Feedback / Suggestions

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಗೋಪಾಲ (40), ತಂದೆ: ಗೋವಿಂದ ಪೂಜಾರಿ, ವಾಸ: ಯೋಜನಾ ನಗರ ಯಡ್ತರೆ ಗ್ರಾಮ  ಬೈಂದೂರು ತಾಲೂಕು ಇವರು ದಿನಾಂಕ 17/04/2023 ರಂದು  ಬೆಳಿಗ್ಗೆ 10:00 ಗಂಟೆಗೆ  ನಾಕಟ್ಟೆಯಿಂದ ಬೈಂದೂರು ತಾಲೂಕು ಕಚೇರಿಗೆ ಹೋಗಿ ಬರಲು ಅವರ  ಮೋಟಾರು ಸೈಕಲ್ ನಲ್ಲಿ  ಯಡ್ತರೆ  ಗ್ರಾಮದ ಶೆಟ್ಟಿ ಬಾರ್ & ರೆಸ್ಟೋರೆಂಟ್  ಬಳಿ  ರಾಷ್ಟ್ರೀಯ  ಹೆದ್ದಾರಿ 66 ರಸ್ತೆಯಲ್ಲಿ  ಹೋಗುತ್ತಿರುವಾಗ ಪಶ್ಚಿಮ ಬದಿಯ ರಸ್ತೆಯ ಅಂಚಿನಲ್ಲಿ ಪಿರ್ಯಾದಿದಾರರ ಜೊತೆ ಕೆಲಸ ಮಾಡುವ ಶ್ರೀಧರ ಎಂಬುವವರ ಬಾವ ರಾಮ ಪೂಜಾರಿ ಎಂಬುವವರು ನಿಂತಿದ್ದರು. ಆ ಸಮಯ   ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ   KA-63-9108 ನೇ ಈಚರ್ ಚಾಲಕನು ಅತೀ ವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಅಂಚಿನಲ್ಲಿ  ನಿಂತಿದ್ದ ರಾಮ ಪೂಜಾರಿ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಾಮ ಪೂಜಾರಿ ರವರು ರಸ್ತೆಗೆ ಬಿದ್ದಿದ್ದು  ಅವರ ತಲೆಗೆ ತೀವ್ರ ಸ್ವರೂಪದ ಗಾಯ ಉಂಟಾಗಿ ಮುಗಿನಿಂದ ರಕ್ತ  ಬರುತ್ತಿದ್ದು, ಮೈ ಕೈ ಕಾಲಿಗೆ ಗಾಯ ಉಂಟಾಗಿ ಪ್ರಜ್ಞಾಹೀನ  ಸ್ಥಿತಿಯಲ್ಲಿದ್ದವರನ್ನು  ಪಿರ್ಯಾದಿದಾರರು ಸ್ಥಳೀಯರೊಂದಿಗೆ  ಎತ್ತಿ ಉಪಚರಿಸಿರುತ್ತಾರೆ.  ಅಪಘಾತವೆಸಗಿದ  KA-63-9108 ನೇ ಈಚರ್ ಚಾಲಕನು ವಾಹನವನ್ನು ನಿಲ್ಲಿಸದೇ  ಭಟ್ಕಳ ಕಡೆಗೆ ಚಲಾಯಿಸಿಕೊಂಡು ಹೋಗಿರುತ್ತಾನೆ. ಪಿರ್ಯಾದಿದಾರರು ಶ್ರೀಧರನಿಗೆ ಅಪಘಾತದ ವಿಷಯವನ್ನು ಕರೆ ಮಾಡಿ ತಿಳಿಸಿದ್ದು  ಗಾಯಾಳು ರಾಮ ಪೂಜಾರಿ ಯವರನ್ನು 108 ಅಂಬುಲೆನ್ಸ್  ವಾಹನದಲ್ಲಿ  ಬೈಂದೂರು  ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಅಲ್ಲಿಂದ  ಹೆಚ್ಚಿನ ಚಿಕಿತ್ಸೆ  ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಒಳರೋಗಿಯಾಗಿ  ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 59/2023 ಕಲಂ:  279, 338  ಐಪಿಸಿ ಮತ್ತು 134 (a&b) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಉದಯ ( 