ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾಧ ಆಕಾಶ್ (19) ತಂದೆ: ಚಂದ್ರ ಮೊಗವೀರ ವಾಸ: ಕ್ರೊಡ ಬೈಲೂರು ಶಂಕರನಾರಾಯಣ ಗ್ರಾಮ ಕುಂದಾಪುರ ಇವರು ದಿನಾಂಕ 18/08/2021 ರಂದು ಬೆಳಿಗ್ಗೆ 07:00 ಗಂಟೆಗೆ ಕೆಲಸದ ನಿಮಿತ್ತ ಕೋಡಿಬೇಂಗ್ರೆ ಮನೆಯಿಂದ ಬೆಂಗ್ರೆ ಬಂದರಿಗೆ ಆಕಾಶ್‌ ರವರ KA-20-EK-0902 ತನ್ನ ಮೋಟಾರು ಸೈಕಲ್ ನಲ್ಲಿ ಹಿಂಬದಿ ಸವಾರ ಮಂಜುನಾಥ ನನ್ನು ಕುಳ್ಳಿರಿಸಿಕೊಂಡು ಹೋಗುತ್ತಿರುವಾಗ ಕೋಡಿಬೇಂಗ್ರೆ ಮಸೀದಿಯ ಸ್ವಲ್ಪ ಮುಂದೆ ತಿರುವಿನಲ್ಲಿ ಬೆಳಿಗ್ಗೆ 07:10 ಸಮಯಕ್ಕೆಎದುರಿನಿಂದ KA-20-B-1087 ನಂಬ್ರದ ಗುರುಪ್ರಸಾದ್ ಬಸ್‌ಚಾಲಕನು ಒಮ್ಮೆಲೆ ಬಸ್ಸನ್ನು ತೀರ ಬಲಬದಿಗೆ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಎದುಗಡೆಯಿಂದ ಬರುತ್ತಿದ್ದ ಆಕಾಶ್‌ ಇವರು ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಹ ಸವಾರನಾದ ಮಂಜುನಾಥನಿಗೆ ಬಲಕಾಲಿನ ಗಂಟಿಗೆ ಬಸ್‌ತಾಗಿದ್ದು ತೀವ್ರತರವಾದ ರಕ್ತಗಾಯವಾಗಿದ್ದು ಅಲ್ಲಿ ನೆರೆದಿದ್ದ ಜನರು ಹಾಗೂ ಬಸ್‌ ಸಿಬ್ಬಂದಿಯವರು ಸೇರಿ ಉಪಚರಿಸಿ ಚಿಕಿತ್ಸೆಯ ಬಗ್ಗೆ ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ ಈ ಅಪಘಾತಕ್ಕೆ KA-20-B-1087 ನಂಬ್ರದ ಗುರುಪ್ರಸಾದ್ ಬಸ್‌ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯೆ ಕಾರಣವಾಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 95/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

  • ಶಂಕರನಾರಾಯಣ: ದಿನಾಂಕ 18/08/2021 ರಂದು ಬೆಳಿಗ್ಗೆ 8:00 ಘಂಟೆಗೆ ಆರೋಪಿಗಳು ಕೆಎ-20-ಎಎ-3877 ನೇ ನಂಬ್ರದ ಬೊಲೇರೊ ಪಿಕಪ್ ವಾಹನದಲ್ಲಿ 1. ಕಿಶೋರ ಶೆಟ್ಟಿ (38) ತಂದೆ,ನಾರಾಯಣ ಶೆಟ್ಟಿ  ವಾಸ, ಚಂದಮ್ಮ ನಿಲಯ ಸಂಪಿಗೇಡಿ ಉಳ್ಳೂರು  74 ಗ್ರಾಮ  ಕುಂದಾಪುರ  ತಾಲೂಕು 2. ಮಂಜುನಾಥ ಸಾಲಿಗದ್ದ ಇವರುಗಳು ಯಾವುದೇ ಪರವಾನಿಗೆ ಹೊಂದದೇ 6 ಗಂಡು ದನದ  ಕರುಗಳನ್ನು ಎಲ್ಲಿಯೊ ಕಳವು ಮಾಡಿಕೊಂಡು ಅವುಗಳಿಗೆ ಮೇವು ಬಾಯಾರಿಕೆ ನೀಡದೇ ಹಿಂಸಿಸುವ ರೀತಿಯಲ್ಲಿ ಹಿಂಸಾತ್ಮಕವಾಗಿ ಪಿಕಪ್ ವಾಹನದಲ್ಲಿ ತುಂಬಿಸಿ ವಧೆ ಮಾಡಲು ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಕಮಲಶಿಲೆ ಕ್ರಾಸ್ ಬಳಿ ಸಾಗಾಟ ಮಾಡುತ್ತಿದ್ದರು, ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 80/2021 ಕಲಂ: 379 ಐ.ಪಿ.