ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾಧ ಮಲ್ಲಪ್ಪ (41) ವರ್ಷ, ತಂದೆ: ಮಾರುತೆಪ್ಪ , ವಾಸ: ಚಿಕ್ಕಮಾಗಿ ಗ್ರಾಮ ಕಮತಗಿ ಅಂಚೆ,ಹುನಗುಂದ ತಾಲೂಕು ಬಾಗಲಕೋಟೆ ಇವರು ದಿನಾಂಕ 16/05/2023 ರಂದು ತನ್ನ KA-29 ED-5808 ನೇ ಮೋಟಾರ್ ಸೈಕಲ್ ನಲ್ಲಿ ತನ್ನ ಹೆಂಡತಿ ನಿರ್ಮಲಳನ್ನು ಹಿಂಬದಿ ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ಉದ್ಯಾವರದ ಕಡೆಯಿಂದ ಕಿನ್ನಿಮುಲ್ಕಿ ಸ್ವಾಗತಗೋಪುರದಿಂದಾಗಿ ಉಡುಪಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು 19:15 ಗಂಟೆಗೆ ಅಂಬಲಪಾಡಿ ಗ್ರಾಮದ ಕಿನ್ನಿಮುಲ್ಕಿ ಸ್ವಾಗತಗೋಪುರದ ಬಳಿ ತಲುಪಿದಾಗ  ಅಂಬಲಪಾಡಿ ಕಡೆಯಿಂದ ಬಲಾಯಿಪಾದೆ ಕಡೆಗೆ ಸರ್ವಿಸ್ ರಸ್ತೆಯಲ್ಲಿ KA-19 HG-1950 ನೇ ಕಾರು ಚಾಲಕ  ಅಜಯ್  ಎಂಬಾತನು ತನ್ನ ಕಾರನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಮಲ್ಲಪ್ಪ ರವರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ, ಮಲ್ಲಪ್ಪ ಇವರು ಮತ್ತು ಅವರ ಹೆಂಡತಿ ನಿರ್ಮಲರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ  ಬಿದ್ದು, ಮಲ್ಲಪ್ಪ ಇವರ ಬಲಕೈಯ ಅಂಗೈಯ ಬಳಿ ಗುದ್ದಿದ ನೋವು, ನಿರ್ಮಲರವರ ಬಲಕಾಲಿನ ಮೊಣಗಂಟಿನ ಕೆಳಗೆ ಮೂಳೆಮುರಿತದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 50/2023 ಕಲಂ: 279, 337, 338 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾದ ಸುಂದರ ಪೂಜಾರಿ, (61) ತಂದೆ: ನಂದ ಪೂಜಾರಿವಿಳಾಸ: ನಂದನಿವಾಸ,ನೆಲ್ಲಿಬೆಟ್ಟು, ಮುದ್ರಾಡಿ, ಹೆಬ್ರಿ ಇವರು ಬಸ್ ಚಾಲಕರಾಗಿದ್ದು  ದಿನಾಂಕ 16/05/2023 ರಂದು KA-20-D-9669 ನೇ ಬಸ್ ನ್ನು ಕಾರ್ಕಳದಿಂದ ಉಡುಪಿ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಮಧ್ಯಾಹ್ನಸಮಯ ಸುಮಾರು 14:45 ಗಂಟೆಗೆ ಹಿರಿಯಡ್ಕ ಮಂಜೊಟ್ಟಿ  ಬಸ್ ನಿಲ್ದಾಣದಿಂದ ಸ್ವಲ್ಪ ಮುಂದಕ್ಕೆ ಹೋದಾಗ ಉಡುಪಿಯಿಂದ ಕಾರ್ಕಳ ಕಡೆಗೆ TN-29-CB-0743 ನೇ  ಪಿಕ್ ಅಪ್ ವಾಹನ ಚಾಲಕ ಗಣೇಶ್ ಎಂಬವನು ತನ್ನ ಪಿಕ್‌ಅಪ್‌ನ್ನು ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಬಲಭಾಗಕ್ಕೆ ಬಂದು ಬಸ್‌‌ನ ಮುಂಭಾಗದ ಬಲಬದಿಗೆ ಡಿಕ್ಕಿ ಹೊಡೆದು ಬಸ್‌‌ನ  ಬಲಭಾಗಕ್ಕೆ ತರಚಿಕೊಂಡು ಹೋಗಿರುತ್ತದೆ. ಪರಿಣಾಮ ಹಿಂದಿನ ಸೀಟಿನಲ್ಲಿ ಕಿಟಕಿಯ ಬದಿಯಲ್ಲಿ ಕುಳಿತುಕೊಂಡಿದ್ದ ಪ್ರಯಾಣಿಕರಾದ ಹೊನ್ನಪ್ಪ ತಲಪಾಡಿರವರ ಬಲ ಕೈಗೆ   ರಕ್ತ ಗಾಯ  ಹಾಗೂ  ಫೈಜಾ ಕಂಡ್ಲೂರು ರವರ ಬಲ  ಕೈ ಮತ್ತು ತಲೆಗೆ ತೀವ್ರ  ಸ್ವರೂಪದ ಗಾಯ ಉಂಟಾಗಿರುತ್ತದೆ. ಈ ಅಪಘಾತಕ್ಕೆ TN-29-CB-0743 ನೇ  ಪಿಕ್ ಅಪ್ ವಾಹನ ಚಾಲಕ ಗಣೇಶ್  ರವರ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 34/2023 ಕಲಂ: 279, 337, 338 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾಧ ಸುಧಾಕರ (32) ತಂದೆ: ಮಾಲಿಂಗ ಪೂಜಾರಿ, ವಾಸ: ಅನಂತ ನಿಲಯ, ಬನ್ನಾಡಿ ಗ್ರಾಮ, ಬ್ರಹ್ಮಾವರ ಇವರು ದಿನಾಂಕ 16/05/2023 ರಂದು ತನ್ನ ನಂ.KA-20 AA-1313 ನೇ ಬಜಾಜ್‌ಆಟೋ ರಿಕ್ಷಾದಲ್ಲಿ ಸಂಜೆ 4.10 ಗಂಟೆಗೆ ಭಟ್ರಕೇರಿ ಎಂಬಲ್ಲಿಂದ ಗರ್ಭೀಣಿಯಾದ ರಾಣಿ, ಆಕೆಯ ತಾಯಿ ಶಾರದಾ ಆಚಾರ್ತಿ ಮತ್ತು ಆಕೆಯ ಮಗಳು ಅಂಶು ರವರನ್ನು ಕರೆದುಕೊಂಡು ಬಾಡಿಗೆಯ ಸಲುವಾಗಿ ಸೈಬ್ರಕಟ್ಟೆ – ಕೋಟ ಹೈಸ್ಕೂಲ್‌ರಸ್ತೆಯಲ್ಲಿ ಸೈಬ್ರಕಟ್ಟೆ ಕಡೆಯಿಂದ ಹೋಗುತ್ತಿದ್ದವರು, ಸಂಜೆ ಸುಮಾರು 4:20 ಗಂಟೆಗೆ ಬನ್ನಾಡಿ ಗ್ರಾಮದ ಉಪ್ಲಾಡಿ ತೆಂಕಬೆಟ್ಟು ಎಂಬಲ್ಲಿ ಬ್ರಿಡ್ಜ್‌ಗಿಂತ ಸ್ವಲ್ಪ ಹಿಂದೆ ತಲುಪುವಾಗ, ರಿಕ್ಷಾದ ಹಿಂದಿನಿಂದ ಅಂದರೆ ಸೈಬ್ರಕಟ್ಟೆ ಕಡೆಯಿಂದ ಬಂದ ನಂ. KA-20 AA-8207 ನೇ Eicher ವಾಹನವನ್ನು ಅದರ ಚಾಲಕ ನಾಗರಾಜ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ರಸ್ತೆಯಲ್ಲಿ ಎದುರಿನಿಂದ ಬಂದ ವಾಹನವನ್ನು ಕಂಡು, ರಿಕ್ಷಾವನ್ನು ಓವರ್‌ಟೇಕ್‌ಮಾಡುವ ಭರದಲ್ಲಿ ಒಮ್ಮೆಲೆ ಎಡಕ್ಕೆ ಚಲಾಯಿಸಿದ ಪರಿಣಾಮ Eicher ವಾಹನದ ಹಿಂದಿನ ಬಾಡಿಯು ಆಟೋ ರಿಕ್ಷಾದ ಮುಂದಿನ ಬಲಬದಿಗೆ ತಾಗಿ, ರಿಕ್ಷಾವು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡ ಅಂಚಿನಲ್ಲಿದ್ದ ಗಡಿಗುರುತು ಫಲಕಕ್ಕೆ ಢಿಕ್ಕಿ ಹೊಡೆದು ರಸ್ತೆಯ ಕೆಳಗೆ ಸುಮಾರು 10 ಅಡಿ ಆಳಕ್ಕೆ ಮಗುಚಿ ಬಿದ್ದಿರುತ್ತದೆ. ಅಪಘಾತದಲ್ಲಿ ಸುಧಾಕರ ರವರ ಮುಖಕ್ಕೆ ಗುದ್ದಿದ ಗಾಯ, ರಿಕ್ಷಾದಲ್ಲಿನ 3 ಜನ ಪ್ರಯಾಣಿಕರ ಪೈಕಿ ರಾಣಿ ರವರ ತಲೆಗೆ, ಎಡಕಿವಿ ಮತ್ತು ಕೈಗಳಿಗೆ ತೀವ್ರ ಗಾಯ, ಆಕೆಯ ತಾಯಿ ಶಾರದಾ ರವರ ಹಣೆಗೆ, ಕುತ್ತಿಗೆಗೆ, ಬೆನ್ನಿಗೆ, ಬಲಕೈಗೆ ಸಾದಾ ಗಾಯಗಳು ಹಾಗೂ ರಾಣಿ ರವರ ಮಗಳು ಅಂಶು ಎಂಬಾಕೆಯ ಮುಖಕ್ಕೆ ಮತ್ತು ಕೈಕಾಲುಗಳಿಗೆ ತರಚಿದ ಸಣ್ಣಪುಟ್ಟ ಗಾಯಗಳಾಗಿರುತ್ತದೆ. ಈ ಅಪಘಾತಕ್ಕೆ ನಂ. KA-20 AA-8207 ನೇ Eicher ವಾಹನ ಚಾಲಕ ನಾಗರಾಜ ರವರ ಅತೀವೇಗದ ಚಾಲನೆ ಮತ್ತು ಅಜಾಗರೂಕತೆಯಿಂದ ಓವರ್‌ಟೇಕ್‌ಮಾಡಿದ್ದೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 94/2023 ಕಲಂ: 279, 337, 338 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾಧ ದೀಪಾ (24) ಗಂಡ: ವಿನೋದ್‌ ವಾಸ: ಕುದ್ಮಲ್‌ ರಂಗರಾವ್‌ ನಗರ, ಪುತ್ತೂರು ಗ್ರಾಮ, ಉಡುಪಿ ತಾಲೂಕು ಇವರ ಗಂಡ ವಿನೋದ್‌ (30) ರವರು ಉಡುಪಿ ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದು, ಇವರಿಗೆ ಕುಡಿತದ ಚಟವಿದ್ದು, ಪ್ರತಿದಿನ ದೀಪಾ ಇವರೊಂದಿಗೆ ಗಲಾಟೆ ಮಾಡುತ್ತಿದ್ದರು. ದಿನಾಂಕ 14/05/2023 ರಂದು 14:00 ಗಂಟೆಗೆ ಮದ್ಯ ಸೇವನೆ ಮಾಡಿ ಮನೆಗೆ ಬಂದು ದೀಪಾ ರವರೊಂದಿಗೆ ಜಗಳವಾಡಿದ್ದು, ನಂತರ ಅವರ ಚಿಕ್ಕಪ್ಪ ಸಿ.