ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 12/10/2022 ರಂದು ಪಿರ್ಯಾದಿದಾರರಾದ ಶ್ರೀಮತಿ ರಮ್ಯ, (30), ಗಂಡ: ಗುರುರಾಜ್‌ ರಾವ್‌ ಎಸ್.‌ ವಾಸ: 4-171, ಸಕ್ಕಟ್ಟು, ಶಿರಿಯಾರ ಅಂಚೆ ಮತ್ತು ಗ್ರಾಮ, ಬ್ರಹ್ಮಾವರ ತಾಲೂಕು ಇವರು ತನ್ನ ತವರು ಮನೆಯಾದ ಕಾರ್ಕಳಕ್ಕೆ ಹೋಗಲು ಅವರ  ಗಂಡ ಗುರುರಾಜ್‌ ರಾವ್‌ ಎಸ್ ಸವಾರಿ ಮಾಡುತ್ತಿದ್ದ KA-20-EN-0719 ನೇ ಮೋಟಾರ್‌ ಸೈಕಲ್‌ ನಲ್ಲಿ ಸಹಸವಾರಿಣಿ ಆಗಿ ಕುಳಿತುಕೊಂಡು ಬ್ರಹ್ಮಾವರ – ಹೆಬ್ರಿ ರಸ್ತೆಯಲ್ಲಿ ಹೊರಟು ಬೆಳಿಗ್ಗೆ 09:30 ಗಂಟೆಯ ಸುಮಾರಿಗೆ ಚೇರ್ಕಾಡಿ ಗ್ರಾಮದ ಪೇತ್ರಿ, ಮುಂಡ್ಕಿನ್‌ ಜೆಡ್ಡುವಿನಿಂದ ಸ್ವಲ್ಪ ಹಿಂದೆ ಮೋಟಾರ್‌ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುವಾಗ ನಾಯಿಯೊಂದು ಅವರ ಮೋಟಾರ್‌ ಸೈಕಲ್‌ಗೆ ಅಡ್ಡ ಬಂದ ಕಾರಣ ಆರೋಪಿಯು  ನಾಯಿಯನ್ನು ತಪ್ಪಿಸಲು ಪ್ರಯತ್ನಿಸಿದಾಗ , ಆರೋಪಿಯ ಹತೋಟಿ ತಪ್ಪಿ  ಮೋಟಾರ್‌ ಸೈಕಲ್‌ ಸ್ಕೀಡ್‌ ಆಗಿ ತಾರು ರಸ್ತೆಯ ಮೇಲೆ ಇಬ್ಬರೂ ಮೋಟಾರ್‌ ಸೈಕಲ್‌ ಸಮೇತ ಬಿದ್ದಿರುವುದಾಗಿದೆ. ಈ ಅಪಘಾತದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಮಣಿಗಂಟಿಗೆ ತೀವ್ರ ಮೂಳೆ ಮುರಿತದ ಗಾಯ ಹಾಗೂ ಮೈ ಕೈಗೆ ಅಲ್ಲಲ್ಲಿ ತರಚಿದ ಗಾಯವಾಗಿರುತ್ತದೆ. ಅಲ್ಲದೇ ಆರೋಪಿಯ ಬಲಕೈ ಭುಜದಿಂದ ಮಣಿಗಂಟಿನ ವರೆಗೆ ತರಚಿದ ಗಾಯವಾಗಿರುತ್ತದೆ. ಗಾಯಾಳು ಇಬ್ಬರನ್ನೂ ಚಿಕಿತ್ಸೆ ಬಗ್ಗೆ ಕೋಟೇಶ್ವರದ N.R ಆಚಾರ್ಯ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 166/2022 ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕೋಟ: ಪಿರ್ಯಾದಿದಾರರಾದ ಉಮೇಶ್‌‌‌‌‌‌‌‌ಪೂಜಾರಿ  (34),  ತಂದೆ  ಸದಾಶಿವ  ಪೂಜಾರಿ,  ಶ್ರೀ  ಲಕ್ಷ್ಮೀ  ನಿಲಯ, ಕಲ್ಮಾಡಿ  ರಸ್ತೆ,  ಕೋಟತಟ್ಟು  ಗ್ರಾಮ ಇವರು  ದಿನಾಂಕ  12/10/2022  ರಂದು ಬೆಳಿಗ್ಗೆ  10:30  ಗಂಟೆಗೆ  ಕೋಟ ಅಮೃತೇಶ್ವರಿ  ದೇವಸ್ಥಾನಕ್ಕೆ  ತಿರುಗುವ  ಸರ್ವಿಸ್‌‌‌‌‌‌‌‌‌‌‌ರಸ್ತೆಯ ಪಕ್ಕ  ನಿಂತುಕೊಂಡಿರುವಾಗ  ನೋಡುತ್ತಿದ್ದಂತೆಯೇ ಅಮೃತೇಶ್ವರಿ  ದೇವಸ್ಥಾನದ  ಕಡೆಯಿಂದ  ಒಂದು  ರಿಕ್ಷಾವನ್ನು  ಅದರ  ಚಾಲಕ  ನಿಧಾನವಾಗಿ ಚಲಾಯಿಸಿಕೊಂಡು  ಬಂದು  ರಾಷ್ಟ್ರೀಯ ಹೆದ್ದಾರಿ .  