Feedback / Suggestions

ಪತ್ರಿಕಾ ಪ್ರಕಟಣೆ
ಅಪಘಾತ ಪಡಿಸಿ ಮರಣಕ್ಕೆ ಕಾರಣರಾದ ಆರೋಪಿಗಳಿಗೆ ಶಿಕ್ಷೆ

 


1. ದಿನಾಂಕ 28-03-2017 ರಂದು ಸುಮಾರು 19:45 ಗಂಟೆಗೆ KA-20-A-5548 ನೇ ನಂಬ್ರದ ತ್ರಿಚಕ್ರ ಗೂಡ್ಸ್  ವಾಹನವನ್ನು ಅದರ ಚಾಲಕನಾದ ದಿನೇಶ್ ನಾಯಕ್ ಪ್ರಾಯ 45 ವರ್ಷ, ತಂದೆ : ರಾಘವ ನಾಯಕ್ ವಾಸ : ರಾಘವೇಂದ್ರ ನಿಲಯ,  ಇಂದಿರಾ ನಗರ, ವಾರಂಬಳ್ಳಿ ಗ್ರಾಮ, ಉಡುಪಿ ತಾಲೂಕು ಈತನು ಉಡುಪಿ ತಾಲೂಕು ಹಂದಾಡಿ ಗ್ರಾಮದ ಶ್ರೀ ಗಣೇಶ್ ಸ್ಟೋರ್ಸ್ ಎದುರು  ಬಾರ್ಕೂರು-ಬ್ರಹ್ಮಾವರ ಮುಖ್ಯ ಡಾಂಬಾರು ರಸ್ತೆಯಲ್ಲಿ ಬಾರ್ಕೂರು ಕಡೆಯಿಂದ ಬ್ರಹ್ಮಾವರ ಕಡೆಗೆ ಮಾನವನ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ತೀರ ಎಡಕ್ಕೆ ಚಲಾಯಿಸಿ ರಸ್ತೆ ದಾಟಲು ರಸ್ತೆಯ ಪೂರ್ವ ಬದಿಯ ಮಣ್ಣು ರಸ್ತೆಯಲ್ಲಿ ನಿಂತಿದ್ದ ಗೋಪಾಲ ಎನ್ನುವವರಿಗೆ  ಡಿಕ್ಕಿ ಹೊಡೆದ ಪರಿಣಾಮ ಗೋಪಾಲ ಇವರು ರಸ್ತೆಗೆ ಬಿದ್ದು ತೆಲೆಗೆ ತೀವೃ ಸ್ವರೂಪದ ರಕ್ತ ಗಾಯವಾಗಿ ಮೃತಪಟ್ಟಿದ್ದು ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅ.ಕ್ರ 77/2017 279, 304(A) ಐಪಿಸಿ ರಂತೆ ಪ್ರಕರಣ ದಾಖಲಾಗಿ ನಂತರ ಈ ಪ್ರಕರಣದ ತನಿಖೆಯನ್ನು ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಶ್ರೀಕಾಂತ್.ಕೆ ರವರು ನಡೆಸಿ ಆರೋಪಿ ದಿನೇಶ ನಾಯಕ್  ಈತನ ಮೇಲೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಪ್ರಕರಣವು ಉಡುಪಿಯ ಮಾನ್ಯ ಒಂದನೇ ಹೆಚ್ಚುವರಿ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಸಿ.ಸಿ ನಂಬ್ರ 770/2017 ರಲ್ಲಿ ವಿಚಾರಣೆಯಾಗಿ ವಿಚಾರಣೆಯನ್ನು ನಡೆಸಿದ ಒಂದನೇ ಹೆಚ್ಚುವರಿ ಸಿ,ಜೆ ಮತ್ತು ಜೆ,ಎಂ,ಎಫ್,ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಶ್ಯಾಮ್ ಪ್ರಕಾಶ್ ರವರು  ಈ ಪ್ರಕರಣದ ಆರೋಪಿತನಾದ ದಿನೇಶ್ ನಾಯಕ್ ಈತನ ವಿರುದ್ಧದ ಆರೋಪವು ರುಜುವಾತಾಗಿದೆ ಎಂದು ಸದರಿ ಆರೋಪಿತನಿಗೆ 2 ವರ್ಷ 6 ತಿಂಗಳುಗಳ ಕಾರಾಗೃಹ ವಾಸದ ಶಿಕ್ಷೆ ಮತ್ತು 10,000 ರೂಪಾಯಿ ದಂಡ ರೂಪದ ಶಿಕ್ಷೆ ನೀಡಿ ದಿನಾಂಕ  07-10-2022 ರಂದು ತೀರ್ಪನ್ನು ಪ್ರಕಟಿಸಿರುತ್ತಾರೆ.  