ರಾಮ ರವರು ಮನೆಗೆ ಬಂದು ವಿನೋದನಿಗೆ ಬುದ್ದಿಮಾತು ಹೇಳಿದ ಬಳಿಕ, ಆತನು ಪುತ್ತೂರು ಗ್ರಾಮದ ಕುದ್ಮಲ್‌ರಂಗರಾವ್‌ನಗರದಲ್ಲಿರುವ ಮನೆಯಿಂದ ಹೋದವರು ಈವರೆಗೂ ಮನೆಗೆ ವಾಪಾಸು ಬಾರದೇ, ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 68/2023 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾಧ ಕೊರಗ ಆಚಾರ್ಯ  (82) ತಂದೆ: ದಿ, ಜನಾರ್ಧನ ಆಚಾರ್ಯ ವಾಸ: ಮನೆ ನಂ: 1-42 C, ಯಾಜ್ಞಿಕ ನಿವಾಸಮ್, ಗರಡಿ ರಸ್ತೆ, ಪಕ್ಳ, ಉಡುಪಿ ಇವರ ಮಗನಾದ  ನಾಗರಾಜ (41) ರವರು ಎಂದಿನಂತೆ ದಿನಾಂಕ 14/05/2023 ರಂದು ಬೆಳಿಗ್ಗೆ  06:00 ಗಂಟೆಗೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋಗಿದ್ದು, ನಂತರ ಬೆಳಿಗ್ಗೆ 09:30 ಗಂಟೆಗೆ ತನ್ನ ತಮ್ಮನ ಮಗ ಮೌನೇಶ್ ನ ಮೊಬೈಲ್ ಗೆ  ಕರೆ ಮಾಡಿ ಮಾತನಾಡಿದ್ದು ನಂತರ ಅವರ ಮೊಬೈಲ್ ಸ್ವೀಚ್ ಆಫ್ ಆಗಿದ್ದು, ಕೊರಗ ಆಚಾರ್ಯ ರವರು ಮತ್ತು ಮನೆಯವರು ಎಲ್ಲಾ ಕಡೆಗೆ ಹುಡುಕಾಡಿದ್ದು ನಾಗರಾಜ  ರವರು ಪತ್ತೆಯಾಗಿರುವುದಿಲ್ಲ, ಈ ಈವರೆಗೂ ಮನೆಗೆ ಬಂದಿರುವುದಿಲ್ಲವಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 114/2023 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಅನಿಲ್‌ ನೊಗಾ ನಾಯ್ಕ್‌ (34) ತಂದೆ: ನೊಗನಾಯ್ಕ್‌  ವಾಸ: ಮನೆ ನಂಬ್ರ: 296-ಎ, ವಾಡ ಪೊಲೀಸ್‌ ಠಾಣೆ ಎದುರು, ಬೇಲಿಕೇರಿ, ಅಂಕೋಲಾ ತಾಲೂಕು, ಉತ್ತರಕನ್ನಡ ಇವರ ಉಡುಪಿಯ ನವರತ್ನ ಬಾರ್‌ನಲ್ಲಿ ಮೇನೆಜರ್‌ಆಗಿ ಕೆಲಸ ಮಾಡಿಕೊಂಡಿದ್ದು, ಅನಿಲ್‌ ನೊಗಾ ನಾಯ್ಕ್‌ ರವರ ಊರಿನವರಾದ ಮಂಜುನಾಥ ಮನೋಹರ ಪೊಳೆ (31) ರವರು ಕಳೆದ ಒಂದು ವರ್ಷದಿಂದ ನವರತ್ನ ಬಾರ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಅನಿಲ್‌ ನೊಗಾ ನಾಯ್ಕ್‌ ರವರ ಜೊತೆಯಲ್ಲಿಯೇ ಉಡುಪಿ ಹಳೆ ಕೆ.ಎಸ್‌.ಆರ್‌.ಟಿ.