸುಮಾರು 1:00 ಗಂಟೆಗೆ ಪಿರ್ಯಾದಿ ಸುಭಾಶ್ಚಂದ್ರ   ನಾಯ್ಕ ಇವರು ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ಕುಂಟಾನೇರಳೆ ಎಂಬಲ್ಲಿ ಮೋಹನ ದೇವಾಡಿಗರ ಮನೆಯ ಗದ್ದೆಯನ್ನು ಕರುಣಾಕರ ಹೆಗೆಡೆ ಉಳುಮೆ ಮಾಡಿ ವಾಪಾಸು ಹೋಗುತ್ತಿರುವಾಗ  ಪಿರ್ಯಾದಿದಾರರು ನಮ್ಮ ಗದ್ದೆಯಲ್ಲಿ  ಹೋಗಬೇಡಿ  ಎಂದು ಹೇಳಿದಾಗ  ಅಲ್ಲಿಯೆ ಇದ್ದ  ಆಪಾದಿತ ಮೋಹನ ದೇವಾಡಿಗ ರವರು  ನಾನು ಟಿಲ್ಲರ್ ನ್ನು ಅಲ್ಲಿಯೆ  ತೆಗೆದುಕೊಂಡು ಹೋಗುತ್ತೇನೆ ಎಂದು ಜಗಳ  ಮಾಡಿ  ಅವಾಚ್ಯ ಶಬ್ದಗಳಿಂದ ಬೈದು  ಅಲ್ಲಿಯೇ ಇದ್ದ  ಹಾರೆಯಿಂದ  ಎಡ ಕಾಲಿನ ಹೆಬ್ಬೆರೆಳಿಗೆ  ಹೊಡೆದು ಜೀವ ಬೆದರಿಕೆ ಹಾಕಿರುತ್ತಾರೆ.ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ನಂ47/2021 ಕಲಂ 324.504.506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ 

ಹೆಬ್ರಿ: ಶಶಿಧರ ನಾಯಕ್ (48ವರ್ಷ) ರವರು ದಿನಾಂಕ 19/06/2021 ರಂದು ಹೆಬ್ರಿ ಗ್ರಾಮದ ಕುಚ್ಚೂರು ರಸ್ತೆಯಲ್ಲಿರುವ ಅವರ ಮನೆಯಲ್ಲಿರುವಾಗ ಮುಂಜಾನೆ 01:00 ಗಂಟೆ ಸಮಯಕ್ಕೆ ಅವರಿಗೆ ವಿಪರೀತ ಎದೆನೋವು ಉಂಟಾಗಿದ್ದು ಚಿಕಿತ್ಸೆಯ ಬಗ್ಗೆ ಅವರನ್ನು ಒಂದು ವಾಹನದಲ್ಲಿ ಮುಂಜಾನೆ 02:00 ಗಂಟೆಗೆ ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 22/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-06-2021 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080