ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣಗಳು

  • ಬ್ರಹ್ಮಾವರ: ಪಿರ್ಯಾದಿದಾರರಾದ ರಕ್ಷಾ ಶೆಟ್ಟಿ  (26), ತಂದೆ: : ಲೋಕಯ್ಯ ಶೆಟ್ಟಿ, ವಾಸ: ನೂಜಿನ ಬೈಲು ಚೇರ್ಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರ ಅಣ್ಣ ಪ್ರವೀಣ್ ಶೆಟ್ಟಿ (29) ಎಂಬುವವರು ವಿಕಲ ಚೇತನರಾಗಿದ್ದು ಅಲ್ಲದೇ ಮಾತು ಬಾರದೇ ಇದ್ದವರಾಗಿರುತ್ತಾರೆ.  ಅವರು  ಊಟ ಹಾಗೂ ಚಹ ತಿಂಡಿಯ ವೇಳೆ ಸೊಂಟದ ಸಹಾಯದಿಂದ ಮನೆಯೊಳಗಿರುವ  ಅಡುಗೆ ಮನೆಗೆ ಬಂದು  ತಾಯಿಯ ಸಹಾಯದಿಂದ ಊಟ ತಿಂಡಿ ಮಾಡುತ್ತಿದ್ದರು. ದಿನಾಂಕ 16/08/2021 ರಂದು ಮಧ್ಯಾಹ್ನ 2:00 ಗಂಟೆಗೆ  ಪ್ರವೀಣ್ ಶೆಟ್ಟಿಯವರು ಅಡುಗೆ ಮನೆಯ ಕಡೆಯುವ ಕಲ್ಲಿನ ಪಕ್ಕದಲ್ಲಿ ಕುಳಿತುಕೊಂಡು ಇರುವಾಗ ಮನೆಯ ಉತ್ತರ ಭಾಗದಲ್ಲಿರುವ  ಅಡುಗೆ ಮನೆ ನೇರಕ್ಕೆ ಇರುವ  ಈ ವರ್ಷದ ಮಳೆಗಾಲದ ವೇಳೆ ಸಿಡಿಲು ಬಡಿದು ಗರಿಯ ಭಾಗ  ಕಳಚಿ ಬಿದ್ದಿರುವ ತೆಂಗಿನ ಮರದ ತಲೆಯ ಭಾಗ ತುಂಡಾಗಿ ಅಡುಗೆ ಮನೆಯ ಸೀಮೆಂಟ್ ಶೀಟಿನ ಮೇಲೆ ಬಿದ್ದು,  ಸೀಮೆಂಟು ಶೀಟು ಜಖಂ ಗೊಂಡು ತೆಂಗಿನ ಮರದ ತುಂಡು ಪ್ರವೀಣ್ ಶೆಟ್ಟಿಯವರ ಮೈಮೇಲೆ ಬಿದ್ದಿದ್ದು,  ಇದರಿಂದ ಅವರ ಬೆನ್ನಿನ ಭಾಗದಲ್ಲಿ ಹಾಗೂ ಮುಖದ ಎಡಭಾಗದಲ್ಲಿ ತರಚಿದ ಗಾಯವಾಗಿರುತ್ತದೆ. ಅವರನ್ನು ಚಿಕಿತ್ಸೆ ಬಗ್ಗೆ  ಆಸ್ಪತ್ರೆಗೆ ಸಾಗಿಸಲು ತಯಾರಿ ನಡೆಸುವಾಗ ಮದ್ಯಾಹ್ನ 2:30 ಗಂಟೆಗೆ ಪ್ರವೀಣ್ ಶೆಟ್ಟಿಯವರು ಮೃತಪಟ್ಟಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 49/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾದ ದೇವದಾಸ್  ವಿ.ಜೆ (53), ತಂದೆ: ದಿ. ವಿ.ಜೆ ಜೋಸೆಫ್, ವಾಸ:  ವೆಟ್ಟಾಂ ತಡತ್ತೀಲ್ ಜಡ್ಡಿನ ಮುಲ್ಲೆ  ಜಡ್ಕಲ್ ಗ್ರಾಮ ಬೈಂದೂರು ಇವರ ತಮ್ಮ  ಜೈಸನ್ (35) ರವರು  ದಿನಾಂಕ 16/08/2021 ರಂದು  ಮದ್ಯಾಹ್ನ 02:00 ಗಂಟೆಗೆ ಮನೆ ಕಡುಮಾಡಿನಲ್ಲಿರುವ ವಿದ್ಯುತ್ ಸ್ವೀಚ್ ಬೋರ್ಡ್ ನ್ನು ಸರಿಪಡಿಸುತ್ತಿದ್ದಾಗ  ಆಕಸ್ಮಿಕವಾಗಿ  ಕೈಗೆ  ದೇಹಕ್ಕೆ ವಿದ್ಯುತ್  ತಗುಲಿ  ಕುಸಿದು  ಬಿದ್ದು  ಅಸ್ವಸ್ಥರಾದವರನ್ನು  ಚಿಕಿತ್ಸೆಗೆ  ಸಜಿ  ಮತ್ತು  ಬೇಬಿಚ್ಚನ್ ರವರು  ಕಾರಿನಲ್ಲಿ ಕುಂದಾಪುರ  ಸರಕಾರಿ  ಆಸ್ಪತ್ರೆಗೆ ಕರೆದುಕೊಂಡು ಬಂದಾಗ  ಪರೀಕ್ಷಿಸಿದ ವೈದ್ಯರು ಚಿಕಿತ್ಸೆಗೆ  ಕರೆತರುವ  ದಾರಿಯಲ್ಲಿಯೇ  ಮೃತಪಟ್ಟಿರುವುದಾಗಿ  ಸಂಜೆ  5:20  ಗಂಟೆಗೆ  ದೃಡೀಕರಿಸಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 07/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


ಇತ್ತೀಚಿನ ನವೀಕರಣ​ : 17-08-2021 09:48 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080