ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಮಂಜುಶ್ರೀ ಆರ್  (34), ಗಂಡ; ಶರತ್ ಎಂ, ವಾಸ: ದುರ್ಗಾ ನಗರ ಕುಕ್ಕುಂದೂರು ಗ್ರಾಮ ಕಾರ್ಕಳ ತಾಲೂಕು ಇವರ ತಂದೆ ರಾಮ ಪೂಜಾರಿ (64) ರವರು  ಈ ಹಿಂದೆ ಹಾಸನದಲ್ಲಿ ಅಂಗಡಿ ಇಟ್ಟುಕೊಂಡಿದ್ದು, ನಂತರ ತನ್ನ ಮಕ್ಕಳ ಜೊತೆ ಹಾಸನದಲ್ಲಿ ವಾಸವಾಗಿದ್ದು ಆಗಾಗ ಕಾರ್ಕಳದಲ್ಲಿರುವ  ತೋಟ ನೋಡಿಕೊಳ್ಳಲು ಬರುತ್ತಿದ್ದು, ದಿನಾಂಕ 14/11/2022  ರಂದು ಬೆಳಿಗ್ಗೆ ಹಾಸನದಿಂದ ಹೊರಟು ಕಾರ್ಕಳಕ್ಕೆ ಬಂದಿದ್ದು, ಯಾವುದೋ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 15/11/2022 ರಂದು ಬೆಳಿಗ್ಗೆ 7:30 ಗಂಟೆಯಿಂದ ದಿನಾಂಕ 16/11/2022 ರಾತ್ರಿ 11:00 ಗಂಟೆಯ ಮದ್ಯಾವಧಿಯಲ್ಲಿ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ದುರ್ಗಾನಗರ ಎಂಬಲ್ಲಿರುವ  ತನ್ನ ಮನೆಯ  ಪಕ್ದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 50/2022 ಕಲಂ: 174  CRPC ಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  •  ಹಿರಿಯಡ್ಕ: ಪಿರ್ಯಾದಿದಾರರಾದ ಸಂಜೀವ ನಾಯ್ಕ್, ತಂದೆ: ದಿ. ಕೊರಗ ನಾಯ್ಕ್ , ವಾಸ: ಚೋಳಬೆಟ್ಟುಮನೆ, ಕುಕ್ಕೆಹಳ್ಳಿ ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕು ಇವರು ದಿನಾಂಕ 17/11/2022 ರಂದು ಬೆಳಿಗ್ಗೆ ಕೆಲಸದ ನಿಮಿತ್ತಅವರ ಬೈಕ್ ನಂಬ್ರ KA-20-Q-8088 ನೇದರಲ್ಲಿ ಕುಕ್ಕೆಹಳ್ಳಿಯಿಂದ ಸಂತೆಕಟ್ಟೆ ಉಡುಪಿಗೆ ಹೋಗುತ್ತಿರುವಾಗ ಬೆಳಿಗ್ಗೆ  10:00 ಗಂಟೆಗೆ ಬೆಳ್ಳಂಪಳ್ಳಿ ಕುಕ್ಕಿಕಟ್ಟೆಯಲ್ಲಿ ವಿಶ್ವನಾಥ ಬೆಳ್ಳಂಪಳ್ಳಿ ಎನ್ನುವ ವ್ಯಕ್ತಿಯು KA-20-MA-4553 ನಂಬ್ರದ ಮಾರುತಿ ಸೆಲಾರಿಯೋ ಕಾರನ್ನು ಚಲಾಯಿಸಿಕೊಂಡು ಬಂದು  ಫಿರ್ಯಾದಿದಾರರ ಬೈಕಿಗೆ ಕಾರನ್ನು ತಾಗಿಸಿಕೊಂಡು ಬರುವಂತೆ ಬಂದು ಪಿರ್ಯಾದಿದಾರರ ಬೈಕಿನ ಎದುರುಗಡೆ ಮದ್ಯ ರಸ್ತೆಯಲ್ಲಿ ತಂದು ಅಡ್ಡಗಟ್ಟಿ ನಿಲ್ಲಿಸಿ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಪಿರ್ಯಾದಿದಾರರು ಅವರ ಬೈಕನ್ನು ಮುಂದೆ ಚಲಾಯಿಸಿಕೊಂಡು ಬಂದಾಗ ಮತ್ತೆ ಪುನಃ ಫಿರ್ಯಾದಿದಾರರ ಹಿಂದಿನಿಂದ ಬಂದ ಆತ ಗೋಳಿಕಟ್ಟೆ ಎಂಬಲ್ಲಿ ಪುನಃ ಅಡ್ಡಗಟ್ಟಿ ಬೆದರಿಕೆ ಹಾಕಿದ್ದು ಪಿರ್ಯಾದಿದಾರರು ಬೈಕಿನಲ್ಲಿ ಮುಂದೆ ಹೋಗಿರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 76/2022 ಕಲಂ: 341, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .                                           

ಇತ್ತೀಚಿನ ನವೀಕರಣ​ : 17-11-2022 06:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080