Feedback / Suggestions

ಅಪಘಾತ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಜಗದೀಶ ಆಚಾರ್ಯ (42), ತಂದೆ: ನರಸಿಂಹ ಆಚಾರ್ಯ , ವಾಸ: ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ, ಕುಂದಬಾರಂದಾಡಿ ಗ್ರಾಮ, ಕುಂದಾಪುರ ತಾಲೂಕು ಇವರು ತನ್ನ KA-20-EE-3904 ನೇ ಮೋಟಾರ್‌ಸೈಕಲ್‌ನಲ್ಲಿ ಹೆಂಡತಿ ಸುಲೇಖ, ಹಾಗೂ ಮಗಳನ್ನು ಸಹಸವಾರನ್ನಾಗಿ ಕುಳ್ಳಿರಿಸಿಕೊಂಡು ಕುಂದಬಾರಂದಾಡಿ ಕಡೆಯಿಂದ ಕಟ್ಟಿನಮಕ್ಕಿ ಕಡೆಗೆ, ಹೋಗುತ್ತಿರುವಾಗ ಕುಂದಬಾರಂದಾಡಿ ಗ್ರಾಮದ ಕೊಳೂರು ಕ್ರಾಸ್ ಬಳಿ ಸಂಜೀವ ಗಾಣಿಗ ರವರ ಮನೆಯ ಹತ್ತಿರ ಡಾಂಬಾರು ರಸ್ತೆಯಲ್ಲಿ ಹೋಗುತ್ತಿರುವಾಗ 15:40 ಗಂಟೆಗೆ ಅದೇ ದಿಕ್ಕಿನಲ್ಲಿ ಕುಂದಬಾರಂದಾಡಿ ಕಡೆಯಿಂದ ಕಟ್ಟಿನಮಕ್ಕಿ ಕಡೆಗೆ   KA-25-P-3543 ನೇ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿ ಪಿರ್ಯಾದಿದಾರರ ಮೋಟಾರು ಸೈಕಲ್‌ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಹೆಂಡತಿ ಮತ್ತು ಮಗಳು ಮೋಟಾರ್‌ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಹೆಂಡತಿ ಸುಲೇಖ ರವರಿಗೆ ತಲೆಯ ಹಿಂಭಾಗಕ್ಕೆ ರಕ್ತ ಗಾಯವಾಗಿದ್ದು, ಎಡ ಬದಿಯ ಭುಜಕ್ಕೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ಸುಲೇಖ ರವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತೋರಿಸಿದಲ್ಲಿ ವೈದ್ಯರು ಪರೀಕ್ಷಿಸಿ 16:05 ಗಂಟೆಗೆ ಸುಲೇಖ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2023 ಕಲಂ: 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ದಿನಾಂಕ 13/03/2023 ರಂದು ಪಿರ್ಯಾದಿದಾರರಾದ ಸಜೀಷ್‌.ಟಿ. (48), ತಂದೆ:ತಂಗಪ್ಪನ್‌ ಆಚಾರಿ,  ವಾಸ:ಪೊಯಿಕಯಿಲ್‌ ಉದಯನಗರ ಮುದೂರು  ಗ್ರಾಮ ಬೈಂದೂರು ತಾಲೂಕು ಉಡುಪಿ ಜಿಲ್ಲೆ ಇವರು  ತನ್ನ  ಕಾರನ್ನುದೇವಲ್ಕಂದದಲ್ಲಿರುವ ವೆಲ್ಡಿಂಗ್‌ಶಾಪ್‌ಗೆ ಹೋಗಲು ಕೊಲ್ಲೂರು-ಕುಂದಾಪುರ  ರಾಜ್ಯ ಹೆದ್ದಾರಿ ಯಲ್ಲಿ ಜಡ್ಕಲ್‌ ಕಡೆಯಿಂದ ಹೆಮ್ಮಾಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದಾಗ ಬೆಳಿಗ್ಗೆ 07:15 ಗಂಟೆಗೆ ಚಿತ್ತೂರು ಗ್ರಾಮದ ಹಾರ್ಮಣ್ಣು ಶ್ರೀ. ಬ್ರಹ್ಮಲೀಂಗೇಶ್ವರ ಹಾರ್ಡ್‌ವೇರ್‌ ಅಂಗಡಿ ಸಮೀಪ ತಲುಪಿದಾಗ ಪಿರ್ಯಾದಿದಾರರ ಕಾರಿನ  ಎದುರಿನಿಂದ ಚಿತ್ತೂರು ಕಡೆಯಿಂದ ಜಡ್ಕಲ್ ಕಡೆಗೆ ಆರೋಪಿ ಪೌಲೋಸ್‌ರವರು KA-20-MB-0506 ನೇ ಕಾರನ್ನು ತಿರುವು  ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ಹತೋಟಿ ತಪ್ಪಿ  ತೀರ ಬಲಬದಿಗೆ ಹೋಗಿ  ರಸ್ತೆ ಬದಿಯಲ್ಲಿರುವ ಸಾಗುವಾಣಿ ಮರಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ  ಶೆಲ್ಬಿ ರವರಿಗೆ ಹಣೆಗೆ ರಕ್ತ ಗಾಯ  ಮತ್ತು   ಕುತ್ತಿಗೆ  ಗುದ್ದಿದ ಒಳನೋವು  ಉಂಟಾಗಿರುತ್ತದೆ. ಬಾಲಕಿ ಶ್ರೇಯಾಗೆ ಎಡಕಾಲಿನ ಮೂಳೆ ಮುರಿತದ  ಪೆಟ್ಟಾಗಿರುತ್ತದೆ. ಬಾಲಕ ಅಭೀನ್‌ಜೋನ್‌ಗೆ ಎಡ ಕೈ ಮತ್ತು ತುಟಿಗೆ ಪೆಟ್ಟಾಗಿರುತ್ತದೆ.  ಆರೋಪಿ ಪೌಲೋಸ್‌ರವರಿಗೆ ಎದೆಗೆ ಗುದ್ದಿದ ಒಳನೋವು ಮತ್ತು ಬಲಕಾಲಿನ ಬೆರಳಿಗೆ ರಕ್ತಗಾಯದ ಪೆಟ್ಟಾಗಿರುತ್ತದೆ.ಗಾಯಳುಗಳು ಕುಂದಾಪುರ  ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 13/2023 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ : ಪಿರ್ಯಾದಿದಾರರಾದ ಸುಧಾಕರ ಶೆಟ್ಟಿ (60), ತಂದೆ: ಕಾಡ್ಯ ಶೆಟ್ಟಿ, ವಾಸ: ಮಹಬಲಾಡಿ ಬಲ್ಲಾಡಿ ಮುದ್ರಾಡಿ ಗ್ರಾಮ ಹೆಬ್ರಿ ತಾಲೂಕು ಇವರ ತಾಯಿ ಕಮಲ ಶೆಡ್ತಿ (86) ಇವರು 15 ವರ್ಷಗಳಿಂದ ಮಾನಸಿಕ ಖಾಯಿಲೆ ಯಿಂದ ಬಳಲುತ್ತಿದ್ದು. ಈ ಬಗ್ಗೆ ಮಣಿಪಾಲ ಅಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮಾಡಿಸಿದರೂ ಗುಣಮುಖವಾಗಿರುವುದಿಲ್ಲ. ಈ ಬಗ್ಗೆ ಅವರು ಮಾನಸಿಕ ಖಿನ್ಯತೆಗೆ ಒಳಗಾಗಿದ್ದು.  ದಿನಾಂಕ 13/03/2023 ರಂದು ಮದ್ಯಾಹ್ನ 2:30 ಗಂಟೆಯಿಂದ ಸಂಜೆ 6:00 ಗಂಟೆಯ ಮದ್ಯಾವದಿಯಲ್ಲಿ  ಕಮಲ ಶೆಡ್ತಿ ರವರು ಮೇಲಿನ ಕಾರಣದಿಂದ ಜೀವನದಲ್ಲಿ ಜಿಗುಷ್ಯೆಗೊಂಡು ಮುದ್ರಾಡಿ ಗ್ರಾಮದ ಬಲ್ಲಾಡಿಯ ಮಹಬಲಾಡಿ ಎಂಬಲ್ಲಿ ತನ್ನ ಮನೆಯ ಒಳಗಿನ ಕೋಣೆಯ ಮೇಲಿನ ಮರದ ಜಂತಿಗೆ ನೈಲಾನ್ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 07/2023 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಉಡುಪಿ: ಪಿರ್ಯಾದಿದಾರರಾದ ನಿತ್ಯಾನಂದ ಒಳಕಾಡು (66), ತಂದೆ: ದಿ. ರಾಮ, ವಾಸ: ಮನೆ ನಂಬ್ರ 4-419ಎ1, ನಿಮ್ಮ ಮನೆ, ಶಾಂತಿನಗರ ಮುಖ್ಯರಸ್ತೆ, ಮಣಿಪಾಲ, ಉಡುಪಿ ತಾಲೂಕು ಇವರು ದಿನಾಂಕ 13/03/2023 ರಂದು ಮಧ್ಯಾಹ್ನ 12:30 ಗಂಟೆಗೆ ಸಾರ್ವಜನಿಕರೊಬ್ಬರು ಕರೆ ಮಾಡಿ ಉಡುಪಿ ಕಲ್ಸಂಕ ಜಂಕ್ಷನ್‌ ಬಳಿ ಕನಕಮಾಲ್‌ ನ ಪಾಳು ಬಿದ್ದ ಕಟ್ಟಡದಲ್ಲಿ ಓರ್ವ ಅಪರಿಚಿತ ಯುವಕನ ಮೃತದೇಹ ಇರುವುದಾಗಿ ತಿಳಿಸಿದ ಮೇರೆಗೆ, ಕೂಡಲೇ ಪಿರ್ಯಾದಿದಾರರು  ಆಂಬ್ಯುಲೆನ್ಸ್‌ ನೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ, ನೆಲ ಮಹಡಿಯಲ್ಲಿ ಅಂದಾಜು 30 ರಿಂದ 35 ವರ್ಷ ಪ್ರಾಯದ ಅಪರಿಚಿತ ಯುವಕನ ಮೃತದೇಹ ನೆಲದಲ್ಲಿ ರಕ್ತಸಿಕ್ತವಾಗಿ ಮುಖ ಕವುಚಾಗಿ ಬಿದ್ದಿದ್ದು, ಯುವಕನ ಹೆಸರು ವಿಳಾಸ ವಿವರಗಳು ತಿಳಿದು ಬಂದಿರುವುದಿಲ್ಲ. ಆತನ ಎಡಭುಜದಲ್ಲಿ ಹಾಗೂ ಕಿಬ್ಬೊಟ್ಟೆಯಲ್ಲಿ ಗಾಯವಿದ್ದು, ಎಡಗಣ್ಣಿನ ಬಳಿ ಜಜ್ಜಿದ ಗಾಯವಿದ್ದು, ಕಿವಿಯಿಂದ ರಕ್ತ ಸೋರಿರುತ್ತದೆ. ಮೃತ ಯುವಕನು ಎತ್ತರದಿಂದ ಬಿದ್ದೊ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 11/2023 ಕಲಂ: 174  (3)&(iv) CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ವೀಣಾ (42), ಗಂಡ: ಪೀಟರ್ ಡಿ ಅಲ್ಮೇಡಾ, ವಾಸ: ಗಿಪ್ಟ್ ಆಫ್ ಗಾಡ್, ಕೊಯಿಲಬೆಟ್ಟು ಮನೆ, ತೆಳ್ಳಾರ್, ದುರ್ಗಾ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಮಡಿ ನಿವಾಸಿ  ಪೀಟರ್ ಡಿ ಅಲ್ಮೇಡಾ ಇವರನ್ನು ವಿವಾಹವಾದ ಬಗ್ಗೆ ದ್ವೇಷದಿಂದ ಪೀಟರ್ ಡಿ ಅಲ್ಮೇಡಾರವರ ದೊಡ್ಡಮ್ಮನ ಮಗ ರಿಚಾರ್ಡ್ ಡಿ ಅಲ್ಮೇಡಾ ಇವರು ಪಿರ್ಯಾದಿದಾರರು ವಾಸವಿರುವ ಕಾರ್ಕಳ ತಾಲೂಕು, ದುರ್ಗಾ ಗ್ರಾಮದ ತೆಳ್ಳಾರ್ ಕೊಯಿಲಬೆಟ್ಟು ಎಂಬಲ್ಲಿ ಮನೆಯ ಬಳಿಗೆ ದಿನಾಂಕ 09/03/2023 ರಂದು ಬೆಳಗ್ಗೆ 11:00 ಗಂಟೆಗೆ ಕಾರು ನಂಬ್ರ KA-20-Z-6487 ನೇಯದರಲ್ಲಿ ಬಂದು ಸುತ್ತಮುತ್ತಲಿನವರಿಗೆ ಕೇಳಿಸುವಂತೆ  ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಹಾಕಿ ಕಾರಿನಲ್ಲಿ ತೆರಳಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 35/2023 ಕಲಂ: 504, 506 ಐಪಿಸಿ ಮತ್ತು 3(1)(S),3(1)(r), ಎಸ್ ಸಿ/ಎಸ್ ಟಿ ತಿದ್ದುಪಡಿ ಆದ್ಯಾದೇಶ- 2014 ರಂತೆ ಪ್ರಕರಣ ದಾಖಲಾಗಿರುತ್ತದೆ .

Last Updated: 14-03-2023 09:46 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080