ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಉಡುಪಿ: ಪಿರ್ಯಾದಿದಾರರಾದ ಅತುಲ್ ಸೋಜನ್ ಪ್ರಾಯ: 20 ವರ್ಷ, ತಂದೆ: ಸೋಜನ್ ಜೋರ್ಜ್,‌ ವಾಸ: ಕಚಿರೈಲ್ ಹೌಸ್, ಅರಿವಿಲಞ ಪೊಯಿಲ್, ಅಲಕೋಡ್ ಗ್ರಾಮ, ತಳಿರಂಬ ತಾಲೂಕು ಕಣ್ಣೂರು ಜಿಲ್ಲೆ, ಕೇರಳ ರಾಜ್ಯ ಇವರು ದಿನಾಂಕ 16/04/2022 ರಂದು ತನ್ನ ಲೋಟಾರು ಸೈಕಲ್ ನಂಬ್ರ KL-59-Y-1263 ನೇದರಲ್ಲಿ ಮೆಲ್ಬಿನ್ ಸ್ಯಾಮ್ ಎಂಬಾತನನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಕಲ್ಸಂಕದಿಂದ ಮಣಿಪಾಲ ಕಡೆಗೆ ಹೋಗುತ್ತಿರುವಾಗ ಮದ್ಯಾಹ್ನ ಸಮಯ ಸುಮಾರು 1:15 ಗಂಟೆಗೆ ಶಿವಳ್ಳಿ ಗ್ರಾಮದ ಕಡಿಯಾಳಿ ಫರ್ನಿಚರ್ ಮಾಲ್ ಎದುರು ರಾ.ಹೆ 169 (ಎ) ರಲ್ಲಿ ತಲುಪುವಾಗ KA-19-AB- 4737 ನೇ ಕಾರು ಚಾಲಕ ಗೋಪಾಲಕೃಷ್ಣ ಪೂಜಾರಿ ತನ್ನ ಕಾರನ್ನು ಕಲ್ಸಂಕದಿಂದ ಮಣಿಪಾಲ ಕಡೆಗೆ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರ ಮೆಲ್ಬಿನ್ ಸ್ಯಾಮ್ ಎಂಬವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು , ಪಿರ್ಯಾದಿದಾರರಿಗೆ ಎರಡೂ ಕಾಲುಗಳಿಗೆ ಹಾಗೂ ಎಡಕೈಗೆ ಮೂಳೆಮುರಿತ ಹಾಗೂ ಸಹಸವಾರ ಮೆಲ್ಬಿನ್ ಸ್ಯಾಮ್ ರವರಿಗೆ ಬಲಕೈಯ ಮೂಳೆ ಮುರಿತ ಉಂಟಾಗಿದ್ದು ಇಬ್ಬರೂ ಕೆಎಮ್‌ಸಿ ಮಣಿಪಾಲ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ 

  • ಗಂಗೊಳ್ಳಿ: ಪಿರ್ಯಾದಿದಾರರಾದ ಪ್ರವೀಣ್ ಖಾರ್ವಿ ಪ್ರಾಯ: 40 ವರ್ಷ, ತಂದೆ: ಪುರುಷೋತ್ತಮ ಖಾರ್ವಿ, ಮದ್ಯಕೇರಿ, ಕುಂದಾಪುರ ಇವರು ಮೀನು ವ್ಯವಹಾರದ ಬಗ್ಗೆ 15 ಇನ್ಸುಲೇಟರ್ ವಾಹನ ಇಟ್ಟುಕೊಂಡಿದ್ದು ಪ್ರತಿದಿನ ಕುಂದಾಪುರ ತಾಲೂಕು ಹೊಸಾಡು ಗ್ರಾಮದ ESAR ಪೆಟ್ರೋಲ್ ಬಂಕ್ ನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುತ್ತಿರುವುದಾಗಿದೆ. ವಾಹನಗಳಿಗೆ ಬಾಡಿಗೆ ಇಲ್ಲದೇ ಇರುವ ಕಾರಣ ದಿನಾಂಕ:12/02/2022 ರಂದು ವಾಹನಗಳನ್ನು ESAR ಪೆಟ್ರೋಲ್ ಬಂಕ್ ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದು ದಿನಾಂಕ: 19/02/2022 ರಂದು ಬೆಳಿಗ್ಗೆ 8:30 ಗಂಟೆಗೆ ಗಂಗೊಳ್ಳಿ ಬಂದರ್ ಗೆ ಮೀನು ತುಂಬಿಸಲು ಇನ್ಸುಲೇಟರ್ ವಾಹನವನ್ನು ತೆಗೆದುಕೊಂಡು ಹೋಗಲು ವಾಹನದ ಬಳಿ ಬಂದಾಗ ಪಿರ್ಯಾದಿದಾರರ KA-20-AA-9321 ನೇ ಇನ್ಸುಲೇಟರ್ ಗೆ ಅಳವಡಿಸಿದ 2 ಬ್ಯಾಟರಿಗಳು ಮತ್ತು KA-54– 4910 ನೇ ಇನ್ಸುಲೇಟರ್ ಗೆ ಅಳವಡಿಸಿದ 2 ಬ್ಯಾಟರಿಗಳು ಕಾಣಿಸದೇ ಇದ್ದು ತುರ್ತಾಗಿ ಮೀನು ಸಾಗಿಸಬೇಕಾಗಿರುವುದರಿಂದ ವಾಹನಕ್ಕೆ ಬೇರೆ ಬ್ಯಾಟರಿಗಳನ್ನು ಅಳವಡಿಸಿ ಕೊಂಡುಹೋಗಿರುವುದಾಗಿದೆ. ದಿನಾಂಕ: 12/02/2022ರಿಂದ 19/02/2022ರಂದು ಬೆಳಿಗ್ಗೆ 8:30 ಗಂಟೆ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಇನ್ಸುಲೇಟರ್ ವಾಹನದ ಬ್ಯಾಟರಿಗಳನ್ನುಕಳವು ಮಾಡಿಕೊಂಡು ಹೋಗಿರುವುದಾಗಿದೆ. ಮೌಲ್ಯ 35,600 ಆಗಿರುತ್ತದೆ. ಪಿರ್ಯಾದಿದಾರರು ವ್ಯವಹಾರದ ನಿಮಿತ್ತ ಬೇರೆ ಬೇರೆ ರಾಜ್ಯಕ್ಕೆ ಹೋಗಿರುವುದರಿಂದ ದೂರು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 35/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 17-04-2022 07:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080