Feedback / Suggestions

ಅಪಘಾತ ಪ್ರಕರಣಗಳು

  • ಶಂಕರನಾರಾಯಣ:ದಿನಾಂಕ  14.01.2022  ರಂಧು ಫಿರ್ಯಾದಿ ರವೀಂದ್ರ ಪೂಜಾರಿ  ಪ್ರಾಯ 48 ವರ್ಷ ತಂದೆ,ನರಸಿಂಹ  ಪೂಜಾರಿ ವಾಸ,  ಮೂಡಹಿತ್ಲು  ಜಂಗರಬಾಳು  ಹಳ್ಳಿಹೊಳೆ ಗ್ರಾಮ   ಇವರ   ಮಗ ಭರತ್  ಪೂಜಾರಿ ಇವರು  ಕೆಎ.20 ಕ್ಯೂ .289 ನೇ ನಂಬ್ರದ   ಮೋಟಾರ್  ಸೈಕಲ್‌ನಲ್ಲಿ   ಬೈಂದೂರು  ತಾಲೂಕಿನ   ಹಳ್ಳಿಹೊಳೆ ಗ್ರಾಮದ  ಶಾಡಬೇರು  ಎಂಬಲ್ಲಿ ಹೋಗುತ್ತಿರುವಾಗ  ಆರೋಪಿಯು  ಕೆಎ, 20 ಎಎ.4367 ನೇ ನಂಬ್ರದ   ಆಟೋರಿಕ್ಷಾವನ್ನು  ಚಕ್ರಾ ಮೈದಾನ ಕಡೆಯಿಂದ  ಜಂಗರಬಾಳು ಕಡೆಗೆ ಅತೀ  ವೇಗ  ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು  ಮೋಟಾರ್ ಸೈಕಲ್‌ಗೆ   ಡಿಕ್ಕಿ   ಹೊಡೆದಿದ್ದು, ಇದರ  ಪರಿಣಾಮ  ಮೋಟಾರ್ ಸೈಕಲ್  ಸವಾರ  ಭರತ್  ಪೂಜಾರಿ   ಹಾಗೂ   ಆಟೋರಿಕ್ಷಾದಲ್ಲಿ  ಪ್ರಯಾಣ ಮಾಡುತ್ತಿದ್ದ  ಪವನ್  ಎಂಬುವರಿಗೆ ರಕ್ತಗಾಯವಾಗಿರುತ್ತದೆ, ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 7/2022  ಕಲಂ: 279,337,338.ಐ.ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಕುಂದಾಪುರ: ಮಾನ್ಯ ನ್ಯಾಯಾಲಯದಿಂದ ಖಾಸಗಿ ಪಿರ್ಯಧಿ ನಂ : 279/2021 ರಲ್ಲಿ ಪಿರ್ಯಾಧಿ ಶ್ರೀಮತಿ ಭಾಗೀರಧಿ ಬಾಯಿ @ ಲಕ್ಷ್ಮೀ ಪ್ರಭು  53 ವರ್ಷ ತಂದೆ  ದಿ ವಿನಾಯಕ ಕಾಮತ್ ವಾಸ: ನೇರಳಕಟ್ಟೆ ಕರ್ಕುಂಜೆ ಗ್ರಾಮ  ಕುಂದಾಪುರಇವರು ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ಸರ್ವೇ ನಂ : 166/1, 166/2,  175/6, & 175/5 ರಲ್ಲಿಯ ತಮ್ಮ ಕುಟುಂಬದ ಸ್ವಾದೀನದಲ್ಲಿರುವ ಜಾಗದಲ್ಲಿ ಬೆಳೆದ ತೆಂಗು ಅಡಿಕೆ ಮುಂತಾದ ಬೆಳೆಯ ಸಂರಕ್ಷಣೆಗಾಗಿ ಮಾನ್ಯ ನ್ಯಾಯಾಲ ಯದಿಂದ ಒ.