42 ), ತಂದೆ: ದಿ. ಸೀನ ಪೂಜಾರಿ, ವಾಸ: 6-70 ಪಂಡಿತ್ ಹೌಸ್ ಕ್ರಿಸ್ತ ಜ್ಯೋತಿ ಚರ್ಚ ಹಿಂಬದಿ ರಸ್ತೆ 76 ಬಡಗುಬೆಟ್ಟು ಬೈಲೂರು ಉಡುಪಿ ಇವರು ದಿನಾಂಕ 17/04/2023 ರಂದು ತನ್ನ  KA-20-AA-0474 ನೇ  ಆಟೋ ರಿಕ್ಷಾದಲ್ಲಿ ಪರ್ಕಳ ಕಡೆಯಿಂದ ಉಡುಪಿ ಕಡೆಗೆ ಬರುವಾಗ 10:45 ಗಂಟೆಗೆ ಮಣಿಪಾಲ ಪೋಸ್ಟ್ ಆಫೀಸ್ ನ ಎದುರುಗಡೆ ರಸ್ತೆಯ ಹತ್ತಿರ ಬರುವಾಗ ಆರೋಪಿ KA-04-AB-9882 ನೇ ಈಚರ ವಾಹನದ ಚಾಲಕನು ಯಾವುದೇ ಮನ್ಸೂಚನೆಯನ್ನು ನೀಡದೆ ಒಮ್ಮಲೆ ತನ್ನ ವಾಹನವನ್ನು   ಎಡದಿಂದ ಬಲಕ್ಕೆ  ಇಂಡಸ್ಟ್ರೀಯಲ್ ಏರಿಯಾ ರಸ್ತೆಯ ಕಡೆಗೆ  ತಿರುಗಿಸಿದ ಪರಿಣಾಮ ಪಿರ್ಯಾದಿದಾರರ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು  ಪಿರ್ಯಾದಿದಾರರು ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರ ತಲೆಯ ಎಡ ಮತ್ತು ಬಲ ಭಾಗಕ್ಕೆ ತೀವ್ರ ಗಾಯವಾಗಿರುತ್ತದೆ ಹಾಗೂ ಎಡ ಭುಜಕ್ಕೆ ಪೆಟ್ಟಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 99/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ದಿನೇಶ ಪೂಜಾರಿ(60), ತಂದೆ:ದಿ. ಆನಂದ ಪೂಜಾರಿ, ವಾಸ:”ಕೊಂಕಣತೋಟ” ಪಡು ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ ಇವರ ಹೆಂಡತಿಯ ಅಣ್ಣ ನಾಗೇಶ್‌ ಸುವಣ೯ ರವರು  ಕಟಪಾಡಿ ನವರಂಗ ಬಾರ್‌ನಲ್ಲಿ  ಅಡುಗೆ ಕೆಲಸ ಮಾಡಿಕೊಂಡಿದ್ದು, ದಿನಾಂಕ 16/04/023 ರಂದು ಕಟಪಾಡಿ  ನವರಂಗ ಬಾರ್‌ನಲ್ಲಿ  ಕೆಲಸ ಪೂರೈಸಿ ‌ರಾತ್ರಿ 12:00 ಗಂಟೆಗೆ KA-20-X-9942 ಮೋಟಾರು ಸೈಕಲ್‌ನಲ್ಲಿ ಕಟಪಾಡಿಯಿಂದ ತನ್ನ ಮನೆಯಾದ ಪಾಂಗಾಳಗುಡ್ಡೆ ಆರ್ಯಾಡಿಗೆ ಹೊರಟು  ರಾಷ್ಟ್ರೀಯ ಹೆದ್ದಾರಿ 66 ಉಡುಪಿ-ಮಂಗಳೂರು ರಸ್ತೆಯಲ್ಲಿ ಬರುತ್ತಿರುವಾಗ ರಾತ್ರಿ 12:10 ಗಂಟೆಗೆ  ಪಾಂಗಳದ ಆರ್ಯಾಡಿ ಜನಾಧ೯ನ ದೇವಸ್ಥಾನದ ಸಮೀಪ ಬರುತ್ತಿರುವಾಗ ನಿಯಂತ್ರಣ ತಪ್ಪಿ ಮಧ್ಯದ ಡಿವೈಡರ್‌ ಗೆ ಮೋಟಾರ್‌ ಸೈಕಲ್ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದು ಅವರ ಎಡಕೈ,ಮುಖಕ್ಕೆ ಹಾಗೂ ತಲೆಗೆ ರಕ್ತ ಗಾಯವಾಗಿದ್ದು ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 68/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ನಿರಂಜನ ಅತಿಕಾರಿ (69), ತಂದೆ: ಕುಮಾರಯ್ಯ ಅತಿಕಾರಿ, ವಾಸ: ಮೂಡು ಅಂಬೆಚ್ಚಾರು, ನಲ್ಲೂರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ ತಮ್ಮ ಚೇತನ ಕುಮಾರ್ (51) ರವರು ಲೋ ಬಿಪಿ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಕಾರ್ಕಳದ ನಿಟ್ಟೆ ಗಾಜ್ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಿನಾಂಕ 17/04/2023 ರಂದು ಬೆಳಿಗ್ಗೆ 8:00 ಗಂಟೆಗೆ ಎಂದಿನಂತೆ ತಮ್ಮ ತೋಟದ ಕೆಲಸಕ್ಕೆ ಹೋದವರು ತೋಟದಲ್ಲಿ ತೀವ್ರ ಅಸ್ವಸ್ಥಗೊಂಡು ಬಿದ್ದಿದ್ದವರನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಕಾರ್ಕಳದ ನಿಟ್ಟೆ ಗಾಜ್ರಿಯ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಚೇತನ್ ಕುಮಾರ್ ರವರು ಬೆಳಿಗ್ಗೆ 11:34 ಗಂಟೆಗೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 25/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಪಡುಬಿದ್ರಿ: ಕರ್ನಾಟಕ ವಿಧಾನಸಭಾ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ 121-ಕಾಪು ವಿಧಾನಸಭಾ ಕ್ಷೇತ್ರದ S.S.T-03 ನೇ ತಂಡದ ಅಧಿಕಾರಿಯಾಗಿರುವ ಪಿರ್ಯಾದಿದಾರರಾದ ಮನೋಹರಚಾರಿ.ಪಿ.ಎಸ್‌ (35) , ಹೆಜಮಾಡಿ ಚೆಕ್‌ಪೋಟ್ಸ್ S.S.T-03, 121-ಕಾಪು ವಿಧಾನಸಭಾ ಕ್ಷೇತ್ರ ಇವರು  ಗಣೇಶ್‌ ಆಳ್ವ, ಎ.ಆರ್‌.ಎಸ್‌.ಐ,  ಬೀರಪ್ಪ ಡಿ. ಎ.ಪಿ.ಸಿ,  ರಿತೇಶ್‌ ಬಿಲ್‌ ಕಲೆಕ್ಟರ್‌ ಪುರಸಭೆ ಕಾಪು, ಮತ್ತು ಜಗದೀಶ ದೈಹಿಕ ಶಿಕ್ಷಣ ಉಪನ್ಯಾಸಕರು ಸೈಂಟ್‌ ಮೇರೀಸ್‌ ಪದವಿಪೂರ್ವ ಕಾಲೇಜು ಶಿರ್ವಾ ರವರೊಂದಿಗೆ  ದಿನಾಂಕ 26/03/2023 ರಂದು ಪಡುಬಿದ್ರಿ ಪೊಲೀಸ್ ಠಾಣಾ ಸರಹದ್ದಿನ ಕಾಪು ತಾಲೂಕು ಹೆಜಮಾಡಿ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಕರ್ತವ್ಯದಲ್ಲಿರುತ್ತಾ 09:30 ಗಂಟೆಗೆ ಮಂಗಳೂರು ಕಡೆಯಿಂದ ಬಂದ KL-14-AA-5639 ನೇ ಟೊಯೋಟಾ ಗ್ಲಾಂಜಾ ಕಾರಿನಲ್ಲಿ ಕಾರು ಚಾಲಕ ಅಬ್ದುಲ್ ಖಾದರ್ ಅನ್ಸಾರ್ ಹಾಗೂ ಸುಫಿಯಾನ್‌ ಶೌರಿ ಇವರು ಯಾವುದೇ ದಾಖಲೆ ಇಲ್ಲದ 10 