ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣಗಳು

  • ಬ್ರಹ್ಮಾವರ: ಪಿರ್ಯಾದಿದಾರರಾಧ ಕೇಶವ ಆಚಾರ್ಯ (40) ತಂದೆ: ಬಾಬುರಾಯ ಆಚಾರ್ಯ, ವಾಸ: ರಾಜೀವ ನಗರ,  ಕೊಳಂಬೆ, 52ನೇ ಹೇರೂರು ಗ್ರಾಮ, ಬ್ರಹ್ಮಾವರ ಇವರ ತಾಯಿಯಾದ ಲಲಿತಾ (64) ಇವರು 10 ವರ್ಷಗಳಿಂದ ಉಬ್ಬಸ ಖಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆ ಕೊಡಿಸಿದರು ಸರಿಯಾಗಿ ಗುಣಮುಖರಾಗಿರುವುದಿಲ್ಲ. ದಿನಾಂಕ 18/03/2021 ರಂದು ರಾತ್ರಿ 9:00 ಗಂಟೆಯ ಸಮಯಕ್ಕೆ ಲಲಿತಾ ರವರು ಊಟ ಮಾಡುತ್ತಿದ್ದಾಗ, ಒಮ್ಮೇಲೆ ಅವರಿಗೆ ಉಬ್ಬಸ ಬಂದು ಕೆಮ್ಮಿ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಚಿಕಿತ್ಸೆ ಬಗ್ಗೆ ರಾತ್ರಿ ಸುಮಾರು 9:30 ಗಂಟೆಗೆ ಬ್ರಹ್ಮಾವರದ ಜೀವನಜ್ಯೋತಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ, ಪರೀಕ್ಷಿಸಿದ ವೈಧ್ಯರು ಲಲಿತಾ ರವರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯುಡಿಆರ್‌ ಕ್ರಮಾಂಕ 19/2021 ಕಲಂ 174 ಸಿ. ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕೋಟ: ಪಿರ್ಯದಿದಾರರಾಧ ಲಿಲ್ಲಿ ಲೂವಿಸ್ (74) ತಂದೆ: ಫಿಲಿಪ್ ಲೂವಿಸ್‌ವಾಸ: 2 ನೇ ಅಡ್ಡ ರಸ್ತೆ ಸೂಲ್‌‌ಕುದ್ರು ಪಾಂಡೇಶ್ವರ ಗ್ರಾಮ ಬ್ರಹ್ಮಾವರ ಇವರು ಗಂಡ ಫಿಲೀಪ್ ಲೂವಿಸ್ (86) ಎಂಬವರೊಂದಿಗೆ ವಾಸವಾಗಿದ್ದು, ನಾಲ್ಕುಜನ ಮಕ್ಕಳು ಬೇರೆ ಬೇರೆ ಕಡೆಯಲ್ಲಿ ವಾಸವಾಗಿದ್ದು, ಲಿಲ್ಲಿ ಲೂವಿಸ್ ರವರ ಗಂಡ ಫಿಲೀಪ್ ಲೂವಿಸ್‌ರವರು ಸುಮಾರು 10 ವರ್ಷಗಳಿಂದ ಹೃದಯ ಸಂಭಂದಿ ಕಾಯಿಲೆಯಿದ್ದು, ಅದಕ್ಕೆ ಬ್ರಹ್ಮಾವರದ ಪ್ರಣವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಕೊಂಡಿದ್ದು, ಆಲ್ಲದೇ ಅವರಿಗೆ ಕಿವಿ ಕೂಡಾ ಕೇಳಿಸುತ್ತಿರಲಿಲ್ಲ ಮತ್ತು ದೃಷ್ಟಿದೋಷ ಕೂಡಾ ಇದ್ದು, ಇತ್ತೀಚೆಗೆ ಬೇದಿ ಸಮಸ್ಸೆಯಿಂದ ಬಳಲುತ್ತಿದ್ದು, ಎಂದಿನಂತೆ ಮನೆಯಲ್ಲಿದ್ದವರು ದಿನಾಂಕ 18/03/2021 ರಂದು ರಾತ್ರಿ 09:30 ಗಂಟೆಗೆ ಊಟ ಮಾಡಿ ಔಷದಿ ತೆಗೆದುಕೊಂಡು 11:00  ಗಂಟೆ ಸಮಯಕ್ಕೆ ಮನೆಯ ಮಲಗುವ ಕೋಣೆಯಲ್ಲಿ ಮಲಗಿದ್ದವರು ದಿನಾಂಕ 19/03/2021 ರಂದು ಬೆಳಿಗ್ಗೆ 05:30 ಗಂಟೆಯ ಸಮಯಕ್ಕೆ ಪ್ರಾರ್ಥನೆ ಮಾಡಲು ಅವರನ್ನು ಏಳಿಸಲು ಹೋದಾಗ ಅವರು ಕೋಣೆಯಲ್ಲಿರಲಿಲ್ಲ ಕೂಡಲೇ ಮನೆಯ ಸುತ್ತಮುತ್ತ ತೋಟದಲ್ಲಿ ಹಾಗೂ ಮನೆಯ ಪಕ್ಕದಲ್ಲಿರುವ ಸೀತಾ ನದಿಯ ಬದಿಯಲ್ಲಿ ಸಮಯ 6:30 ಗಂಟೆಯ ಸಮಯಕ್ಕೆ ಹುಡುಕುತ್ತಿರುವಾಗ ಹೊಳೆಯ ನೀರಿನಲ್ಲಿ ತೇಲಾಡುತ್ತಿದ್ದವರನ್ನು ಹೊಳೆಯ ನೀರಿನಿಂದ ಮೇಲಕ್ಕೆ ಎತ್ತಿ ದಡಕ್ಕೆ ತಂದು ಪರಿಶೀಲಿಸಿದಲ್ಲಿ ಮೃತ ಪಟ್ಟಿರುವುದು ಕಂಡು ಬಂದಿರುತ್ತದೆ. ಲಿಲ್ಲಿ ಲೂವಿಸ್ ರವರ ಗಂಡ ಫಿಲೀಪ್ ಲೂವಿಸ್ (86) ಎಂಬವರು ಸುಮಾರು 10 ವರ್ಷಗಳಿಂದ ಹೃದಯ ಸಂಭಂದಿ ಕಾಯಿಲೆ ಕಿವಿ ಕೇಳಿಸುತ್ತಿರಲಿಲ್ಲ ಮತ್ತು ದೃಷ್ಟಿದೋಷದಿಂದ ಮತ್ತು  ಇತ್ತೀಚೆಗೆ ಬೇದಿ ಸಮಸ್ಸೆಯಿಂದ ಬಳಲುತ್ತಿದ್ದವರು ಯಾವುದೋ ಕಾರಣದಿಂದ ದಿನಾಂಕ 18/03/2021 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 19/03/2021 ರಂದು ಬೆಳಿಗ್ಗೆ 05:30 ಗಂಟೆಯ ಮದ್ಯಾವಧಿಯಲ್ಲಿ  ಮನೆಯ ಪಕ್ಕದಲ್ಲಿರುವ ಸೀತಾ ನದಿಯ ಬಳಿಗೆ ಹೋಗಿ ನೀರಿಗೆ ಬಿದ್ದು, ಮೃತ ಪಟ್ಟಿರುವುದಾಗಿದೆ.ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಯುಡಿಆರ್‌ ಕ್ರಮಾಂಕ 11/2021 ಕಲಂ 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾಧ ಫೆಡ್ರಿಕ್ ಮಸ್ಕರೇನಸ್‌(62) ತಂದೆ:ಪಾಸ್ಕಲ್‌ಮಸ್ಕ ರೇನಸ್‌, ವಾಸ: 351/2818 , ಮೋತಿಲಾಲ್ ನಗರ, ನಂ: 2, ಬದಿ ಮಸೀದಿ ಬಳಿ, ಗೋರೆಗಾವ್(ವೆಸ್ಟ್), ಮುಂಬೈ, ಮಹಾರಾಷ್ಟ್ರ ಇವರು 1ನೇ ಆಪಾದಿತ ಜೋಸೆಫ್ ಮಸ್ಕರೇನಸ್‌ ಇತನು ಸಹೋದರನಾಗಿದ್ದು, ಅವರಿಗೆ ಪಿತ್ರಾರ್ಜಿತವಾಗಿ ಬಂದ ಶಿವಳ್ಳಿ ಗ್ರಾಮದ ಸರ್ವೆ ನಂ: 381/8 (ಮೊದಲು ಸ. ನಂ: 381/3) ರಲ್ಲಿ 0.25 ಎಕ್ರೆ ಜಮೀನು ಇದ್ದು, ಸದ್ರಿ ಜಮೀನಿನ ಪೈಕಿ 0.05 ಎಕ್ರೆ ಜಮೀನನ್ನು ಆರೋಪಿಗಳಾದ ಜೋಸೆಫ್ ಮಸ್ಕರೇನಸ್‌, ರತ್ನಾಕರ ಆಚಾರ್ಯ, ಟಿ ಸೀತಾರಾಮ ಶೆಟ್ಟಿ ಇವರು ಸೇರಿ ತಮ್ಮ ಅಕ್ರಮ ಲಾಭಕ್ಕಾಗಿ ಜಾಗದ ಮಾಲೀಕ ಜೋಸೆಫ್ ಮಸ್ಕರೇನಸ್‌ ಎಂದು ನಮೂದು ಮಾಡಿ ಸುಳ್ಳು ದಾಖಲಾತಿಯನ್ನು ಸೃಷ್ಟಿಸಿ ಸದ್ರಿ ಸುಳ್ಳು ದಾಖಲಾತಿಯನ್ನು ನೈಜ ದಾಖಲಾತಿ ಎಂದು ಸರಕಾರಿ ಅಧಿಕಾರಿಯವರ ಮುಂದೆ ಹಾಜರುಪಡಿಸಿ ದಿನಾಂಕ 09/06/2017 ರಂದು ಆರೋಪಿ ವಿಠ್ಠಲ ಬೂದಿಹಾಳ ಇವರಿಗೆ ಕ್ರಯ ಸಾಧನ ಮಾಡಿ ಫೆಡ್ರಿಕ್ ಮಸ್ಕರೇನಸ್‌ ರವರಿಗೆ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 35/2021 ಕಲಂ: 465, 468, 471, 419, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 19-03-2021 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080