ಎಸ್. ನಂಬ್ರ: 53/2017 ರಂತೆ ಮದ್ಯಾಂತರ ತಡೆಯಾಜ್ಞೆ ತಂದಿದ್ದು, ದಿ: 22-11-2022 ರಂದು 15-30 ಗಂಟೆ ಸಮಯಕ್ಕೆ ಪಿರ್ಯಾಧಿದಾರರಿಗೆ ಆರೋಪಿತರು 1] ದೇವೇಂದ್ರ ನಾಯಕ್ (62ವ) ತಂದೆ: ನರಸಿಂಹ ನಾಯಕ್ ವಾಸ:ನೇರಳಕಟ್ಟೆ ಕರ್ಕುಂಜೆ ಗ್ರಾಮ ಕುಂದಾಪುರ ತಾಲೂಕು 2] ಶೇಷಗಿರಿ ನಾಯಕ್ (33 ವ) ತಂದೆ: ದೇವೇಂದ್ರ ನಾಯಕ್ ವಾಸ: ನೇರಳಕಟ್ಟೆ ಕರ್ಕುಂಜೆ ಗ್ರಾಮ 3] ಆಶಾ ನಾಯಕ್ (28 ವ) ಗಂಡ: ಶೇಷಗಿರಿ ನಾಯಕ್ ವಾಸ: ನೇರಳಕಟ್ಟೆ ಕರ್ಕುಂಜೆ ಗ್ರಾಮ  ಇವರು ಸಮಾನ ಉದ್ದೇಶದಿಂದ ಬೆದರಿಕೆ ಹಾಕಿ ಬಳಿಕ 18-30 ರಿಂದ 19-00 ಗಂಟೆ  ಸಮಯಕ್ಕೆ ಪಿರ್ಯಾಧಿಯ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಗ್ರೇನೆಟ್ ಕಂಬವನ್ನು ಒಡೆದು ಅದಕ್ಕೆ ಅಳವಡಿಸಿದ ಗ್ರೀಲ್ಸ್ ಅನ್ನು ತುಂಡರಿಸಿ ಪಿರ್ಯಾಧಿ ದಾರರಿಗೆ ಸುಮಾರು 20,000/- ರೂ ನಷ್ಟ ಉಂಟು ಮಾಡಿರುವುದಾಗಿದೆ.ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 4/2022 ಕಲಂ: 427,447,506 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ದಿನಾಂಕ: 15-01-2022 ರಂದು ಬೆಳಿಗ್ಗೆ ಸುಮಾರು 10-00 ಗಂಟೆಗೆ  ಪಿರ್ಯಾದಿ ವಿಶ್ವನಾಥ ಶೆಟ್ಟಿ (56)  ತಂದೆ  ಮಂಜಯ್ಯ ಶೆಟ್ಟಿ ವಾಸ:  ವಿಸ್ಮಯ, ಕೀರ್ತನಾ ನಿಲಯ  ಸೌಕೂರು ಗುಲ್ವಾಡಿ ಗ್ರಾಮಕುಂದಾಪುರ ತಮ್ಮ ಹೆಂಡತಿ ಮಕ್ಕಳೋಂದಿಗೆ ಮನೆಯಲ್ಲಿರುವಾಗ  ಒಂದು  ದೊಡ್ಡ ಮರಳು ಲಾರಿ ತಮ್ಮ ಜಾಗದಲ್ಲಿ ಬರುತ್ತಿದ್ದು, ಆ ಸಮಯ ಪಿರ್ಯಾಧಿದಾರರು ತಮ್ಮ ಹೆಂಡತಿ ಮಕ್ಕಳೊಂದಿಗೆ ಸ್ಥಳಕ್ಕೆ ಹೊಗಿ ತಮ್ಮ ಜಾಗದಲ್ಲಿ ಲಾರಿ ಹೋಗಲು ಬಿಡುವುದಿಲ್ಲ ಎಂಬುದಾಗಿ ಹೇಳಿದಾಗ ಆರೋಪಿತರು ಸಮಾನ ಉದ್ದೇಶದಿಂದ ಪಿರ್ಯಾಧಿಯವರ ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳಿಗೆ  ಕೈನಿಂದ ತಳ್ಳಿ ಕಾಲಿನಿಂದ ತುಳಿದುದಲ್ಲದೇ ಹಾರೆ ಕಾವಿನಿಂದ ಹೊಡೆದಿ ರುತ್ತಾರೆ ಹಾಗೂ ತನಗೆ ಕೂಡ ಹೊಡೆದು  ಪೈಪ್ ಲೈನ್ ಗೆ ಹಾನಿ ಮಾಡಿರುತ್ತಾರೆ ತಮಗಾದ ಹಲ್ಲೆಯ ಬಗ್ಗೆ ಚಿಕಿತ್ಸೆ ಪಡೆವರೇ ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 05/2022 ಕಲಂ: 354,324,427, ಜೊತೆಗೆ 34  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ಪಿರ್ಯಾಧಿ ಸಂದೇಶ ಶೆಟ್ಟಿ  (26ವ) ಲಕ್ಷ್ಮಣ ಶೆಟ್ಟಿತಂದೆ  ಲಕ್ಷ್ಮಣ ಶೆಟ್ಟಿ ವಾಸ:  ರಮೀತ ನಿಲಯ ಸೌಕೂರು ಗುಲ್ವಾಡಿ ಗ್ರಾಮ ಇವರು  ದಿನಾಂಕ: 15-01-2022 ರಂದು ಬೆಳಿಗ್ಗೆ ಸುಮಾರು 10-30 ಗಂಟೆಗೆ ತಮ್ಮ ಮನೆಗೆ ಮರಳು ತಂದು ಲಾರಿ ವಾಪಾಸ್ ಹೋಗುವಾಗ ಆರೋಪಿತರು ಲಾರಿಯನ್ನು ತಡೆದು ಚಕ್ರಕ್ಕೆ ಅಡ್ಡ ಮಲಗಿದ್ದು, ಈ ಬಗ್ಗೆ ತಾನು, ತನ್ನ ಅಣ್ಣ ಸುಕೇಶ  ಶೆಟ್ಟಿ, ತಾಯಿ ಸಂತೋಷ ಕುಮಾರಿ ದೊಡ್ಡಮ್ಮ ರೇಖಾ ಶೆಡ್ತೀ ಸ್ಥಳಕ್ಕೆ ಬಂದು ಲಾರಿ ಬಿಡು ವಂತೆ ಕೇಳಿದಲ್ಲಿ  ಆರೋಪಿತರು  ರಸ್ತೆ ನಿಮ್ಮ ಅಪ್ಪನದಲ್ಲ ಎಂದು ಅವಾಚ್ಯವಾಗಿ ಬೈದು ತನ್ನ ತಾಯಿ  ಹಾಗೂ ದೊಡ್ಡಮ್ಮನಿಗೆ ಕಿವಿಗೆ ಹೊಡೆದು ಮೈಗೆ ಕೈ ಹಾಕಿ ದೂಡಿ ಹಾಗಿರು ತ್ತಾರೆ  ತಡೆಯಲು ಬಂದ ತನಗೂ ತನ್ನ ತಮ್ಮ ನಿಗೂ ಕೈನಿಂದ ತಳ್ಳಿ ತನ್ನ ತಾಯಿ ಹಾಗೂ ದೊಡ್ಡಮ್ಮನಿಗೆ ಕೈನಿಂದ ಹೊಡೆ ದಿದ್ದು, ತಮಗಾದ ಹಲ್ಲೆಯ ಬಗ್ಗೆ ಚಿಕಿತ್ಸೆ ಪಡೆವರೇ ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 06/2022 ಕಲಂ: 341,323,354,504 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ ನಗರ: ಪಿರ್ಯಾದಿ ರಶ್ಮಿತಾ, ಪ್ರಾಯ: 19 ವರ್ಷ, ತಂದೆ: ಉಮೇಶ, ವಾಸ: ಬಂದಲ್ಪಾಡಿ, ದರ್ಖಾಸು