ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಮಮತ (36), ಗಂಡ: ರವಿ ಮೂಲ್ಯ, ವಾಸ: ಗೌರಿ ನಿವಾಸ, ಪಾಲ್ದಡಿ ಮನೆ, ಬೆಳ್ಮಣ್ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ ಗಂಡ ರವಿ ಮೂಲ್ಯ(44) ಇವರು ಕಳೆದ 4-5 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಅವರು ಉಡುಪಿ ಬಾಳಿಗಾ ಆಸ್ಪತ್ರೆಯ ವೈದ್ಯಾಧಿಕಾರಿಯವರಿಂದ ಚಿಕಿತ್ಸೆ ಪಡೆಯುತ್ತಿದ್ದರೂ, ಮಾನಸಿಕ ಖಾಯಿಲೆಯು ಗುಣವಾಗದ ಕಾರಣ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 16/01/2022 ರಂದು ಸಂಜೆ 6:30 ಗಂಟೆಯಿಂದ ರಾತ್ರಿ 9:00 ಗಂಟೆಯ ಮಧ್ಯೆ ತಮ್ಮ ಮನೆಯ ಸಮೀಪ ಇರುವ ಸಂತೋಷ ಶೆಟ್ಟಿ ಎಂಬುವವರ ಮನೆಯ ಅಂಗಳದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 04/ 2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಶ್ರೀಮತಿ ಸಂಗೀತಾ (30), ಗಂಡ: ಸಂತೋಷ ಗೌಡ, ವಾಸ: ದಪ್ಪಿಮನೆ, ಶಾರದ ಹೊಳೆ, ಯಳಜಿತ್‌ಗ್ರಾಮ, ಬೈಂದೂರು ತಾಲೂಕು ಇವರ ತಾಯಿ ಗುಲಾಬಿ ಹಾಗೂ ಅಕ್ಕ ಗೀತಾ ರವರೊಂದಿಗೆ ವಾಸವಾಗಿದ್ದು ಮನೆವಾರ್ತೆ ಕೆಲಸವನ್ನು ಮಾಡಿಕೊಂಡಿರುತ್ತಾರೆ. ದಿನಾಂಕ 16/01/2022 ರಂದು 09:00 ಗಂಟೆಗೆ  ಪಿರ್ಯಾದಿದಾರರ ಅಕ್ಕನ ಕೋಳಿ ಅಂಗಡಿಯ ರಿಪೇರಿ ಮಾಡಲು ಇಬ್ಬರು ಕೆಲಸಗಾರರೊಂದಿಗೆ ತಾಯಿ ಗುಲಾಬಿ ಹಾಗೂ ಅಕ್ಕ ಗೀತಾ ಮಾಡಿನ ಸೀಟನ್ನು ಇಳಿಸುತ್ತಿರುವಾಗ  ಆಪಾದಿತರಾದ ಲಕ್ಷ್ಮೀ ಕೊಠಾರ್ತಿ , ನಾರಾಯಣ ಕೊಠಾರಿ, ಜಲಜ ಕೊಠಾರಿ, ರಾಜೇಂದ್ರ ಕೊಠಾರಿ, ಗಿರಿಜಾ ಕೊಠಾರಿ ಹಾಗೂ  ವನಿತಾಕೊಠಾರಿ ರವರು ಅಂಗಡಿಯ ಬಳಿ ಬಂದು ಅಂಗಡಿಯನ್ನು ರಿಪೇರಿ ಮಾಡಬಾರದಾಗಿ ಹೇಳಿ ಲಕ್ಷ್ಮೀ ಕೊಠಾರ್ತಿ , ನಾರಾಯಣ ಕೊಠಾರಿ, ಜಲಜ ಕೊಠಾರಿ 3 ಜನ ಸೇರಿ ಪಿರ್ಯಾದಿದಾರರನ್ನು ದೂಡಿ ಹಾಕಿ, ಕೈಯಿಂದ ಹೊಡೆದು, ಹೊಟ್ಟೆಯ ಬಾಗಕ್ಕೆ ಕಾಲಿಂದ ತುಳಿದಿರುತ್ತಾರೆ, ರಾಜೇಂದ್ರ ಕೊಠಾರಿ, ಗಿರಿಜಾ ಕೊಠಾರಿ ಹಾಗೂ  ವನಿತಾ ಕೊಠಾರಿ ರವರು ಸೇರಿ ಪಿರ್ಯಾದಿದಾರರ ಅಕ್ಕ ಮತ್ತು ತಾಯಿಗೆ ಕೈಯಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ.  ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಹರಿದುಹಾಕಿರುತ್ತಾರೆ.  ಅಲ್ಲದೆ ಅಂಗಡಿಯನ್ನು ರಿಪೇರಿ ಮಾಡಲು ಬಂದರೆ ನಿಮ್ಮನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಪಿರ್ಯಾದಿದಾರರಿಗೆ ಹೊಟ್ಟೆಗೆ ಹಾಗೂ ಬಲಕೈಗೆ ನೋವಾಗಿರುವುದರಿಂದ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2022 ಕಲಂ: 323, 354, 427, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 17-01-2022 09:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080