ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಶಿರ್ವಾ: ದಿನಾಂಕ 14/09/2021 ರಂದು ಪಿರ್ಯಾಧಿದಾರರಾದ ಸುಶನ್‌.ಪಿ.ಸಿ (39) ತಂದೆ: ದಿ: ಚಿನ್ನಯ ಮೆಂಡನ್‌, ವಾಸ: ಮನೆ ನಂ. 10-47 ನಡಿಪಟ್ಲ, ಚಿರಶ್ರೀ ಪ್ರಸಾದ್‌, ನಡ್ಸಾಲು ಗ್ರಾಮ, ಪಡುಬಿದ್ರೆ, ಹಾಲಿ ವಾಸ: ಕೇರಾಫ್‌ಪ್ರಗತಿ, 7-3-31 ಬಿ1, ಸಾಯಿರಾಧ ಗೋಕುಲ್‌ ದಾಮ ಬಳಿ, ಬೈಲಕೆರೆ, ಉಡುಪಿ ಇವರು ತನ್ನ ದ್ಚಿಚಕ್ರ ವಾಹನ ನಂಬ್ರ KA-20-EX-0833 ನೇದರಲ್ಲಿ ಕೆಲಸ ಮುಗಿಸಿ ವಾಪಾಸು ಉಡುಪಿಗೆ ಬೆಳ್ಮಣ್‌ಶಿರ್ವ ಮಾರ್ಗವಾಗಿ ಬರುತ್ತಿರುವಾಗ ಸಮಯ ಸುಮಾರು 7:30 ಗಂಟೆಗೆ ಕುರ್ಕಾಲು ಗ್ರಾಮದ ಶಂಕರಪುರ ದುರ್ಗಾನಗರ ಬಸ್‌ನಿಲ್ದಾಣದ ಬಳಿ ತಲುಪುವಾಗ ಎದುರುಗಡೆಯಿಂದ ಅಂದರೆ ಶಂಕರಪುರ ಕಡೆಯಿಂದ ಶಿರ್ವಾ ಕಡೆಗೆ ಕೆಎ-20-ಇಟಿ-8691 ನೇ ಮೋಟಾರ್ ಸೈಕಲ್ ಸವಾರ ಚಂದ್ರಶೇಖರ ಎಂಬಾತನು ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬೇರೊಂದು ವಾಹನವನ್ನು ಓವರ್‌ಟೇಕ್ ಮಾಡುವ ಬರದಲ್ಲಿ ರಸ್ತೆಯ ತೀರಾ ಬದಿಗೆ ಬಂದು ಸುಶನ್‌.ಪಿ.ಸಿ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ದ್ವಿಚಕ್ರವಾಹನ ಸಮೇತ ರಸ್ತೆಗೆ ಬಿದ್ದು, ಸುಶನ್‌.ಪಿ.ಸಿ ರವರ ಎಡಕೈಯ ಭುಜಕ್ಕೆ ಮೂಳೆ ಮುರಿತದ ಒಳ ಜಖಂ ಹಾಗೂ ಬಲ ಕೈಯ ಮೂರು ಬೆರಳಿಗೆ ಹಾಗೂ ಮಣಿಗಂಟಿಗೆ ಮೂಳೆ ಮುರಿತದ ಜಖಂ ಆಗಿರುತ್ತದೆ. ಎಡ ಕಾಲಿನ ಹೆಬ್ಬೆರಳಿಗೆ ಹಾಗೂ ಎಡ ಕೈಯ ಅಂಗೈಯ ಮೇಲ್ಬದಿ ತರಚಿದ ಗಾಯವಾಗಿದ್ದು, ಡಿಕ್ಕಿ ಹೊಡೆದ ಬೈಕ್‌ ಸವಾರನ ತಲೆಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಉದಯ ನಾಯ್ಕ (35) ಈತನು ಆತನ ವಾಸದ ಮನೆಯಾದ ಹೆಬ್ರಿ ತಾಲೂಕಿನ  ಅಲ್ಬಾಡಿ ಗ್ರಾಮದ ತೊನ್ನಾಸೆ ಎಂಬಲ್ಲಿ ಮೈ ಕೈ ನೋವು ಹಾಗೂ ವಾಂತಿ ಎಂದು ಮಲಗಿದ್ದು, ನಂತರ  ದಿನಾಂಕ 14/08/2021 ರಂದು 23:30 ಘಂಟೆಗೆ ತೀವ್ರ ಅಸ್ವಸ್ತಗೊಂಡ ಉದಯ ನಾಯ್ಕ ಇವನನ್ನು  ಕೂಡಲೇ  ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಿನಾಂಕ 