ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ 

  • ಬ್ರಹ್ಮಾವರ: ಪಿರ್ಯಾದಿದಾರರಾದ ಉಮೇಶ್ (25), ತಂದೆ: ಸಂಗಪ್ಪ, ವಾಸ: ದುರ್ಗಾ ದೇವಿ ದೇವಸ್ಥಾನದ ಬಳಿ, ಮಳೆ ಕೊಪ್ಪ ಗ್ರಾಮ, ಕೂಕನೂರು ತಾಲೂಕು. ಕೊಪ್ಪಳ ಜಿಲ್ಲೆ ಮತ್ತು ಅವರ ಮಾವ ಹನುಮಂತ (35) ಹಾಗೂ ಇತರರು ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಕೊಂಡು, 1ನೇ ಆರೋಪಿಯಾದ ಮಟಪಾಡಿಯ ನರಸಿಂಹ ನಾಯಕ್ (ಮೇಸ್ತ್ರಿ) ರವರ ಜೋತೆಯಲ್ಲಿ ಕೂಲಿ ಕೆಲಸ ಮಾಡಿಕೊಡಿರುವುದಾಗಿದೆ. ದಿನಾಂಕ 13/04/2021 ರಂದು 1ನೇ ಆರೋಪಿಯು ಹನುಮಂತ ರವರನ್ನು ಚಾಂತಾರು ಗ್ರಾಮದ ಚೇತನ ನಗರ ಎಂಬಲ್ಲಿರುವ 2ನೇ ಆರೋಪಿ ಗಣಪತಿ ಎಂಬವರ ಮನೆಯ ಗೋಡೆ ( ಮನೆಯ ಮೇಲ್‌ ಛಾವಣಿ) ಒಡೆಯಲು ಕಳುಹಿಸಿಕೊಟ್ಟಿದ್ದು, ಅವರು ಹೇಳಿದಂತೆ ಹನುಮಂತ ರವರು ಗಣಪತಿ ಎಂಬುವವರ ಮನೆಯ ಮೇಲ್‌ ಛಾವಣಿಯ ಗೋಡೆಯನ್ನು ಒಡೆದು ಬೀಳಿಸುವಾಗ ಬೆಳಿಗ್ಗೆ 09:15 ಗಂಟೆಗೆ ಗೋಡೆಯು ಹನುಮಂತ ರವರ ಮೈಮೇಲೆ ಬಿದ್ದು, ಗೋಡೆ ಅಡಿ ಸಿಲುಕಿ ಮೈ ಕೈ ತಲೆಗೆ ಗಾಯವಾಗಿ, ಉಸಿರುಗಟ್ಟಿ ಅಸ್ವಸ್ಥರಾದವರನ್ನು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಪ್ರಣವ್ ಆಸ್ಪತ್ರೆಗೆ ಕೊಂಡು ಹೋಗಿ ಬಳಿಕ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಬೆಳಿಗ್ಗೆ 10:11 ಗಂಟೆಗೆ ಕರೆತಂದಾಗ ಹನುಮಂತ ರವರು ಅಷ್ಟರೊಳಗೆ ಮೃತಪಟ್ಟಿರುವುದಾಗಿ ವೈಧ್ಯರು ತಿಳಿಸಿರುವುದಾಗಿದೆ. ಹನುಮಂತ ರವರ ಮರಣಕ್ಕೆ 1ನೇ ಆರೋಪಿಯಾದ ಮೇಸ್ತ್ರಿ ನರಸಿಂಹ ನಾಯಕ್ ಹಾಗೂ 2ನೇ ಆರೋಪಿಯಾದ ಮನೆಯ ಮಾಲಿಕ ಗಣಪತಿ ಎಂಬುವವರು ಯಾವುದೇ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮ ಅನುಸರಿಸದೇ ನಿರ್ಲಕ್ಷತನದಿಂದ ಕಾಮಗಾರಿ ನಡೆಸಿರುವುದೇ ಕಾರಣವಾಗಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 54/2021 ಕಲಂ: 288, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 13-04-2021 06:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080