ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹೆಬ್ರಿ: ದಿನಾಂಕ: 17/11/2022 ರಂದು ಅಪಾದಿತ ಶಂಕರ ನಾಯ್ಕ್ ಇವರು ತನ್ನ ಬಾಬ್ತು KA.20.EV.1859 ನೇ ಮೋಟಾರ್ ಸೈಕಲ್ ನಲ್ಲಿ ರಾಮನಾಯ್ಕ್ ಇವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಮಿಯ್ಯಾರು ಕಡೆಯಿಂದ ಕಲ್ಮನೆ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ಸಮಯ ಸುಮಾರು ಸಂಜೆ 7-00 ಗಂಟೆಗೆ ನಾಲ್ಕೂರು ಗ್ರಾಮದ ಅಂಕ್ರಾಲು ಎಂಬಲ್ಲಿನ ತಿರುವಿನ ತಲುಪಿದಾಗ ಅವರಿಗೆ ಅಡ್ಡವಾಗಿ ದನ ಬಂದದ್ದನ್ನು ನೋಡಿ  ಅಪಾದಿತನು ನಿರ್ಲಕ್ಷತನದಿಂದ ಮೋಟಾರ್ ಸೈಕಲ್ ಗೆ ಒಮ್ಮೆಲೇ ಬ್ರೇಕ್ ಹಾಕಿದ  ಪರಿಣಾಮ ಅವರಿಬ್ಬರೂ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಸಹ ಸವಾರ ರಾಮನಾಯ್ಕ್ ಇವರಿಗೆ ಕುತ್ತಿಗೆಯ ಬಳಿ, ಸೊಂಟದ ಬಳಿ  ತೀವ್ರ ಸ್ವರೂಪದ ಒಳ ನೋವಾಗಿದ್ದು. ಸವಾರ ಶಂಕರ ನಾಯ್ಕ್ ಇವರಿಗೆ ಯಾವುದೇ ನೋವು ಅಗಿರುವುದಿಲ್ಲ. ಈ ಅಪಘಾತವು KA.20.EV.1859 ನೇ ಮೋಟಾರ್ ಸೈಕಲ್ ಸವಾರ ಶಂಕರ ನಾಯ್ಕ್ ಇವರ ಅತೀ ವೇಗ ಹಾಗೂ ನಿರ್ಲಕ್ಷತನದ ಚಾಲನೆಯಿಂದ ಅಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 65/2022 ಕಲಂ:279,338 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

  • ಕಾರ್ಕಳ: ಪಿರ್ಯಾದಿ ಟಿ.ಉಣ್ಣಿ ಇವರು ಮೂಲತಃ ತಮಿಳುನಾಡಿನವರಾಗಿದ್ದು ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಬೂತಬೆಟ್ಟು ಎಂಬಲ್ಲಿನ ಮುನಿರಾಜ್ ಜೈನ್ ರವರ ರಬ್ಬರ್ ತೋಟವನ್ನು 2 ವರ್ಷದಿಂದ ಕರಾರಿಗೆ ಪಡೆದುಕೊಂಡು ರಬ್ಬರ್ ಹಾಲು ತೆಗೆದು ರಬ್ಬರ್ ಶೀಟು ಮಾಡುವ ಕೆಲಸ ಮಾಡಿಕೊಂಡಿದ್ದು ಸದ್ರಿ ರಬ್ಬರ್ ತೋಟದ ಕೆಲಸ ಮಾಡುವರೇ ವಾರದ ಹಿಂದೆ ತಮಿಳುನಾಡಿನ ತನ್ನ ಪರಿಚಯದ  ಪ್ರಮೋದ್ ,ಮಣಿಕಂಠನ್,ಮಹೇಶ, ವಿನೋದರವರನ್ನು ಕರೆಸಿಕೊಂಡಿದ್ದು ಇವರು ಸದ್ರಿತೋಟದ ಶೆಡ್ ನಲ್ಲಿ ವಾಸ ಮಾಡಿಕೊಂದ್ದು  ನಿನ್ನೆ ದಿನ ದಿನಾಂಕ 17/11/2022 ರಂದು ರಾತ್ರಿ 09 ಗಂಟೆಗೆ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದುದ್ದನ್ನು ಕಂಡ ಪಿರ್ಯಾದುದಾರರು ಗಲಾಟೆ ಮಾಡದಂತೆ ತಿಳುವಳಿಕೆ ನೀಡಿದ್ದು , ಆ ಸಮಯ ಪ್ರಮೋದ್ ಅಂಗಳದಲ್ಲಿ ಮೂತ್ರ ಮಾಡುತ್ತಿದ್ದುದ್ದಕ್ಕೆ ಅಂಗಳದಲ್ಲಿ ಮೂತ್ರ ಮಾಡಬೇಡ ಎಂದು ಪಿರ್ಯಾದುದಾರರು ಆತನಿಗೆ ಬುದ್ದಿವಾದ ಹೇಳಿದ್ದಕ್ಕೆ ಆತನು ಮತ್ತು ಆತನೊಂದಿಗಿದ್ದ ಮಣಿಕಂಠ ರವರು ಕೋಪಗೊಂಡು ಪಿರ್ಯಾದಿದಾರರನ್ನು ದೂಡಿ ಅಲ್ಲೆ ಇದ್ದ ರಬ್ಬರ್ ಟ್ಯಾಪಿಂಗ್ ಮಾಡುವ ಕತ್ತಿಯಿಂದ ಪ್ರಮೋದನು ಪಿರ್ಯಾದುದಾರರ ಎಡಭುಜದ ಬೆನ್ನಿನ ಹಿಂದೆ ಹಾಗೂ ತಲೆಗೆ ಚುಚ್ಚಿ ರಕ್ತಗಾಯಮಾಡಿದ್ದಲ್ಲದೆ ಬಿಡಿಸಲು ಬಂದ ಮಹೇಶನ ಬಲ ಅಂಗೈಗೆ ಅದೇ ಕತ್ತಿಯಿಂದ ಚುಚ್ಚಿ ರಕ್ತಗಾಯ ಮಾಡಿರುತ್ತಾನೆ, ಅಲ್ಲದೆ ಮಣಿಕಂಠ ಪಿರ್ಯಾದುದಾರರಿಗೆ ಕೈಯಿಂದ ಹೊಡೆದಿದ್ದು ಬಳಿಕ ಗಲಾಟೆ ಕೇಳಿ ಉದಯ್ ಜೈನ್ ರವರು ಅಲ್ಲಿಗೆ ಬರುತ್ತಿದ್ದಂತೆ ಅರೋಪಿರರಾದ ಪ್ರಮೋದ್,ಮಣಿಕಂಠರವರು ಜೀವ ಬೆದರಿಕೆ ಹಾಕಿ ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 142/2022 ಕಲಂ 324,323,506 ಜೊತೆಗೆ 34  ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 18-11-2022 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080