ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ:  ದಿನಾಂಕ 10/11/2021 ರಂದು  ರಾತ್ರಿ 12:10 ಗಂಟೆಗೆ ಶಿವಳ್ಳಿ ಗ್ರಾಮದ ಕಕ್ಕುಂಜೆ ಕ್ರಾಸ್ ಬಳಿ KA-01-HL-4067 ಮೋಟಾರ್ ಸೈಕಲ್ ಸವಾರ ಕಾರ್ತಿಕ್ ಜೋಗಿ ಎಂಬುವವರು ತನ್ನ ಮೋಟಾರ್ ಸೈಕಲ್ನಲ್ಲಿ ಅಂಬಾಗಿಲು ಕಡೆಯಿಂದ ಮಣಿಪಾಲ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿದಾರರಾದ ಗಣೇಶ ಕೊತ್ವಾಲ್  (25), ತಂದೆ: ದಿ. ನಿತ್ಯಾನಂದ ಕೊತ್ವಾಲ್, ವಾಸ: ಸಾಧನ ಕುಂದೇಶ್ವರ ದೇವಸ್ಥಾನದ ಹತ್ತಿರ ಕುಂದಾಪುರ  ತಾಲೂಕು ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡ ಕಾಳಿನ ಮೊಣಗಂಟ್ಟಿಗೆ ತೀವ್ರ ಒಳ ಜಖಂ ಉಂಟಾಗಿರುತ್ತದೆ. ಪಿರ್ಯಾದಿದಾರರು ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 148/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಕು, ಸ್ವಾತಿ (20), ತಂದೆ: ಸುಬ್ರಹ್ಮಣ್ಯ, ವಾಸ: ಸಿ.ಆರ್.ಎಸ್. ಸೈಟ್ ಬಾಳೆಹೊನ್ನರು ಕೊಪ್ಪ ತಾಲೂಕು  ಚಿಕ್ಕಮಗಳೂರು  ಜಿಲ್ಲೆ , ಹಾಲಿ ವಾಸ, ಗುಮ್ಮಲ ಬೆಳ್ಬೆ  ಗ್ರಾಮ  ಹೆಬ್ರಿ  ತಾಲೂಕು ಇವರು 4  ತಿಂಗಳಿನಿಂದ ಹೆಬ್ರಿ ತಾಲೂಕಿನ  ಬೆಳ್ವೆ  ಗ್ರಾಮದ ಗುಮ್ಮಲ ಎಂಬಲ್ಲಿ ವಾಸವಾಗಿದ್ದು ಗೇರು ಬೀಜ ಕಾರ್ಖಾನೆ ಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ತಾಯಿ ಶ್ರೀಮತಿ ಅನ್ನಪೂರ್ಣ  (42) ಇವರು ಸಹ   ಪಿರ್ಯಾದಿದಾರರೊಂದಿಗೆ ವಾಸವಾಗಿದ್ದು ಅವರು 6 ವರ್ಷದಿಂದ ಮಾನಸಿಕ ಕಾಯಿಲೆಯಿದ ಬಳಲುತ್ತಿದ್ದವರು ಈ  ಕಾಯಿಲೆಯಬಗ್ಗೆ ತೀರ್ಥಹಳ್ಳಿಯ ನರ್ಸಿಂಗ್‌  ಹೊಂನಲ್ಲಿ  ಚಿಕಿತ್ಸೆ  ಮಾಡುತ್ತಿದ್ದು, ಆದರೆ  ಕಾಯಿಲೆ  ಗುಣವಾಗಿರುವುದಿಲ್ಲ.   ಚಿಕಿತ್ಸೆಯ ಬಗ್ಗೆ   ಬೆಳ್ವೆ   ಸರಕಾರಿ ಆಸ್ಪತ್ರೆಗೆ  ಹೋಗಿ  ಚಿಕಿತ್ಸೆ  ಪಡೆದುಕೊಂಡು ಬಂದಿರುತ್ತಾರೆ, ಅದರಂತೆ ದಿನಾಂಕ 11/11/2021 ರಂದು ಬೆಳಿಗ್ಗೆ  7:30 ಗಂಟೆಯಿಂದ   10:00  ಗಂಟೆಯ  ಮದ್ಯದ ಅವಧಿಯಲ್ಲಿ ಅವರಿಗೆ  ಇರುವ  ಮಾನಸಿಕ  ಕಾಯಿಲೆಯಿಂದ  ಮನನೊಂದು ಅವರ ವಾಸದ  ಮನೆಯಲ್ಲಿ  ಯಾರೂ  ಇಲ್ಲದ  ಸಮಯದಲ್ಲಿ  ಮನೆಯ ಒಳಗಡೆಯ  ಹಾಲ್‌ನಲ್ಲಿ   ಇರುವ ಮರದ  ಜಂತಿಗೆ ಕುತ್ತಿಗೆಗೆ   ನೇಣು  ಬಿಗಿದು ಆತ್ಮಹತ್ಯೆ  ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 42/2021 ಕಲಂ: 174   ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಪಕಳ ಬೆಟ್ಟು, ನಿವಾಸಿ ಬಾಬು ಪೂಜಾರಿ (55) ಇವರು ಯಾವುದೋ ವಿಚಾರಕ್ಕೆ ಮನನೊಂದು ದಿನಾಂಕ 11/11/2021 ರಂದು ಬೆಳಿಗ್ಗೆ 9:00 ಗಂಟೆಯಿಂದ 9:30 ಗಂಟೆಯ ಮದ್ಯಾವಧಿಯಲ್ಲಿ ತನ್ನ ಮನೆ ಸಮೀಪವಿರುವ ದನದ ಕೊಟ್ಟಿಗೆಯ ಮೇಲ್ಛಾವಣಿಗೆ ಹಾಕಿದ ಮರದ ಜಂತಿಗೆ ನೈಲಾನ್ ಹಗ್ಗ ಕಟ್ಟಿ ತನ್ನ ಕುತ್ತಿಗೆಗೆ ನೇಣು ಬಿಗಿದು ನೇತಾಡುತ್ತಿದ್ದವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ತಾಲೂಕು ಸಾವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಬಾಬು ಪೂಜಾರಿಯವರು ಮೃತಪಟ್ಟಿರುವುದಾಗಿ ತಿಳಿಸಿದ್ದು ಬಾಬು ಪೂಜಾರಿಯವರು ಯಾವುದೋ ವಿಚಾರಕ್ಕೆ ಮನನೊಂದು ಆತ್ಮಹತ್ಯೆ  ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 37/2021 ಕಲಂ: 174   ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಕೋಟ: ದಿನಾಂಕ 11/11/2021 ರಂದು ಸಂತೋಷ  ಬಿ.ಪಿ, ಪೊಲೀಸ್‌ ಉಪನಿರೀಕ್ಷಕರು, ಕೋಟ ಪೊಲೀಸ್‌ ಠಾಣೆ ಇವರು ಕೋಟ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬೇಳೂರು ಗ್ರಾಮದ ಪಡುಮುಂಡು ಎಂಬಲ್ಲಿರುವ ಶಿಲೆ ಕಲ್ಲು ಕೋರೆಯ ಹತ್ತಿರ ಸರ್ಕಾರಿ ಹಾಡಿ ಜಾಗದಲ್ಲಿ ಸಾರ್ವಜನಿಕರು ಸೇರಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದಂತೆ ನೋಡಿದಾಗ ಶಾನಾಡಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಸರ್ಕಾರಿ ಹಾಡಿ ಜಾಗದಲ್ಲಿ ಒಂದು ಕಲ್ಲು ಬಂಡೆಯ ಹಿಂಬದಿಯಲ್ಲಿ ಕೆಲವರು ಗುಂಪು ಸೇರಿ ಒಂದು ಬೆಡ್‌ಶೀಟ್‌ನ್ನು ಹಾಸಿ ಅದರಲ್ಲಿ ಒಬ್ಬನು ಇಸ್ಪಿಟು ಎಲೆಗಳನ್ನು ಕೈಯಲ್ಲಿ ಹಿಡಿದು ಆಚೆ ಈಚೆ ಹಾಕುತ್ತಾ ಅಂದರ್ ಬಾಹರ್ ಎಂದು ಹೇಳುತ್ತಿದ್ದು ಮತ್ತು ನಿಂತಿದ್ದ ಜನರು ಒಳಗೆ ಹೊರಗೆ ಎಂದು ಹೇಳುತ್ತಾ ಹಣವನ್ನು ಕಟ್ಟುತ್ತಿದ್ದರು, ಇಸ್ಪೀಟ್ ಜುಗಾರಿ ಆಡುತ್ತಿದ್ದ ಆರೋಪಿಗಳಾದ 1. ಗಣೇಶ್‌ಪೂಜಾರಿ (29), ತಂದೆ: ಜಯರಾಮ, ವಾಸ: ಕುದ್ರಿಕಟ್ಟೆ, ಪಡುಮುಂಡು, ಶಿರಿಯಾರ ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ, 2. ಸಂತೋಷ (38), ತಂದೆ: ಸಂಜೀವ, ವಾಸ: ಮೊಗೆಬೆಟ್ಟು, ಬೇಳೂರು ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ, 3. ಮಂಜುನಾಥ ಶೆಟ್ಟಿ (31), ತಂದೆ: ನಂದ್ಯಪ್ಪ ಶೆಟ್ಟಿ, ವಾಸ: ಪಡುಮುಂಡು, ಶಿರಿಯಾರ ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ, 4. ವಿಜಯ (41), ತಂದೆ: ದಿ.ಅನಂತ ಪೂಜಾರಿ, ವಾಸ: ಬೆಳಗೋಡು, ಕೊರ್ಗಿ, ಕೆದೂರು ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಹಾಗೂ ಆಟಕ್ಕೆ ಬಳಸಿದ  ಅಲ್ಲಿಯೇ ಪಕ್ಕದಲ್ಲಿದ್ದ  KA-20-V-2498 ನಂಬ್ರದ ಕೆಂಪು ಬಣ್ಣದ Passion Pro ಬೈಕ್‌ ಹಾಗೂ KA-20-EB-8905 ನಂಬ್ರದ ಕಪ್ಪು ಬಣ್ಣದ Passion Pro ಬೈಕ್‌ ನ್ನು,ಜುಗಾರಿ ಆಟಕ್ಕೆ ಬಳಸಿದ ನಗದು ಹಣ 2,500/- ರೂಪಾಯಿ ಹಾಗೂ ಹಳದಿ ಮತ್ತು ಕೇಸರಿ ಬಣ್ಣದ ಬೆಡ್‌ಶೀಟ್‌-1, ನಂಬ್ರ ಬರೆದ ಕಾಗದದ ಚೀಟಿ -1, ಇಸ್ಪೀಟು ಎಲೆ -52, ಇವುಗಳನ್ನು ಸ್ವಾಧೀನಪಡಿಸಿದ್ದು ಸ್ವತ್ತಿನ ಒಟ್ಟು ಮೌಲ್ಯ ರೂಪಾಯಿ 42,500/- ಆಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ     194/2021 ಕಲಂ: 87 KP ACT  ರಂತೆ ಪ್ರಕರಣ ದಾಖಲಾಗಿರುತ್ತದ.

ಇತ್ತೀಚಿನ ನವೀಕರಣ​ : 12-11-2021 09:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080