ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಹಿತಾಕ್ಷ, (48) ತಂದೆ: ದಿ. ಶಂಕರ ಬಂಗೇರ, ವಾಸ: ಗುರು ಕೃಪಾ, ಮೂಡಬೆಟ್ಟು, ಎರ್ಮಾಳು ಬಡಾ ಗ್ರಾಮ, ಅದಮಾರು ಅಂಚೆ, ಕಾಪು ತಾಲೂಕು, ಉಡುಪಿ ಇವರು ಕಾಪು ತಾಲೂಕು ತೆಂಕ ಎರ್ಮಾಳು ಗ್ರಾಮದ ಮಹಾಲಕ್ಷ್ಮೀ ಹೆಸರಿನ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ13/03/2022 ರಂದು ಮದ್ಯಾಹ್ನ ಅವರ ಹೋಟೆಲ್ ಎದುರು ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು-ಉಡುಪಿ ಏಕಮುಖ ಸಂಚಾರ ರಸ್ತೆಯ ಪಶ್ಚಿಮ ಬದಿಯಲ್ಲಿ MH-17-BY-4692 ನೇ ನಂಬ್ರದ ಲಾರಿ ಚಾಲಕ ಇಸ್ಮಾಯಿಲ್ ಸೈಯದ್ ಎಂಬುವರು ತನ್ನ ಲಾರಿಯನ್ನು ಇತರ ವಾಹನಗಳ ಸಂಚಾರಕ್ಕೆ ತೊಂದರೆ ಆಗುವ ರೀತಿಯಲ್ಲಿ ಲಾರಿಯ ಬಲಭಾಗದ ಎರಡೂ ಟಯರ್‌ಗಳನ್ನು ಡಾಮಾರು ರಸ್ತೆಯ ಅಂಚಿನಲ್ಲಿ ಇರುವಂತೆ ನಿಲ್ಲಿಸಿ ಊಟಕ್ಕೆಂದು ಹೋಗಿದ್ದಾಗ, ಮಧ್ಯಾಹ್ನ 12:45 ಗಂಟೆಯ ವೇಳೆಗೆ  ಅದೇ ರಸ್ತೆಯಲ್ಲಿ KA-20-Z-2285 ನೇ ನಂಬ್ರದ ಆಲ್ಟೋ ಕಾರು ಚಾಲಕ ತಾರಾನಾಥ ಎಂಬಾತನು ತನ್ನ ಕಾರನ್ನು ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಪಶ್ಚಿಮ ಬದಿಯಲ್ಲಿ ನಿಂತಿದ್ದ ಲಾರಿಯ ಬಲ ಹಿಂಬದಿಗೆ ಡಿಕ್ಕಿಯಾಗಿ ಒರೆಸಿಕೊಂಡು ಹೋಗಿ ಕಾರು ಪಲ್ಟಿಯಾಗಿರುತ್ತದೆ. ಸದ್ರಿ ಅಪಘಾತದಿಂದ ಕಾರು ಚಾಲಕ ತಾರಾನಾಥ ರವರಿಗೆ ಸಾಧಾರಣ ಸ್ವರೂಪದ ಗಾಯ ಮತ್ತು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರ ತಾಯಿ ಭವಾನಿ(58) ರವರ ತಲೆಗೆ ತೀವ್ರ ಸ್ವರೂಪದ ರಕ್ತ ಗಾಯವಾಗಿದ್ದು, ನಂತರ ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಅಂಬ್ಯೂಲೆನ್ಸ್ ನಲ್ಲಿ ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದು, ಸಮಯ 13:30 ಗಂಟೆಗೆ ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಭವಾನಿ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದು, ತಾರಾನಾಥ ರವರನ್ನು ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. KA-20-Z-2285 ನೇ ನಂಬ್ರದ ಆಲ್ಟೋ ಕಾರಿನ ಎಡಭಾಗದ ಡೋರ್‌ಗಳು ಜಖಂ ಆಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 27/2022 ಕಲಂ:279,  337, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿದಾರರಾಧ ಶರತ್ ಭಂಡಾರಿ, (:30) ತಂದೆ: ಕೃಷ್ಣ ಭಂಡಾರಿ,ವಾಸ:  ಶಂಭಕಲ್ಲು ದೇವಸ್ಥಾನದ ಹತ್ತಿರ ಉದ್ಯಾವರ ಗ್ರಾಮ, ಉಡುಪಿ ಇವರ ತಮ್ಮ ಸಚಿನ್ ಭಂಡಾರಿಯವರಿಗೆ (28) ಲೈನ್ ಸೇಲ್ ಕೆಲಸ ಮಾಡಿಕೊಂಡಿರುತ್ತಾರೆ. ಇವರು ವಾಸವಾಗಿದ್ದ ಮನೆಯು ಇತ್ತೀಚೆಗೆ ಬಿದ್ದುದರಿಂದ ಇವರು ಸಂಬಂದಿಕರ ಮನೆಯಲ್ಲಿ ವಾಸವಾಗಿರುವುದಾಗಿದೆ. ಹಾಗೂ ಸಚಿನ್ ಭಂಡಾರಿಯ ತಂದೆ ತಾಯಿಯವರು ಅನಾರೋಗ್ಯದಲ್ಲಿರುವುದರಿಂದ ಸಚಿನ್ ಭಂಡಾರಿಯು ಮಾನಸಿಕವಾಗಿ ನೊಂದು ದಿನಾಂಕ 13/03/2022 ರಂದು ಬೆಳಿಗ್ಗೆ 06:00 ಗಂಟೆಯಿಂದ ದಿನಾಂಕ 13/03/2022 ರಂದು 13:00  ಗಂಟೆಯ ಮಧ್ಯಾವದಿಯಲ್ಲಿ  ಮನೆಯ ಸಮೀಪ ಇರುವ ಬಾವಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 05/2022 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 14-03-2022 09:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080