ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ  ಬಸವರಾಜ ಗಾಣಿಗೇರ (26) ತಂದೆ: ಅಶೋಕ ಗಾಣೆಗೇರ ವಾಸ: ಶಿವ ಸಾವಿತ್ರಿ ನಿವಾಸ ಬಸವೇಶ್ವರ ಸರ್ಕಲ್  ಪೋಸ್ಟ್ ಐನಾಪೂರ, ಅಥಣಿ ತಾಲೂಕು ರವರು, ತಮ್ಮ ತಾಯಿ ಶೈಲಾ ಗಾಣಿಗೇರಾ, ತಂಗಿ ಅದಿತಿ ಗಾಣಿಗೇರ, ದೊಡ್ಡಮ್ಮನ ಮಗ  ಶಿವಪುತ್ರ ಗಾಣಿಗೇರ, ಆತನ  ಪತ್ನಿ ಶ್ವೇತಾ ನ್ಯಾಮಗೌಡ ಮತ್ತು ದೊಡ್ಡಮ್ಮ ಸುರೇಖಾರವರು  KA-48 M-7161 ನೇ ಕಾರಿನಲ್ಲಿ  ಪ್ರವಾಸಕ್ಕೆ ಬಂದಿದ್ದು, ದಿನಾಂಕ 17/09/2021 ರಂದು  ಸದರಿಯವರು ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ KA-48 M-7161ನೇ ಕಾರ್‌‌ನಲ್ಲಿ ರಾಷ್ಟ್ರೀಯ ಹೆದ್ದಾರಿ 169(ಎ) ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗುತ್ತಿದ್ದಾಗ 16:30 ಗಂಟೆ ಸಮಯಕ್ಕೆ ಕೆಳಪರ್ಕಳ ತಲುಪುತ್ತಿದ್ದಂತೆ  KA-19 C-5172 ನೇ  ಬಸ್ಸನ್ನು ಅದರ ಚಾಲಕನಾದ  ವಿಜಯ ಕೋಟ್ಯಾನ್‌‌ಎಂಬಾತನು  ಕಾರ್ಕಳ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಕಾರ್‌‌‌‌ನ ಹಿಂಭಾಗಕ್ಕೆ ಡಿಕ್ಕಿಹೊಡೆದು ಅಪಘಾತಪಡಿಸಿರುತ್ತಾನೆ. ಪರಿಣಾಮ ಎರಡೂ ವಾಹನಗಳು ಜಖಂಗೊಂಡಿರುತ್ತದೆ,  ಹಾಗೂ ಕಾರಿನ  ಹಿಂಭಾಗದ ಸೀಟಿನ ಬಲಭಾಗದಲ್ಲಿ ಕುಳಿತಿದ್ದ ಶ್ವೇತಾ ನ್ಯಾಮಗೌಡರವರ ತಲೆಗೆ ಗುದ್ದಿದ ಗಾಯಉಂಟಾಗಿರುತ್ತದೆ ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 123/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಾಣೆ ಪ್ರಕರಣ

  • ಗಂಗೊಳ್ಳಿ:ಪಿರ್ಯಾದುದಾರರಾದ ಕೃಷ್ಣ ಖಾರ್ವಿ (40) ತಂದೆ: ಮಂಜುನಾಥ ಖಾರ್ವಿ ವಾಸ: ಮಲ್ಯರ ಬೆಟ್ಟು ಗಂಗೊಳ್ಳಿ ಗ್ರಾಮ, ಕುಂದಾಪುರ ಇವರ ತಮ್ಮ ದೇವೇಂದ್ರ ಖಾರ್ವಿ (35) ಇವರು ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು ದಿನಾಂಕ 16/09/2021 ರಂದು ಸಾಯಂಕಾಲ 6:30 ಗಂಟೆಗೆ ಮನೆಯಿಂದ ಮೀನುಗಾರಿಕೆ ಬಗ್ಗೆ ಗಂಗೊಳ್ಳಿ ಬಂದರಿಗೆ ಹೋಗಿದ್ದು, ರಾತ್ರಿಯಾದರೂ ಮನೆಗೆ ಬಾರದೇ ಇರುವುದನ್ನು ಕಂಡು ಹುಡುಕಾಡಿದಲ್ಲಿ ರಾತ್ರಿ 9:30 ಗಂಟೆಗೆ ದೇವೆಂದ್ರ ಖಾರ್ವಿ ರವರು ಮೀನುಗಾರಿಕೆ ಮಾಡುತ್ತಿದ್ದ ದೋಣಿಯು ಗಂಗೊಳ್ಳಿ ಬಂದರಿನ  ನದಿಯಲ್ಲಿ ಸಿಕ್ಕಿದ್ದು,  ದೇವೇಂದ್ರ ಖಾರ್ವಿ ರವರು ಈವರೆಗೂ ಪತ್ತೆಯಾಗಿರುವುದಿಲ್ಲ ದೇವೇಂದ್ರ ಖಾರ್ವಿ ರವರು ಮೀನುಗಾರಿಕೆ ಮಾಡುತ್ತಿರುವಾಗ ಆಯಯಪ್ಪಿ ನದಿಗೆ ಬಿದ್ದು, ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 83/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-09-2021 10:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080