ಸಿ ಬಸ್‌ನಿಲ್ದಾಣದ ಬಳಿ ಇರುವ ನಾರಾಯಣ ಶೆಣೈ ರವರ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿರುವುದಾಗಿದೆ. ದಿನಾಂಕ 09/05/2023 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ಮಂಜುನಾಥ ಮನೋಹರ ಪೊಳೆ ರವರು ತನ್ನ ಊರಿಗೆ ಹೋಗುವುದಾಗಿ ಹೇಳಿ ಬಾಡಿಗೆ ಮನೆಯಿಂದ ಹೋದವರು ಈವರೆಗೂ ಮನೆಗೆ ಹೋಗದೆ, ವಾಪಾಸು ಕೆಲಸಕ್ಕೂ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 69/2023 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಮುಕಾಂಬು (55) ಗಂಡ: ರತ್ನಾಕರ ಶೆಟ್ಟಿ ವಾಸ:ತಿಮ್ಮಯ್ಯ ಶೆಟ್ರಮನೆ ಉಪ್ಪುಂದ ಗ್ರಾಮ ಬೈಂದೂರು ಇವರು ತನ್ನ ಅಕ್ಕನಾದ ಬಚ್ಚಮ್ಮ ಶೆಡ್ತಿ  ಹಾಗೂ ಮಕ್ಕಳೊಂದಿಗೆ ಉಪ್ಪುಂದ ಗ್ರಾಮದ ತಿಮ್ಮಯ್ಯ ಶೆಟ್ಟಿಯವರ ಮನೆ ಯಲ್ಲಿ ವಾಸಮಾಡಿಕೊಂಡಿರುತ್ತಾರೆ. ಇವರ ಅಕ್ಕನ ಮಗ  ಅರುಣ (35) ಈತನು ಫೂನಾದಲ್ಲಿ ಹೊಟೇಲ್  ಕೆಲಸ ಮಾಡಿಕೊಂಡಿದ್ದವನು  ದಿನಾಂಕ 10/05/2023 ರಂದು ಚುನಾವಣೆ ಇದ್ದುದರಿಂದ  ಮತ ಲಾಯಿಸುವ ಬಗ್ಗೆ  ಊರಿಗೆ ಬಂದಿದ್ದು,  ಅರುಣರವರು ವಿಪರೀತ ಕುಡಿಯುವ ಚಟವನ್ನು ಹೊಂದಿದ್ದು ಹಾಗೂ ಕಿಡ್ನಿಕಲ್ಲು ಸಮಸ್ಯೆಯಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಮಾನಸಿಕವಾಗಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 16/05/2023 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ 17/05/2023 ರಂದು ಬೆಳಿಗ್ಗೆ  06:00 ಗಂಟೆಯ ಮಧ್ಯಾವಧಿಯಲ್ಲಿ  ಮನೆಯ  ಹತ್ತಿರದ ಜಯಶೀಲ ಶೆಟ್ಟಿ  ಎಂಬವರ ತೋಟದಲ್ಲಿನ ತೆಂಗಿನ ಮರಕ್ಕೆ  ನೈಲಾನ್ ಹಗ್ಗವನ್ನು ಕಟ್ಟಿ  ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 30/2023 ಕಲಂ: 174 ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾಧ ಗಿರಿಜಾ ಪೂಜಾರ್ತಿ ಗಂಡ: ದಿ ಮಣಿ ಎನ್ , ವಾಸ: ಗಿರಿಜಾ ನಿವಾಸ , ಸುಬ್ಬಣ್ಣ ಕಾಮತ್ ಕಂಪೌಡ್, ಕೊಡಂಗೆ ರೋಡ್ , ಪರ್ಕಳ ಹೆರ್ಗಾ ಗ್ರಾಮ,ಉಡುಪಿ ತಾಲೂಕು ಇವರ ಮಗನಾದ  ರಮೇಶ್ ಪೂಜಾರಿ (49) ಎಂಬವರು ವಿಪರೀತ ಕುಡಿತದ ಚಟವನ್ನು ಹೊಂದಿದ್ದು, ದಿನಾಂಕ 16/05/2023 ರಂದು ಸಂಜೆ 17:45 ಗಂಟೆಗೆ  ಅನಾರೋಗ್ಯದಿಂದ ತೀವ್ರ ಅಸ್ವಸ್ತ ರಾದವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆ ಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಅಲ್ಲಿನ ಕೆಎಂಸಿ ವೈದ್ಯರು  ದಿನಾಂಕ 16/05/2023 ರಂದು ಸಮಯ 19 :15 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 23/2023 ಕಲಂ: 174 ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾಧ ಶೇಖರ ಶೆಟ್ಟಿ (83), ತಂದೆ: ಮಹಾಬಲ ಶೆಟ್ಟಿ, ವಾಸ: ಬೆಳ್ತಾಡಿ, ಕಾಡೂರು ಗ್ರಾಮ, ಬ್ರಹ್ಮಾವರ ತಾಲೂಕು, ಇವರ ಜೊತೆಯಲ್ಲಿ ವಾಸವಾಗಿರುವ ಅವರ ಮೊಮ್ಮಗನಾದ ಅನೂಪ ಕುಮಾರ ಶೆಟ್ಟಿ, (31)ಎಂಬವರು ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದು, ಆತನು ಯಾವುದೋ ಕಾರಣಕ್ಕೂ ಜೀವನದಲ್ಲಿ  ಜಿಗುಪ್ಸೆಗೊಂಡು ದಿನಾಂಕ 17/05/2023 ರಂದು ಬೆಳಿಗ್ಗೆ 08:30 ಗಂಟೆಯಿಂದ 12:45  ಗಂಟೆಯ ಮಧ್ಯಾವಧಿಯಲ್ಲಿ ಕುತ್ತಿಗೆಗೆ ಹಗ್ಗ ಹಾಕಿಕೊಂಡು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 39/2023 ಕಲಂ: 174 ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

  • ಉಡುಪಿ: ದಿನಾಂಕ 16/05/2023 ರಂದು ಪಿರ್ಯಾದಿದಾರರಾಧ ರೋಜ್ಲಿನ್ ವಾಜ್, (50), ಗಂಡ: ಸ್ಟಿವನ್ ವಾಜ್, ವಾಸ: ಗೋಕುಲ ಕಂಪೌಂಡ್, ಕುಕ್ಕಂದೂರ್ ಪೋಸ್ಟ್, ಕಾರ್ಕಳ ಇವರ ವಾಟ್ಸ್ ಅಪ್ ಗೆ ಮೊಬೈಲ್ ನಂಬ್ರದಿಂದ ಪಿರ್ಯಾದಿದಾರರ ಪರಿಚಯದ ಅನಿಲ್ ಕರ್ನಾಲಿಯೋರವರ ಫೋಟೋವನ್ನು ಡಿ.ಪಿ.