ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 17/08/2022 ರಂದು ಸಮಯ ಸುಮಾರು 3:30 ಗಂಟೆಗೆ,  ಕುಂದಾಪುರ ತಾಲೂಕು, ಕರ್ಕುಂಜಿ ಗ್ರಾಮದ ನೆಂಪುವಿನ  MLA ಸುಕುಮಾರ್‌ಶೆಟ್ಟಿಯವರ  ಮನೆಯ ಹತ್ತಿರದ ರಾಮಣ್ಣ ರವರ ಮನೆಯ ಬಳಿ  SH 27 ರಸ್ತೆಯಲ್ಲಿ, ಆಪಾದಿತ ವಿಶ್ವನಾಥ ಎಂಬವರು KA20-X-4296ನೇ ಬೈಕನ್ನು  ವಂಡ್ಸೆ ಕಡೆಯಿಂದ ನೆಂಪು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು  ಬಂದು,  ಯಾವುದೇ ಸೂಚನೆ ನೀಡದೇ  ಬೈಕನ್ನು  ರಸ್ತೆಯ ಎಡಬದಿಯಿಂದ  ಬಲಬದಿಯ ಕಳವಿನ ಬಾಗಿಲಿನ ಕಡೆಗೆ  ತಿರುಗಿಸಿ, ನೆಂಪು ಕಡೆಯಿಂದ ವಂಡ್ಸೆ ಕಡೆಗೆ ದಿನ್‌‌‌‌ರಾಜ್‌‌‌ಎಂಬವರು ಸ್ಕೂಟರ್‌ಸವಾರಿ ಮಾಡಿಕೊಂಡು ಹೋಗುತ್ತಿದ್ದ KL14-U-6345 ನೇ ಸ್ಕೂಟರ್‌‌ಗೆ ಡಿಕ್ಕಿಹೊಡೆದ ಪರಿಣಾಮ  ದಿನ್‌‌‌‌ರಾಜ್‌‌‌ರವರ  ಎಡಕಾಲಿಗೆ, ಎಡಕೈಗೆ ಒಳಜಖಂ ಉಂಟಾದ ಗಾಯವಾಗಿ  ಹತ್ತಿರದ ಕ್ಲಿನಿಕ್‌ಹಾಗೂ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಫಾದರ್‌‌ಮುಲ್ಲರ್‌ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಹೋಗುವುದಾಗಿರುತ್ತಾರೆ.  ಈ ಬಗ್ಗೆ ಗಣೇಶ ಕಾಂಚನ್‌ ಪ್ರಾಯ  33   ವರ್ಷ ತಂದೆ ನಾರಾಯಣ ಕಾಂಚನ್‌   ವಾಸ:   ಕಳವಿನ ಬಾಗಿಲು, ಹಣೆಯಡಿ ಮನೆ, ಕರ್ಕುಂಜಿ ಗ್ರಾಮ ಇವರು ಕುಂದಾಪುರ ಸಂಚಾರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಪರಾಧ ಕ್ರಮಾಂಕ 83/2022 ಕಲಂ 279, 338 IPC ಯಂತೆ ಪ್ರಕರಣ ದಾಖಲಿಸಲಾಗಿದೆ

ಇತರ ಪ್ರಕರಣಗಳು

  • ಅಜೆಕಾರು: ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮದ ದೇವಿಕೃಪಾ ಜಯಪುರ ಎಂಬ ಮನೆಯಲ್ಲಿ ಪಿರ್ಯಾದಿ ಕೃಷ್ಣಭಟ್ (71) ತಂದೆ: ಮಹಾಲಿಂಗ ಭಟ್ ವಾಸ: ದೇವಿಕೃಪಾ ಜಯಪುರ ಮನೆ, ಕೆರ್ವಾಶೆ  ಇವರು ದಿನಾಂಕ: 18/07/2022 ರಂದು ರಾತ್ರಿ 01:30 ಗಂಟೆಯ ಸಮಯಕ್ಕೆ ಹೊರಗೆ ನಾಯಿ ಬೊಗಳಿದ ಶಬ್ದ ಕೇಳಿ ಮನೆ ಬಾಗಿಲನ್ನು ತೆರೆದು ಹೊರಗೆ ಬಂದಾಗ ಯಾರೋ 2 ಜನ ಅಪರಿಚಿತರಿದ್ದು, ಓರ್ವ ಫಿರ್ಯಾದಿದಾರರ ಮುಖಕ್ಕೆ ಮೆಣಸಿನ ಪುಡಿಯನ್ನು ಎಸೆದು, ಇನ್ನೊಬ್ಬನು ಗಟ್ಟಿಯಾಗಿ ಹಿಡಿದು ಪಿರ್ಯಾದಿದಾರರ ಪಂಚೆಯನ್ನು ಹಿಡಿದೆಳೆದು ಅದನ್ನು ಅವರ ಮುಖಕ್ಕೆ ಸುತ್ತಿ ಕೂಗಾಡದಂತೆ ಬಾಯಿ ಹಾಗೂ ಕುತ್ತಿಗೆಯನ್ನು ಒತ್ತಿ ಹಿಡಿದು ಅಲುಗಾಡದಂತೆ ಸೊಂಟ ಹಿಡಿದುಕೊಂಡಿದ್ದು, ಅಪರಿಚಿತ ವ್ಯಕ್ತಿಗಳಿಂದ ಪಿರ್ಯಾದಿದಾರರು ತಪ್ಪಿಸಿಕೊಂಡು ಜೋರಾಗಿ ಬೊಬ್ಬೆ ಹೊಡೆದಾಗ ಪಿರ್ಯಾದಿದಾರರ ಕೈಯಲ್ಲಿದ್ದ ಟಾರ್ಚನ್ನು ತೆಗೆದುಕೊಂಡು ಇಬ್ಬರು ಅಪರಿಚಿತರು ಅಲ್ಲಿಂದ ಓಡಿ ಹೋಗಿರುವುದಾಗಿದೆ. ಇಬ್ಬರು ಅಪರಿಚಿತ ವ್ಯಕ್ತಿಗಳು ಮನೆಯಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ಮನೆಗೆ ಪ್ರವೇಶಿಸಲು ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ  ಅಪರಾಧ ಕ್ರಮಾಂಕ 24/2022 ಕಲಂ. 341, 324, 457, 511, RW 34 IPC  ಯಂತೆ ಪ್ರಕರಣ ದಾಖಲಿಸಲಾಗಿದೆ
     

ಇತ್ತೀಚಿನ ನವೀಕರಣ​ : 18-07-2022 06:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080