ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಲ್ಪೆ: ಪಿರ್ಯಾದಿ ಸತೀಶ  ಇವರ ಅಣ್ಣ ಜಗನ್ನಾಥ ಅಮೀನ್ ರವರು ದಿನಾಂಕ: 14-11-2022 ರಂದು ಸಂಜೆ ಸುಮಾರು 6:30 ಗಂಟೆಗೆ ತೊಟ್ಟಂನ ಸುಜಾತ ಹೋಟೆಲ್ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮಲ್ಪೆ ಕಡೆಯಿಂದ ಬಂದ ದುರ್ಗಾಚರಣ್ ಬಸ್ಸಿನ ಚಾಲಕ ಬಸ್ಸನ್ನು ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಜಗನ್ನಾಥ ಅಮೀನ್ ರವರಿಗೆ ಡಿಕ್ಕಿ ಹೊಡೆದಿದ್ದು ಆ ಸಮಯ ಬಸ್ಸು ಬ್ರೇಕ್ ಹಾಕಿದಾಗ ಬಸ್ಸಿನಲ್ಲಿದ್ದ  ಇಂದಿರ ಎಂಬ ಮಹಿಳೆಯು ಬಸ್ಸಿನಿಂದ ಹೊರಗೆ ಬಿದ್ದಿರುತ್ತಾರೆ, ಈ ಅಪಘಾತದಿಂದ ಜಗನ್ನಾಥ ಅಮೀನ್ ರವರಿಗೆ ಕೈ ಕಾಲು ಮುಖಕ್ಕೆ ರಕ್ತಗಾಯ ಹಾಗೂ ಇಂದಿರ ರವರಿಗೆ ಕೈ ಕಾಲು ತಲೆಗೆ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 96/2022 ಕಲಂ: 279, 337,338 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ

  • ಮಲ್ಪೆ: ಪಿರ್ಯಾದಿ ನಯಾಜ್ @ ಅಬ್ದುಲ್  ನಯಾಜ್ ದಾರರು ತನ್ವೀರ್ ಎಂಬವರ ಮಾಲಕತ್ವದ ಟಿ ಎಂ ಟಿ ಕೆಎ 20 ಬಿ 2486 ನೇ  ನಂಬ್ರದ ಬಸ್ಸಿನಲ್ಲಿ ನಿರ್ವಾಹಕನಾಗಿ ಕೆಲಸ ಮಾಡಿಕೊಂಡಿದ್ದು , ದಿನಾಂಕ:14-11-2022 ರಂದು ಮಧ್ಯಾಹ್ನ 12:10 ರ ವೇಳೆಗೆ ಉಡುಪಿ ಸಿಟಿ ಬಸ್ಸ್ ನಿಲ್ದಾಣದಲ್ಲಿ  ಪಿ ಎಂ ಟಿ ಬಸ್ಸಿನ ನಿರ್ವಾಹಕರಾದ ನಾರಾಯಣ ಎಂಬುವರೊಂದಿಗೆ ಬಸ್ಸಿನ ಟೈಮಿಂಗ್ ವಿಷಯವಾಗಿ ಪಿರ್ಯಾದಿದಾರರಿಗೆ ಮಾತಿಗೆ ಮಾತು ಬೆಳೆದು ಜಗಳವಾಗಿರುತ್ತದೆ. ಅದೇ ವಿಷಯಕ್ಕೆ ಪಿರ್ಯಾದಿದಾರರು ಮಲ್ಪೆಯಿಂದ ಹೂಡೆಗೆ ಬಸ್ಸಿನಲ್ಲಿ  ಹೋಗುವಾಗ ಸಂಜೆ ಸಮಯ 7:55 ಗಂಟೆಗೆ ತೊಟ್ಟಂ ಕರಾವಳಿ ಯುವಕ ಮಂಡಲ ಬಳಿ ಎರಡು  ಜನ ವ್ಯಕ್ತಿಗಳು ರಸ್ತೆಯಲ್ಲಿ ನಿಂತು ಬಸ್ಸನ್ನು  ನಿಲ್ಲಿಸಿದ್ದು , ಪಿರ್ಯಾದಿದಾರರ ಬಸ್ಸಿನ ಚಾಲಕ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವರೇ   ಬಸ್ಸ ನ್ನು ನಿಲ್ಲಿಸಿದ್ದು ,ಆ ಸಮಯ ಹತ್ತು ಜನರು ಬಸ್ಸಿನ   ಹಿಂಬದಿ, ಮುಂದಿನ ಬಾಗಿಲಿನಲ್ಲಿ  ಹತ್ತಿದ್ದು ,ಅದರಲ್ಲಿ 4-5 ಜನರು ಪಿರ್ಯಾದಿದಾರರು ಕುಳಿತಿದ್ದ  ಸೀಟಿನ ಬಳಿ  ಬಂದು ,ಆ ಪೈಕಿ  ಪಿ.ಎಂ.ಟಿ ಬಸ್ಸಿನ  ಚಾಲಕರಾದ ಗಣೇಶ  ಎಂಬವರು ಪಿರ್ಯಾದಿದಾರರ  ಶರ್ಟ್  ನ ಕ್ವಾಲರ್  ನ್ನು ಹಿಡಿದು ಯಾಕೆ  ನಾರಾಯಣ ನಿಗೆ  ಬಸ್ಸಿನ  ಟೈಮಿಂಗ್ ವಿಚಾರದಲ್ಲಿ  ಬೈದು ಗಲಾಟೆ ಮಾಡಿದ್ದು ಎಂದು ಹೇಳಿ ಆತನ ಕೈಯಲ್ಲಿದ್ದ  ಹೆಲ್ಮೇಟ್  ನಿಂದ ಪಿರ್ಯಾದಿದಾರರ  ತಲೆಯ  ಎಡಭಾಗಗಕ್ಕೆ  ಹೊಡೆದಿದ್ದು , ಪರಿಣಾಮ ಪಿರ್ಯಾದಿದಾರರ ತಲೆ ರಕ್ತಗಾಯವಾಗಿರುತ್ತದೆ.  ಅದೇ ಸಮಯದಲ್ಲಿ  ಆರೋಪಿತರಾದ ಶಿಶಿರ  ಹಾಗೂ  ವಿಜಯ ಎಂಬುವರು ಪಿರ್ಯಾದಿದಾರರ ಶರ್ಟ್  ನ ಕ್ವಾಲರ್  ನ್ನು ಹಿಡಿದು  ಕೆನ್ನೆಗೆ  ಹೊಡೆದಿರುತ್ತಾರೆ. ಆ ವೇಳೆಗೆ ಬಸ್ಸಿನ  ಚಾಲಕರಾಗಿದ್ದ ಪಿರ್ಯಾದಿದಾರರ ತಂದೆ ಅಬ್ದುಲ್  ನಜೀರ್ ರವರು ಗಲಾಟೆಯನ್ನು ಬಿಡಿಸಿದ್ದು,ನಂತರ ಅವರೆಲ್ಲರು ಬಸ್ಸಿನಿಂದ ಇಳಿದು ಹೋಗಿರುತ್ತಾರೆ. ಪಿರ್ಯಾದಿದಾರರಿಗೆ  ಆರೋಪಿತರು ಹಲ್ಲೆ ಮಾಡುವ ಸಮಯ ಬಸ್ಸಿನ ಟಿಕೇಟ್  ನೀಡುವ ಮಿಷಿನ್  ಓಡೆದು ಹೋಗಿರುತ್ತದೆ.  ಹಾಗೂ ಗಲಾಟೆಯ ಸಮಯ  ಪಿರ್ಯಾದಿದಾರರ ಮೊಬೈಲ್  ಬಿದ್ದು ಕಾಣೆಯಾಗಿರುತ್ತದೆ.ಆರೋಪಿತರು ಬಸ್ಸಿನಿಂದ ಹೋಗುವಾಗ ಹೆಲ್ಮೇಟಿನಿಂದ  ಬಸ್ಸಿನ  ಕಿಟಕಿಯ ಗ್ಲಾಸ್ ನ್ನು ಓಡೆದು ಹೋಗಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 97/2022 ಕಲಂ: 427,341,504,143,147,148,323,324, ಜೊತೆಗೆ 149 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-11-2022 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080