ಸಿಗರೇಟ್‌ ತುಂಬಿಸಿದ 20 ಪ್ಯಾಕ್‌ಗಳಿರುವ 120 ಬಂಡಲ್‌ಗಳ ಮೇಲೆ A CHOICE BLEND OF WORLD FINEST TOBACCOS PLAN Lights  ಎಂದು, ಬಾರ್‌ಕೋಡ್‌ ನಂಬ್ರ 8 801116 000005 ಎಂದು ಪ್ರಿಂಟ್‌ ಇರುವ ಒಳ ಬದಿಯಲ್ಲಿ GOLD FLAKE ಎಂದು ಪ್ರಿಂಟ್‌ ಇರುವ ಕವರ್‌ ಮಾಡಿದ ಸಿಗರೇಟ್‌ ಬಂಡಲ್‌ಗಳು-120, ನಿಷೇಧೀತ  E-Cigarette ತಲಾ 3 ಬಂಡಲ್‌ನಲ್ಲಿ ತಲಾ 10 ರಂತೆ ಒಟ್ಟು 30 ಸಿಗರೇಟ್‌ಗಳು ಇದ್ದು ಅವುಗಳ ಒಟ್ಟು ಮೌಲ್ಯ ರೂಪಾಯಿ 4,79,970/- ಆಗಿದ್ದು,  ಸಿಗರೇಟು ಬಂಡಲ್‌ಗಳನ್ನು ಮಂಜೇಶ್ವರ ಬಾಯಾರಿನ ಮೊಯ್ನು ಎಂಬಾತನು ಆರೋಪಿತರಿಗೆ ನೀಡಿ, ಅವುಗಳನ್ನು ಮಣಿಪಾಲದ ಸೈಫು ಎಂಬುವವನಿಗೆ ನೀಡುವಂತೆ ತಿಳಿಸಿರುವುದಾಗಿರುತ್ತದೆ. ನಂತರ ಸ್ವತ್ತುಗಳನ್ನು ಹಾಗೂ ಸಾಗಾಟಕ್ಕೆ ಉಪಯೋಗಿಸಿದ KL-14-AA-5639 ನೇ ಟೊಯೋಟಾ ಗ್ಲಾಂಜಾ ಕಾರನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 49/2023, ಕಲಂ:  98 K.P. Act and U/s 7, 8 Prohibition of Electronic Cigarettes Act 2019 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 17/04/2023 ರಂದು ಮಹಾಂತೇಶ್‌ ಉದಯ ನಾಯಕ್‌, ಪೊಲೀಸ್‌ ಉಪ ನಿರೀರೀಕ್ಷಕರು, ಬ್ರಹ್ಮಾವರ ಪೊಲೀಸ್‌ ಠಾಣೆ ಇವರು  ರೌಂಡ್ಸ್  ಕರ್ತವ್ಯದಲ್ಲಿರುವಾಗ ಚೇರ್ಕಾಡಿ  ಗ್ರಾಮದ ನೂಜಿಬೈಲ್‌ಎಂಬಲ್ಲಿ ಆರೋಪಿ ಗ್ರೇಗೊರಿ ಡಿ ಆಲ್ಮೇಡಾರವರು ಮನೆಯ ಬಳಿ ಅಕ್ರಮವಾಗಿ ಪರವಾನಿಗೆ ಇಲ್ಲದೆ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಆರೋಪಿಯ ಮನೆಯ ಬಳಿ  ಹೋಗಿ,  ಓಡಿ ಹೋಗಲು ಪ್ರಯತ್ನಿಸಿದ ಆರೋಪಿ ಗ್ರೇಗೋರಿ ಡಿ ಆಲ್ಮೇಡಾ (64), ತಂದೆ: ದಿ.ಸಲ್ವಾದಾರ್‌ ಡಿ ಆಲ್ಮೇಡಾ , ವಾಸ: ನೂಜಿಬೈಲ್‌, ಮಡಿ, ಚೇಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಎಂಬಾತನನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ವಿಚಾರಿಸಿದಾಗ, ಆತನು ತಾನು ತನ್ನ ಮನೆಯ ಹಟ್ಟಿಯ ಬಳಿ ಅಕ್ರಮವಾಗಿ ಕಳ್ಳಭಟ್ಟಿಯನ್ನು ತಯಾರಿಸಿ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿರುತ್ತಾನೆ. ನಂತರ ಆರೋಪಿಯನ್ನು