15/08/2021 ರಂದು ಬೆಳಿಗ್ಗಿನ ಜಾವ ಸುಮಾರು  1:30 ಘಂಟೆಗೆ ಕರೆದುಕೊಂಡು ಬಂದಾಗ ಅಲ್ಲಿ ಆತನನ್ನು ಪರೀಕ್ಷಿಸಿದ ವೈದ್ಯರು ಉದಯ ನಾಯ್ಕ  ಮೃತಪಟ್ಟಿರುತ್ತಾನೆ ಎಂದು ತಿಳಿಸಿರುವುದಾಗಿದೆ, ಎಂಬುದಾಗಿ ಸುಧೀರ (28) ತಂದೆ, ಬಾಗಡು ನಾಯ್ಕ ವಾಸ, ತೊನ್ನಾಸೆ  ಅಲ್ಬಾಡಿ ಗ್ರಾಮ ಹೆಬ್ರಿ ತಾಲೂಕು ಇವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 33/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಸುರೇಶ್ ವಿ ಬಂಗೇರ (60) ತಂದೆ: ದಿ/ ವಿ ಐ ಬಂಗೇರ ವಾಸ: ಗುರುಕೃಪಾ ಕೊರಂಗ್ರಪಾಡಿ ಗ್ರಾಮ, ಮತ್ತು ಪೋಸ್ಟ್ ಉಡುಪಿ ಇವರು ಸುಮಾರು 8 ವರ್ಷಗಳಿಂದ ಮನೆ ನಂಬ್ರ 2/108 ಸಿ5ಎ, ಗೋಪಾಲಪುರ 4 ನೇ ಕ್ರಾಸ್ ಕಲ್ಯಾಣಪುರ ಸಂತೆಕಟ್ಟೆ ಎಂಬಲ್ಲಿರುವ ನಾದಿನಿಯ ಮನೆಯನ್ನು ಅವರುಗಳು ಪೂನಾದಲ್ಲಿ ಇರುವುದರಿಂದ ವಾರಕೊಮ್ಮೆ ಬಂದು ನೋಡಿಕೊಂಡು ಹೋಗುತ್ತಿದ್ದು, ದಿನಾಂಕ 13/09/2021ರಂದು ಮಧ್ಯಾಹ್ನ 2:30 ಗಂಟೆಯ ಸಮಯಕ್ಕೆ ನಾದಿನಿಯ ಮನೆಗೆ ಹೋಗಿ ಬಂದಿದ್ದು, ದಿನಾಂಕ 15/09/2021 ರಂದು ಬೆಳಿಗ್ಗೆ 9:15 ಗಂಟೆಯ ಸಮಯಕ್ಕೆ ಮನೆಯ ಹೊರ ಕೆಲಸಕ್ಕೆ ಬರುವ ಅನಿತಾ ಎಂಬವರು ಕರೆಮಾಡಿ ಮನೆಯ ಗೇಟು ಮತ್ತು ಹಿಂಬದಿ ಬಾಗಿಲು ತೆರೆದಿರುವ ಬಗ್ಗೆ ಹಾಗೂ ಮನೆಯ ಮುಂದೆ ನಿಲ್ಲಿಸಿದ ಕಾರು ಇರುವುದಿಲ್ಲ ಎಂಬ ವಿಚಾರ ತಿಳಿಸಿದ್ದು ಸುರೇಶ್ ವಿ ಬಂಗೇರ ರವರು ಹೋಗಿ ನೋಡಲಾಗಿ ಯಾರೋ ಕಳ್ಳರು ಮನೆಯ ಹಿಂಬದಿಯ ಬಾಗಿಲಿನ ಚಿಲಕವನ್ನು ಮುರಿದು ಬಾಗಿಲನ್ನು ಬಲತ್ಕಾರವಾಗಿ ತೆಗೆದು, ಮನೆಯ ಒಳಗೆ ಪ್ರವೇಶಿಸಿ ಸೋನಿ ಕಂಪೆನಿಯ ಟಿ.ವಿ-1 ಅಂದಾಲು ಮೌಲ್ಯ 30,000 ಹಾಗೂ ಎಮ್ ಹೆಚ್ 12 ಇಎಕ್ಸ್ 2180 ನೇ ಕಾರು ಅಂದಾಲು ಮೌಲ್ಯ 1,40,000, ಹಾಗೂ 3,000/- ರೂಪಾಯಿಯ ಇತರ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 132/2021 ಕಲ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-09-2021 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080