ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕುಂದಾಪುರ: ದಿನಾಂಕ 13/12/2021 ರಂದು 7:30  ಗಂಟೆಗೆ,ಕುಂದಾಪುರ  ತಾಲೂಕಿನ, ಕಟ್‌‌‌ಬೇಲ್ತೂರು  ಗ್ರಾಮದ  ಮುಳ್ಳುಕುಂಟೆ ಎಂಬಲ್ಲಿಯ  ಶಿವಶಂಕರ ಭಜನ ಮಂದಿರದ ಬಳಿ  ರಸ್ತೆಯಲ್ಲಿ, ಆಪಾದಿತ ಸಂಪತ್‌ ಎಂಬುವವರು KA-20-AA-9740ನೇ ಅಟೋರಿಕ್ಷಾವನ್ನು  ನೆಂಪು ಕಡೆಯಿಂದ ಹೆಮ್ಮಾಡಿ ಕಡೆಗೆ ಅತಿವೇಗ ಮತ್ತು  ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ರಸ್ತೆಯ ಬಲಬದಿಗೆ ಚಲಾಯಿಸಿ, ನಾಗೇಂದ್ರ ದೇವಾಡಿಗ ಎಂಬುವವರು ಹೆಮ್ಮಾಡಿ ಕಡೆಯಿಂದ  ನೆಂಪು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-20-AA-5440ನೇ ಅಟೋರಿಕ್ಷಾಕ್ಕೆ ಎದುರುಗಡೆ ಯಿಂದ  ಡಿಕ್ಕಿ ಹೊಡೆದ ಪರಿಣಾಮ ಅಟೋರಿಕ್ಷಾ  ರಸ್ತೆಯಲ್ಲಿ  ಮುಗುಚಿ ಬಿದ್ದು ನಾಗೇಂದ್ರ ದೇವಾಡಿಗರವರ ಸೊಂಟ, ಕಾಲುಗಳಿಗೆ ಗಂಭೀರ ಗಾಯ  ಹಾಗೂ ದೇಹದ ಇತರೆ ಅಂಗಾಂಗಗಳಿಗೆ ಗಾಯ ಹಾಗೂ  ಅಟೋರಿಕ್ಷಾದಲ್ಲಿದ್ದ  ಪ್ರಯಾಣಿಕ ಚಂದ್ರ ನಾಯ್ಕ ರವರರಿಗೆ ಎಡ ಕೈಗೆ ತುಂಡಾದ ಗಾಯ ಹಾಗೂ  ಇತರೆ ಅಂಗಾಂಗಗಳಿಗೆ ಗಾಯವಾಗಿ  ಕುಂದಾಪುರ  ಚಿನ್ಮಯಿ  ಆಸ್ಪತ್ರೆಯಲ್ಲಿ ಪ್ರಥಮ  ಚಿಕಿತ್ಸೆ  ಪಡೆದು ಹೆಚ್ಚಿನ ಚಿಕಿತ್ಸೆ  ಬಗ್ಗೆ ಮಣಿಪಾಲ  ಕೆ.ಎಂಸಿ ಆಸ್ಪತ್ರೆಗೆ  ಹೋಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ ನಂ 105/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  •  ಬೈಂದೂರು: ದಿನಾಂಕ 13/12/2021 ರಂದು ಸಂಜೆ  4:50 ಗಂಟೆಗೆ ಪಿರ್ಯಾದಿದಾರರಾದ ಫೂರ್ಣಿಮಾ ಶೆಟ್ಟಿ (42), ಗಂಡ: ಗೋವಿಂದ ಶೆಟ್ಟಿ, ವಾಸ: “ಸಮೃಧ್ಧ ನಿಲಯ” ಕೋಟೆಗದ್ದೆ ,  ಯರುಕೋಣೆ, ಹೇರೂರು ಗ್ರಾಮ ಬೈಂದೂರು ತಾಲೂಕು ಇವರು ತನ್ನ  KA-20-EK-4764 ನಂಬ್ರದ ಮೋಟಾರು ಸೈಕಲ್  ನಲ್ಲಿ ಮಗಳು ರಮ್ಯ ಶೆಟ್ಟಿ ಯವರನ್ನು ಹಿಂಬದಿಯಲ್ಲಿ ಕುಳ್ಳಿರಿಸಿ ಕೊಂಡು ಕಿರಿಮಂಜೇಶ್ವರದಿಂದ ತನ್ನ ಮನೆಯಾದ ಕೋಟೆಗದ್ದೆಗೆ  ರಸ್ತೆಯ ಎಡಬದಿಯಲ್ಲಿ  ಚಲಾಯಿಸಿಕೊಂಡು ಹೋಗುತ್ತಿರುವಾಗ ಮೋಟಾರು ಸೈಕಲಿನ   ಹಿಂಬದಿಯಿಂದ ಕಿರಿಮಂಜೇಶ್ವರ ಕಡೆಯಿಂದ ಕೋಟೆಗದ್ದೆ ಕಡೆಗೆ  ಆರೋಪಿ KA-20-C- 9843 ರ ರಿಕ್ಷಾ ಚಾಲಕ  ಉದಯ ಅಟೋ ರಿಕ್ಷಾವನ್ನು ಅತೀವೇಗವಾಗಿ ಚಲಾಯಿಸಿ ಕೊಂಡು ಬಂದು ಮಡ್ಲಗೇರಿ ದುರ್ಗಪರಮೇಶ್ವರಿ ದೇವಸ್ಥಾನದ ಬಳಿ ಪಿರ್ಯಾದಿದಾರರ ಮೋಟಾರು ಸೈಕಲನ್ನು ಓವರ್ ಟೇಕ್ ಮಾಡಿ ರಸ್ತೆಯ ಎಡ ಬದಿಯಲ್ಲಿ ಹೋಗುತ್ತಿದ್ದ  ಪಿರ್ಯಾದಿದಾರರ ಮೋಟಾರು ಸೈಕಲನ ಬಲಬದಿಗೆ ರಿಕ್ಷಾ ಡಿಕ್ಕಿ ಹೊಡೆದು ಪೂರ್ಣಿಮಾ ಶೆಟ್ಟಿ ಮತ್ತು ಮಗಳು ರಮ್ಯ ಶೆಟ್ಟಿ  ಮೋಟಾರು ಸೈಕಲ್  ಸಮೇತ ರಸ್ತೆಗೆ ಬಿದ್ದ  ಅಪಘಾತದ ಪರಿಣಾಮ ಫೂರ್ಣಿಮಾ ಶೆಟ್ಟಿ ಯವರಿಗೆ ಬಲಕಾಲಿಗೆ ತರಚಿದ ಗಾಯ,  ಬಲಕೈಗೆ ಒಳನೋವು ಮತ್ತು ಮಗಳು ರಮ್ಯಾ ಶೆಟ್ಟಿಯವರಿಗೆ ಬಲ ಕಾಲಿಗೆ ಮತ್ತು ಎರಡೂ ಕೈಗಳಿಗೆ ಒಳನೋವು ಆಗಿದ್ದು, ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 205/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 15-12-2021 09:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080