ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ : ದಿನಾಂಕ: 15-05-2022 ರಂದು ಮಧ್ಯಾಹ್ನ 14:30 ಗಂಟೆಯಿಂದ 15:00 ಗಂಟೆಯ ಮಧ್ಯಾವಧಿಯಲ್ಲಿ ಹೆಬ್ರಿ ತಾಲೂಕು ಬೆಳ್ವೆ ಗ್ರಾಮದ ಗುಮ್ಮೊಲ ಎಂಬಲ್ಲಿನ ಜೋಸೆಫ್ ಎಂಬವರ ತೋಟದಮನೆಯಲ್ಲಿ ಪಿರ್ಯಾದಿ ಶ್ರೀಮತಿ ಶಂಕ್ರವ್ವ ತೇರದಳ್ಳಿ ಇವರ ಮಗ ಜಗದೀಶ ತೆರದಳ್ಳಿ (36) ಇವರು ಮನೆಯಲ್ಲಿ ನೇಣು ಬಿಗಿದು ಕೊಂಡು ಅತ್ಮಹತ್ಯೆ ಮಾಡಿಕೊಂಡಿರುವುದವಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 10/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ : ದಿನಾಂಕ: 15-05-2022   ರಂದು ಸಂಜೆ 17:00 ಗಂಟೆಗೆ ಕುಂದಾಪುರ ತಾಲೂಕು ಕುಳ್ಳುಂಜೆ ಗ್ರಾಮದ ಕಲ್ಲು ಬಚ್ಚಲು ಮನೆ ಎಂಬಲ್ಲಿನ ಮನೆಯ ಹತ್ತಿರದ ಉದಯ ಶೆಟ್ಟಿ ಎಂಬವರ ಹಾಡಿ ಪ್ರದೇಶದ ಇಳಿಜಾರಿನಿಂದ ಕೂಡಿದ ಸ್ಥಳದಲ್ಲಿ ಬಿದ್ದು ಅಸ್ವಸ್ಥ ಗೊಂಡಿದ್ದು ಪಿರ್ಯಾದಿ ಶ್ರೇಯಸ್ ಶೆಟ್ಟಿ ಇವರ ತಂದೆ ಕರುಣಾಕರ ಶೆಟ್ಟಿ (49)  ಇವರನ್ನು ಹಾಲಾಡಿ ದುರ್ಗಾ ಅಸ್ಪತ್ರೆಗೆ  ಚಿಕಿತ್ಸೆಗೆ 17:45 ಗಂಟೆಗೆ ಕರೆದು ಕೊಂಡು ಹೋದಾಗ ಪರೀಕ್ಷೆಸಿದ ವೈದ್ಯರು ಚಿಕಿತ್ಸೆಗೆ ಬರುವಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತರು ಬೆಂಗಳೂರಿನಲ್ಲಿ ಅಡಿಗೆ ಮತ್ತು ಕಂಟ್ರಾಕ್ಟ್ ಕೆಲಸದಲ್ಲಿ ನಷ್ಟವುಂಟಾಗಿದ್ದರಿಂದ ವಿಪರೀತ ಮದ್ಯಸೇವನೆ ಚಟ ಬೆಳಸಿಕೊಂಡು ನಂತರ ಊರಲ್ಲಿ ಬಂದು ಇದ್ದವರಿಗೆ ಇಲ್ಲಿಯೂ ಮದ್ಯಸೇವನೆಗೆ  ಅರ್ಥಿಕ ಅಡಚಣೆಯುಂಟಾಗಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 11/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿ ಶ್ರೀಮತಿ ಸುಮತಿ ಇವರ ಗಂಡನಾದ ಬಾಬು ಆಚಾರ್ಯ(55 ವರ್ಷ) ,ರವರು ದಿನಾಂಕ 14/05/2022 ರಂದು ಬೆಳಿಗ್ಗೆ 08:00 ಗಂಟೆಗೆ ಸದಾಶಿವ ಆಚಾರ್ಯ ರವರೊಂದಿಗೆ ಕುಂದಾಪುರ ತಾಲೂಕು ಆಲೂರು ಗ್ರಾಮದ ಆಲೂರು ಹಳ್ಳಿ ಶೇಖರ ಶೆಟ್ಟಿ ಯವರ ಮನೆಯ ಕೆಲಸಕ್ಕೆ ಹೋಗಿದ್ದು. ಸುಮಾರು 15:00 ಗಂಟೆಗೆ ಶೇಖರ ಶೆಟ್ಟಿ ಯವರ ಮನೆಯ ಮಾಡಿನ ಹೆಂಚು ಇಳಿಸುವಾಗ ಆಯ ತಪ್ಪಿ ಮಾಡಿನಿಂದ ಕೆಳಗೆ ನೆಲಕ್ಕೆ ಬಿದ್ದು ತಲೆಗೆ ಪೆಟ್ಟಾಗಿದ್ದು,  ಈ ಬಗ್ಗೆ ಅವರನ್ನು ವಂಡ್ಸೆ ಅಡಿಗ ರವರ ಕ್ಲೀನಿಕ್‌ ಗೆ ಹೋಗಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬಂದು  ಮನೆಯಲ್ಲಿ ಆರೈಕೆಯಲ್ಲಿದ್ದು.  ನಂತರ ದಿನಾಂಕ 15/05/2022 ರಂದು ಬಾಬು ಆಚಾರ್ಯ ರವರು ತುಂಬಾ ಅಸೌಖ್ಯಗೊಂಡವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ  ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 15/05/2022 ರಂದು ರಾತ್ರಿ 9:30 ಗಂಟೆಗೆ ಮೃತಪಟ್ಟಿರುವುದಾಗಿದೆ.  ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 16-05-2022 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080