ಸಿ. ಮತ್ತು ಕಲಂ 4,5,7,12 ಕರ್ನಾಟಕ  ಜಾನುವಾರು ಹತ್ಯೆ ಪ್ರತಿಬಂಧಕ  ಮತ್ತು ಸಂರಕ್ಷಣಾ ಆಧ್ಯಾದೇಶ 2020 ರ ಕಲಂ 11 (1) (ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆ 1966 ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 17/08/2021 ರಂದು ಪಿರ್ಯಾದಿದಾರರಾದ ಜನಾರ್ಧನ ಆಚಾರ್ಯ (65) ತಂದೆ: ದಿ. ವಿಶ್ವನಾಥ ಆಚಾರ್ಯ ವಾಸ: ಮಾರ್ವಿ ವಂಡಾರು ಗ್ರಾಮ ಬ್ರಹ್ಮಾವರ ಇವರು ಮನೆಯವರೊಂದಿಗೆ ರಾತ್ರಿ ಊಟ ಮಾಡಿ ಮಲಗಿಕೊಂಡಿರುವ ದಿನಾಂಕ 18/08/2021 ರಂದು ಸಮಯ ಸುಮಾರು ಬೆಳಿಗ್ಗೆ 03:00 ಗಂಟೆಗೆ ಜನಾರ್ಧನ ಆಚಾರ್ಯ ಇವರಿಗೆ ಒಮ್ಮೆಲೆ ಎಚ್ಚರವಾಗಿ ನೋಡುವಾಗ ಅವರ ಮನೆಯ ಅಡುಗೆ ಕೋಣೆಯಲ್ಲಿ ಬಟ್ಟೆಗೆ ಬೆಂಕಿ ಉರಿಯುತ್ತಿದ್ದು ಮನೆಯವರೆಲ್ಲರೂ ಸೇರಿ ಬೆಂಕಿಯನ್ನು  ನಂದಿಸಿದ್ದು ಪರಿಶೀಲಿಸಿದಾಗ ಮನೆಯ ಮದ್ಯಕೋಣೆಯ ಮಾಡಿನ 4-5 ಹೆಂಚುಗಳನ್ನು ತೆಗೆದು ಅದಕ್ಕೆ ಬಟ್ಟೆಯನ್ನು ಮುಚ್ಚಿದ್ದು ಹಾಗೂ ಅಡುಗೆಕೋಣೆಯಿಂದ ಹೊರಗೆ ಹೋಗುವ ಬಾಗಿಲನ್ನು ತೆರೆದಿದ್ದು ಯಾರೋ ದುಷ್ಕರ್ಮಿಗಳು ಬೆಳಗಿನ ಜಾವ 1:00 ಗಂಟೆಯಿಂದ ಬೆಳಿಗ್ಗೆ 03:00 ಗಂಟೆಯ ಮದ್ಯಾವಧಿಯಲ್ಲಿ ಜನಾರ್ಧನ ಆಚಾರ್ಯ ರವರ ಮನೆಯ ಹೆಂಚು ತೆಗೆದು ಅಕ್ರಮ ಪ್ರವೇಶ ಮಾಡಿ ಯಾವುದೋ ಕಾರಣಕ್ಕೆ ಬಟ್ಟೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಸಿ ಭಯ ಉಂಟುಮಾಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 81/2021 ಕಲಂ.448,435 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಗಂಗೊಳ್ಳಿ: ಪಿರ್ಯಾದಿದಾರರಾಧ ನಾಗರಾಜ (39) ತಂದೆ: ನಾರಾಯಣ ಪೂಜಾರಿ ವಾಸ: ಹೆಮ್ಮಾಡಿ ಕುಂಬ್ರಿಹೆಮ್ಮಾಡಿ ಪೋಸ್ಟ್ ಯಲ್ಲಾಪುರ ಇವರು ದಿನಾಂಕ 17/08/2021 ರಂದು ರಾತ್ರಿ ಕೆಲಸ ಮುಗಿಸಿ ಸಮಯ ಸುಮಾರು 7:30 ಗಂಟೆಗೆ ಊಟ ಪಾರ್ಸೆಲ್‌ ತಗೊಂಡು ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್‌ ರಸ್ತೆಯಲ್ಲಿರುವ ಬೋಟ್‌ ನಿಲ್ಲಿಸುವ ಸ್ಥಳದಲ್ಲಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ಯಾವುದೋ ವಾಹನದಲ್ಲಿ ಆಪಾದಿತೆ ನಾಗರತ್ನ ಹಾಗೂ ಪರಿಚಯವಿಲ್ಲದ ಇತರ 2-3 ಮಂದಿ ಏಕಾಏಕಿ ಒಂದು ದೊಣ್ಣೆಯಿಂದ ನಾಗರಾಜ ರವರ ಎರಡೂ ಕೈ ಮೊಣಗಂಟಿಗೆ ಹಾಗೂ ಎಡಕಾಲಿಗೆ ಹೊಡೆದು ಕೆಳಗೆ ಬೀಳಿಸಿ ಕಾಲಿನಿಂದ ತುಳಿದು ಅವಾಚ್ಯವಾಘಿ ಬೈದು ನಿನ್ನನ್ನು ಮುಂದೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಘಟನೆಯಿಂದ ನಾಗರಾಜ ಇವರಿಗೆ ಎರಡು ಕೈ ಮೊಣಗಂಟಿಗೆ, ಎಡಕಾಲಿಗೆ, ಮುಖಕ್ಕೆ ಒಳಜಖಂ ಹಾಗೂ ತರಚಿದ ಗಾಯವಾಗಿದ್ದು ಬಳಿಕ ಅಲ್ಲಿಯೇ ಇದ್ದ ಸ್ಥಳೀಯರು ಇವರನ್ನು  108 ಅಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಫಿರ್ಯಾದಿದಾರರಿಗೂ ಹಾಗೂ ಆಪಾದಿತೆಗೂ ಇರುವ ವೈಯಕ್ತಿಕ ದ್ವೇಷವೇ ಈ ಘಟನೆಗೆ ಕಾರಣವಾಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 74/2021 ಕಲಂ: 324, 504, 506, 232 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 18-08-2021 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080