ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ : ಫಿರ್ಯಾದಿ ಸಾಗರ್ ಸಿ.ಎಸ್ ಪ್ರಾಯ: 21 ವರ್ಷ, ತಂದೆ: ಶಿವಪ್ಪ ಸಿ.ಡಿ, ವಾಸ: ಚೋಳೇನಹಳ್ಳಿ, ಅಗ್ರಹಾರ ಅಂಚೆ, ಕುಂಬೇನಹಳ್ಳಿ, ಚೆನ್ನರಾಯಪಟ್ಟಣ ತಾಲೂಕು ರವರು KA-53 C-3345  ನೇ ಲಾರಿಯಲ್ಲಿ ಚಾಲಕ ಆರ್ ಮಂಜೇಶ್ವರ್  ರವರ ಜೊತೆಗೆ ಕಂಡಕ್ಟರ್ ಆಗಿ ದಿನಾಂಕ: 11-06-2022 ರಂದು ಬೆಂಗಳೂರಿನಿಂದ ಪೈಪ್ ಲೋಡ್ ಮಾಡಿಸಿಕೊಂಡು ಭಟ್ಕಳಕ್ಕೆ ಹೊರಟಿರುತ್ತಾರೆ.  ಚಾಲಕ ಆರ್ ಮಂಜೇಶ್ವರ್ ರವರು ಲಾರಿಯನ್ನು ಚಲಾಯಿಸುತ್ತಾ ದಿನಾಂಕ: 13-06-2022 ರಂದು ಕುಂದಾಪುರ ಕಡೆಯಿಂದ  ಭಟ್ಕಳಕ್ಕೆ ರಾ.ಹೆ 66 ರಸ್ತೆಯಲ್ಲಿ ಹೋಗುತ್ತಿರುವಾಗ ಬೈಂದೂರು ತಾಲೂಕು, ಮರವಂತೆ ಗ್ರಾಮದ ಮರವಂತೆ ರಾಮ ಮಂದಿರದ ಬಳಿ ತಲುಪುವಾಗ ಬೆಳಗಿನ ಜಾವ ಸಮಯ ಸುಮಾರು 2:00 ಗಂಟೆಗೆ ಚಾಲಕ ಆರ್ ಮಂಜೇಶ್ವರ್ ರವರು ಲಾರಿಯನ್ನು ಅತೀವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಒಮ್ಮೆಲೇ ಎಡಕ್ಕೆ ಚಲಾಯಿಸಿದ ಪರಿಣಾಮ ಚಾಲನಾ ಹಿಡಿತ ತಪ್ಪಿ ಲಾರಿಯು ಮಗುಚಿ ರಸ್ತೆಯಿಂದ ಕೆಳಗೆ ಅಡ್ಡ ಬಿದ್ದು ಲಾರಿಯ ಶೇಪ್, ಬಂಡಿ, ಬ್ಲೇಡ್‌ ಹಾಗೂ ಇತರ ಭಾಗ ಜಖಂ ಆಗಿರುತ್ತದೆ. ಫಿರ್ಯಾದಿದಾರರಿಗೆ ಹಾಗೂ ಚಾಲಕನಿಗೆ ಯಾವುದೇ ಗಾಯ ಆಗಿರುವುದಿಲ್ಲ. ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 51/2022 ಕಲಂ: 279, ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.   

ಗಂಡಸು ಕಾಣೆ ಪ್ರಕರಣ

  • ಉಡುಪಿ : ಫಿರ್ಯಾದಿ ಬಿ.  ಪ್ರದೀಪ್‌ ಪೈ,  ಪ್ರಾಯ: 36  ವರ್ಷ,ತಂದೆ:  ಬಿ.  ಪ್ರಕಾಶ್‌ ಪೈ, ವಾಸ: 'ನಿಸರ್ಗ  ಹೌಸ್‌',  ಕೋಟ್ನ ಕಟ್ಟೆ, ರಾಜಾಜಿ  ರಸ್ತೆ, ಹಿರಿಯಡ್ಕ  ಅಂಚೆ,  ಬೊಮ್ಮರಬೆಟ್ಟು  ಗ್ರಾಮ, ಇವರ ತಂದೆಯಾದ ಬಿ.  ಪ್ರಕಾಶ  ಪೈ (67  ವರ್ಷ)ರವರು ಹಿರಿಯಡ್ಕದ  ಕೋಟ್ನಕಟ್ಟೆಯ 'ನಿಸರ್ಗ ಹೌಸ್‌'ನಲ್ಲಿ ವಾಸವಿದ್ದವರು, ದಿನಾಂಕ: 13/06/2022 ರಂದು  ಬೆಳಿಗ್ಗೆ  11:30  ಗಂಟೆಯ  ಸುಮಾರಿಗೆ  ಉಡುಪಿಯ  ಸರ್ವೀಸ್‌ ಬಸ್‌ನಿಲ್ದಾಣದ  ಬಳಿಯಿರುವ  ಡಾ. ಆರ್‌ಎನ್‌ ಭಟ್‌ರವರ  ಕ್ಲಿನಿಕ್‌ಗೆ ಚಿಕಿತ್ಸೆಯ  ಬಗ್ಗೆ  ಬಂದವರು  ಇದುವರೆಗೂ   ವಾಪಾಸು  ಮನೆಗೆ  ಬಾರದೇ, ಮೊಬೈಲ್‌ ಸಂಪರ್ಕಕ್ಕೂ ಸಿಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 97/2022 ಕಲಂ: ಗಂಡಸು ಕಾಣೆ  ಯಂತೆ ಪ್ರಕರಣ ದಾಖಲಿಸಲಾಗಿದೆ.  

ಇತ್ತೀಚಿನ ನವೀಕರಣ​ : 14-06-2022 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080