ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಅಶೋಕ ರಾವ್ (48), ತಂದೆ: ದಿ. ಲಕ್ಷ್ಮಣ ರಾವ್, ವಾಸ:ಕಾಳಿಕಾಂಬ ದೇವಸ್ಥಾನದ ಹಿಂಬದಿ, ನೆಕ್ಲಜೆ ಕಾರ್ಕಳ ಕಸಬ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ತನ್ನ ತಾಯಿ ಶ್ರೀಮತಿ ಪ್ರೇಮಾ ರಾವ್ (80) ಮತ್ತು ಹೆಂಡತಿ ,ಮಗನೊಂದಿಗೆ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ತಾಯಿ ಶ್ರೀಮತಿ ಪ್ರೇಮಾ ರಾವ್ ರವರು ಹೊಟ್ಟೆ ಮತ್ತು ಬೆನ್ನು ನೋವಿನಿಂದ ಬಳಲುತ್ತಿದ್ದು ಈ ಬಗ್ಗೆ ಕಾರ್ಕಳ ಸಿಟಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ದಿನಾಂಕ 13/02/2022 ರಂದು ಮದ್ಯಾಹ್ನ ಊಟ ಮಾಡಿ ಮನೆಯವರು ಮಲಗಿದ್ದಾಗ ಪಕ್ಕದ ಮನೆಯ ಜಾನಕಿರವರ ಮನೆಗೆ ಹೋದವರು ಕಾಣದೆ ಇದ್ದಾಗ ಮನೆಯವರು ಹುಡುಕಾಡಿದಾಗ ಪ್ರೇಮಾ ರವರು ಮನೆಯ ಹಿಂಬದಿಯ ಬಾವಿಯ ನೀರಿಗೆ ಬಿದ್ದಿದ್ದು ಕಂಡು ಬಂದಿದ್ದು ಜೀವವಿರಬಹುದೆಂದು ಬಾವಿಯ ನೀರಿನಿಂದ ಮೇಲಕ್ಕೆತ್ತಿ ಒಂದು ವಾಹನದಲ್ಲಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ ಪರೀಕ್ಷಿಸಿದ ವೈದ್ಯರು ಪ್ರೇಮಾ ರಾವ್ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 06/2022 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಬ್ರಹ್ಮಾವರ: ದಿನಾಂಕ 13/02/2022 ರಂದು ಗುರುನಾಥ ಬಿ ಹಾದಿಮನಿ, ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರ ಜೊತೆಯಲ್ಲಿ ಬ್ರಹ್ಮಾವರ ತಾಲೂಕು ಹೆಗ್ಗುಂಜೆ ಗ್ರಾಮದ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಾತ್ರಾ ಬಂದೋಬಸ್ತ್ ಕರ್ತವ್ಯದಲ್ಲಿರುವಾಗ ಮಂದಾರ್ತಿ ರಥಬೀದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಜುಗಾರಿ ಆಟ ನಡೆಸುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ  ಸ್ಥಳಕ್ಕೆ ಹೋಗಿ ನೋಡಿದಾಗ ಆರೋಪಿಯು ಹಳದಿ, ಬಿಳಿ, ಕೆಂಪು ಬಣ್ಣದ ಪ್ಲಾಸ್ಟಿಕ್‌‌‌ ಚಾರ್ಟ್‌ ಬಿಡಿಸಿಕೊಂಡು ಜನರಿಂದ ಹಣ ಪಡೆದು 100 ರೂಪಾಯಿ ಅದರ ಮೇಲೆ ಹಾಕುತ್ತಾ 3 ಕೇಸರಿ ಬಣ್ಣದ ಪ್ಲಾಸ್ಟಿಕ್‌ಬಾಲ್‌ನ್ನು ಜನರಿಗೆ ಕೊಟ್ಟು ಆ ಬಾಲ್‌‌ನ್ನು ಆತನು ಇಟ್ಟಿರುವ ಮರದ ಬಾಕ್ಸ್‌ನ ಕೆಂಪು ಬಣ್ಣದ ಗುಳಿಗೆ ಹಾಕಿದಲ್ಲಿ 100 ರೂಪಾಯಿಗೆ 100 ರೂಪಾಯಿ, ಬಿಳಿ ಬಣ್ಣದ ಗುಳಿಗೆ ಹಾಕಿದಲ್ಲಿ 100 ರೂಪಾಯಿಗೆ 300 ರೂಪಾಯಿ, ಹಳದಿ ಬಣ್ಣದ ಗುಳಿಗೆ ಹಾಕಿದಲ್ಲಿ 100 ರೂಪಾಯಿಗೆ 100 ರೂಪಾಯಿ ಕೊಡುವುದಾಗಿ ಕೂಗಿ ಸಾರ್ವಜನಿಕರಿಂದ  ಹಣವನ್ನು ಪಣವಾಗಿ ಪಡೆದು ಜುಗಾರಿ ಆಟ   ಸಾರ್ವಜನಿಕ ಸ್ಥಳದಲ್ಲಿ ಆರೋಪಿಯು ಹಳದಿ, ಬಿಳಿ, ಕೆಂಪು ಬಣ್ಣದ ಪ್ಲಾಸ್ಟಿಕ್‌ ‌‌ಚಾರ್ಟ್‌ ಬಿಡಿಸಿಕೊಂಡು ಜನರಿಂದ ಹಣ ಪಡೆದು ಜುಗಾರಿ ಆಟ  ಆಡುತ್ತಿರುವುದನ್ನು  ಖಚಿತಪಡಿಸಿಕೊಂಡು ದಾಳಿ ನಡೆಸಿ ಜುಗಾರಿ ಆಟಕ್ಕೆ ಬಳಸಿದ  ಹಳದಿ, ಬಿಳಿ, ಕೆಂಪು ಬಣ್ಣದ ಒಟ್ಟು 100 ಗುಳಿ ಇರುವ ಮರದ ಬಾಕ್ಸ್‌, ಹಳದಿ, ಬಿಳಿ, ಕೆಂಪು ಬಣ್ಣದ ಪ್ಲಾಸ್ಟಿಕ್‌ ‌‌ಚಾರ್ಟ್‌, ಕೇಸರಿ ಬಣ್ಣದ ಸಣ್ಣ ಪ್ಲಾಸ್ಟಿಕ್‌ ‌ಬಾಲ್‌ 3, ಹಾಗೂ ನಗದು ರೂಪಾಯಿ 2,860/- ಸ್ವಾಧೀನಪಡಿಸಿಕೊಂಡಿರುವುದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2022 ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ದಿನಾಂಕ 13/02/2022 ರಂದು 15:00 ಗಂಟೆಗೆ ಪಿರ್ಯಾದಿದಾರರಾದ ದಿನೇಶ್‌ಆಚಾರ್ಯ (38), ತಂದೆ: ದಿ. ಯೋಗೀಶ್‌ ಆಚಾರ್ಯ, ವಾಸ: ಮನೆ ನಂಬ್ರ: 6-118i1, ಹನುಮಂತ ನಗರ, ಪುತ್ತೂರು ಗ್ರಾಮ, ಉಡುಪಿ ತಾಲೂಕು ಇವರು ಉಡುಪಿ ತಾಲೂಕು ಪುತ್ತೂರು ಗ್ರಾಮದ ಹನುಮಂತ ನಗರ ಸಹೋದರ ಯುವಕ ಮಂಡಲದ ಬಳಿ ನಿಂತುಕೊಂಡಿರುವಾಗ ಆರೋಪಿತರಾದ ಸಚಿನ್‌, ನಿಧಿನ್‌, ರಾಕೇಶ್‌@ ಮುನ್ನಾ, ಶೈಲೇಶ್‌ಆಚಾರ್ಯ, ನಿಲೇಶ್‌ ಆಚಾರ್ಯ ಹಾಗೂ ಇತರರು ಒಟ್ಟು ಸೇರಿ ಏಕಾಏಕಿ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದು, ಆರೋಪಿ ಸಚಿನ್‌ನು ಸೋಡ ಬಾಟಲಿಯಿಂದ ಪಿರ್ಯಾದಿದಾರರ ತಲೆಗೆ ಹೊಡೆದಿದ್ದು, ಉಳಿದವರೆಲ್ಲಾ ಸೇರಿ ಕೈಯಿಂದ ಗುದ್ದಿ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2022, ಕಲಂ: 143, 147, 323, 324, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 14-02-2022 09:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080