ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಉಡುಪಿ: ಪಿರ್ಯಾದಿ ಆದಿತ್ಯ ಸುಧೀರ್ ಮುರ್ಕೋತ್ ಇವರು ದಿನಾಂಕ:15-04-2022 ರಂದು KA20EF1656ನೇ ಸ್ಕೂಟರ್ ನಲ್ಲಿ ಶಾರದಾ ನಗರ ರಸ್ತೆ ಕಡೆಯಿಂದ ವಿದ್ಯೋದಯ ಶಾಲೆಯ ರಸ್ತೆಯ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 10-30 ಗಂಟೆಗೆ ಶಿವಳ್ಳಿ ಗ್ರಾಮದ ಸಾಯಿರಾಧ ಯಶೋಧಾಮ್ ಅಪಾರ್ಟಮೆಂಟ್ ಬಳಿ ತಲುಪುವಾಗ ಅದೇ ಮಾರ್ಗವಾಗಿ  ಶಾರದಾ ನಗರ ರಸ್ತೆ ಕಡೆಯಿಂದ ವಿದ್ಯೋದಯ ಶಾಲೆಯ ರಸ್ತೆಯ ಕಡೆಗೆ KA41B4621ನೇ ಟಿಪ್ಪರ್ ಚಾಲಕ ಪುಟ್ಟಪ್ಪ ಲಮಾಣಿ ಎಂಬಾತ  ತನ್ನ ಟಿಪ್ಪರ್ ನ್ನು ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಒಮ್ಮೆಲೆ ರಸ್ತೆಯ ತೀರಾ ಎಡಕ್ಕೆ ತಿರುಗಿಸಿದ ಪರಿಣಾಮ ನೇರವಾಗಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಪಿರ್ಯಾದುದಾರರ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ಬಲಕಾಲಿನ ಪಾದ ಬಳಿಯ ಗಂಟಿಗೆ ಮೂಳೆ ಮುರಿತದ ಗಾಯವಾಗಿ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 36/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕೊಲ್ಲೂರು: ಪಿರ್ಯಾದಿ ಬಸವರಾಜ್‌ ಎಂ ಇವರು ದಿನಾಂಕ: 15/04/2022 ರಂದು  ತನ್ನ ಬಾಬ್ತು  KA15 EA 9971 ನೇಮೋಟಾರ್ ಸೈಕಲ್ ನಲ್ಲಿ ತನ್ನ ಪತ್ನಿ  ಮಂಜುಳರವರನ್ನು  ಹಿಂಬದಿ ಸಹ ಸವಾರರಾಗಿ ಕುಳ್ಳಿರಿಕೊಂಡು ಮಾರಣಕಟ್ಟೆ  ದೇವಸ್ಥಾನಕ್ಕೆ ಬಂದು  ಬಳಿಕ  ವಾಪಾಸ್ ಮಾರಣಕಟ್ಟೆ ಕಡೆಯಿಂದ ನಿಟ್ಟೂರು ಕಡೆಗೆ  ಮೋಟಾರು ಸೈಕಲ್‌ನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಸಂಜೆ ಸಮಯ 6:45 ಗಂಟೆಗೆ ಕೊಲ್ಲೂರು ಗ್ರಾಮದ ರಾ.ಹೆ. ಹೆಗ್ಡೆಹಕ್ಲು ಧರ್ಮಪೀಠ ಕ್ರಾಸ್‌ ಬಳಿ ತಲುಪಿದಾಗ ಪಿರ್ಯಾಧುದಾರರ ಎದುರಿನಿಂದ ಸಿಗಂದೂರು  ಕಡೆಯಿಂದ ಕೊಲ್ಲೂರು ಕಡೆಗೆ KA 07 M 3194  ನೇ  ಕಾರನ್ನು  ಅದರ ಚಾಲಕ ಮಂಜುನಾಥರವರು ವೇಗವಾಗಿ ಅಜಾಗರೂಕತೆಯಿಂದ  ರಸ್ತೆಯ ತೀರ ಬಲಭಾಗಕ್ಕೆ ಚಲಾಯಿಸಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದುದಾರರು ಮತ್ತು ಸಹ ಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಬಲಬದಿಯ ಸೊಂಟ  ಹಾಗೂ ಬಲ ಕಾಲು  ಮೂಳೆ  ಮುರಿತವಾಗಿದ್ದು. ಹಿಂಬದಿ ಸಹ ಸವಾರರಾದ ಮಂಜುಳಯವರಿಗೆ ಎಡಕಾಲಿನ ಮೊಣಗಂಟಿನ ಬಳಿ  ಮತ್ತು ಹಿಮ್ಮಡಿ ಬಳಿ ರಕ್ತಗಾಯವಾಗಿದ್ದು ಪಿರ್ಯಾಧಿದಾರರು  ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿಯಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 19/2022 ಕಲಂ; 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 ಇತರ ಪ್ರಕರಣ

  • ಶಂಕರನಾರಾಯಣ: ದಿನಾಂಕ 15.04.2022 ರಂದು ಸುಮಾರು 23:30  ಘಂಟೆಗೆ  ಆರೋಪಿತ   1. ನಿವೇದ 2. ಶಾಶ್ವತ 3.ಸಾತ್ವಿಕ್  ಇವರುಗಳು ಯಾವುದೋ  ದುರುದ್ದೇಶದಿಂದ ಫಿರ್ಯಾದಿ ಅನುಷಾ  ಶೆಟ್ಟಿ  ಇವರ  ಮನೆಯ  ಅಂಗಳಕ್ಕೆ  ಅಕ್ರಮ ಪ್ರವೇಶ  ಮಾಡಿ  ಫಿರ್ಯಾದಿದಾರರಿಗೆ   ಹಾಗೂ  ಅವರ  ಮನೆಯವರಿಗೆ   ಅವಾಚ್ಯ  ಶಬ್ದದಿಂದ   ಬೈದು ಫಿರ್ಯಾದುದಾರರ ಅಣ್ಣ ಅವಿನಾಶ   ಶೆಟ್ಟಿ ಇವರಲ್ಲಿ   ಕೊಲ್ಲದೆ  ಬಿಡುವುದಿಲ್ಲ  ಎಂದು  ರಾಡ್  ತೋರಿಸಿ ಜೀವ  ಬೆದರಿಕೆ ಹಾಕಿ   ಎರಡು  ಮೋಟಾರ್   ಸೈಕಲ್‌‌ನಲ್ಲಿ   ಹೋಗಿರುವುದಾಗಿದೆ ಎಂಬಿತ್ಯಾದಿ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 45/2022  ಕಲಂ: 447 ,504,506(2)   r/w 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಫಿರ್ಯಾದಿ ವಾರಿಜ ಇವರ ಗಂಡ ಸುಧಾಕರ ದೇವಾಡಿಗ ( 52 ವರ್ಷ) ಇವರು ಹೆಬ್ರಿ ಗ್ರಾಮದ ದೇವಸ್ಥಾನ ಬೆಟ್ಟು ಎಂಬಲ್ಲಿ ಒಬ್ಬಂಟಿಯಾಗಿ ವಾಸ ಮಾಡಿಕೊಂಡಿದ್ದು. ಅವರು ವಿಪರೀತ ಮದ್ಯಪಾನ ಮಾಡುತ್ತಿರುವುದರಿಂದ ಅವರ ಪತ್ನಿ ಮತ್ತು ಮಕ್ಕಳು ಸುಮಾರು 2 ವರ್ಷಗಳ ಹಿಂದೆ ಹೆಬ್ರಿ ಗ್ರಾಮದ ಕನ್ಯಾನ ಎಂಬಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುತ್ತಾರೆ. ಸುಧಾಕರ ದೇವಾಡಿಗ ಇವರು ವಿಪರೀತ ಮದ್ಯಪಾನ ಮಾಡಿ ಮಾನಸಿಕ ಖಿನ್ಯತೆಗೆ ಒಳಗಾಗಿ ದಿನಾಂಕ; 15/04/2022 ರಂದು ರಾತ್ರಿ 10-00 ಗಂಟೆಯಿಂದ ಈ ದಿನ ದಿನಾಂಕ; 16/04/2022 ರಂದು ಬೆಳಿಗ್ಗೆ 07-00 ಗಂಟೆಯ ಮದ್ಯಾವಧಿಯಲ್ಲಿ ತನ್ನ ಮನೆಯಾದ ಹೆಬ್ರಿ ಗ್ರಾಮದ ದೇವಸ್ಥಾನ ಬೆಟ್ಟು ಎಂಬಲ್ಲಿ ನೇಣು ಹಾಕಿಕೊಂಡು ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 16/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 16-04-2022 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080