66 ರ  ಸಮೀಪ  ಬಂದು  ಉಡುಪಿ  ಕಡೆಗೆ  ಜಂಕ್ಷನ್‌‌‌‌‌‌ನಲ್ಲಿ ತಿರುಗಲು  ಹೋಗುತ್ತಿರುವಾಗ   ಉಡುಪಿ  ಕಡೆಯಿಂದ  ಕುಂದಾಪುರ  ಕಡೆಗೆ  ಒಂದು  ಪಿಕ್‌‌‌‌‌‌‌‌ಅಪ್‌‌‌‌‌‌‌‌‌‌‌ ವಾಹನ ವನ್ನು ಅದರ ಚಾಲಕ ಅತೀವೇಗ ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಉಡುಪಿ  ಕಡೆಗೆ  ತಿರುಗುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ  ಹೊಡೆದ  ಪರಿಣಾಮ ಎರಡೂ ವಾಹನಗಳು  ಮಗುಚಿ  ಬಿದ್ದವು,  ಕೂಡಲೇ  ಅಪಘಾತ  ಸ್ಥಳಕ್ಕೆ  ಹೋಗಿ  ನೋಡುವಾಗ  ರಿಕ್ಷಾದಲ್ಲಿ  ಪಿರ್ಯಾದಿದಾರರ   ಪರಿಚಯದ  ರಿಕ್ಷಾ  ಚಾಲಕ  ಮೌರಿಸ್‌‌ ‌‌‌‌‌‌‌‌ಆಗಿದ್ದು,  ಅವರ  ರಿಕ್ಷಾದಲ್ಲಿ  ಓರ್ವ  ಪ್ರಯಾಣಿಕ  ಇದ್ದು,  ಅವರ  ಹೆಸರು  ಶ್ರೀನಾಥ  ಆಚಾರ್ಯ  ಎಂದು  ತಿಳಿದುಬಂತು.  ಮೌರಿಸ್‌‌‌‌‌‌‌‌‌‌‌ರವರಿಗೆ ತಲೆಗೆ, ಭುಜಕ್ಕೆ ಗಾಯವಾಗಿದ್ದು,  ಶ್ರೀನಾಥ್‌‌ ‌‌‌‌‌‌ಆಚಾರ್ಯರವರಿಗೆ  ಬಲಕಾಲು ಮೊಣಕಾಲಿನ ಮೂಳೆ ಮುರಿತದ  ಗಾಯವಾಗಿರುತ್ತದೆ.  ಅವರ  ರಿಕ್ಷಾ  ನಂಬ್ರ  ನೋಡಲಾಗಿ  KA-20-AB--1529 ಆಗಿರುತ್ತದೆ.  ಡಿಕ್ಕಿ  ಹೊಡೆದ  ಪಿಕ್‌‌‌ಅಪ್‌ ‌‌‌‌‌‌‌‌‌ವಾಹನ  ನಂಬ್ರ  KA-20-D-9506  ಅದರ  ಚಾಲಕನಿಗೂ  ಹಣೆಗೆ  ಗಾಯವಾಗಿದ್ದು, ಆತನ  ಹೆಸರು  ಹುಸೈನಾರ್‌ ‌‌‌‌‌‌‌‌ಎಂಬುದಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 173/2022 ಕಲಂ: 279 , 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .       

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಕುಶಾಲಾಕ್ಷಿ (43), ಗಂಡ: ಸತೀಶ್ ಬಿ ಎಸ್. ವಾಸ: ಸುಬ್ರಮಣ್ಯ ದೇವಸ್ಥಾನದ ಹತ್ತಿ ರ ಕುಕ್ಕಿಕಟ್ಟೆ, ಉಡುಪಿ ಇವರು ಆಪಾದಿತ ಸತೀಶ್ ಬಿ ಎಸ್ ಇವರೊಂದಿಗೆ ಮದುವೆ ಆಗಿ 12 ವರ್ಷದ  ಮಗನಿರುತ್ತಾನೆ. ಆಪಾದಿತನು ಪಿರ್ಯಾದಿದಾರರಿಗೆ  ಬೆದರಿಕೆ  ಹಾಕುತ್ತಿದ್ದು,  ಡೈವೋರ್ಸ್  ಕೊಡು ಎಂದು   ಮಾನಸಿಕ ಕಿರುಕುಳ ಕೊಡುತ್ತಿರುವುದಾಗಿದೆ. ಆಪಾದಿತನು ಪಿರ್ಯಾದಿದಾರರ ಮಗನ ಎದುರಿನಲ್ಲಿ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು  ಕೋಲಿನಿಂದ ಕಣ್ಣಿಗೆ ಹೊಡೆದಿರುವುದಾಗಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 67/2022  ಕಲಂ: 498(ಎ), 324, 504, 506  ಐಪಿಸಿಯಂತೆ ಪ್ರಕರಣದ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 13-10-2022 09:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080