ಹಾಗೂ ಆತನ ಮನೆಯ ಹಟ್ಟಿಯ ಗೊಬ್ಬರ ಗುಂಡಿಯ ಬಳಿಯಲ್ಲಿ ಸಿಕ್ಕಂತಹ 1)  20 ಲೀಟರ್‌ ನಷ್ಟು ಕಳ್ಳಭಟ್ಟಿ ತಯಾರಿಸುವ ಕೊಳೆ ತುಂಬಿರುವ ನೀಲಿ ಬಣ್ಣದ ಕಪ್ಪು ಮುಚ್ಚಳವಿರುವ ಪ್ಲಾಸ್ಟಿಕ್‌ ಬ್ಯಾರೆಲ್‌, 2) ಕಳ್ಳಭಟ್ಟಿ ಕಾಯಿಸಲು ಬಳಸುವ ಒಂದು ಆಲ್ಯೂಮಿನಿಯಮ್‌ ಪಾತ್ರೆ, 3) 2.25 ಲೀಟರ್‌ನ ಬಾಟಲಿಯಲ್ಲಿ ಕಳ್ಳಭಟ್ಟಿ ಪೂರ್ತಿ ತುಂಬಿದ ಪ್ಲಾಸ್ಟಿಕ್‌ಬಾಟಲಿ-1, 4) 2.25 ಲೀಟರ್‌ನ  ಬಾಟಲಿಯಲ್ಲಿ ¾ ಲೀಟರ್‌ನಷ್ಟು ಕಳ್ಳಭಟ್ಟಿ ತುಂಬಿರುವ ಬಾಟಲಿ-1 ಯನ್ನು ವಶಪಡಿಸಿಕೊಂಡಿದ್ದು, ಸ್ವತ್ತುಗಳ ಮೌಲ್ಯ  2500/- ಅಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 82/2023 : ಕಲಂ: 13, 14, 32(1), 34 KE ACT  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು:  ದಿನಾಂಕ 17/04/2023 ರಂದು ನಿರಂಜನ ಗೌಡ ಬಿ ಎಸ್,  ಪೊಲೀಸ್ ಉಪನಿರೀಕ್ಷಕರು ಬೈಂದೂರು ಠಾಣೆ ಇವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ಬೈಂದೂರು ತಾಲೂಕು ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣಕ್ಕೆ ಹೋದಾಗ ಹೊಸ ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿಯು ಮದ್ಯಪಾನ ಮಾಡುತ್ತಾ ಕುಳಿತುಕೊಂಡಿರುವುದು ಕಂಡು ಬಂದಿದ್ದು, ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ಮಂಜುನಾಥ ಬೋವಿ (46) ಎಂಬುದಾಗಿ ತಿಳಿಸಿದ್ದು,  ಬಸ್ ನಿಲ್ದಾಣದ  ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದಲ್ಲಿ 90 ML ನ Original Choice DELUX WHISKY ಖಾಲಿಯಾದ ಟೆಟ್ರಾ ಪ್ಯಾಕ್ -2 ಹಾಗೂ 90 ML ನ Original Choice DELUX WHISKY ತುಂಬಿರುವ ಟೆಟ್ರಾ ಪ್ಯಾಕ್ – 3 ( ಮೌಲ್ಯ ರೂಪಾಯಿ 105/-) ಹಾಗೂ ಮದ್ಯ ಇರುವ ಪ್ಲಾಸ್ಟಿಕ್ ಲೋಟ  ಮತ್ತು ನೀರಿನ ಬಾಟಲಿ -1 ಇರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 60/2023 ಕಲಂ:15(ಎ) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 18-04-2023 09:38 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080