ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಅಮಾಸೆಬೈಲು: ಫಿರ್ಯಾದಿದಾರರಾಧ ವಿಶ್ವನಾಥ ನಾಯ್ಕ(39) ತಂದೆ:ನಾರಾಯಣನಾಯ್ಕ  ವಾಸ: ಹೊಸಂಗಡಿ ಜಡ್ಡು ಹೊಸಂಗಡಿ ಗ್ರಾಮ ಕುಂದಾಪುರ ಇವರು ದಿನಾಂಕ 18/05/2023 ರಂದು ಕೂಲಿ ಕೆಲಸದ ಬಗ್ಗೆ ಹೊಸಂಗಡಿ ಭದ್ರಾಪುರದಲ್ಲಿರುವ ಅರುಣ ಗೊಲ್ಲರ ಮನೆಗೆ ಹೋಗಿದ್ದು  ಅರುಣ್ ಗೊಲ್ಲರವರ ಟಿಪ್ಪರ್ ಲಾರಿ ನಂಬ್ರ KA-20 D-2687  ರಲ್ಲಿ ಗೊಬ್ಬರ ಲೋಡ್ ಕೆಲಸದ ಬಗ್ಗೆ ಹೊಸಂಗಡಿಗೆ ಹೋಗಿದ್ದು, ಹೋಗುವಾಗ ಹೊಸಂಗಡಿ ಕಾಲೇಜ್ ಗೇಟಿನ ಒಳಗಡೆ ಇರುವ ಮಹಾಬಲ ಗೊಲ್ಲರ ಮನೆಯ ಮುಂದೆ ಟಿಪ್ಪರ್ ಲಾರಿಯನ್ನು ನಿಲ್ಲಿಸಿ ಮಹಾಬಲ ಗೊಲ್ಲರ ಮನೆಯಿಂದ ಗೊಬ್ಬರದ ಬುಟ್ಟಿಗಳನ್ನು ತಂದು ಟಿಪ್ಪರ್ ಗೆ  ಹಾಕುವಂತೆ ಅರುಣ್ ಗೊಲ್ಲರವರು ತಿಳಿಸಿದ್ದು, ಅದರಂತೆ ವಿಶ್ವನಾಥ ನಾಯ್ಕ ರವರು ಗೊಬ್ಬರದ  ಬುಟ್ಟಿಗಳನ್ನು ತಂದು  ಟಿಪ್ಪರ್ ಗೆ ಹಿಂದಿನಿಂದ ಹತ್ತಿ ಟಿಪ್ಪರ್  ಒಳಗಡೆ ಬುಟ್ಟಿಗಳನ್ನು  ಹಾಕುತ್ತಿರುವಾಗ  ಬೆಳಿಗ್ಗೆ 09:45 ಗಂಟೆಗೆ ಟಿಪ್ಪರ್ ಚಾಲಕ ಅರುಣ್ ಗೊಲ್ಲ ಎಂಬವರು ಯಾವುದೇ ಸೂಚನೇ ನೀಡದೇ ಟಿಪ್ಪರ್ ಲಾರಿಯನ್ನು ಒಮ್ಮೆಲೇ ನಿರ್ಲಕ್ಷತನದಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ  ಟಿಪ್ಪರ್ ಮುಂದಕ್ಕೆ ಚಲಿಸಿ ಪಿರ್ಯಾದಿದಾರರು ಅಂಗಾತನೆ ರಸ್ತೆಗೆ ಬಿದ್ದು, ತೀವ್ರ ರೀತಿಯ ಬೆನ್ನು ಮೂಳೆ ಮುರಿತ ಉಂಟಾಗಿ ಸೊಂಟ ಹಾಗೂ  ಕಾಲಿಗೆ ಒಳಜಖಂ ಉಂಟಾಗಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 16/2023   ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ:  ಫಿರ್ಯಾದಿದಾರರಾದ ಬಸವ ನಾಯ್ಕ(59)ತಂದೆ: ದಿ. ವಿಠ್ಠಲ ನಾಯ್ಕ, ವಾಸ: ಬೆನಗಲ್‌, ಗಂಗಾಡಿ, ಚೇರ್ಕಾಡಿ ಗ್ರಾಮ, ಬ್ರಹ್ಮಾವರ ಇವರ ಎರಡನೇ ಅಕ್ಕ ರತ್ನಾ ಬಾಯಿ, (64) ಎಂಬವರಿಗೆ 2 ವರ್ಷದ ಹಿಂದೆ ಬಿ.ಪಿ ಜಾಸ್ತಿಯಾಗಿ ಪಕ್ಷಪಾತವಾಗಿ ಅವರ ಬಲ ಬದಿ ಬಲ ಹೀನವಾಗಿರುತ್ತದೆ. ಈ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅನಂತರ ಅವರಿಗೆ ಕೈ ಕಾಲು ಜಿಗಿತ ಇರುತ್ತದೆ. ಇದರಿಂದ ಅವರು ಸರಿಯಾಗಿ ಕೆಲಸಕ್ಕೆ ಹೋಗಲು ಆಗದೇ ಮನೆಯಲ್ಲಿಯೇ  ಒಬ್ಬಂಟಿಯಾಗಿ ಇದ್ದು, ಯಾವುದೋ ಕಾರಣದಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 19/05/2023 ರಂದು ಬೆಳಿಗ್ಗೆ 08:30   ಗಂಟೆಯಿಂದ ಬೆಳಿಗ್ಗೆ  09:00  ಗಂಟೆಯ ಮಧ್ಯಾವಧಿಯಲ್ಲಿ ತಾನು ವಾಸವಿರುವ ಮನೆಯ ಮಲಗುವ ಕೋಣೆಯ ಮಾಡಿನ ಕಬ್ಬಿಣದ ಪೈಪಿಗೆ ಸೀರೆಯನ್ನು ಕಟ್ಟಿ, ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯು.ಡಿಆರ್‌ ಕ್ರಮಾಂಕ 41/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತ್ತೀಚಿನ ನವೀಕರಣ​ : 19-05-2023 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080