ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 15/08/2022 ರಂದು ಸಂಜೆ ಸಮಯ ಸುಮಾರು 7:15  ಗಂಟೆಗೆ,  ಕುಂದಾಪುರ ತಾಲೂಕು, ಕೋಟೇಶ್ವರ ಗ್ರಾಮದ  ಸರ್ಜನ್‌ಆಸ್ಪತ್ರೆಯ ಬಳಿ, NH 66 ರಸ್ತೆಯಲ್ಲಿ ಆಪಾದಿತ ವಿಕಾಸ್‌ಹೆಗ್ಡೆ  ಎಂಬುವರು KA-20-MC-8589ನೇ ಸ್ವಿಪ್ಟ್‌ ಕಾರನ್ನು ಸರ್ಜನ್‌ಆಸ್ಪತ್ರೆಯ ಬಳಿಯ ಪೂರ್ವ ಬದಿಯ ಸರ್ವಿಸ್‌ರಸ್ತೆ ಕಡೆಯಿಂದ ವೇಗ ಹಾಗೂ ನಿರ್ಲಕ್ಷ್ಯತನದಿಂದ ಯಾವುದೇ ಸೂಚನೆ ನೀಡದೇ  NH 66 ರಸ್ತೆಗೆ  ತಿರುಗಿಸಿ,  ಕುಂದಾಪುರ ಕಡೆಯಿಂದ ಕುಂಭಾಶಿ ಕಡೆಗೆ ಪಿರ್ಯಾದಿದಾರರಾದ ಭಾಸ್ಕರ್‌ಪೂಜಾರಿ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA20-Y-1652ನೇ  ಬಜಾಜ್‌ಡಿಸ್ಕವರಿ ಬೈಕಿಗೆ ಅಪಘಾತಪಡಿಸಿದ ಪರಿಣಾಮ, ಭಾಸ್ಕರ್‌ಪೂಜಾರಿಯವರ  ಎಡಕಾಲಿನ ಕೋಲು ಕಾಲಿಗೆ ಒಳಜಖಂ, ಬಲಕೈ, ಬಲಕಾಲು, ಬಲಭುಜ ಹಾಗೂ  ಹಣೆಗೆ ತರಚಿದ ಗಾಯವಾಗಿ ಕೊಟೇಶ್ವರ ಸರ್ಜನ್‌ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ  ಒಳರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 91/2022  ಕಲಂ 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕೋಟ: ಪಿರ್ಯಾದಿ ಶ್ರೀಮತಿ ಕೋಮಲ ಇವರು ಮೂಡಬಿದ್ರೆಯ ವಾಸಿ ಸುಶಾಂತ ಜಿ ಕರ್ಕೇರ ಎಂಬವರನ್ನು ದಿನಾಂಖ 16/09/2021ರಂದು  ಮದುವೆಯಾಗಿದ್ದು ಮದುವೆಯ ನಂತರ ಉಡುಪಿಯ ಸಂತೆಕಟ್ಟೆಯಲ್ಲಿ  ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದು , ನಂತರ ಬಾಡಿಗೆ ಮನೆ ಖಾಲಿ ಮಾಡಿ ಮುಂಬೈಗೆ ಹೋಗಿರುತ್ತಾರೆ. ಪಿರ್ಯಾದಿದಾರರು ವಾಪಾಸ್ಸು ಸಾಲಿಗ್ರಾಮದ ಮನೆಗೆ ಬಂದಿದ್ದು ದಿನಾಂಕ 9/12/2021 ರಂದು ಸುಶಾಂತ ಕೂಡ ಪಿರ್ಯಾದಿದಾರರ ಮನೆಗೆ ಬಂದಿರುತ್ತಾರೆ  ಆದರೆ ಮನೆಯಿಂದ ಹೇಳದೇ ಕೇಳದೇ  ಪಿರ್ಯಾದಿದಾರರ ಬಾಬ್ತು  KA20EX2000 ರೋಯಲ್ ಎನ್ ಪೀಲ್ಡ ಮೋಟಾರ್ ಸೈಕಲ್ ನ್ನು  ತೆಗೆದುಕೊಂಡು ಹೋಗಿರುತ್ತಾರೆ, ನಂತರ ವಿಚಾರಿಸಿದಾಗ ಸುಶಾಂತ್  ಹಲವಾರು ಕಡೆಗಳಲ್ಲಿ  ಇದೇ ರೀತಿ ಕಳವು ಮಾಡಿಕೊಂಡು  ಹೋಗಿರುವುದಾಗಿ ತಿಳಿಯಿತು. ಹಾಗೆಯೇ   ಪಿರ್ಯಾದಿದಾರರ ಬೈಕನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬಿತ್ಯಾದಿ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 132/2022  ಕಲಂ 379  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ದಿನಾಂಕ 15/08/2022 ರಂದು ಮದ್ಯಾಹ್ನ 2:45 ಗಂಟೆಗೆ ಹೆಬ್ರಿ ತಾಲೂಕು ಬೆಳ್ವೆ ಗ್ರಾಮದ ತೋಟದಮನೆ ಅಬ್ಲಿಕಟ್ಟೆ ಎಂಬಲ್ಲಿ ಪಿರ್ಯಾದಿ ವಾಸು ಪೂಜಾರಿ ಇವರ ಮಗಳು ಕುಮಾರಿ ಸೌಮ್ಯ ಪೂಜಾರಿ(27) ರವರು ಪಿರ್ಯಾದಿದಾರರ ಮನೆಯ ಬಾವಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿದೆ.  ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 26/2022 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-08-2022 05:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080