ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

  • ಕುಂದಾಪುರ: ದಿನಾಂಕ 13/11/2021 ರಂದು ಪಿರ್ಯಾದಿದಾರರಾದ ಪ್ರತಾಪ ದೇವಾಡಿಗ (31), ತಂದೆ: ರುದ್ರ ದೇವಾಡಿಗ, ವಾಸ: ದುರ್ಗಾ ನಿಲಯ ಮೌರಿಕಾರರ ಮನೆ ರಥ ಬೀದಿ ಸೌಕೂರು ಗುಲ್ವಾಡಿ ಗ್ರಾಮ ಕುಂದಾಪುರ ತಾಲೂಕು ಇವರು ಸಂಜೆ 19:30 ಗಂಟೆಗೆ ಸೌಕೂರು ದೇವಸ್ಥಾನಕ್ಕೆ ದೇವರ ದರ್ಶನಕ್ಕೆಂದು ಬಂದಿದ್ದು ಆ ಸಮಯ ದೇವಸ್ಥಾನದಲ್ಲಿದ್ದ  ಆರೋಪಿತ ಹರೀಶ ದೇವಾಡಿಗ ಎಂಬಾತನು ಪಿರ್ಯಾದಿದಾರನ್ನು ನೋಡಿ ಗುರಾಯಿಸಿ ಗಲಾಟೆ ಮಾಡುವುದಿದ್ದರೆ ಬಾ ಎಂದು ಹೇಳಿದ್ದು ಆಗ ಪಿರ್ಯಾದಿದಾರರು ಏನೂ ತಪ್ಪು  ಮಾಡದೇ ಯಾರಿಗೂ  ಎನೂ ಮಾಡುವುದಿಲ್ಲ  ಎಂದು ಹೇಳಿದ್ದು  ಆ ಸಮಯ  ಹರೀಶನು ಏಕಾಏಕಿ ಪಿರ್ಯಾದಿದಾರರ ಮೇಲೆ ಬಂದು ಆತನ ಕೈಯಿಂದ ಕುತ್ತಿಗೆಗೆ ಒತ್ತಿ ಹಿಡಿದು ಪಿರ್ಯಾದಿದಾರರು ತಪ್ಪಿಸಿ ಕೊಂಡಾಗ ಮುಷ್ಥಿಯಿಂದ ಕುತ್ತಿಗೆಯ ಎಡ ಬದಿಗೆ ಗುದ್ದಿದ್ದು ಹಾಗೂ ಕಾಲಿನಿಂದ ಎದೆ ಮತ್ತು ಎಡ ಬದಿಯ ಕಿಬೋಟ್ಟೆಗೆ ತುಳಿದಿರುತ್ತಾನೆ. ಆಗ ಪಿರ್ಯಾದಿದಾರರು ಆಯತಪ್ಪಿ ನೆಲದ ಮೇಲೆ  ಬಿದಿದ್ದು ಎದ್ದು ಮುಂದಕ್ಕೆ ಹೋಗಲು ಯತ್ನಿಸಿದಾಗ ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಪುನ: ಕೈಯಿಂದ ಹೊಡೆದಿರುತ್ತಾನೆ. ಈ ವೇಳೆಗೆ ಗಲಾಟೆಯನ್ನು ನೋಡಿ ದೇವಸ್ಥಾನದಲ್ಲಿ ಇದ್ದವರು ಬರುವುದನ್ನು ಕಂಡ ಹರೀಶ ಜೀವ ಬೆದರಿಕೆ ಹಾಕಿ ಹೋಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 66/2021 ಕಲಂ: 323, 341,  506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-11-2021 09:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080