ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 14.07.2022 ರಂದು ಪಿರ್ಯಾದಿ ಕೃಷ್ಣ ಇವರು ತನ್ನ ಬಾಬ್ತು KA.20.EN.2065 ನೇ  ACTIVA SCOOTER ನಲ್ಲಿ ಬ್ರಹ್ಮಾವರ ದಿಂದ ದೂಪದಕಟ್ಟೆಯಲ್ಲಿರುವ ತನ್ನ ಗ್ಯಾರೇಜ್‌ಗೆ ಹೋಗುವರೇ  ರಾ.ಹೆ 66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಮಧ್ಯಾಹ್ನ 12:15 ಗಂಟೆಗೆ ಚಾಂತಾರು ಗ್ರಾಮದ ಬ್ರಹ್ಮಾವರ ಆಶ್ರಯ ಹೊಟೇಲ್‌ನಿಂದ ಸ್ವಲ್ಪ ಮುಂದುಗಡೆ ತಲುಪುವಾಗ ಅವರ ಬದಿಯಿಂದಲೇ ಆರೋಪಿಯು ತನ್ನ ಬಾಬ್ತು KA.20.AA.2577  ನೇ ಈಚರ್‌ ಲಾರಿಯನ್ನು ನಿರ್ಲಕ್ಷತನದ ಮತ್ತು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಬಲ ಭಾಗಕ್ಕೆ ಒಮ್ಮೆಲೇ ಚಲಾಯಿಸಿದ್ದರಿಂದ ಪಿರ್ಯಾದಿದಾರರ ಸ್ಕೂಟರ್‌ನ ಎಡಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದ ಪರಿಣಾಮ ಪಿರ್ಯಾದಿದಾರರು ಡಾಮಾರು ರಸ್ತೆಯ ಮೇಲೆ ಬಿದ್ದು ಅವರ ಎಡಕೈ ಮೊಣಗಂಟು ಮೂಳೆ ಮುರಿತ ಗಾಯ , ಬಲ ಕೈ ಮೊಣಗಂಟಿಗೆ, ಮೇಲ್ದ್‌ವಡೆಗೆ ತರಚಿದ ಗಾಯವಾಗಿದ್ದು, ಗಾಯಗೊಂಡ ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಮಹೇಶ್‌ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 118/2022 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 15.07.2022 ರಂದು ಪಿರ್ಯಾದಿ ತುಕಾರಾಮ್‌ ನಿಡವಂಜೆ ಇವರು ಬ್ರಹ್ಮಾವರ ದೂಪದಕಟ್ಟೆಯಲ್ಲಿರುವ ತನ್ನ ಬಾಡಿಗೆ ಮನೆಯಂದ ತನ್ನ ಬಾಬ್ತು KA.20.EE.1678 ನೇ ನಂಬ್ರದ ಹೀರೋ ಗ್ಲ್ಯಾಮರ್‌ ಮೋಟಾರ್‌ ಸೈಕಲ್‌ನಲ್ಲಿ ಹೇರೂರಿನಲ್ಲಿರುವ ಹ್ಯಾಂಗ್ಯೊ ಐಸ್‌ ಕ್ರೀಮ್‌ ಕಂಪೆನಿಗೆ ಕೆಲಸಕ್ಕೆಂದು ಹೊರಟು ಬ್ರಹ್ಮಾವರ – ಉಡುಪಿ ರಾಹೆ 66 ರ ರಸ್ತೆಯ ಎಡ ಅಂಚಿನಲ್ಲಿ ನಿಧಾನವಾಗಿ ಸವಾರಿ ಮಾಡಿಕೊಂಡು ಹೋಗುತ್ತಾ  ಬೆಳಿಗ್ಗೆ 08:20 ಗಂಟೆಯ ಸುಮಾರಿಗೆ 52 ನೇ ಹೇರೂರು ಗ್ರಾಮದ, ದೂಪದಕಟ್ಟೆ ದೂಪದಕಟ್ಟೆ ಮಹಾಶಕ್ತಿ ಸ್ಟೀಲ್‌ ರೈಲಿಂಗ್ಸ್‌ ಅಂಗಡಿ ಎದುರು ತಲುಪುವಾಗ ಅವರ ಬಲಗಡೆಯಲ್ಲಿ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡುತ್ತಿದ್ದ ಆರೋಪಿಯು ಅವರ  ಬಾಬ್ತು KA.20.EN.6911 ನೇ Suzuki Access 125 ಸ್ಕೂಟರ್‌ನ್ನು ಯಾವುದೇ ಸೂಚನೆ ನೀಡದೇ ಇಂಡಿಕೇಟರ್‌ ಹಾಕದೇ, ಓಕಾ ಎಕಿ ನಿರ್ಲಕ್ಷತನದಿಂದ ಒಮ್ಮೆಲೇ ಎಡ ಬದಿಗೆ ಸವಾರಿ ಮಾಡಿದ್ದರಿಂದ  ಪಿರ್ಯಾದಿದಾರರ ಮೋಟಾರ್‌ ಸೈಕಲ್‌  ಆರೋಪಿಯ ಸ್ಕೂಟರ್‌ನ ಎಡಬದಿಗೆ ಡಿಕ್ಕಿಯಾಗಿ ಇಬ್ಬರೂ ರಸ್ತೆಯ ಮೇಲೆ ಬಿದ್ದಿದ್ದು, ಈ ಅಪಘಾತದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ಗಾಯ ಹಾಗೂ ಬಲಕೈ ಮೊಣಗಂಟಿಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 119/2022 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿ ವಸಂತ ಶೆಟ್ಟಿ, ಇವರು ಕೆನರಾ ಬ್ಯಾಂಕ್, ಬ್ರಹ್ಮಾವರ ಶಾಖೆ ಇಲ್ಲಿ ಬ್ಯಾಂಕ್ ಖಾತೆ ಹೊಂದಿದ್ದು, ಅದೇ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ನಂಬ್ರ ಹೊಂದಿರುತ್ತಾರೆ. ದಿನಾಂಕ 13.07.2022 ರಂದು ಪಿರ್ಯಾದಿದಾರರು ಖರೀದಿಸಿದ್ದ ಶೂ ನ್ನು ಹಿಂತಿರುಗಿಸುವ ಬಗ್ಗೆ ಕರೆ ಮಾಡಿದಾಗ ನಿಮ್ಮ ಶೂ ಹಣವನ್ನು ಹಿಂತಿರುಗಿಸಲು ನಿಮ್ಮ ಕ್ರೆಡಿಟ್ ಕಾರ್ಡ್ ವಿವರ ಒದಗಿಸುವಂತೆ ಸೂಚಿಸಿದ ಮೇರೆಗೆ ಪಿರ್ಯಾದಿದಾರರು ಕ್ರೆಡಿಟ್ ಕಾರ್ಡ್ ವಿವರ ಒದಗಿಸಿದ್ದು, ಆ ಬಳಿಕ ಅವರ ಕ್ರೆಡಿಟ್ ಕಾರ್ಡ್ ನಿಂದ ಅದೇ ದಿನ ರೂ. 20,290/-, ರೂ. 15,217/- ಹಾಗೂ ರೂ. 3,554/- ಒಟ್ಟು ರೂ. 39,061/- ಹಣವನ್ನು ಯಾರೋ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರ ಗಮನಕ್ಕೆ ಬಾರದೇ ಅನಧೀಕೃತವಾಗಿ ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ ಪಿರ್ಯಾದಿದಾರರಿಗೆ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 32/2022 ಕಲಂ : 66(c), 66(d) ಐ.ಟಿ. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ‌ಕುಂದಾಪುರ: ಪಿರ್ಯಾದಿ ಮುತ್ತಪ್ಪ ಪೂಜಾರಿ ಇವರು ದಿನಾಂಕ:15-07-2022 ರಂದು ಬೆಳಿಗ್ಗೆ 09:00 ಸಮಯಕ್ಕೆ ಕಟ್‌‌ಬೆಲ್ತೂರು ಗ್ರಾಮದ ಹರೆಗೋಡು ಎಂಬಲ್ಲಿ ಮನೋಜ್ ಶೆಟ್ಟಿಯವರ ಸಿಗಡಿ ಕೆರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಮಯ ಆರೋಪಿ ರಾಘವೇಂದ್ರ ನು ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ನೀನು ನಮಗೆ ಕೆಲಸ ಇಲ್ಲದ ಹಾಗೆ ಮಾಡಿದ್ದಿಯಾ ನಿಮ್ಮನ್ನು ಹೇಗೆ ಓಡಿಸಬೇಕೆಂದು ಗೊತ್ತಿದೆ ಎಂದು ಹೇಳಿದಕ್ಕೆ ಪಿರ್ಯಾದಿದಾರರು ಆರೋಪಿಯಲ್ಲಿ  ಇಲ್ಲಿಂದ ಹೋಗು ಎಂದು ಹೇಳಿದ್ದಕ್ಕೆ ಬಾರಿ ಮಾತನಾಡುತ್ತಿಯಾ ಎಂದು ಪಿರ್ಯಾದಿದಾರರು ಇದ್ದಲ್ಲಿಗೆ ಬಂದು ಕೈಯಿಂದ ದೂಡಿ ನಂತರ ಅಲ್ಲೇ ಹತ್ತಿರದಲ್ಲಿದ್ದ ಬಿದಿರಿನ ಕೋಲನ್ನು ತಂದು ಪಿರ್ಯಾದಿದಾರರಿಗೆ ಅಲ್ಲಿಂದ ಹೋಗದಂತೆ ತಡೆ ಮಾಡಿ ಬಿದಿರಿನ ಕೋಲಿನಿಂದ ಎಡಗೈ ರಟ್ಟೆಗೆ ಹೊಡೆದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 33/2022 ಕಲಂ:341,323,324,504,506 ಐಪಿಸಿಯಂತೆ ಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿ ಸುಮಂತ್‌ ಎಸ್‌ ಆಚಾರ್ಯ ಇವರು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ನರ್ಮ್‌ ಬಸ್‌ ನಿಲ್ದಾಣದ ಎದುರು ಇರುವ ‘ನಮ್ಮ ಮೊಬೈಲ್‌’ ಎಂಬ ಮೊಬೈಲ್‌ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 14/07/2022 ರಂದು ಬೆಳಿಗ್ಗೆ 09:45 ಗಂಟೆಗೆ ಅಂಗಡಿಗೆ ಬಂದ ಓರ್ವ ಅಪರಿಚಿತ ವ್ಯಕ್ತಿ ಮೊಬೈಲ್‌ ಬೇಕು ಎಂದು ಕೇಳಿದ್ದು, ಪಿರ್ಯಾದುದಾರರು ಮೊಬೈಲ್‌ ತೆಗೆದುಕೊಳ್ಳುತ್ತಿರುವಾಗ ಅಂಗಡಿಯ ಒಳಗೆ ಟೇಬಲ್‌ ನಲ್ಲಿ ಇಟ್ಟಿದ್ದ ರೂ. 500/- ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 112/2022 ಕಲಂ:  379 ಐಪಿಸಿಯಂತೆ ಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿ ಪ್ರಶಾಂತ ನಾಯಕ್ ಇವರು ಕೊಂಕಣ ರೈಲ್ವೆ ಸ್ಟೇಷನ್ ಕುಂದಾಪುರದಲ್ಲಿ ರೈಲ್ವೆ ಟ್ರ್ಯಾಕ್ ಮ್ಯಾನ್ ಆಗಿ  ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 15/07/2022 ರಂದು ಬೆಳಿಗ್ಗೆ 8.15 ಗಂಟೆಗೆ ಕೆದೂರು  ಗ್ರಾಮದ  ಟೈಲ್ವೆ ಟ್ರ್ಯಾಕ್ ನ 666/3 -666/2 ರ ಪಶ್ಚಿಮ ಬದಿಯಲ್ಲಿ  ನೀರಿನ ತೋಡಿನಲ್ಲಿ ಒಂದು ಗಂಡಸಿನ ಮೃತ ಶರೀರ ಇರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಬಂದು ನೋಡಿದಾಗ ತಲೆಯ ಹಿಂಬದಿ ತೀವೃ ಗಾಯಗೊಂಡು ಮೃತಪಟ್ಟಿದ್ದು ಕಂಡು ಬಂದಿರುತ್ತದೆ. ಮೃತ ಶರೀರವು ನಿತ್ಯಾನಂದ ಶೇಟ್ ಎಂಬುವುದಾಗಿ ನಂತರ ತಿಳಿದು ಬಂದಿರುತ್ತದೆ. ಮೃತರು ದಿನಾಂಕ 15/07/2022 ರಂದು  ಬೆಳಿಗ್ಗೆ1.00 ಗಂಟೆಯಿಂದ 8.15 ಗಂಟೆಯ ಮಧ್ಯಾವಧಿಯಲ್ಲಿ ರೈಲಿನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಅಥವಾ ಬೇರೆ ಕಾರಣಕ್ಕಾಗಿ ಕೆಳಗೆ ಬಿದ್ದು ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 30/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 15-07-2022 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080