ಅಭಿಪ್ರಾಯ / ಸಲಹೆಗಳು


                  ದಿನಾಂಕ 14/01/2022 ರಂದು ಶ್ರೀಮತಿ ಲಕ್ಷ್ಮಿ, (54) ಗಂಡ: ಸತೀಶ್‌ ರಾವ್‌ ವಾಸ: ಕುಂದಾಪುರ ಇವರು ಸಂಕ್ರಾತಿ ಪ್ರಯುಕ್ತ ಕುಂದಾಪುರದಿಂದ ಉಡುಪಿ ಕೃಷ್ಣ ಮಠಕ್ಕೆ ಬಂದಿದ್ದು, ಮಧ್ಯಾಹ್ನ 12:45 ಗಂಟೆಗೆ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ತೀರ್ಥ ಪಡೆಯುವಾಗ 3 ಜನ ಮಹಿಳೆಯರು ಹಾಗೂ ಇಬ್ಬರು ಗಂಡಸರು ಸೇರಿ ಲಕ್ಷ್ಮಿ ರವರ ಬಟ್ಟೆಯ ಕೈ ಚೀಲದ ಒಂದು ಬದಿಯನ್ನು ಯಾವುದೋ ಹರಿತವಾದ ಆಯುಧದಿಂದ ಹರಿದು ಚೀಲದಲ್ಲಿದ್ದ ಸಣ್ಣ ಪರ್ಸ್‌ನ್ನು ಕಳವು ಮಾಡಿದ್ದು, ಪರ್ಸ್‌ನಲ್ಲಿ ರೂ. 10,000/- ನಗದು, ಮನೆಯ ಬೀಗ ಹಾಗೂ ಕೆಲವು ಬಿಲ್‌ಗಳು ಕಳವಾಗಿದ್ದು, ಈ ಬಗ್ಗೆ ದಿನಾಂಕ 15/01/2022 ರಂದು ಶ್ರೀಮತಿ ಲಕ್ಷ್ಮಿ ರವರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.

           ಮಾನ್ಯ ಪೊಲೀಸ್‌ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ಕೈಗೊಂಡು ಕೃಷ್ಣಮಠದ ರಥಬೀದಿಯಲ್ಲಿರುವ ಸಿಸಿ ಕ್ಯಾಮರಾ ಹಾಗೂ ಡ್ರೋನ್‌ ಕ್ಯಾಮರಾಗಳ ಪುಟೇಜ್‌ ಪರಿಶೀಲನೆ ನಡೆಸಿದಾಗ ಆರೋಪಿಗಳ ಚಲನವಲನದ ಬಗ್ಗೆ ಉಡುಪಿ ನಗರ ಠಾಣೆಯ ಅಪರಾಧ ವಿಭಾಗದ ಅಧಿಕಾರಿ/ಸಿಬ್ಬಂದಿಯವರು ಮಾಹಿತಿ ಕಲೆ ಹಾಕಿ ಪತ್ತೆ ಮಾಡಿ ಆರೋಪಿತರಾದ 1) ತಮ್ಮಿ ಶೆಟ್ಟಿ ಮಣಿ 2) ಪ್ರೀಯಾಂಕ  ಕಾಕಣಿ   3) ಇಟ್ಟಾ  ಜಾನ್ಸಿ 4) ಇಟ್ಟಾ ಸಾಗರ  5) ಹರಿಬಾಬು  ಎಲ್ಲರೂ ಆಂಧ್ರಪ್ರದೇಶ ರಾಜ್ಯದ ನೆಲ್ಲೂರು ವಾಸಿಗಳಾಗಿದ್ದು, ಈ ದಿನ ದಿನಾಂಕ 15/01/2022 ರಂದು ಬೆಳಿಗ್ಗೆ 09:45 ಗಂಟೆಗೆ ದಸ್ತಗಿರಿ ಮಾಡಿ, ಆರೋಪಿತರಿಂದ ಕಳವಾದ ರೂ. 10,000/- ವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಆರೋಪಿತರು ನಗರದ ಶ್ರೀರಾಮ್‌ ರೆಸಿಡೆನ್ಸಿ ಎಂಬ ಲಾಡ್ಜ್‌ ನಲ್ಲಿ ತಂಗಿದ್ದು, ತೆಲುಗು ಮಾತನಾಡುವವರಾಗಿರುತ್ತಾರೆ. ಇವರುಗಳು ಪ್ರವಾಸಿ ಕೇಂದ್ರಗಳಲ್ಲಿ ಪಿಕ್‌ ಪಾಕೇಟ್‌, ಪರ್ಸ್‌/ವ್ಯಾನಿಟಿ ಬ್ಯಾಗ್‌, ಚಿನ್ನಾಭರಣ ಕಳವು ಮಾಡುವ ಪ್ರವೃತ್ತಿಯವರಾಗಿರುತ್ತಾರೆ. ಇವರುಗಳು ಮುಂಬರುವ ಕೃಷ್ಣ ಮಠದ ಪರ್ಯಾಯೋತ್ಸವ ಸಮಯದಲ್ಲಿ ಬೇರೆ ಬೇರೆ ರೀತಿಯ ಕಳವು ಮಾಡಲು ಸಂಚು ರೂಪಿಸಿರುವುದಾಗಿ ತಿಳಿದು ಬಂದಿರುತ್ತದೆ.

                   ಪ್ರಕರಣದ ಆರೋಪಿ ಪತ್ತೆ ಕಾರ್ಯಾಚರಣೆಯು ಮಾನ್ಯ ಪೊಲೀಸ್‌ ಅಧೀಕ್ಷಕರಾದ ಶ್ರೀ ಎನ್‌. ವಿಷ್ಣುವರ್ಧನ್‌, ಐ.ಪಿ.ಎಸ್‌, ಉಡುಪಿ ರವರ ಆದೇಶದಂತೆ, ಶ್ರೀ ಕುಮಾರಚಂದ್ರ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಶ್ರೀ ಸುಧಾಕರ ಸದಾನಂದ ನಾಯ್ಕ್, ಡಿವೈಎಸ್‌ಪಿ ಉಡುಪಿ ರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ, ಪೊಲೀಸ್ ಉಪ-ನಿರೀಕ್ಷಕರಾದ ವಾಸಪ್ಪ ನಾಯ್ಕ್, ಪ್ರೋಬೇಷನರಿ ಪಿ.ಎಸ್.ಐ ರವರಾದ ಪ್ರಸಾದ, ಸುಹಾಸ್‌, ಎಎಸ್‌ಐ ವಿಜಯ್‌,  ಸಿಬ್ಬಂದಿಯವರಾದ ಜೀವನ್‌ ಕುಮಾರ್‌, ಸತೀಶ್, ಲೋಕೇಶ್‌, ಆಶಾಲತಾ, ರೂಪ, ಸಂತೋಷ್ ರಾಠೋಡ್,  ಬಾಲಕೃಷ್ಣ, ಶ್ರೀಮತಿ ಸುಷ್ಮ, ರಿಯಾಜ್ ಅಹ್ಮದ್, ಕಾರ್ತಿಕ್‌, ಗಂಗಾಧರಪ್ಪ ರವರು ರವರು ಪಾಲ್ಗೋಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 15-01-2022 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080