2. ದಿನಾಂಕ 18-10-2017  ರಂದು ಬೆಳಿಗ್ಗೆ ಸುಮಾರು ೧೧:೩೦ ಗಂಟೆಗೆ KA-20-4848 ನಂಬ್ರದ 407೭ ಟೆಂಪೋ  ವಾಹನವನ್ನು ಅದರ ಚಾಲಕನಾದ ಉಮೇಶ ಪೂಜಾರಿ ಪ್ರಾಯ 30 ವರ್ಷ, ತಂದೆ: ದಿವಂಗತ ಗೋಪಾಲ ಪೂಜಾರಿ ವಾಸ : ಹೊಸಂಗಡಿ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಉಡುಪಿ ತಾಲೂಕು  ಹೇರೂರು  ಗ್ರಾಮದ ಮಂಜುನಾಥ ಪೆಟ್ರೋಲ್ ಬಂಕ್ ನಿಂದ ಸ್ವಲ್ಟ  ಮುಂದೆ ರಾ. ಹೆ. 66 ರಲ್ಲಿ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ  ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯ ಪೂರ್ವ ಬದಿಯಲ್ಲಿ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಸುಮಾರು ೬೦ ವರ್ಷ ಪ್ರಾಯದ ಬಿ.ರಮಾನಂದ ರಾವ್ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸೈಕಲಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಬಿ ರಮಾನಂದ ರಾವ್ ರವರು  ಸೈಕಲ್ ಸಮೇತ ರಸ್ತೆಗೆ ಬಿದ್ದು ಮುಖಕ್ಕೆ ಎಡ ಬದಿಯ ಭುಜಕ್ಕೆ, ಬಲಕೈಗೆ, ಬಲಕಾಲಿಗೆ ಹಾಗೂ ತಲೆಗೆ ತೀವೃ ತರಹದ ಗಾಯವಾಗಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 23-10-2017 ರಂದು ನಿಧನ ಹೊಂದಿರುತ್ತಾರೆ ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅ.ಕ್ರ 298/2017 ಕಲಂ 279, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿ ನಂತರ ಈ ಪ್ರಕರಣವನ್ನು ಬ್ರಹ್ಮಾವರ ವೃತ್ತದ ವೃತ್ತ ನಿರೀಕ್ಷಕರಾದ ಶ್ರೀ ಶ್ರೀಕಾಂತ್.ಕೆ ಇವರು ತನಿಖೆಯನ್ನು ನಡೆಸಿ ಆರೋಪಿತನಾದ ಉಮೇಶ ಪೂಜಾರಿ ಈತನ ಮೇಲೆ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.  
ಈ ಪ್ರಕರಣವು ಉಡುಪಿಯ ಮಾನ್ಯ ಒಂದನೇ ಹೆಚ್ಚುವರಿ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಸಿ.ಸಿ ನಂಬ್ರ 1092/2018 ರಲ್ಲಿ ವಿಚಾರಣೆಯಾಗಿ ವಿಚಾರಣೆಯನ್ನು ನಡೆಸಿದ ಒಂದನೇ ಹೆಚ್ಚುವರಿ ಸಿ,ಜೆ ಮತ್ತು ಜೆ,ಎಂ,ಎಫ್,ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಶ್ಯಾಮ್ ಪ್ರಕಾಶ್ ರವರು  ಈ ಪ್ರಕರಣದ ಆರೋಪಿತನಾದ ಉಮೇಶ ಪೂಜಾರಿ  ಈತನ ವಿರುದ್ಧದ ಆರೋಪವು ರುಜುವಾತಾಗಿದೆ ಎಂದು ಸದ್ರಿ ಆರೋಪಿತನಿಗೆ 2 ವರ್ಷ 6 ತಿಂಗಳುಗಳ ಕಾರಾಗೃಹ ವಾಸದ ಶಿಕ್ಷೆ ಮತ್ತು 10,000 ರೂಪಾಯಿ ದಂಡ ರೂಪದ ಶಿಕ್ಷೆ ನೀಡಿ ದಿನಾಂಕ  27-09-2022   ರಂದು ತೀರ್ಪನ್ನು ನೀಡಿ ಆದೇಶವನ್ನು ಮಾಡಿರುತ್ತಾರೆ,

Last Updated: 13-10-2022 05:28 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080