ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿ: ಅನಿಲ್ ಕುಮರ್ (34) ವರ್ಷ, ತಂದೆ: ಸಂಜೀವ ಪೂಜಾರಿ, ವಾಸ: ಕುಸುಮ ನಿಲಯ ಪಾದೆಮನೆ,ಕಪ್ಪೆಟ್ಟು ಕಿದಿಯೂರು ಗ್ರಾಮ ಅಂಬಲಪಾಡಿ ಅಂಚೆ, ಉಡುಪಿ ತಾಲೂಕು ಇವರು ದಿನಾಂಕ;13/05/2023 ರಂದು ತನ್ನ KA20ER9462 ನೇ ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸಹ ಸವಾರಳಾಗಿ ತನ್ನ ಹೆಂಡತಿ ಸಮಲತಾ ರವರನ್ನು ಕುಳ್ಳಿರಿಸಿಕೊಂಡು ಅಂಬಾಗಿಲು ಜಂಕ್ಷನ್ ನಿಂದ ಅಂಬಲಪಾಡಿ ಕಡೆಗೆ ರಾ.ಹೆ-66 ರಲ್ಲಿ ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 10:00 ಗಂಟೆಗೆ ನಿಟ್ಟೂರು ಬಾಳಿಗಾ ಜಂಕ್ಷನ್ ತಲುಪಿದಾಗ ನಿಟ್ಟೂರು ಕಡೆಯಿಂದ ಬರುವ ಅಡ್ಡರಸ್ತೆಯಲ್ಲಿ KA20EV7476 ನೇ ಸ್ಕೂಟರ್ ಸವಾರ ಸ್ಟ್ರೀಮ್ ಸನ್ ನು  ತನ್ನ ಸ್ಕೂಟರನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಒಮ್ಮೆಲೆ ಏಕಾಏಕಿಯಾಗಿ ರಾಷ್ಟ್ರೀಯ ಹೆದ್ದಾರಿಗೆ ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರು ಮತ್ತು ಅವರ ಹೆಂಡತಿ ಸುಮಲತಾ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ  ಬಿದ್ದು, ಪಿರ್ಯದಿದಾರರಿಗೆ ಎಡಭುಜಕ್ಕೆ, ಎರಡು ಕಾಲಿನ ಗಂಟಿಗೆ,ಬಲಕೈ , ಅಂಗೈಗೆ , ಎಡಬದಿಯ ಪಕ್ಕೆಲುಬಿಗೆ ಗುದ್ದಿದ ಒಳಜಖಂ ಆಗಿದ್ದು, ಸುಮಲತಾ ರವರ ತಲೆಗೆ ರಕ್ತ ಗಾಯವಾಗಿದ್ದು, ಚಿಕಿತ್ಸಯ ಬಗ್ಗೆ ಒಳರೋಗಿಯಾಗಿ ಹೈಟೆಕ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಉಡುಪಿ ಸಂಚಾರ ಠಾಣೆ  ಅಪರಾಧ ಕ್ರಮಾಂಕ  49/2023 ಕಲಂ: 279, 337 ಐ.ಪಿ.ಸಿ   ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ದಿನಾಂಕ 16/05/2023 ರಂದು ಸಮಯ ಸುಮಾರು 00:30 (00:30 AM) ಗಂಟೆಗೆ, ಕುಂದಾಪುರ  ತಾಲೂಕಿನ ವಡೇರಹೋಬಳಿ ಗ್ರಾಮದ ಶ್ರೀ ಬೊಬ್ಬರ್ಯ ದೈವಸ್ಥಾನದ ಬಳಿ,  ಪಶ್ಚಿಮ ಬದಿಯ  NH 66  ರಸ್ತೆಯಲ್ಲಿ, ಆಪಾದಿತ ನಾಗರಾಜ ಎಂಬವರು  KA20AA-9649ನೇ ಲಾರಿಯನ್ನು ಕೊಟೇಶ್ವರ  ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷತನದಿಂದ  ಚಾಲನೆ ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ಪಿರ್ಯಾದಿ ಮನೀಷ್‌ ಪ್ರಾಯ  21   ವರ್ಷ ತಂದೆ ಶಂಕರ   ವಾಸ:   ಟಿ.ಟಿ ರಸ್ತೆ, ವಡೇರಹೋಬಳಿ  ಗ್ರಾಮ   ಇವರು KA20-V-7471ನೇ ಬೈಕಿನಲ್ಲಿ  ವಿಶಾಲ್‌‌ನನ್ನು ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಬರುತ್ತಿದ್ದ ಸದ್ರಿ ಬೈಕಿಗೆ ಹಿಂದಿನಿಂದ  ಡಿಕ್ಕಿ ಹೊಡೆದ ಪರಿಣಾಮ, ವಿಶಾಲ್‌‌ರವರ ತಲೆಗೆ ಒಳಜಖಂ, ಕೈ ಕಾಲುಗಳಿಗೆ ತರಚಿದ ಗಾಯವಾಗಿ ಕುಂದಾಪುರ  ಸರಕಾರಿ  ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ. ಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ 64/2023   ಕಲಂ 279,337    ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು: ಪಿರ್ಯಾದಿ: ಭೋಜ (41) ತಂದೆ: ಮಿಂಜಿರ, ವಾಸ: ನೀರಲ್ಕೆ,  ಮರ್ಣೆ ಗ್ರಾಮ, ಕಾರ್ಕಳ ತಾಲೂಕು ಇವರ ತಂಗಿಯ ಗಂಡನಾದ 37 ವರ್ಷ ಪ್ರಾಯದ ಶೇಖರ ಮೇರ ಎನ್ನುವವರು ವೀಪರೀತ ಮದ್ಯಪಾನ ಮಾಡುವ ಹವ್ಯಾಸ ಹೊಂದಿದ್ದು ದಿನಾಂಕ 16/05/2023 ರಂದು  ಬೆಳಿಗ್ಗೆ 08:00 ಗಂಟೆಯಿಂದ ಮದ್ಯಾಹ್ನ 02:30 ಗಂಟೆಯ ಮದ್ಯಾವಧಿಯಲ್ಲಿ ಮರ್ಣೆ ಗ್ರಾಮದ ನೀರಲ್ಕೆ ಎಂಬಲ್ಲಿನ ಪಿರ್ಯಾದಿದಾರರ ಮನೆಯ ಹತ್ತಿರ ಇರುವ ಸರಕಾರಿ ಜಮೀನಿನಲ್ಲಿ ಬಿದ್ದು ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಶೇಖರ ಮೇರರವರು ಅಸೌಖ್ಯದಿಂದಲೋ ಅಥವಾ ಹೃದಯಾಘಾತದಿಂದಲೋ ಮೃತಪಟ್ಟಿದ್ದಾಗಿರುತ್ತದೆ. ಈ ಬಗ್ಗೆ ಅಜೆಕಾರು ಠಾಣಾ  UDR No: 17/2023 U/s 174 CrPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 16-05-2023 06:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080