ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು:

  • ಉಡುಪಿ:  ಪಿರ್ಯಾದುದಾರರು ಚೇತನ್‌.ಎಸ್‌, ಸಿಪಿಸಿ 1185, ಇವರು ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 17/01/2022 ರಂದು ಉಡುಪಿ ಕೃಷ್ಣಾಪುರ ಮಠದ ಪರ್ಯಾಯ ಬಂದೋಬಸ್ತ್‌ ನಲ್ಲಿ ಇತರ ಸಿಬ್ಬಂದಿಯವರೊಂದಿಗೆ ಸಾದಾ ಉಡುಪಿನಲ್ಲಿ (ಮಫ್ತಿ) ಕೃಷ್ಣಮಠದ ವಠಾರದಲ್ಲಿ ಅಪರಾಧ ಪತ್ತೆ ಮತ್ತು ಗುಪ್ತ ಮಾಹಿತಿ ಸಂಗ್ರಹ ಕರ್ತವ್ಯದಲ್ಲಿರುವಾಗ 23:00 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕೃಷ್ಣಮಠದ ರಥಬೀದಿಯಲ್ಲಿರುವ ಕಾಣಿಯೂರು ಮಠದ ಎದುರು ಇಬ್ಬರು ವ್ಯಕ್ತಿಗಳು ಸ್ಥಳದಲ್ಲಿ ತಿರುಗಾಡುವ ಜನರಿಗೆ ಕೀಟಲೆ ಮಾಡುತ್ತಿದ್ದು, ಪಿರ್ಯಾದುದಾರರು, ತಾನು ಪೊಲೀಸ್‌ ಎಂದು ಹೇಳಿ ಜನರಿಗೆ ತೊಂದರೆ ಕೊಡಬಾರದೆಂದು ಕೇಳಿಕೊಂಡಿದ್ದು, ಆಪಾದಿತರು ಸಮಾನ ಉದ್ದೇಶದಿಂದ, ‘ನೀನು ಯಾವ ಪೊಲೀಸ್‌ ನಮಗೆ ನೀನು ಹೇಳುವುದು ಬೇಡ’ ಎಂದು ಹೇಳಿ ಇಬ್ಬರೂ ಸೇರಿ ಕರ್ತವ್ಯದಲ್ಲಿದ್ದ ಪಿರ್ಯಾದುದಾರರನ್ನು ತಮ್ಮ ಕೈಗಳಿಂದ ಜೋರಾಗಿ ದೂಡಿದಾಗ ಪಿರ್ಯಾದುದಾರರು ನೆಲದ ಮೇಲೆ ಕವಚಿ ಬಿದ್ದಿದ್ದು, ಅವರುಗಳು ಪುನಃ ಪಿರ್ಯಾದುದಾರರೊಂದಿಗೆ ಜಗಳ ಮಾಡಲು ಪ್ರಾರಂಭಿಸಿದ್ದು, ಆಗ ಅವರೊಳಗೆ ಉರುಳಾಟವಾಗಿದ್ದು, ಸ್ಥಳದಲ್ಲಿದ್ದ ಇತರ ಸಿಬ್ಬಂದಿಯವರು ಆಪಾದಿತರಿಂದ ಪಿರ್ಯಾದುದಾರರನ್ನು ತಪ್ಪಿಸಿದ್ದು, ಇದರ ಪರಿಣಾಮ ಪಿರ್ಯಾದುದಾರರ ಮೇಲ್‌ತುಟಿಗೆ ಹಾಗೂ ಮೈಕೈಗೆ ಗಾಯ ಮತ್ತು ಒಳನೋವು ಉಂಟುಮಾಡಿ ಪಿರ್ಯಾದುದಾರರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2022, ಕಲಂ: 332, 353 ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಇತ್ತೀಚಿನ ನವೀಕರಣ​ : 18-01-2022 09:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080