ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 18/02/2022 ರಂದು ಪಿರ್ಯಾದಿದಾರರಾದ ಸತೀಶ, (42) ತಂದೆ: ರಾಜೀವ ಮರಕಾಲ, ವಾಸ: ಹನೆಹಳ್ಳಿ, ಮೂಡುತೋಟ, ಬಾರಕೂರು, ಬ್ರಹ್ಮಾವರ ತಾಲೂಕು ಇವರು ಹಾಗೂ ಅವರ ಸ್ನೇಹಿತರಾದ ದಿನೇಶ್‌ ಹಾಗೂ ಶಂಕರ ಎಂಬವರೊಂದಿಗೆ ಬಾರ್ಕೂರು ಕಡೆಯಿಂದ ಬಂಡಿಮಠ ಕಡೆಗೆ ಬರುತ್ತಿರುವಾಗ ಹನೇಹಳ್ಳಿ ಗ್ರಾಮದ ನಾಯರ್‌ಬೆಟ್ಟು ಎಂಬಲ್ಲಿ ಸಂಜೆ 7:15 ಗಂಟೆಗೆ ತಲುಪಿದಾಗ ಬಂಡಿಮಠ ಕಡೆಯಿಂದ ಬಾರ್ಕೂರು ಕಡೆಗೆ ಶೇಖರ ಶೆಟ್ಟಿರವರು ತಾನು ಸವಾರಿ ಮಾಡಿಕೊಂಡು ಬರುತ್ತಿದ್ದ ಎಮ್‌ಎಚ್‌-09 ಬಿವೈ-1517 ನೇ ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಎದುರಿನಿಂದ ನಡೆದುಕೊಂಡು ಹೋಗುತ್ತಿದ್ದ ನಾಗರಾಜ ಕುಂದರ್‌ ಎಂಬವರಿಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ರಸ್ತೆಗೆ ಬಿದ್ದು, ಪಾದಚಾರಿ ನಾಗರಾಜ ಕುಂದರ್‌ರವರ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಅಪಘಾತವೆಸಗಿದ ದ್ಚಿಚಕ್ರ ವಾಹನ ಸವಾರನಿಗೆ ತರಚಿದ ರಕ್ತಗಾಯವಾಗಿರುತ್ತದೆ. ಅವರಿಬ್ಬರನ್ನು ಸತೀಶ ರವರು ಹಾಗೂ ಅವರೊಂದಿಗಿದ್ದ ದಿನೇಶ ಹಾಗೂ ಶಂಕರ ಸೇರಿಕೊಂಡು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರಿಕ್ಷೀಸಿದ ವೈದ್ಯರು ನಾಗರಾಜ ಕುಂದರ್‌ರವರು ಮೃತಪಟ್ಟಿರುವುದಾಗಿ ತಿಳಿಸಿ ಅಪಘಾತವೆಸಗಿದ ದ್ಚಿಚಕ್ರ ವಾಹನ ಸವಾರ ಶೇಖರ ಶೆಟ್ಟಿರವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2022 ಕಲಂ: 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಶಾರದ ರಾವ್ (65), ಗಂಡ: ರಾಘವೇಂದ್ರ ರಾವ್, ವಾಸ: ಮನೆ ನಂ 3-17-2, ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ, ಚಾಂತರು ಗ್ರಾಮ, ಬ್ರಹ್ಮಾವರ ಇವರ ಜೋತೆಯಲ್ಲಿ ವಾಸವಾಗಿರುವ ಅವರ ಗಂಡನಾದ ರಾಘವೇಂದ್ರ ರಾವ್‌(67) ಎಂಬವರು ಹುಟ್ಟಿನಿಂದಲೂ ಸ್ವಲ್ಪ ಬುದ್ದಿ ಮಂದರಾಗಿದ್ದು, ಪ್ರಸ್ತುತ 4-5 ವರ್ಷಗಳಿಂದ ನೆನಪಿಸ ಶಕ್ತಿ ಕಡಿಮೆಯಾಗಿ ಮನೆಯಿಂದ ಹೋದರೆ ಕೆಲವೊಂದು  ಬಾರಿ 2-3 ದಿನ ಬಿಟ್ಟು ಮನೆಗೆ ವಾಪಾಸ್ಸು ಬರುತ್ತಿದ್ದರು. ರಾಘವೇಂದ್ರ ರಾವ್‌ರವರು ದಿನಾಂಕ 18/02/2022 ರಂದು ಮಧ್ಯಾಹ್ನ 12:00 ಗಂಟೆಗೆ ಮನೆಯಿಂದ ಹೋರಗೆ ಹೋದವರು ದಿನಾಂಕ 19/02/2022 ರಂದು ಬೆಳಿಗ್ಗೆ 07:00 ಗಂಟೆಗೆ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ನೀರಿನಲ್ಲಿ ಕವುಚಿ ಬಿದ್ದ ಸ್ಥಿತಿಯಲ್ಲಿ ಅವರ ಮೃತದೇಹ ಕಂಡು ಬಂದಿರುವುದಾಗಿದೆ. ರಾಘವೇಂದ್ರ ರಾವ್‌ರವರು ಮಹಾಲಿಂಗೇಶ್ವರ ದೇವಸ್ಥಾನದ ಕೆರಯ ನೀರಿಗೆ ಕಾಲು ತೊಳೆಯುವ ಸಮಯ ಅಥವಾ ಮೀನಿಗೆ ಆಹಾರ ಹಾಕುವ ಸಮಯ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದಾಗಿದೆ. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 9/2022 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 19-02-2022 06:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080