ಯಲ್ಲಿರಿಸಿ ಒಂದು ಮಗುವಿಗೆ ವೈಧ್ಯಕೀಯ ಚಿಕಿತ್ಸೆಗಾಗಿ ತುರ್ತಾಗಿ ಹಣ ಕಳುಹಿಸುವಂತೆ ಗೂಗಲ್ ಪೇ ನಂಬ್ರ +918874644657 & +919127528783 ನಂಬ್ರಗಳನ್ನು ನೀಡಿದ್ದು, ರೋಜ್ಲಿನ್ ವಾಜ್ರ ಇವರು ಸಂದೇಶವನ್ನು ಅನಿಲ್ ಕರ್ನಾಲಿಯೋರವರೇ ಕಳುಹಿಸಿರಬಹುದೆಂದು ನಂಬಿ, ಅವರ ಗೂಗಲ್ ಪೇ ಮುಖೇನ ದಿನಾಂಕ 16/05/2023 ರಂದು ರೂ. 20,000/- ದಿನಾಂಕ 17/05/2023 ರಂದು ಕ್ರಮವಾಗಿ ರೂ. 30,000/- ಮತ್ತು 40,000/- ಹಣವನ್ನು ಮೇಲಿನ ಗೂಗಲ್ ಪೇಗೆ ವರ್ಗಾವಣೆ ಮಾಡಿರುತ್ತಾರೆ. ಆದರೆ, ಯಾರೋ ಅಪರಿಚಿತ ವ್ಯಕ್ತಿಗಳು ರೋಜ್ಲಿನ್ ವಾಜ್ ರವರ ಪರಿಚಯದ ಅನಿಲ್ ಕರ್ನಾಲಿಯೋರವರ ಫೋಟೋವನ್ನು ಬಳಸಿ, ಪಿರ್ಯಾದಿದಾರರಿಂದ ಒಟ್ಟು 90,000/- ಹಣವನ್ನು ಪಡೆದು ಮೋಸ ಮಾಡಿರುವುದುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 92/2023 ಕಲಂ: 66(C), 66(D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.   
  • ಉಡುಪಿ: ದಿನಾಂಕ 07/05/2023 ರಂದು ಪಿರ್ಯಾದಿದಾರರಾದ ತನ್ವಿ ರೆಡ್ಡಿ, (19) ತಂದೆ: ದಸ್ತಗಿರಿ ರೆಡ್ಡಿ, ವಾಸ: ಬ್ಲಾಕ್ ನಂಬ್ರ 22, MIT ಮಣಿಪಾಲ ಇವರಿಗೆ ಟೆಲಿಗ್ರಾಮ್ ಆಪ್ ನಲ್ಲಿ ಆನ್‌‌ಲೈನ್ ಟಾಸ್ಕ್ ಉಧ್ಯೋಗದ ಬಗ್ಗೆ ಸಂದೇಶ ಬಂದಿದ್ದು, ಇದರಲ್ಲಿ ಟಾಸ್ಕ್ ನಡೆಸಿ, ಕಮಿಶನ್ ಪಡೆಯುವ ಬಗ್ಗೆ ವಿವರ ಇದ್ದು, ಇದನ್ನು ಸತ್ಯವೆಂದು ನಂಬಿದ ಪಿರ್ಯಾದಿದಾರರು ದಿನಾಂಕ 07/05/2023 ರಿಂದ ಈವರೆಗೆ ಒಟ್ಟು ರೂಪಾಯಿ 1,28,000/- ಹಣವನ್ನು ಟಾಸ್ಕ್ ನಡೆಸಲು ಟ್ರಾನ್ಸೆಕ್ಷನ್ ಮಾಡಿದ್ದು, ಆದರೆ, ಅಪರಿಚಿತ ವ್ಯಕ್ತಿಗಳು ಟಾಸ್ಕ್ ನೀಡಿ ಕಮೀಶನ್ ನೀಡುವುದಾಗಿ ನಂಬಿಸಿ, ತನ್ವಿ ರೆಡ್ಡಿ, ರವರಿಂದ ಒಟ್ಟು ರೂ. 1,28,000/- ಹಣವನ್ನು ಪಡೆದು ಮೋಸ ಮಾಡಿರುವುದು ಮಾಡಿರುವುದುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 93/2023ಕಲಂ: 66(C), 66(D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 17-05-2023 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080