ಮನೆ, ಪಳ್ಳಿ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು. ಇವರ ತಂದೆ ಉಮೇಶ, ಪ್ರಾಯ: 50 ವರ್ಷ ರವರು  ದಿನಾಂಕ: 15.12.2022 ರಂದು ಬೆಳಗ್ಗೆ 07:30 ಗಂಟೆಗೆ ಕೆಲಸಕ್ಕೆಂದು ಮನೆಯಿಂದ ಹೋಗಿದ್ದು ಮದ್ಯಾಹ್ನ ಸುಮಾರು 01:00 ಗಂಟೆ ಸುಮಾರಿಗೆ ಪಿರ್ಯಾದಿದಾರರ ತಂದೆಯೊಂದಿಗೆ ಕೆಲಸ ಮಾಡುತಿದ್ದ ಶೇಖರರವರು ಪಿರ್ಯಾದಿದಾರರಿಗೆ ಕರೆ ಮಾಡಿ  ಉಮೇಶರವರು ಪಳ್ಳಿ ಗ್ರಾಮದ ಬಂಡಶಾಲೆ ವಿಶ್ವರಾಜ ಹೆಗ್ಗೆಡೆ ರವರ ತೋಟದಲ್ಲಿ ಅಡಿಕೆ ಮರದ ಬುಡದಲ್ಲಿ ಸ್ವಚ್ಚತೆ ಕೆಲಸ ಮಾಡುತಿದ್ದಾಗ ಶೌಚಕ್ಕೆಂದು ಹೋದವರು ಸ್ವಲ್ಪ ಸಮಯವಾದರು ವಾಪಾಸು ಕೆಲಸಕ್ಕೆ ಬಾರದೇ ಇದ್ದು ಹುಡುಕಿದಾಗ ತೋಟದ ಬದಿಯಲ್ಲಿರುವ ನೀರಿನ ತೋಡಿನಲ್ಲಿ ತಲೆ ಕೆಳಗಾಗಿ ಬಿದ್ದಂತಹ ಸ್ಥಿತಿಯಲ್ಲಿದ್ದು ಜೊತೆಯಲ್ಲಿದ್ದ ಗಣೇಶ ರವರು ಮೇಲಕ್ಕೆ ಎತ್ತಿ ನೋಡಿದಾಗ ಮೃತಪಟ್ಟ ಸ್ಥಿತಿಯಲ್ಲಿರುವುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು ತೋಟಕ್ಕೆ ಬಂದು ತಂದೆ ಉಮೇಶ ರವರ ಮೃತ ದೇಹವನ್ನು ನೋಡಿರುತ್ತಾರೆ. ಪಿರ್ಯಾದಿದಾರರ ತಂದೆ ಉಮೇಶರವರು ಅಸ್ತಮಾ ಖಾಯಿಲೆಯಿಂದ ಬಳಲುತಿದ್ದು ಕೆಲವೊಮ್ಮೆ ಫಿಟ್ಸ್ ಬಂದು ಬೀಳುತಿದ್ದು ಇದೇ ಕಾರಣದಿಂದ ಅಥವಾ ಬೇರೆ ಯಾವುದೋ ಅನಾರೋಗ್ಯದ ಕಾರಣದಿಂದ ಈ ದಿನ ದಿನಾಂಕ: 15.12.2022 ರಂದು ಬೆಳಗ್ಗೆ 11:30 ಗಂಟೆಯಿಂದ 12:45 ಗಂಟೆಯ ಮದ್ಯಾವಧಿಯಲ್ಲಿ  ಶೌಚಕ್ಕೆಂದು ನೀರಿನ ತೋಡಿನ ಬಳಿ ಹೋದವರು ತೋಡಿಗೆ ಬಿದ್ದು ಮೃತಪಟ್ಟಿದ್ದು  ಮೃತರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌ ನಂ 02/2022 ಕಲಂ 174 CRPCಯಂತೆ ಪ್ರಕರಣ ದಾಖಲಿಸಲಾಗಿದೆ.

Last Updated: 16-01-2022 11:29 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080