ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಮಣಿಪಾಲ: ಪಿರ್ಯಾದಿ ಅಶ್ವಥ್‌ ಕುಲಾಲ್  ಇವರು ದಿನಾಂಕ: 12.03.2022 ರಂದು ಬ್ಯಾಕಸಿನ್‌ ಹೋಟೆಲ್‌ನಲ್ಲಿ ಊಟ ಮುಗಿಸಿ ಬಾಕಸಿನ್‌ ಕಡೆಯಿಂದ ಏಕ ಮುಖ ರಸ್ತೆಯನ್ನು ದಾಟಿ ರಾ . ಹೆ 169(ಎ) ರಲ್ಲಿ ಮಣಿಪಾಲದಿಂದ ಉಡುಪಿಗೆ ಹೋಗುವ ರಸ್ತೆಯನ್ನು ದಾಟುತ್ತಿದ್ದ ಸಂದರ್ಭ  ರಾತ್ರಿ 10:30 ಗಂಟೆಗೆ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ  KA02JU4499 ನೇ ಮೋಟಾರ್‌ ಸೈಕಲ್‌ ಸವಾರನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಬಂದು ಪಿರ್ಯಾದಿದಾರರ ಸೊಂಟಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಮುಖಕ್ಕೆ ಪೆಟ್ಟಾಗಿ ಹಲ್ಲು ಮುರಿದಿರುತ್ತದೆ. ಹಾಗೂ ಅಪಘಾತದಲ್ಲಿ ಆಪಾದಿತನಿಗೂ ಸಣ್ಣಪುಟ್ಟ ನೋವಾಗಿರುತ್ತದೆ. ಪಿರ್ಯಾದಿದಾರರು ಈ ಬಗ್ಗೆ  ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು , ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 40/2022, ಕಲಂ; 279, 338  ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಹಿರಿಯಡ್ಕ: ದಿನಾಂಕ: 15/03/2022 ರಂದು 13:30 ಗಂಟೆಗೆ ಫಿರ್ಯಾದಿ ವಿಠಲ ದೇವಾಡಿಗ ಇವರ ತಂದೆ ಸೂರಪ್ಪ ದೇವಾಡಿಗ ಪೆರ್ಡೂರು ಅನಂತ ಭವನದ ಬಳಿ ರಾಹೆ 169ಎ ರ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದಾಗ ಪೆರ್ಡೂರು ಕಡೆಯಿಂದ ಉಡುಪಿ ಕಡೆಗೆ ಕಾರು ನಂಬ್ರ ಕೆಎ 20 ಎಂಎ 5209 ನೇದನ್ನು ಅದರ ಚಾಲಕ ಅಲ್ವಿನ್ ಡಿಸೋಜರವರು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಭಾಗಕ್ಕೆ ಬಂದು ಅವರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರು ಕೆಳಗೆ ಬಿದ್ದು, ಅವರ ಹಣೆಗೆ, ಕುತ್ತಿಗೆಗೆ ಎಡಕಾಲಿಗೆ ರಕ್ತಗಾಯವಾಗಿದ್ದು, ಅವರನ್ನು ಚಿಕಿತ್ಸೆಗೆ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾಗಿದೆ. ಈ ಬಗ್ಗೆ ಹಿರಿಯಡ್ಕ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 12/2022 ಕಲಂ :279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  

 ಅಸ್ವಾಭಾವಿಕ ಮರಣ ಪ್ರಕರಣ

  • ಕೊಲ್ಲೂರು: ಪಿರ್ಯಾಧಿ ಪ್ರಭಾಕರ ಶೆಟ್ಟಿ ಇವರ ಭಾವ (ಹೆಂಡತಿಯ ಅಣ್ಣ) ಶೈಲೆಂದ್ರ ಶೆಟ್ಟಿ (38) ಎಂಬುವರು ಕೊಲ್ಲೂರಿನಲ್ಲಿ ಜೀಪು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು  ಸುಮಾರು 15 ದಿನಗಳ ಹಿಂದೆ ಬೈಕ್ ನಲ್ಲಿ ಬಿದ್ದು  ಕೈ ಗೆ ಮೂಳೆಮುರಿತದ ಉಂಟಾಗಿ ಒಬ್ಬಂಟಿಯಾಗಿ ಕೊಲ್ಲೂರಿನ ವಿಷ್ಣುಮೂರ್ತಿ ಉಡುಪ ರವರ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದು ಅದೇ ಮನೆಯಲ್ಲಿ ಬೈಕ್ ನಲ್ಲಿ ಬಿದ್ದ ನೋವಿನಿಂದ ಮನನೊಂದು ಅಥವಾ ಯಾವುದೋ ವೈಯಕ್ತಿಕ ಕಾರಣದಿಂದ ಮಾಣಸಿಕ ಖಿನ್ನತೆಗೆ ಒಳಗಾಗಿ ದಿನಾಂಕ 14.03.2022 ರಂದು 17-30  ಗಂಟೆಯಿಂದ  ದಿನಾಂಕ 15.03.2022 ರಂದು 19-30ಗಂಟೆಯ ನಡುವಿನ ಅವಧಿಯಲ್ಲಿ ತಾನು ವಾಸಿಸುವ ಬಾಡಿಗೆ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು  ಮೃತಪಟ್ಟಿರುವುದಾಗಿರ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾಧಿ ಆನಂದ ಸಾಲಿಯಾನ್ ಇವರ ಅಣ್ಣ  ಸುಂದರ ಸಾಲಿಯಾನ್ ( ಪ್ರಾಯ: 65 ವರ್ಷ),  ರವರು ಮಲ್ಪೆಯಲ್ಲಿ  ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ,ಹೆಂಡತಿ ಮಕ್ಕಳೊಂದಿಗೆ   ಪಿತ್ರೋಡಿಯಲ್ಲಿ ವಾಸವಾಗಿರುತ್ತಾರೆ  , ಪಿರ್ಯಾದಿದಾರರ ಅಣ್ಣ ವಿಪರೀತ ಶರಾಬು  ಕುಡಿಯುವ  ಚಟ ಹೊಂದಿದ್ದು  ಮನೆಗೆ ಹೋಗದೆ ಮಲ್ಪೆ ಪರಿಸರದಲ್ಲಿ ಉಳಿದುಕೊಳ್ಳುತ್ತ್ರಿದ್ದರು,  ದಿನಾಂಕ: 06-03-2022 ರಂದು  ವಿಪರೀತ ಸರಾಬು  ಕುಡಿದು ಮಲ್ಪೆ  ಕಾರ್ತೀಕ್  ಹೊಟೇಲ್  ನ ಹತ್ತಿರ  ಆಯತಪ್ಪಿ  ಬಿದ್ದಿದ್ದು ,ಈಶ್ವರ ಮಲ್ಪೆ ರವರು ಸುಂದರ ಸಾಲಿಯಾನ್ ರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ  ಈ ದಿನ ದಿನಾಂಕ: 16-03-2022 ರಂದು  ಬೆಳಿಗ್ಗೆ08:15 ಗಂಟೆಗೆ  ಮೃತಪಟ್ಟಿರುತ್ತಾರೆ ,  ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 17/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 16-03-2022 06:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080