ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ 

  • ಶಂಕರನಾರಾಯಣ: ದಿನಾಂಕ 15/05/2021 ರಂದು 08;30 ಗಂಟೆಗೆ ಪಿರ್ಯಾದಿದಾರರಾದ ವಷಂತ ಶೆಟ್ಟಿ ಪ್ರಾಯ 50 ವರ್ಷ ತಂದೆ, ಭುಜಂಗ ಶೆಟ್ಟಿ ವಾಸ, ಭವಾನಿಶ್ರೀ ಹೆಮ್ಮಣ್ಣು ಮಚ್ಚೊಟ್ಟು ಗ್ರಾಮಕುಂದಾಪುರ ತಾಲೂಕು ಇವರು KA-20- ED-4197 ನೇ ನಂಬ್ರದ ಮೋಟಾರ್ ಸೈಕಲ್‌ನಲ್ಲಿ ಕುಂದಾಪುರ ತಾಲೂಕಿನ ಉಳ್ಳೂರು 74 ಗ್ರಾಮದ ಕಳ್ಳಿನಜೆಡ್ಡು ಎಂಬಲ್ಲಿ ಕೋಳಿ ಪಾರ್ಮ ಬಳಿ ಇರುವ ಅಂಗಡಿಯ ಬಳಿ ಮೋಟಾರ್ ಸೈಕಲ್ ನಿಲ್ಲಿಸಿದಾಗ ಅಲ್ಲಿಯೇ ನಿಂತಿದ್ದ ಟಾಟಾ ಎ,ಎಸ್. ಗೂಡ್ಸ ವಾಹನವನ್ನು ಅದರ ಚಾಲಕ ಯಾವುದೇ ಮುನ್ಸೂಚನೇ ನೀಡದೇ ನಿರ್ಲಕ್ಷತನದಿಂದ ಒಮ್ಮೆಲೇ ಹಿಮ್ಮುಖವಾಗಿ ಚಲಾಯಿಸಿ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದಿರುತ್ತಾನೆ, ಇದರ ಪರಿಣಾಮ ಮೋಟಾರ್ ಸೈಕಲ್ ಸಮೇತ ರಸ್ತೆಯ ಚರಂಡಿಗೆ ಬಿದ್ದ ಪಿರ್ಯಾದಿದಾರರ ಎಡಕಾಲಿನ ಮಣಿಗಂಟು ಹಾಗೂ ಪಾದದ ಬಳಿ ರಕ್ತಗಾಯವಾಗಿರುತ್ತದೆ, ಅಪಘಾತ ಸಮಯ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಟಾಟ ಎ.ಎಸ್.ಗೂಡ್ಸ ವಾಹನವನ್ನು ಅದರ ಚಾಲಕ ಅಲ್ಲಿ ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 53/2021 ಕಲಂ: 279, , 337 ಐ.ಪಿಸಿ 134(A&B) R/W 187 IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಬ್ರಹ್ಮಾವರ:ಪಿರ್ಯಾದಿದಾರರಾದ ಹರೀಶ್ ಆಚಾರ್ಯ (52), ತಂದೆ: ಪುಂಡು ಆಚಾರ್ಯ, ವಾಸ: ಕೋಡಿಬೆಟ್ಟು, ಕುದಿ ಅಂಚೆ, ವಯ-ಹಿರಿಯಡ್ಕ ಇವರ ಮಾವನ ಮಗಳು ದಾಕ್ಷಾಯಿಣಿ (47) ಎಂಬುವವರಿಗೆ ಮದುವೆ ಆಗದೇ ಒಬ್ಬಂಟಿಯಾಗಿ ವಾಸ ಇದ್ದು, ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಔಷದಗಳನ್ನು ಸರಿಯಾಗಿ ತೆಗೆದು ಕೊಳ್ಳದೇ ಒಬ್ಬೊಬ್ಬಳೇ ಮಾತಾನಾಡಿಕೊಂಡು ತಿರುಗಾಡುತ್ತಿದ್ದು, ಅವರ ಇಚ್ಚೆಯಂತೆ ಕಳೆದ 5 ತಿಂಗಳಿಂದ ವಾರಂಬಳ್ಳಿ ಗ್ರಾಮದ ಆಕಾಶವಾಣಿ ಹತ್ತಿರ ಇರುವ ಅಪ್ಪ- ಅಮ್ಮ ಅನಾಥಾಲಯದಲ್ಲಿ ಆಶ್ರಯ ಪಡೆಯುತ್ತಿದ್ದರು, ದಾಕ್ಷಾಯಿಣಿಯವರಿಗೆ ಒಡಹುಟ್ಟಿದವರು ಯಾರು ಇಲ್ಲದೇ ಇರುವುದರಿಂದ ಹಾಗೂ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದುರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 16/05/2021 ರಂದು ಬೆಳಿಗ್ಗೆ 06:00 ಗಂಟೆಗೆ ಆಶ್ರಮದ ಪಕ್ಕದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 27/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 16-05-2021 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080